Mammootty: ಎರಡು ವಿಭಿನ್ನ ಕಾಲಘಟ್ಟದ ಸಿನೆಮಾದಲ್ಲಿ ನಟ ಮಮ್ಮೂಟಿ


Team Udayavani, May 25, 2024, 4:11 PM IST

11-mammootty

2024ರಲ್ಲಿ ತೆರೆಕಂಡ ಮಾಲಿವುಡ್‌ನ‌ ಚಿರ ಯೌವ್ವನದ ನಟ ಮಮ್ಮೂಟಿ ಅವರ ಅಭಿನಯದ ಮೊನೋಕ್ರೋಮ್‌ ಮಲಯಾಳ ಚಿತ್ರ “ಭ್ರಮಾ ಯುಗಮ…’ ಸಿನೆಮಾದ ಕೆಲವೊಂದು ಫ್ರೆàಮ್‌ಗಳು ಮಮ್ಮೂಟಿಯವರದ್ದೇ ಅಭಿನಯದ 1994ರಲ್ಲಿ ತೆರೆಕಂಡ “ವಿಧೇಯನ್‌’ ಚಲನಚಿತ್ರದಿಂದ ಸಾಕಷ್ಟು ಪ್ರೇರಿತವಾಗಿದೆ.

ಕೆಲವು ದಿನಗಳ ಹಿಂದೆ ನಮ್ಮ ಪ್ರಾಧ್ಯಾ ಪಕರಾದ ರಕ್ಷಿತ್‌ ರೈ ಸರ್‌, “ವಿಧೇಯನ್‌’ ಸಿನೆಮಾದ ಕೆಲವೊಂದು ತುಣುಕುಗಳನ್ನು ಸ್ಟುಡಿಯೋದಲ್ಲಿ ನಮಗೆ ತೋರಿಸಿ “ಭ್ರಮಾ ಯುಗಮ…’ ನೋಡಿದವರು ಒಮ್ಮೆ ಈ ಸಿನೆಮಾ ಕೂಡ ನೋಡಿ ಎಂದು ಸಲಹೆ ನೀಡಿದ್ದರು. ಹಾಗಾಗಿಯೇ ಮಲಯಾಳಂನ ಖ್ಯಾತ ನಿರ್ದೇಶಕ ಅಡೂರ್‌ ಗೋಪಾಲ್‌ ಕೃಷ್ಣನ್‌ಅವರ ನಿರ್ದೇಶನದ “ವಿಧೇಯನ್‌’ ಅವರು ಹೇಳಿದ ದಿನವೇ ನೋಡಿ ಮುಗಿಸಿದೆ.

ಮೊದಲಿಗೆ “ಭ್ರಮಾಯುಗಮ…’ ಬಗ್ಗೆ ಮಾತನಾ ಡುವುದಾದರೆ ಇದೊಂದು “ಟೆಕ್ನಿಕಲಿ ಬ್ರಿಲಿಯಂಟ್‌’ ಅನ್ನಿಸಿಕೊಳ್ಳೋ ಸಿನೆಮಾ. ಇಡೀ ಸಿನೆಮಾವನ್ನು ಮೊನೊಕ್ರೋಮ್ನಲ್ಲಿ ಚಿತ್ರಿಸಿ ಬಿಡುಗಡೆ ಮಾಡಿದ ಚಿತ್ರತಂಡದ ಧೈರ್ಯ ಮೆಚ್ಚಲೇ ಬೇಕಾಗಿದ್ದು. ಇನ್ನೂ ಇಡೀ ಚಿತ್ರವನ್ನು “ಅಯ್ಯೋ ಈ ಸಿನಿಮಾವನ್ನು ಥಿಯೇಟರ್‌ನಲ್ಲಿ ನೋಡದೇ ತಪ್ಪು ಮಾಡಿಬಿಟ್ಟೆ’ ಎಂಬಂತೆ ಉದ^ರಿಸುವಂತೆ ಮಾಡುವುದು ಚಿತ್ರದ ಸಂಗೀತ ಹಾಗೂ ವಿಷುವಲ್ಸ್.

