ಸುನಾದ ಯುವದನಿಯಲ್ಲಿ ಅನೀಶ್‌ ಗಾಯನ


Team Udayavani, Apr 14, 2017, 3:50 AM IST

14-KALA-7.jpg

ಸಂಗೀತವು ಮನಸ್ಸಿಗೆ ಆಹ್ಲಾದವನ್ನೊದಗಿಸುವ ಕಲೆ. ಈ ಕಾರಣದಿಂದ ಅದು ಆಕರ್ಷಕವಾದ ಮಾನಸ ಸಂಪರ್ಕ ಮಾಧ್ಯಮ. ಆಡಿದ ಮಾತಿಗಿಂತ ಹಾಡಿದ ಮಾತು ಲೇಸು ಎಂಬ ನಾಣ್ನುಡಿ ಅರ್ಥಪೂರ್ಣವಾದುದು ಈ ಕಾರಣದಿಂದಲೇ. ಭಗವಂತನ ಸಾಕ್ಷಾತ್ಕಾರಕ್ಕೆ ಅತ್ಯಂತ ಸುಲಭ ಹಾಗೂ ಉತ್ಕೃಷ್ಟವಾದ ಮಾರ್ಗವೇ ಸಂಗೀತಾರಾಧನೆ. ಮಾನವನ ಲೌಕಿಕ ಜಂಜಾಟವನ್ನು ಸಡಿಲ ಮಾಡಿ ಅವನನ್ನು ಮಾನವೀಯತೆಗೆ ಒಯ್ದು, ಸುಸಂಸ್ಕೃತನನ್ನಾಗಿ ಮಾಡುವ ಏಕೈಕ ಸಾಧನವೇ ಸಂಗೀತ ಕಲೆ. ಇಂತಹ ಸಂಗೀತ ಕಲೆಯನ್ನು ಬೆಳೆಸುವ ನಿಟ್ಟಿನಲ್ಲಿ ಬಹಳ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವ ಪುತ್ತೂರಿನ ಸುನಾದ ಸಂಗೀತ ಕಲಾ ಶಾಲೆಯು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇವುಗಳಲ್ಲಿ ಬಹಳ ಮುಖ್ಯವಾದುದು “ಸುನಾದ ಯುವದನಿ’ ಕಾರ್ಯಕ್ರಮ. ಕಳೆದ ಹನ್ನೆರಡು ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಸುನಾದ ಯುವ ದನಿ ಕರ್ನಾಟಕ ಶಾಸ್ತ್ರೀಯ ಸಂಗೀತ ಮಾಲಿಕೆಯ 152ನೇ ಕಾರ್ಯಕ್ರಮವು ಎಪ್ರಿಲ್‌ 2ರಂದು ಪುತ್ತೂರಿನ ಸುನಾದ ಸಭಾಂಗಣದಲ್ಲಿ ಸಂಪನ್ನಗೊಂಡಿತು.

ಈ ಸಂಚಿಕೆಯ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಡುಗಾರಿಕೆ ಯನ್ನು ಉದಯೋನ್ಮುಖ ಕಲಾವಿದರಾದ ಅನೀಶ್‌ ವಿ. ಭಟ್‌ ಬಹಳ ಪ್ರೌಢ ರೀತಿಯಲ್ಲಿ ನಡೆಸಿ ಕೊಟ್ಟರು. ಇವರಿಗೆ ವಯಲಿನ್‌ನಲ್ಲಿ ಕಾರ್ತಿಕೇಯ ಆರ್‌. ಬೆಂಗಳೂರು, ಮೃದಂಗದಲ್ಲಿ ಅಕ್ಷಯ ನಾರಾಯಣ  ಕಾಂಚನ ಹಾಗೂ ಘಟಂನಲ್ಲಿ ವಿ| ಮೈಸೂರು ಮಂಜುನಾಥ್‌ ಸಹಕರಿಸಿದರು. 

