ಮನಗೆದ್ದ ಅನಂತ ನಾಟಕೋತ್ಸವ


Team Udayavani, Mar 24, 2017, 3:50 AM IST

24-KALA-2.jpg

ಆಧುನಿಕ ಪ್ರಯೋಗಶೀಲ ರಂಗಭೂಮಿಯ  ಚಟುವಟಿಕೆಗಳು ಕೇವಲ ನಗರ ಕೇಂದ್ರಿತವಾಗಿವೆ. ಹಳ್ಳಿಗಳಲ್ಲಿ ಅದೇ ಹಳೇ ಪರದೆ ನಾಟಕಗಳೇ ಮುಂದುವರಿದಿವೆ ಎಂಬ ಭಾವನೆಯನ್ನು ಸುಳ್ಳು ಮಾಡಿದ್ದು ಪೆರ್ಡೂರು ಪ್ರೌಢಶಾಲಾ ಬಯಲು ರಂಗಮಂಟಪದಲ್ಲಿ ಇತ್ತೀಚೆಗೆ ಮೂರು ದಿನಗಳ ಕಾಲ ಅದ್ದೂರಿಯಾಗಿ ನಡೆದ ಅನಂತ ಮಕ್ಕಳ ನಾಟಕೋತ್ಸವ ಮತ್ತು ಮಕ್ಕಳ ಚಲನಚಿತ್ರೋತ್ಸವ. ಊರಿನ ಆರಾಧ್ಯ ದೈವ ಅನಂತ ಪದ್ಮನಾಭನ ಹೆಸರಿನೊಂದಿಗೆ ಕಲೆಯ ಅನಂತತೆಯನ್ನು ಈ ಹೆಸರು ಸೂಚಿಸುವಂತಿತ್ತು.

ಇಂದಿನ ಪೀಳಿಗೆಯ ಮಕ್ಕಳಲ್ಲಿ ಕಲ್ಪನಾಶಕ್ತಿ, ಆಸ್ವಾದನಾಪ್ರಜ್ಞೆ ಬೆಳೆಸುವ ಗುರುತರವಾದ ಉದ್ದೇಶವನ್ನು ಇಟ್ಟುಕೊಂಡು ನಡೆದ ಈ ಸಾಂಸ್ಕೃತಿಕ ಸಂಭ್ರಮದ ಸಾರಥ್ಯ ವಹಿಸಿದವರು ಪೆರ್ಡೂರು ಪ್ರೌಢಶಾಲೆಯ ಶಿಕ್ಷಕ ಜಿ. ಪಿ. ಪ್ರಭಾಕರ ತುಮರಿ. ತನ್ನ ಅಭಿಮಾನಿ ಶಿಷ್ಯರು ಮತ್ತು ದಾನಿಗಳ ನೆರವಿನಿಂದ ಈ ರಂಗಹಬ್ಬವನ್ನು ಸಂಘಟಿಸಿದ ಅವರ ಸಾಹಸ ಮೆಚ್ಚುವಂಥದು. ಕಳೆದ ಐದು ದಶಕಗಳಿಂದ ಪಾಠದ ಜತೆಗೆ ಮಕ್ಕಳ ಮನೋಲೋಕವನ್ನು ಬುದ್ಧಿ -ಭಾವಲೋಕವನ್ನು ಹಿಗ್ಗಿಸುವಂತಹ ಚಟುವಟಿಕೆಗಳಿಗೆ ಮಹತ್ವ, ಆದ್ಯತೆ ನೀಡುತ್ತಾ ಬಂದಿರುವ ಪೆರ್ಡೂರು ಪ್ರೌಢಶಾಲೆ ಉಡುಪಿ ಜಿಲ್ಲೆಯ ಪ್ರತಿಷ್ಠಿತ ಗ್ರಾಮೀಣ ಶಾಲೆ. ಮಣಿಪಾಲದ ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌ ಸಂಸ್ಥೆಯ ಆಡಳಿತದ ಈ ಶಾಲೆಯಲ್ಲಿ ಕ್ರಿಯಾಶೀಲ ಪ್ರತಿಭಾವಂತ ಶಿಕ್ಷಕರು ಜಿ. ಪಿ. ಪ್ರಭಾಕರ ತುಮರಿ. ಲೇಖಕರು, ಸಾಹಿತ್ಯ ನಾಟಕ ವಿಮರ್ಶಕರಾಗಿರುವ ಅವರು ಎರಡು ದಶಕಗಳಿಂದ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಗುರುಗಳಾದವರು. 

ಪೆರ್ಡೂರು ಪರಿಸರದಲ್ಲಿ ಕಲಾತ್ಮಕ ಮತ್ತು ರುಚಿಶುದ್ಧಿಯ ರಂಗಭೂಮಿ ಮತ್ತು ಸಾಂಸ್ಕೃತಿಕ ಬೆಳವಣಿಗೆಗೆ ಪೂರಕ ಪರಿಸರ ನಿರ್ಮಿಸುವ ಕನಸನ್ನು ಹೆಗಲೇರಿಸಿಕೊಂಡು ಪ್ರಭಾಕರ ತುಮರಿ ಪಟ್ಟ ಪಾಡು ಶಿಷ್ಯವೃಂದಕ್ಕೆ ಚೆನ್ನಾಗಿ ತಿಳಿದಿದೆ. ಹಳೆ ವಿದ್ಯಾರ್ಥಿಗಳ ಜತೆಗೆ ತನ್ನ ಭಾವನಾತ್ಮಕ ನಂಟನ್ನು ಉಳಿಸಿಕೊಂಡದ್ದರಿಂದ  ಶಿಷ್ಯವೃಂದವೂ ಅವರ ಈ ಸಾಹಸಕ್ಕೆ ಬೆನ್ನೆಲುಬಾಗಿ ನಿಂತಿತು.  

ಮೊದಲು ಎರಡು ದಿನ ನಡೆದ ಮಕ್ಕಳ ಚಲನ ಚಿತ್ರೋತ್ಸವ ವನ್ನು ಪತ್ರಕರ್ತ ಶಶಿಧರ ಮಾಸ್ತಿಬೈಲು ಉದ್ಘಾಟಿಸಿದರು. ಮಕ್ಕಳ ಸಿನೆಮಾಗಳು ಮುಗ್ಧತೆ ಮತ್ತು ಕನಸಿನ ಮೂಲಕ ಬೆಳೆಯುತ್ತವೆ ಎಂದು ಹೇಳುತ್ತಾ ಕಲಾತ್ಮಕ ಸಿನೆಮಾ ನೋಡುವ ಬಗೆ ತಿಳಿಸಿದರು. ಮುಖ್ಯ ಅತಿಥಿಯಾಗಿದ್ದ ಪತ್ರಕರ್ತ ದೀಪಕ್‌ ಜೈನ್‌ ಮಕ್ಕಳಿಗೆ ಸಿನೆಮಾದ ಶೈಕ್ಷಣಿಕ ಮಹತ್ವ ವಿವರಿಸಿದರು. 

ಅಂತಾರಾಷ್ಟ್ರೀಯ ಮನ್ನಣೆ ಗಳಿಸಿದ ರೆಡ್‌ ಬಲೂನ್‌, ಜಂಗಲ್‌ಬುಕ್‌ ಮೊದಲಾದ ಚಲನಚಿತ್ರಗಳನ್ನು ಪ್ರದರ್ಶಿಸ ಲಾಯಿತು. ಜನಪ್ರಿಯ ಚಿತ್ರಗಳ ಅಬ್ಬರ, ಹಿಂಸೆಗಳನ್ನು ನೋಡಿ ಕ್ಷೋಭೆಗೊಂಡ ಮಕ್ಕಳ ಮನಸ್ಸಿಗೆ ಕಲಾತ್ಮಕ ಚಿತ್ರಗಳ ಸರಳತೆ, ಮುಗ್ಧತೆ, ನೈಜತೆಗಳು ವಿಭಿನ್ನ ಅನುಭವ ನೀಡಿದವು. ಭಾಷೆಯ ತೊಡಕನ್ನು ಮೀರಿ ಮಕ್ಕಳು ಚಿತ್ರಗಳನ್ನು ಆಸ್ವಾದಿಸಿದರು. ಪ್ರತೀ ತಿಂಗಳು ಚಿತ್ರವೊಂದನ್ನು ತೋರಿಸಬೇಕೆಂಬ ಆಗ್ರಹವೂ ಮಕ್ಕಳ ಕಡೆಯಿಂದ ಕೇಳಿಬಂತು.