ಇಡೀ ಭ್ರಮಾಯುಗಮ್‌ ಸಿನೆಮಾದ 90ಕ್ಕೂ ಹೆಚ್ಚು ಭಾಗ ಕಾಣಿಸಿಕೊಳ್ಳೊದು ಮೂರೇ ಪಾತ್ರಗಳು. ಒಂದು ಮಮ್ಮೂಟಿ ಅವರು ನಿರ್ವಹಿಸಿದ ಕುಡುಮನ್‌ ಪೋಟ್ಟಿ, ನಿರಾಶ್ರಿತನಾದ ತೇವನ್‌ ಪಾತ್ರದಲ್ಲಿ ಕಾಣಿಸಿಕೊಳ್ಳುವ ಅರ್ಜುನ್‌ ಅಶೋಕನ್‌ ಹಾಗೂ ಅಡುಗೆ ಕೆಲಸದವನ ಪಾತ್ರ ನಿರ್ವಹಿಸಿರುವ ಸಿದ್ಧಾರ್ಥ್. ಆದರೆ ಚಿತ್ರದುದ್ದಕ್ಕೂ ಸುರಿಯುವ ಮಳೆಯಂತೆಯೇ, ಇಡೀ ಚಿತ್ರದುದ್ದಕ್ಕೂ ಈ ಮೂವರು ಒಬ್ಬರಿಗೊಬ್ಬರು ತಮ್ಮ ನಟನಾ ಸಾಮರ್ಥ್ಯವನ್ನು ಸಾಬೀತುಪಡಿಸಲು ಸ್ಪರ್ಧಿಸುತ್ತಿದ್ದಾರೋ ಎಂಬಂತೆ ವೈಟ್‌ ಆ್ಯಂಡ್‌ ಬ್ಲಾಕ್‌ ಸಿನೆಮಾದಲ್ಲೂ ಎದ್ದು ಕಾಣೋ ಬೆಳಕಿನಂತೆ ನಟಿಸಿಬಿಟ್ಟಿದ್ದಾರೆ.

ಕೇರಳ ಪ್ರಾಂತ್ಯದಲ್ಲಿ ಇರುವ ಮಾಂತ್ರಿಕ ಶಕ್ತಿಗಳಾದ ಚಾತನ್‌, ಯಕ್ಷಿಗಳ ಉÇÉೇಖ ಈ  ಚಿತ್ರದುದ್ದಕ್ಕೂ ಕಾಣಬಹುದು. ಹಾಗಾಗಿಯೇ ಇವುಗಳ ಇರುವಿಕೆಯ ಮೂಲಕವೇ ಈ ಚಿತ್ರವು “ಕಲಿಯುಗದ ಅಪಭ್ರಂಶವಾದ ಭ್ರಮಾಯುಗ’ವನ್ನೇ ಸೃಷ್ಟಿಸಿ ಬಿಡುತ್ತದೆ ಎನ್ನುವುದು ಅತಿಶಯೋಕ್ತಿಯಲ್ಲ. ಇನ್ನು1994ರ “ವಿಧೇಯನ್‌’ ಚಿತ್ರದಲ್ಲಿ  ದಕ್ಷಿಣ ಕನ್ನಡ ಜಿಲ್ಲೆಯ ಕಾಡುಗಳಿಗೆ ಕೇರಳದಿಂದ ವಲಸೆ ಬಂದು ಬದುಕು ಕಟ್ಟಿಕೊಳ್ಳುವ ಪ್ರಯತ್ನದಲ್ಲಿರೋ ತೋಮಿ ಎಂಬಾತನು, ಕ್ರೂರಿ ಹಾಗೂ ತನ್ನ ಊರಿನಲ್ಲಿ ತನ್ನ ದುಷ್ಟ ಸ್ವಭಾವದಿಂದಾಗಿ ದ್ವೇಷ ಕಟ್ಟಿಕೊಂಡಿರೋ ಭಾಸ್ಕರ್‌ ಪಟೇಲ್‌ ಎಂಬಾತನ ಬಳಿ ಸೇರಿಕೊಂಡು ಅವನ ಆಜ್ಞೆಗಳಿಗೆಲ್ಲಾ ಇಲ್ಲ ಅನ್ನುವುದಕ್ಕೂ ಸ್ವಾತಂತ್ರ್ಯವಿಲ್ಲದಂತೆ ಅವನು ಹೇಳಿದ ಆಜ್ಞೆ ಪಾಲಿಸಿಕೊಂಡು ಹೋಗುವ ಕಥೆ. ಅವನು ಏನೆಲ್ಲಾ ಆಜ್ಞೆಗಳನ್ನು ಪಾಲಿಸಬೇಕಾಗುತ್ತದೆ ಎಂಬುದನ್ನು ನೀವೇ ಸಿನೆಮಾದಲ್ಲಿ ನೋಡುವುದು ಉತ್ತಮ.

