ಪಾಕ್‌-ಆಫ್ರಿಕಾ: ಸಮಾಧಾನಕರ ಸಮರ

ಲಾರ್ಡ್ಸ್‌ನಲ್ಲಿ ರೇಸ್‌ನಿಂದ "ಹೊರಬಿದ್ದವರ' ಸ್ಪರ್ಧೆ

Team Udayavani, Jun 23, 2019, 5:56 AM IST

SA

ಲಂಡನ್‌: ಈಗಾಗಲೇ ಸೆಮಿಫೈನಲ್‌ ರೇಸ್‌ನಿಂದ ಬಹುತೇಕ ಹೊರಬಿದ್ದಿರುವ ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ಥಾನ ತಂಡಗಳು ರವಿವಾರ ಸಮಾಧಾನಕರ ಸಮರವೊಂದರಲ್ಲಿ ಕಾಣಿಸಿಕೊಳ್ಳಲಿವೆ. ಇದು ಐತಿಹಾಸಿಕ ಲಾರ್ಡ್ಸ್‌ನಲ್ಲಿ ನಡೆಯುವ ಪ್ರಸಕ್ತ ಕೂಟದ ಮೊದಲ ಪಂದ್ಯವೆಂಬುದು ವಿಶೇಷ.

ಎರಡೂ ತಂಡಗಳು ಸದ್ಯ ಒಂದು ಗೆಲುವು ಹಾಗೂ 3 ಅಂಕಗಳೊಂದಿಗೆ ಒಂದೇ ದೋಣಿಯಲ್ಲಿ ಪಯಣಿಸುತ್ತಿವೆ. ಆದರೆ ದಕ್ಷಿಣ ಆಫ್ರಿಕಾ 6 ಪಂದ್ಯ ಆಡಿದರೆ, ಪಾಕಿಸ್ಥಾನ ಆಡಿದ್ದು ಐದರಲ್ಲಿ ಮಾತ್ರ. ಹೀಗಾಗಿ ಪಾಕ್‌ ಪಾಲಿಗೆ ಇದು ಹೆಚ್ಚು ಮಹತ್ವದ ಪಂದ್ಯ.

ದಿಕ್ಕೆಟ್ಟ ಪಾಕಿಸ್ಥಾನ
ಹಿಂದಿನ ಪಂದ್ಯದಲ್ಲಿ ಬದ್ಧ ಎದುರಾಳಿ ಭಾರತದ ವಿರುದ್ಧ ಸತತ ಏಳನೇ ವಿಶ್ವಕಪ್‌ ಸೋಲನುಭವಿಸಿದ ಬಳಿಕ ಸಫ‌ìರಾಜ್‌ ಪಡೆ ದಿಕ್ಕೆಟ್ಟು ಕುಳಿತಿದೆ. ಎಲ್ಲ ಕಡೆಗಳಿಂದಲೂ ಟೀಕಾಪ್ರಹಾರ ಎದುರಾಗುತ್ತಿದೆ. ಹೀಗಾಗಿ ಉಳಿದ ಪಂದ್ಯಗಳನ್ನು ಗೆದ್ದು ಅಭಿಮಾನಿಗಳನ್ನು ಸಮಾಧಾನಪಡಿಸುವತ್ತ ಪಾಕ್‌ ಮುಂದಾಗಬೇಕಿದೆ. ಆಗ ಮತ್ತೆ ನಾಕೌಟ್‌ ಆಸೆ ಚಿಗುರಲೂಬಹುದು. ಟೀಮ್‌ ಇಂಡಿಯಾ ವಿರುದ್ಧ ಎಡವಿದ ಬಳಿಕ ಪಾಕಿಸ್ಥಾನ ಆಡುತ್ತಿರುವ ಮೊದಲ ಪಂದ್ಯ ಇದಾಗಿದೆ.

ಭಾರತದ ಎದುರು ಯಾವತ್ತೂ ನರ್ವಸ್‌ ಆಗುವ ಪಾಕಿಸ್ಥಾನ ಉಳಿದ ತಂಡಗಳ ವಿರುದ್ಧ ಉತ್ತಮ ಪ್ರದರ್ಶನವನ್ನೇ ನೀಡುತ್ತದೆ. ಹೀಗಾಗಿ ಅದು ಡು ಪ್ಲೆಸಿಸ್‌ ಪಡೆ ಮೇಲೆ ಸವಾರಿ ಮಾಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ದಕ್ಷಿಣ ಆಫ್ರಿಕಾದ್ದು ಇನ್ನೊಂದು ರೀತಿಯ ಅವಸ್ಥೆ. 6 ಪಂದ್ಯ ಆಡಿದರೂ ಇನ್ನೂ ತಪ್ಪುಗಳನ್ನು ತಿದ್ದಿಕೊಂಡಿಲ್ಲ. ಎಲ್ಲಿಯೂ ವಿಶ್ವಕಪ್‌ ಜೋಶ್‌ ತೋರ್ಪಡಿಸಿಲ್ಲ. ಅಭಿಮಾನಿಗಳೂ ಈ ತಂಡದ ಮೇಲಿನ ನಂಬಿಕೆಯನ್ನು ಕಳೆದುಕೊಂಡಾಗಿದೆ.

