ಆ ಅಜ್ಜಿಯೊಂದಿಗಿನ ಕ್ಷಣ
Team Udayavani, Apr 5, 2019, 6:00 AM IST
ನಮ್ಮ ಜೀವನದಲ್ಲಿ ನಡೆಯುವ ಕೆಲವು ಘಟನೆಗಳು ಮರೆಯಲಾಗದ್ದು. ಒಂದು ದಿನ ನಾನು ಕಾಲೇಜು ಬಿಟ್ಟು ಮನೆಗೆ ತೆರಳಲು ಬಸ್ಗಾಗಿ ಕಾಯುತ್ತಿದ್ದೆ. ಆ ಸಮಯದಲ್ಲಿ ಒಂದು ಅಜ್ಜಿ ನನ್ನ ಬಳಿ ಬಂದು, “ನೀನು ಎಲ್ಲಿಗೆ ಹೋಗುವುದು?’ ಎಂದು ಕೇಳಿದರು.
ನಾನು ಹೋಗುವ ಜಾಗದ ಹೆಸರು ಹೇಳಿದೆ. ಆಗ ಅಜ್ಜಿ ತನ್ನ ಸಾಮಾನು-ಸರಂಜಾಮುಗಳನ್ನು ಇಟ್ಟಲ್ಲಿಗೆ ಹೋಗಿ “ಇಲ್ಲಿಗೆ ಬಾ’ ಎಂದು ಕರೆದರು. ಏನಿರಬಹುದು ಎಂದು ಆಲೋಚಿಸಿಕೊಂಡು ಅವರ ಬಳಿ ಹೋದೆ.
ಅವರು ಕೈಯಲ್ಲಿ ಇದ್ದ ಚೀಟಿಯನ್ನು ನನ್ನ ಕೈಗಿತ್ತು, “ಇದು ನನ್ನ ಮಗನ ಮೊಬೈಲ್ ನಂಬರ್, ನಾನು ಬಂದು ಒಂದು ಗಂಟೆ ಆಯ್ತು. ಕರೆದುಕೊಂಡು ಹೋಗಲು ಇನ್ನು ಬಂದಿಲ್ಲ. ಒಂದು ಫೋನ್ ಮಾಡಿಕೊಡಬಹುದಾ?’ ಅಂತ ಕೇಳಿದರು. ನಾನು ತತ್ಕ್ಷಣ ಫೋನ್ ಮಾಡಿ ಅವರ ಕೈಗೆ ಕೊಟ್ಟೆ.
ಅಜ್ಜಿಯ ಮಗ ಯಾವುದೋ ಕೆಲಸದ ಒತ್ತಡದಿಂದಾಗಿ ಅಮ್ಮನನ್ನು ಕರೆದುಕೊಂಡು ಹೋಗುವ ವಿಚಾರವನ್ನು ಮರೆತಿದ್ದನಂತೆ. ನಂತರ ಬೇಗ ಬರುತ್ತೇನೆಂದು ಹೇಳಿ ಫೋನ್ ಇಟ್ಟರು.
ಯಾರೋ ಒಬ್ಬ ಅಪರಿಚಿತೆ ನಾನು ಕೇಳಿದಾಗ ಸಹಾಯ ಮಾಡಿದಳಲ್ಲ ಅನ್ನುವ ಖುಷಿಯಿಂದ ಅಜ್ಜಿ ತನ್ನ ಬ್ಯಾಗ್ನಿಂದ ಹತ್ತು ರೂಪಾಯಿಯ ನೋಟು ತೆಗೆದು “ತಗೋ ಮಗು’ ಅಂತ ಕೊಡಲು ಬಂದರು. ಅದಕ್ಕೆಲ್ಲ “ಹಣ ಯಾಕಜ್ಜಿ’ ಎಂದು ಹಣವನ್ನು ತೆಗೆದುಕೊಳ್ಳಲಿಲ್ಲ.
ಅಜ್ಜಿಗೆ ಮತ್ತೂ ಖುಷಿಯಾಗಿ, “ನಿನಗೆ ದೇವರು ಒಳ್ಳೆಯದು ಮಾಡಲಿ’ ಎಂದು ಆಶೀರ್ವಚಿಸಿದರು. ಆ ಒಂದು ಕ್ಷಣ ನನ್ನ ಜೀವನವಿಡೀ ನೆನಪಿನ ಬುತ್ತಿಯಲ್ಲಿರುತ್ತದೆ.
ಶಿಲ್ಪಾ ಕುಲಾಲ್
ದ್ವಿತೀಯ ಪತ್ರಿಕೋದ್ಯಮ ವಿಭಾಗ , ವಿವೇಕಾನಂದ ಪದವಿ ಕಾಲೇಜು, ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