ಇಡೀ “ವಿಧೇಯನ್‌’ ಸಿನೆಮಾದಲ್ಲಿ ಕೇಪಿನ ಕೋವಿ ಹಿಡಿದು ತಿರುಗುವ ಮಮ್ಮೂಟಿ ನಿಜವಾಗಿಯೂ ನಟ ರಾಕ್ಷಸನಂತೆ ರಾರಾಜಿಸುತ್ತಾರೆ. ಇನ್ನು ತೋಮಿಯ ಪಾತ್ರ ಮಾಡಿರುವ ಗೋಪಕುಮಾರ್‌ ಮಾತ್ರ “ಯಜಮಾನರೇ’ ಎನ್ನುವಾಗಲೆಲ್ಲಾ “ಪಾಪಿ ಸಮುದ್ರಕ್ಕೆ ಹೋದರೂ ಮೊಳಕಾಲುದ್ದ ನೀರು ಎಂಬ ಗಾದೆ ಮಾತನ್ನು’ ನೆನಪಿಸುತ್ತದೆ.

ಮತ್ತೂಂದು ವಿಷಯ “ವಿಧೇಯನ್‌’ ಸಿನೆಮಾದ ಕಥೆಯು ಸಂಪೂರ್ಣವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ (ಒಂದು ಬಾರಿ ಮಾತ್ರ ಕೊಡಗಿನ ಕಡೆ ಸಾಗುತ್ತದೆ) ನಡೆಯುವುದರಿಂದ ಈ ಚಿತ್ರದ ಭಾಷಾ ಬಳಕೆಯು ಶುದ್ಧ ಮಲಯಾಳಂನಲ್ಲಿರದೇ ಸ್ಥಳೀಯರು ಮಾತನಾಡುವ ಮಲಯಾಳಂ ಭಾಷೆಯ ಶೈಲಿಯಲ್ಲಿದೆ. ಹಾಗೆಯೇ ಚಿತ್ರದುದ್ದಕ್ಕೂ ಕನ್ನಡ ಸಂಭಾಷಣೆಗಳು ಕೂಡ ಯಥೇತ್ಛವಾಗಿವೆ. ಮಮ್ಮೂಟಿ ಸ್ವತಃ ಕನ್ನಡದಲ್ಲಿಯೂ ಡೈಲಾಗ್‌ ಹೇಳಿರುವುದು ವಿಶೇಷ. ಹಾಗೆಯೇ ಸುತ್ತಮುತ್ತಲಿನ ಊರುಗಳಾದ ಇಚ್ಲಂಪಾಡಿ, ಅರಿಶಿನಮಕ್ಕಿ ಸೇರಿದಂತೆ ಹಲವಾರು ಊರುಗಳ ಹೆಸರುಗಳ ಉಲ್ಲೇಖಗಳನ್ನು, ಹಾಗೂ ಶಿಶಿಲ ಮತ್ಸ್ಯ ಕ್ಷೇತ್ರದ ಮೀನುಗಳನ್ನೂ ಕೂಡ ಗಮನಿಸಬಹುದು.