ಬಳಿಕ ಮೂರು ದಿನಗಳ ಕಾಲ ಪ್ರತಿದಿನ ಸಂಜೆ ಪ್ರೌಢಶಾಲಾ ಬಯಲು ರಂಗಮಂಟಪದಲ್ಲಿ ನಡೆದ ಅನಂತ ಮಕ್ಕಳ ನಾಟಕೋತ್ಸವಕ್ಕೆ ಸಾಹಿತಿ ವೈದೇಹಿ ಚಾಲನೆ ನೀಡಿದರು. ಅನೇಕ ರಂಗಕರ್ಮಿಗಳು, ಸಮಾಜದ ಗಣ್ಯರು, ರಾಜಕೀಯ ನೇತಾರರು ಮೂರು ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ನಾಟಕ ಸಂಭ್ರಮಕ್ಕೆ ಕಳೆ ನೀಡಿದರು. 

ಮೊದಲ ದಿನ ನಾಟಕ ರೋಹಿತ್‌ ಎಸ್‌. ಬೈಕಾಡಿ ನಿರ್ದೇಶನದ ಮದುವೆ ಹೆಣ್ಣು. ನಾಟಕಕಾರ ಎಚ್‌. ಎಸ್‌. ಶಿವಪ್ರಕಾಶ್‌ ರಚನೆಯನ್ನು ಪ್ರದರ್ಶಿಸಿದ ತಂಡ ಬಿ. ಡಿ. ಶೆಟ್ಟಿ ಬಿಬಿಎಂ ಕಾಲೇಜ್‌ ಹಂಗಾರಕಟ್ಟೆ ಬ್ರಹ್ಮಾವರ ಇಲ್ಲಿನ ತಂಡ. ನಾಟಕದ ವಸ್ತು ಸ್ವಲ್ಪ ಗಂಭೀರವಾಗಿದ್ದರೂ ನಾಟಕದ ಇತರ ಅಂಶಗಳು ಜನಮನ ಆಕರ್ಷಿಸಿದವು. ಮನುಷ್ಯನ ಜೀವನದಲ್ಲಿ ವಿಧಿಯಾಟದ ಕ್ರೌರ್ಯ, ವ್ಯಂಗ್ಯ, ಮನುಷ್ಯನ ಅಸಹಾಯಕತೆ, ಪ್ರೀತಿಯ ದೈವಿಕತೆ ಇತ್ಯಾದಿ ಸಂಗತಿಗಳು ನಾಟಕದಲ್ಲಿ ಬಿಂಬಿತವಾಗಿವೆ. ಒಳ್ಳೆಯ ವೇಷಭೂಷಣ, ರಂಗಸಜ್ಜಿಕೆ, ಬೆಳಕು, ಸಂಗೀತ ನಾಟಕದ ಆಕರ್ಷಣೆಯಾಗಿದ್ದವು. ಕಾಲೇಜು ಮಕ್ಕಳಾದರೂ ಅಭಿನಯವು ಚೆನ್ನಾಗಿ ಮೂಡಿಬಂತು. 