ಸಿಲ್ಲಿ ಪಾಯಿಂಟ್‌
1992ರಿಂದ ಮೊದಲ್ಗೊಂಡು ವಿಶ್ವಕಪ್‌ನಲ್ಲಿ ಪಾಕಿಸ್ಥಾನ ವಿರುದ್ಧ ಆಡಿದ ಮೂರೂ ಪಂದ್ಯಗಳನ್ನು ಗೆದ್ದ ದಕ್ಷಿಣ ಆಫ್ರಿಕಾ ಹ್ಯಾಟ್ರಿಕ್‌ ಸಾಧಿಸಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ಪಾಕಿಸ್ಥಾನದ ಏಕೈಕ ವಿಶ್ವಕಪ್‌ ಗೆಲುವು 2015ರಲ್ಲಿ ದಾಖಲಾಗಿತ್ತು. ಅಂತರ 29 ರನ್‌ (ಡಿ-ಎಲ್‌ ನಿಯಮ).

ಇತ್ತಂಡಗಳು ಈವರೆಗೆ 26 ಸಲ ಏಕದಿನದಲ್ಲಿ ಮುಖಾಮುಖೀ ಯಾಗಿವೆ. ದಕ್ಷಿಣ ಆಫ್ರಿಕಾ 15ರಲ್ಲಿ ಗೆದ್ದರೆ, ಪಾಕಿಸ್ಥಾನ ಜಯಿಸಿದ್ದು 4ರಲ್ಲಿ ಮಾತ್ರ. ಉಳಿದ 7 ಪಂದ್ಯಗಳಲ್ಲಿ ಸ್ಪಷ್ಟ ಫ‌ಲಿತಾಂಶ ದಾಖಲಾಗಿಲ್ಲ.

ಸಂಭಾವ್ಯ ತಂಡ
ಪಾಕಿಸ್ಥಾನ
ಫ‌ಕಾರ್‌ ಜಮಾನ್‌, ಇಮಾಮ್‌ ಉಲ್‌ ಹಕ್‌, ಬಾಬರ್‌ ಆಜಂ, ಮೊಹಮ್ಮದ್‌ ಹಫೀಜ್‌, ಸಫ‌ìರಾಜ್‌ ಅಹ್ಮದ್‌ (ನಾಯಕ), ಶೋಯಿಬ್‌ ಮಲಿಕ್‌/ ಹ್ಯಾರಿಸ್‌ ಸೊಹೈಲ್‌, ಇಮಾದ್‌ ವಾಸಿಮ್‌, ಶಾದಾಬ್‌ ಖಾನ್‌, ಮೊಹಮ್ಮದ್‌ ಆಮಿರ್‌, ವಹಾಬ್‌ ರಿಯಾಜ್‌, ಹಸನ್‌ ಅಲಿ/ ಮೊಹಮ್ಮದ್‌ ಹಸ್ನೇನ್‌

ದಕ್ಷಿಣ ಆಫ್ರಿಕಾ
ಹಾಶಿಮ್‌ ಆಮ್ಲ, ಕ್ವಿಂಟನ್‌ ಡಿ ಕಾಕ್‌, ಫಾ ಡು ಪ್ಲೆಸಿಸ್‌ (ನಾಯಕ), ಐಡನ್‌ ಮಾರ್ಕ್‌ ರಮ್‌, ರಸ್ಸಿ ವಾನ್‌ ಡರ್‌ ಡುಸೆನ್‌, ಡೇವಿಡ್‌ ಮಿಲ್ಲರ್‌, ಆ್ಯಂಡಿಲ್‌ ಫೆಲುಕ್ವಾಯೊ, ಕ್ರಿಸ್‌ ಮಾರಿಸ್‌, ಲುಂಗಿ ಎನ್‌ಗಿಡಿ, ಕಾಗಿಸೊ ರಬಾಡ, ಇಮ್ರಾನ್‌ ತಾಹಿರ್‌.

ಟಾಪ್ ನ್ಯೂಸ್

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.