ಕೊನೆಯದಾಗಿ ಹೇಳುವುದಾದರೆ ಈ ಎರಡೂ ಸಿನೆಮಾಗಳಿಗೂ ಕಥೆಯ ದೃಷ್ಟಿಯಿಂದ ಒಂದಕ್ಕೊಂದು ಸಂಬಂಧವಿಲ್ಲ. ಆದರೆ ಪಾತ್ರ ಪೋಷಣೆಗೆ ಒಂದಿಷ್ಟು ದೃಶ್ಯಾವಳಿಗಳನ್ನು ಎರಡೂ ಚಲನಚಿತ್ರಗಳಲ್ಲಿ ಒಂದೇ ರೀತಿಯಲ್ಲಿ ಬಳಸಿಕೊಳ್ಳಲಾಗಿದೆ. ಹಾಗಾಗಿಯೇ ಈ ಎರಡೂ ಸಿನೆಮಾಗಳ ಚಿತ್ರಗಳಲ್ಲಿರುವ ದೃಶ್ಯಗಳು ಪ್ರೇಕ್ಷಕರು ಪರದೆಯಿಂದ ಕಣ್ಣು ಹೊರಳಿಸದಂತೆ ಮಾಡಲು ಯಶಸ್ವಿಯಾಗಿವೆ. ಈ ಎರಡೂ ಚಿತ್ರಗಳು ತಮ್ಮ ವಿಭಿನ್ನ ಕಥಾ ನಿರೂಪಣ ಶೈಲಿ ಹಾಗೂ ವಿಭಿನ್ನ ಚಿತ್ರ ನಿರ್ಮಾಣ ತಂತ್ರಗಳಿಂದಲೇ ಚಿತ್ರ ಪ್ರೇಮಿಗಳ ಮನ ಗೆದ್ದಿರುವು ದರಲ್ಲಿ ಯಾವುದೇ ಸಂಶಯವಿಲ್ಲ.

ಅನುರಾಗ್‌ ಗೌಡ

ಎಸ್‌ಡಿಎಂ ಕಾಲೇಜು ಉಜಿರೆ

ಟಾಪ್ ನ್ಯೂಸ್

Pannun: ಪನ್ನು ಹತ್ಯೆಗೆ ಸಂಚು ಆರೋಪ: ಭಾರತೀಯ ಮೂಲದ ನಿಖಿಲ್ ಗುಪ್ತಾ ಅಮೆರಿಕಕ್ಕೆ ಹಸ್ತಾಂತರ

Pannun: ಪನ್ನು ಹತ್ಯೆಗೆ ಸಂಚು ಆರೋಪ: ಭಾರತೀಯ ಮೂಲದ ನಿಖಿಲ್ ಗುಪ್ತಾ ಅಮೆರಿಕಕ್ಕೆ ಹಸ್ತಾಂತರ

2-thirthahalli

Thirthahalli: ಬಸ್-ಲಾರಿ ಡಿಕ್ಕಿ; ಕೆಲವರಿಗೆ ಸಣ್ಣಪುಟ್ಟ ಗಾಯ

NEET ಬೃಹತ್‌ ಹಗರಣ: ವಿಪಕ್ಷ ಆಕ್ರೋಶ ತೀವ್ರ

NEET ಬೃಹತ್‌ ಹಗರಣ: ವಿಪಕ್ಷ ಆಕ್ರೋಶ ತೀವ್ರ

1-24–monday

Daily Horoscope: ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳಿಂದ ತೊಂದರೆ, ಉದ್ಯಮದಲ್ಲಿ ಪ್ರಗತಿ

Renuka Swamy Case;ಸ್ಥಳ ಮಹಜರು ವೇಳೆ ಮುಗುಳು ನಕ್ಕ ಪವಿತ್ರಾ ಗೌಡ

Renuka Swamy Case;ಸ್ಥಳ ಮಹಜರು ವೇಳೆ ಮುಗುಳು ನಕ್ಕ ಪವಿತ್ರಾ ಗೌಡ

Monsoon ಮಳೆ ಅಧಿಕ ಸರಿದ ಬರದ ಕಾರ್ಮೋಡ

Monsoon ಮಳೆ ಅಧಿಕ ಸರಿದ ಬರದ ಕಾರ್ಮೋಡ

Government ಪೊಲೀಸ್‌ ವರ್ಗ: ಹೊಸ ನೀತಿ ಶೀಘ್ರ?

