ಸಾಧಕ ಬಾಧಕಗಳ ನಡುವೆ ಕೋಳಿ ಸಾಕಾಣಿಕೆ ಯೋಜನೆ

ಕುಕ್ಕುಟ ಮಹಾಮಂಡಳದ ಪ್ರಸ್ತಾವ ಜಾರಿಗೆ ಯತ್ನ

Team Udayavani, Jan 5, 2021, 6:13 AM IST

ಸಾಧಕ ಬಾಧಕಗಳ ನಡುವೆ ಕೋಳಿ ಸಾಕಾಣಿಕೆ ಯೋಜನೆ

ಉಡುಪಿ: ಕೋಳಿ ಸಾಕಣೆ ಕುರಿತಾಗಿ ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳವು ಪ್ರಸ್ತಾವಿಸಿದ ಅಂಶಗಳನ್ನು ಒರೆಗೆ ಹಚ್ಚಿ ನೋಡಬೇಕಾದ ಸ್ಥಿತಿ ಇದೀಗ ಅಗತ್ಯವಿದೆ. ಪ್ರತಿ ಜಿಲ್ಲೆಯ ಒಂದು ಅಥವಾ ಎರಡು ಗ್ರಾಮ ಗಳಲ್ಲಿ ಸಣ್ಣ ಬಡ ಫ‌ಲಾನುಭವಿಗಳು ಅನುಷ್ಠಾನಿಸಬಹುದಾದ ಕೋಳಿ ಸಾಕಣೆ ಯೋಜನೆ ಇದಾಗಿದೆ.

ಪ್ರಸ್ತಾವದಲ್ಲೇನಿದೆ?
ಇದರಂತೆ ಜಿಲ್ಲೆಯ ಒಂದೆರಡು ಗ್ರಾಮಗಳಲ್ಲಿ ಮಾತ್ರ ಯೋಜನೆ ಅನುಷ್ಠಾನಿಸಬೇಕು. ಪ್ರತಿ ಗ್ರಾಮವೆಂದರೆ ಸುಮಾರು 3 ಕಿ.ಮೀ. ವ್ಯಾಪ್ತಿಯಲ್ಲಿ 22 ಬಿಪಿಎಲ್‌ ಕಾರ್ಡುದಾರರು ಫ‌ಲಾನುಭವಿಗಳಾಗಬಹುದು. ಇದರಲ್ಲಿ 20 ಮಂದಿ ಸಾಮಾನ್ಯರು, ಇಬ್ಬರು ಪರಿಶಿಷ್ಟ ಜಾತಿಯವರು. ಒಟ್ಟು ಘಟಕ ವೆಚ್ಚ 52,000 ರೂ. ಇದರಲ್ಲಿ 22,500 ರೂ. ಮೊತ್ತದ ಗೂಡು, 20 ಕೋಳಿಗಳಿಗೆ ತಲಾ 360 ರೂ.ನಂತೆ 7,200 ರೂ., ಕೋಳಿ ಆಹಾರ (ಲೇಯರ್‌ ಮ್ಯಾಷ್‌) 42 ಕೆ.ಜಿ.ಯಷ್ಟು 52 ವಾರದವರೆಗೆ ಪೂರೈಕೆಗೆ ಒಂದು ಕೋಳಿಗೆ ಒಂದು ಕೆ.ಜಿ.ಗೆ 25 ರೂ.ನಂತೆ 21,000 ರೂ., ಔಷಧೋಪಚಾರ ಮತ್ತು ಲಸಿಕೆಗೆ 1,300 ರೂ. ಎಂದು ನಿಗದಿಪಡಿಸಲಾಗಿದೆ. ಸಾಮಾನ್ಯ ಫ‌ಲಾನುಭವಿಗಳಿಗೆ 26,000 ರೂ. ಸಬ್ಸಿಡಿ ದೊರಕಿದರೆ, ಪರಿಶಿಷ್ಟ ಜಾತಿ ಯವರಿಗೆ ಶೇ.90 ಸಬ್ಸಿಡಿ ದೊರಕುತ್ತದೆ.