ಎರಡನೇ ದಿನ ಎರಡು ಕಿರು ನಾಟಕಗಳು ಪ್ರದರ್ಶನ ಗೊಂಡವು- ಹುತಾತ್ಮ ಭಗತ್‌ ಸಿಂಗ್‌ ಮತ್ತು ಧರಣಿ ಮಂಡಲ ಮಧ್ಯದೊಳಗೆ. ಈ ಎರಡೂ ನಾಟಕಗಳನ್ನು ನಿರ್ದೇಶಿಸಿ ದವರು ಸಂತೋಷ ನಾಯಕ್‌ ಪಟ್ಲ. ಪ್ರದರ್ಶಿಸಿದ ತಂಡ ಎಸ್‌. ವಿ. ಎಸ್‌. ಕಟಪಾಡಿ ಇಲ್ಲಿನ ಬಾಲರಂಗ ಮಕ್ಕಳ ನಾಟಕಶಾಲೆ. ಸ್ವಾತಂತ್ರ್ಯ ಹೋರಾಟದಲ್ಲಿ ಅಪ್ರತಿಮ ಸಾಹಸ ತೋರಿದ ಭಗತ್‌ ಸಿಂಗ್‌ ಜೀವನ ಆಧಾರಿತ ನಾಟಕ ಇದು. ಭಗತ್‌ ಸಿಂಗ್‌ನ ತತ್ವಬದ್ಧತೆ, ಬಡವರ ಕುರಿತ ಪ್ರೀತಿ ಇದರಲ್ಲಿ ಮೂಡಿಬಂತು. ಉತ್ತಮ ರಂಗಪರಿಕರ, ರಂಗಸಜ್ಜಿಕೆ, ವೇಷಭೂಷಣ ಮಕ್ಕಳನ್ನು ರಂಜಿಸಿತು. ಇನ್ನೊಂದು ನಾಟಕ ಧರಣಿಮಂಡಲ ಮಧ್ಯದೊಳಗೆ. ಎಚ್‌. ಎಸ್‌. ವೆಂಕಟೇಶಮೂರ್ತಿ ರಚನೆಯನ್ನು ಅದೇ ಮಕ್ಕಳು ಅತ್ಯುತ್ತಮವಾಗಿ ಅಭಿನಯಿಸಿದರು. ಇದರಲ್ಲಿ ಮಕ್ಕಳ ಒಟ್ಟು ಅಭಿನಯ ಎಲ್ಲರ ಮನಸೂರೆಗೊಂಡಿತು. ಗೋವಿನ ಕತೆಯನ್ನು ಹೊಸ ಅರ್ಥದಲ್ಲಿ ಇಲ್ಲಿ ಹೇಳಿದ್ದಾರೆ. ವ್ಯಕ್ತಿಯೊಬ್ಬನಲ್ಲೇ ಇರುವ ಹಸು ಮತ್ತು ಹುಲಿ ಮುಖವಾಡಗಳ ಬಯಲು ಮಾಡುವ ತಂತ್ರ ಇದರಲ್ಲಿದೆ. ಇಂದಿನ ರಾಜಕೀಯ ಭ್ರಷ್ಟತೆ, ಮೋಸ ವಂಚನೆಗಳನ್ನು ಈ ನಾಟಕದಲ್ಲಿ ತುಂಬಾ ಸೂಕ್ಷ್ಮವಾಗಿ ಮನ ದಟ್ಟಾಗುವಂತೆ ಬಿಂಬಿಸಲಾಗಿದೆ. ಮಕ್ಕಳ ಗುಂಪಿನ ಅಭಿನಯ ವಂತೂ ನಿರ್ದೇಶಕರ ಜಾಣ್ಮೆಗೆ ಸಾಕ್ಷಿಯಾಗಿತ್ತು. ಸಂಗೀತ, ಬೆಳಕು, ರಂಗಪರಿಕರ, ರಂಗಸಜ್ಜಿಕೆ ಎಲ್ಲವೂ ಅತ್ಯಾಕರ್ಷಕವಾಗಿದ್ದು ಮಕ್ಕಳ ಮನೋಲೋಕವನ್ನು ಬೇಗ ಮುಟ್ಟುವಂತಿತ್ತು.