Government ಪೊಲೀಸ್‌ ವರ್ಗ: ಹೊಸ ನೀತಿ ಶೀಘ್ರ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-uv-fusion

UV Fusion: ನಾಲ್ಕು ಕಾಲಲ್ಲಿರುವ ದಯೆ ಎರಡು ಕಾಲಲ್ಲಿಲ್ಲ..!

8-uv-fusion

UV Fusion: ಭಾವನೆಯ ಸುಳಿಯೊಳಗಿನ ಬದುಕು

7-uv-fusion

UV Fusion: ಮನದ ಮಾತಿಗಿಂದು ಏನೆಂದು ಹೆಸರು?

9-uv-fusion

Fusion Cinema: ಮಂಥನದ ಕಥೆ ಗೊತ್ತಾ?

8-1

Sangeet Naari Mahal: ಗುಮ್ಮಟ ನಗರಿಯಲ್ಲಿ ಒಂದು ಸಂಗೀತ ಮಹಲ್‌

MUST WATCH

udayavani youtube

ಕೆ‌ಎಸ್‌ಆರ್‌ಟಿಸಿ‌ ಬಸ್- ಬೈಕ್ ಮುಖಾಮುಖಿ ಢಿಕ್ಕಿ ; ಸವಾರ ಮೃತ್ಯು

udayavani youtube

ಇಡ್ಲಿ, ವಡೆ, ಚಟ್ನಿ ಗೆ ತುಂಬಾ ಫೇಮಸ್ ಈ ಹೋಟೆಲ್

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಹೊಸ ಸೇರ್ಪಡೆ

Pannun: ಪನ್ನು ಹತ್ಯೆಗೆ ಸಂಚು ಆರೋಪ: ಭಾರತೀಯ ಮೂಲದ ನಿಖಿಲ್ ಗುಪ್ತಾ ಅಮೆರಿಕಕ್ಕೆ ಹಸ್ತಾಂತರ

Pannun: ಪನ್ನು ಹತ್ಯೆಗೆ ಸಂಚು ಆರೋಪ: ಭಾರತೀಯ ಮೂಲದ ನಿಖಿಲ್ ಗುಪ್ತಾ ಅಮೆರಿಕಕ್ಕೆ ಹಸ್ತಾಂತರ

2-thirthahalli

Thirthahalli: ಬಸ್-ಲಾರಿ ಡಿಕ್ಕಿ; ಕೆಲವರಿಗೆ ಸಣ್ಣಪುಟ್ಟ ಗಾಯ

NEET ಬೃಹತ್‌ ಹಗರಣ: ವಿಪಕ್ಷ ಆಕ್ರೋಶ ತೀವ್ರ

NEET ಬೃಹತ್‌ ಹಗರಣ: ವಿಪಕ್ಷ ಆಕ್ರೋಶ ತೀವ್ರ

1-24–monday

Daily Horoscope: ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳಿಂದ ತೊಂದರೆ, ಉದ್ಯಮದಲ್ಲಿ ಪ್ರಗತಿ

Renuka Swamy Case;ಸ್ಥಳ ಮಹಜರು ವೇಳೆ ಮುಗುಳು ನಕ್ಕ ಪವಿತ್ರಾ ಗೌಡ

Renuka Swamy Case;ಸ್ಥಳ ಮಹಜರು ವೇಳೆ ಮುಗುಳು ನಕ್ಕ ಪವಿತ್ರಾ ಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.