ಕೋಳಿ ಮೊಟ್ಟೆ ಇಡಲು ಆರಂಭಿ ಸುವುದು 22ನೇ ವಾರದಿಂದ. ಇಂತಹ 20 ಕೋಳಿಗಳನ್ನು ನೀಡಲಾಗುತ್ತದೆ. ಇದು 72ನೇ ವಾರದವರೆಗೆ ಮೊಟ್ಟೆ ಇಡುತ್ತದೆ. ಒಂದು ಕೋಳಿ 270ರಿಂದ 310 ಮೊಟ್ಟೆಗಳನ್ನು ಇಡಬಹುದು. ಮೊಟ್ಟೆಗಳನ್ನು ಮಾರಿ ಸೊÌàದ್ಯೋಗ ಕೈಗೊಳ್ಳಬಹುದು ಎಂಬ ಪರಿಕಲ್ಪನೆ ಇದೆ.

ಬಾಧಕಗಳೇನು?
ಮಹಾಮಂಡಳಿಯವರು ಯೋಜನೆ ರೂಪಿಸುವಾಗ ಒಂದು ಮೊಟ್ಟೆಗೆ 7 ರೂ. ಸಿಗುತ್ತದೆ ಎಂದು ತೋರಿಸಿದ್ದಾರೆ. ಆದರೆ ಈಗ ಮಾರುಕಟ್ಟೆಯಲ್ಲಿ ಒಂದು ಮೊಟ್ಟೆ 6.50 ರೂ.ಗೆ ಗ್ರಾಹಕರಿಗೆ ದೊರಕುತ್ತದೆ. ಕ್ರಿಸ್ಮಸ್‌ನಂತಹ ಹಬ್ಬದ ವೇಳೆಯೂ ಗ್ರಾಹಕರಿಗೆ 7 ರೂ.ನಲ್ಲಿ ಸಿಕ್ಕಿತ್ತು. ಆದರೆ ಇದೇ ಬೆಲೆ ಮೊಟ್ಟೆ ಉತ್ಪಾದಕನಿಗೆ ಸಿಗುವುದಿಲ್ಲ. ಪ್ರಸ್ತಾವದಲ್ಲಿ 310 ಮೊಟ್ಟೆಗಳ ಇಳುವರಿಯನ್ನು ಪರಿ ಗಣಿಸಲಾಗಿದ್ದರೆ, ಎಲ್ಲ ಕೋಳಿಗಳು ಇಷ್ಟು ಇಳುವರಿಗಳನ್ನು ಕೊಡುವು ದಿಲ್ಲ. ಕೋಳಿಗಳು ದಿನವೂ ಮೊಟ್ಟೆ ಇಡುವುದಿಲ್ಲ. ಫ‌ಲಾನುಭವಿಗಳನ್ನು ಗುರುತಿಸಿದ ಬಳಿಕ ಬ್ಯಾಂಕ್‌ನವರು ಸಾಲ ಕೊಡಲು ಮುಂದಾಗಬೇಕು. ಮಾರುಕಟ್ಟೆಗೆ ಮೊಟ್ಟೆಗಳನ್ನು ಮಾರಲು ಅನುಕೂಲವಾಗುವಂತೆ ಪಟ್ಟಣಕ್ಕೆ ಹತ್ತಿರವಿರುವ ಗ್ರಾಮಗಳನ್ನು ಮಾತ್ರ ಆಯ್ಕೆ ಮಾಡಬೇಕೆಂದು ಸೂಚಿಸಲಾಗಿದೆ. ಈ ಎಲ್ಲ ಷರತ್ತುಗಳ ನಡುವೆ ಯೋಜನೆ ಯಶಸ್ವಿ ಯಾಗಬಹುದೆ? ಎಂದು ಕಾದು ನೋಡಬೇಕಾಗಿದೆ.