ಮೂರನೆಯ ದಿನ ಸುಮನಸಾ ಕೊಡವೂರು ತಂಡದಿಂದ  ಮುದ್ರಾರಾಕ್ಷಸ ಪ್ರದರ್ಶನಗೊಂಡಿತು. ಮೂಲ ಸಂಸ್ಕೃತ ವಿಶಾಖ ದತ್ತನ ನಾಟಕವನ್ನು ನಿರ್ದೇಶಕ ವಿದ್ದು ಉಚ್ಚಿಲ ನಿರ್ದೇಶನ ಮಾಡಿದ್ದರು. ಚಾಣಕ್ಯನ ಕತೆ ಪ್ರಸಿದ್ಧವಾಗಿದ್ದರೂ ಇದರಲ್ಲಿ ಸ್ವಲ್ಪ ಭಿನ್ನವಾಗಿ ಕತೆ ಇದೆ. ನವನಂದರ ಮಂತ್ರಿಯಾಗಿದ್ದ ಅಮಾತ್ಯ ರಾಕ್ಷಸನನ್ನು ತನ್ನ ಪಕ್ಷಕ್ಕೆ ಕರೆತರಲು ಚಾಣಕ್ಯನ ತಂತ್ರಗಳು ಈ ನಾಟಕದ ಮುಖ್ಯ ಆಶಯ. ನಂದರ ನಾಶದ ಬಳಿಕ ಚಾಣಕ್ಯ ಇದಕ್ಕೆ ಅನೇಕ ತಂತ್ರಗಳನ್ನು ಹೆಣೆಯುತ್ತಾನೆ. ಈ ತಂತ್ರಗಳೇ ಇಲ್ಲಿ ಒಂದೊಂದು ಸನ್ನಿವೇಶವಾಗಿ ಇಡೀ ನಾಟಕವನ್ನು ವಿಶಿಷ್ಟವಾಗಿ ನಡೆಸುತ್ತದೆ. ಚಾಣಕ್ಯ ಪಾತ್ರಧಾರಿ ಎಂ. ಎಸ್‌. ಭಟ್‌ ಅಭಿನಯ ಜನರನ್ನು ಆಕರ್ಷಿಸಿತು. ಶಸ್ತ್ರವೆತ್ತದೆ ಅಹಿಂಸಾತ್ಮಕವಾಗಿ ಅಮಾತ್ಯ ರಾಕ್ಷಸನ ಮನ ವೊಲಿಸಿ, ಚಂದ್ರಗುಪ್ತನಿಗೆ ಮಂತ್ರಿಯಾಗಿಸಿದ ಚಾಣಕ್ಯ ತಂತ್ರ ಇಂದಿನ ರಾಜಕೀಯಕ್ಕೊಂದು ಮಾದರಿ ಎನಿಸಿತು. 

ನಾಟಕೋತ್ಸವದ ಉದ್ಘಾಟನೆಯ ಸಂದರ್ಭದಲ್ಲಿ ಲೇಖಕಿ ವೈದೇಹಿ ಹೇಳಿದ ಹಾರೈಕೆಯ ಮಾತು, “ಊರಿನಲ್ಲೊಂದು ಕನಸುಗಾರ ಸಂಘಟಕನಿದ್ದರೆ ಇಡೀ ಊರಿನ ಸಾಂಸ್ಕೃತಿಕ ಲೋಕ ಜೀವ ಪಡೆಯುತ್ತದೆ.’ ಎಲ್ಲ ಊರುಗಳಲ್ಲಿ ಇಂತಹ ಕನಸುಗಾರರು ಉದಯಿಸಲಿ, ಅವರ ಕನಸುಗಳು ನನಸಾಗಲಿ.  

ಉಷಾರಾಣಿ ಕಾಮತ್‌ 

ಟಾಪ್ ನ್ಯೂಸ್

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.