ಕಲಾವಿದರು ಅಭೋಗಿ ರಾಗದ ವರ್ಣ ಎವ್ವರಿಬೋಧದೊಂದಿಗೆ ಕಛೇರಿಯನ್ನು ಆರಂಭಿಸಿದರು. ಬಳಿಕ ಧೇನುಕ‌ ರಾಗದ ಪ್ರಸಿದ್ಧ ಕೃತಿ ತೆಲಿಯಲೇರು ರಾಮ ಚುರುಕಾದ ಸ್ವರಪ್ರಸ್ತಾರದೊಂದಿಗೆ ಭಕ್ತಿಪ್ರಧಾನವಾಗಿ ಮೂಡಿಬಂತು. ಅನಂತರದ ಅಠಾಣ ರಾಗ, ವಿಳಂಬ ಲಯದ ಬಾಲಕನಕಮಯ ಎಂಬ ಕೃತಿಯು ಮನೋಜ್ಞವಾಗಿ ಮೂಡಿಬಂತು. ತದನಂತರ ಬಿಲಹರಿ ರಾಗದ ಖಂಡಛಾಪು ತಾಳದ ತೊಲಿಜನ್ಮ ಕೃತಿಯು ಸೊಗಸಾದ ಆಲಾಪನೆಯೊಂದಿಗೆ ಪ್ರಸ್ತುತಗೊಂಡಿತು. ಸಾರಸಾಂಗಿ ರಾಗದ ಸ್ವಾತಿ ತಿರುನಾಳ್‌ರವರ ಪ್ರಸಿದ್ಧ ಕೃತಿ ಜಯ ಜಯ ಪದ್ಮನಾಭ ಕೃತಿಯು ಉತ್ತಮವಾದ ಸ್ವರಪ್ರಸ್ತಾರದೊಂದಿಗೆ ಸಂಗೀತ ರಸಿಕರನ್ನು ಭಾವಪೂರ್ಣಗೊಳಿಸುವಲ್ಲಿ ಯಶಸ್ವಿಯಾಯಿತು.

ಕಲಾವಿದರು ಕಾರ್ಯಕ್ರಮದ ಪ್ರಧಾನ ಕೃತಿಯಾಗಿ ಸಾರ್ವಕಾಲಿಕ ರಾಗವಾದ ಕಲ್ಯಾಣಿಯ ವಿಳಂಬ ಲಯದ ಏತವುನ್ನರ ಕೃತಿಯನ್ನು ಬಹಳ ಉತ್ಕೃಷ್ಟ ರೀತಿಯಲ್ಲಿ, ವಿದ್ವತ್‌ಪೂರ್ಣವಾಗಿ ಪ್ರಸ್ತುತಪಡಿಸಿದರು. ರಾಗ ಆಲಾಪನೆಯಲ್ಲಿ ದಾಟು ಪ್ರಯೋಗ, ದೀರ್ಘ‌ ಸ್ವರ, ಷಡ್ಜ ಪಂಚಮಗಳನ್ನು ವಜ್ಯì ಮಾಡಿ ಹಾಡಿದ ಪರಿ ಬಹಳ ಅನನ್ಯವಾಗಿತ್ತು. ಸೀತಾಗೌರಿ ಎಂಬಲ್ಲಿನ ನೆರವಲ್‌, ಸ್ವರ ಪ್ರಸ್ತಾರಗಳಲ್ಲಿ ಕಲಾವಿದರು ತಮ್ಮ ಕಲಾ ಪ್ರೌಢಿಮೆಯನ್ನು ಮೆರೆದರು. ವಯಲಿನ್‌ನಲ್ಲಿ ಕಾರ್ತಿಕೇಯ ಉತ್ತಮವಾಗಿ ಸಹಕರಿಸಿದರು. ಕಛೇರಿಗೆ ಪೂರಕವಾಗಿ ಮೃದಂಗದಲ್ಲಿ ಅಕ್ಷಯ ನಾರಾಯಣ ಕಾಂಚನ ಹಾಗೂ ಘಟಂನಲ್ಲಿ ವಿ| ಮೈಸೂರು ಮಂಜುನಾಥ್‌ರವರ ತನಿ ಆವರ್ತನವು ಸಂಗೀತ ರಸಿಕರ ಮನ ರಂಜಿಸಿತು. ಬಳಿಕ ಎಂ. ಡಿ. ರಾಮನಾಥ್‌ ಅವರ ರಚನೆಯಾದ ಬಾಗೇಶ್ರೀ ರಾಗದ ಸಾಗರ ಶಯನ ಬಹಳ ಭಾವ ಪೂರ್ಣವಾಗಿ ಮೂಡಿಬಂತು. ಪವಮಾನದೊಂದಿಗೆ  ಕಾರ್ಯಕ್ರಮ ಮುಕ್ತಾಯಗೊಂಡಿತು. 

 ವಿ| ಶಿಲ್ಪಾ ಸಿ. ಎಚ್‌. ಹಾಗೂ ಡಾ| ರಾಮಕೃಷ್ಣ ಭಟ್‌ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರತೀ ತಿಂಗಳ ಮೊದಲ ರವಿವಾರದಂದು ನಡೆಯುತ್ತಿರುವ “ಸುನಾದ ಯುವದನಿ’ ಪೂರ್ಣಪ್ರಮಾಣದ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುತ್ತಿರುವುದು ನಿಜಕ್ಕೂ ಪ್ರಶಂಸನೀಯ. 

ಸಂಧ್ಯಾ ಸತ್ಯನಾರಾಯಣ್‌

ಟಾಪ್ ನ್ಯೂಸ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.