ಯೋಜನೆ ಜಾರಿಗೆ ಯತ್ನ
ಕುಕ್ಕುಟ ಮಹಾಮಂಡಳದ ಯೋಜನೆ ಈಗಷ್ಟೇ ಬಂದಿದೆ. ಯೋಜನೆಯನ್ನು ಹೇಗೆ ಯಶಸ್ವಿಯಾಗಿ ಅನುಷ್ಠಾನಿಸಬಹುದು ಎಂದು ಚಿಂತನೆ ನಡೆಸಲಾಗುತ್ತಿದೆ. ನಗರ ಸಮೀಪದ ಒಂದೇ ಗ್ರಾಮದಲ್ಲಿ 22 ಬಿಪಿಎಲ್‌ ಕಾರ್ಡುದಾರ ಫ‌ಲಾನುಭವಿಗಳು ಸಿಗಬೇಕು. ಇದಕ್ಕೆ ಬ್ಯಾಂಕ್‌ನವರು ಸಾಲ ನೀಡಲು ಮುಂದಾಗಬೇಕು. ಫ‌ಲಾನುಭವಿಗಳಿಗೆ ಇದು ಲಾಭ ದಾ ಯ ಕ ಆಗಬೇಕಾಗಿದೆ. ಯೋಜನೆಯನ್ನು ಜಾರಿಗೊಳಿಸಲು ಯತ್ನಿಸುತ್ತಿದ್ದೇವೆ. ಇದು ಪ್ರಾಥಮಿಕ ಹಂತದಲ್ಲಿದೆ.
– ಡಾ|ಹರೀಶ್‌ ತಮನ್ಕರ್‌, ಉಪನಿರ್ದೇಶಕರು, ಪಶುಸಂಗೋಪನ ಇಲಾಖೆ, ಉಡುಪಿ ಜಿಲ್ಲೆ

ಟಾಪ್ ನ್ಯೂಸ್

KSRTC ಬಸ್ ನಲ್ಲಿ ಕುಳಿತಲ್ಲೇ ನೆಲ ಕಾಣುತ್ತದೆ..: ಈ ಬಸ್ ನಲ್ಲಿ ಪಯಣಿಸುವ ಮುನ್ನ ಎಚ್ಚರ!

KSRTC ಬಸ್ ನಲ್ಲಿ ಕುಳಿತಲ್ಲೇ ನೆಲ ಕಾಣುತ್ತದೆ..: ಈ ಬಸ್ ನಲ್ಲಿ ಪಯಣಿಸುವ ಮುನ್ನ ಎಚ್ಚರ!

Sheep Farming: ಸಹಕಾರ ರಂಗಕ್ಕೂ ಸೈ… ಕೃಷಿ ರಂಗಕ್ಕೂ ಜೈ!

Sheep Farming: ಸಹಕಾರ ರಂಗಕ್ಕೂ ಸೈ… ಕೃಷಿ ರಂಗಕ್ಕೂ ಜೈ!

Karthik’s advice helped me when i was struggling without rhythm: Virat Kohli

RCB; ಲಯ ಇಲ್ಲದೆ ಒದ್ದಾಡುತ್ತಿದ್ದಾಗ ಕಾರ್ತಿಕ್‌ ಸಲಹೆಯಿಂದ ನೆರವು: ವಿರಾಟ್ ಕೊಹ್ಲಿ

Mysore; ಒಂದು ವರ್ಷದಿಂದ ಕಟ್ಟಿಲ್ಲ ಮೋದಿ ವಾಸ್ತವ್ಯ ಹೂಡಿದ್ದ ಹೋಟೆಲ್ ಕೊಠಡಿ ಬಾಡಿಗೆ!

Mysore; ಒಂದು ವರ್ಷದಿಂದ ಪಾವತಿಸಿಲ್ಲ ಮೋದಿ ವಾಸ್ತವ್ಯ ಹೂಡಿದ್ದ ಹೋಟೆಲ್ ಕೊಠಡಿ ಬಾಡಿಗೆ!

King Cobra: ಅಡುಗೆ ಕೋಣೆಯಲ್ಲಿ ಅವಿತು ಕುಳಿತ ದೈತ್ಯ ಕಾಳಿಂಗ ಸರ್ಪ, ಬೆಚ್ಚಿಬಿದ್ದ ಮನೆ ಮಂದಿ

King Cobra: ಅಡುಗೆ ಕೋಣೆಯಲ್ಲಿ ಅವಿತು ಕುಳಿತ ದೈತ್ಯ ಕಾಳಿಂಗ ಸರ್ಪ, ಬೆಚ್ಚಿಬಿದ್ದ ಮನೆ ಮಂದಿ

ನನ್ನ ಮಗ ಸತ್ತು ಹೋಗಿ 8 ವರ್ಷ ಆಗಿದೆ…; ಕುಮಾರಸ್ವಾಮಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ

ನನ್ನ ಮಗ ಸತ್ತು ಹೋಗಿ 8 ವರ್ಷ ಆಗಿದೆ…; ಕುಮಾರಸ್ವಾಮಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ

Google Map Follow ಮಾಡಿ ಹಳ್ಳಕ್ಕೆ ದುಮುಕಿದ ಕಾರು… ಅದೃಷ್ಟವಶಾತ್ ಪ್ರವಾಸಿಗರು ಪಾರು

Google Map Follow ಮಾಡಿ ಹೊಳೆಗೆ ಧುಮುಕಿದ ಕಾರು… ಅದೃಷ್ಟವಶಾತ್ ಪ್ರವಾಸಿಗರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-panaji

Panaji: ಪತ್ನಿಯನ್ನು ಕೊಂದ ಪತಿ; ಬಂಧನ

KSRTC ಬಸ್ ನಲ್ಲಿ ಕುಳಿತಲ್ಲೇ ನೆಲ ಕಾಣುತ್ತದೆ..: ಈ ಬಸ್ ನಲ್ಲಿ ಪಯಣಿಸುವ ಮುನ್ನ ಎಚ್ಚರ!

KSRTC ಬಸ್ ನಲ್ಲಿ ಕುಳಿತಲ್ಲೇ ನೆಲ ಕಾಣುತ್ತದೆ..: ಈ ಬಸ್ ನಲ್ಲಿ ಪಯಣಿಸುವ ಮುನ್ನ ಎಚ್ಚರ!

Sheep Farming: ಸಹಕಾರ ರಂಗಕ್ಕೂ ಸೈ… ಕೃಷಿ ರಂಗಕ್ಕೂ ಜೈ!

Sheep Farming: ಸಹಕಾರ ರಂಗಕ್ಕೂ ಸೈ… ಕೃಷಿ ರಂಗಕ್ಕೂ ಜೈ!

5-

ಗಾಂಜಾ ಸಾಗಾಟ; ತೀರ್ಥಹಳ್ಳಿಯಲ್ಲಿ ಇಬ್ಬರ ಬಂಧನ; 2 ಕೆಜಿ ಗಾಂಜಾ ವಶ

Karthik’s advice helped me when i was struggling without rhythm: Virat Kohli

RCB; ಲಯ ಇಲ್ಲದೆ ಒದ್ದಾಡುತ್ತಿದ್ದಾಗ ಕಾರ್ತಿಕ್‌ ಸಲಹೆಯಿಂದ ನೆರವು: ವಿರಾಟ್ ಕೊಹ್ಲಿ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

6-panaji

Panaji: ಪತ್ನಿಯನ್ನು ಕೊಂದ ಪತಿ; ಬಂಧನ

KSRTC ಬಸ್ ನಲ್ಲಿ ಕುಳಿತಲ್ಲೇ ನೆಲ ಕಾಣುತ್ತದೆ..: ಈ ಬಸ್ ನಲ್ಲಿ ಪಯಣಿಸುವ ಮುನ್ನ ಎಚ್ಚರ!

KSRTC ಬಸ್ ನಲ್ಲಿ ಕುಳಿತಲ್ಲೇ ನೆಲ ಕಾಣುತ್ತದೆ..: ಈ ಬಸ್ ನಲ್ಲಿ ಪಯಣಿಸುವ ಮುನ್ನ ಎಚ್ಚರ!

Sheep Farming: ಸಹಕಾರ ರಂಗಕ್ಕೂ ಸೈ… ಕೃಷಿ ರಂಗಕ್ಕೂ ಜೈ!

Sheep Farming: ಸಹಕಾರ ರಂಗಕ್ಕೂ ಸೈ… ಕೃಷಿ ರಂಗಕ್ಕೂ ಜೈ!

5-

ಗಾಂಜಾ ಸಾಗಾಟ; ತೀರ್ಥಹಳ್ಳಿಯಲ್ಲಿ ಇಬ್ಬರ ಬಂಧನ; 2 ಕೆಜಿ ಗಾಂಜಾ ವಶ

Karthik’s advice helped me when i was struggling without rhythm: Virat Kohli

RCB; ಲಯ ಇಲ್ಲದೆ ಒದ್ದಾಡುತ್ತಿದ್ದಾಗ ಕಾರ್ತಿಕ್‌ ಸಲಹೆಯಿಂದ ನೆರವು: ವಿರಾಟ್ ಕೊಹ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.