ಅಬ್ಬಬ್ಬಾ ಏನ್‌ ರುಚಿ ಅಂತಿರಾ “ಮಸಾಲ ಪಡ್ಡು”

ಈ ಖಾದ್ಯವು ಆರೋಗ್ಯಕರವಾಗಿದ್ದು ,ಮಕ್ಕಳಿಗಂತೂ ತುಂಬಾನೇ ಇಷ್ಟ ಪಡುವ ರೆಸಿಪಿಯಾಗಿದೆ.

ಶ್ರೀರಾಮ್ ನಾಯಕ್, Dec 31, 2021, 2:15 PM IST

ಅಬ್ಬಬ್ಬಾ ಏನ್‌ ರುಚಿ ಅಂತಿರಾ “ಮಸಾಲ ಪಡ್ಡು”

ಈ ಖಾದ್ಯವನ್ನು ಹಲವು ಹೆಸರುಗಳಿಂದ ಕರೆಯಲಾಗುತ್ತದೆ.ಇದು ಬುಲೆಟ್‌ ಇಡ್ಲಿ (ಸಣ್ಣ ಗಾತ್ರದ ಇಡ್ಲಿ) ಎಂದು ನೀವು ಬಾವಿಸಬಹುದು ಆದರೆ ಇದು ವಿಭಿನ್ನ ಖಾದ್ಯ. ಪಡ್ಡುವನ್ನು ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ತಯಾರಿಸಲಾಗುತ್ತದೆ. ಹೆಚ್ಚಿನ ಹೋಟೆಲ್‌ ಗಳು ಈ ಸುಂದರವಾದ ಖಾದ್ಯವನ್ನು ತಯಾರಿಸುವುದು ಬಹಳ ವಿರಳ. ಈ ಖಾದ್ಯವನ್ನು ಕೆಲವು ಕಡೆ ನಾನಾ ರೀತಿಯಲ್ಲಿ ಕರೆಯುತ್ತಾರೆ ಉದಾಹರಣೆಗೆ ಗುಳಿಯಪ್ಪ, ಪಡ್ಡು,ಅಪ್ಪ ,ಎರಿಯಪ್ಪ ಹಾಗೂ ತುಳುವಿನಲ್ಲಿ ಅಪ್ಪ ದಡ್ಡೆ ಎಂತಲೂ ಕರೆಯುತ್ತಾರೆ. ಇದನ್ನು ಶೇಂಗಾ ಚಟ್ನಿಯೊಂದಿಗೆ ತಿನ್ನಲು ಬಹಳ ರುಚಿ.

ಈ ಖಾದ್ಯವು ಆರೋಗ್ಯಕರವಾಗಿದ್ದು ,ಮಕ್ಕಳಿಗಂತೂ ತುಂಬಾನೇ ಇಷ್ಟ ಪಡುವ ರೆಸಿಪಿಯಾಗಿದೆ. ಹಾಗಿದ್ದರೆ ಇನ್ನೇಕೆ ತಡ ಮನೆಯಲ್ಲಿ ರುಚಿಕರವಾದ “”ಮಸಾಲ ಪಡ್ಡು ” ಹಾಗೂ “ಶೇಂಗಾ ಚಟ್ನಿ ” ಯನ್ನು ಮಾಡಿ ಸವಿಯಿರಿ.

ಮಸಾಲ ಪಡ್ಡು
ಬೇಕಾಗುವ ಸಾಮಗ್ರಿಗಳು
ಬೆಳ್ತಿ ಗೆ ಅಕ್ಕಿ 2 ಕಪ್‌, ಉದ್ದಿನ ಬೇಳೆ 3/4 ಕಪ್‌ ಕಡ್ಲೆ ಬೇಳೆ 2 ಚಮಚ, ಮೆಂತೆ 1 ಚಮಚ, ಅವಲಕ್ಕಿ 1/4 ಕಪ್‌,ತೆಂಗಿನೆಣ್ಣೆ 2 ಚಮಚ, ಹಸಿಮೆಣಸಿನ ಕಾಯಿ 2, ಕರಿಬೇವು 1 ಗರಿ, ಈರುಳ್ಳಿ 3, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ
ಮೊದಲಿಗೆ ಒಂದು ಪಾತ್ರೆಗೆ ಅಕ್ಕಿ, ಉದ್ದಿನ ಬೇಳೆ, ಕಡ್ಲೆ ಬೇಳೆ ಹಾಗೂ ಮೆಂತೆಯನ್ನು ಹಾಕಿ ಸುಮಾರು 6 ರಿಂದ 7 ಗಂಟೆಗಳ ವರೆಗೆ ನೆನೆಸಿಟ್ಟುಕೊಳ್ಳಿ. ಅವಲಕ್ಕಿ ಯನ್ನು ಬೇರೆ ಪಾತ್ರೆಯಲ್ಲಿ 10 ನಿಮಿಷಗಳ ಕಾಲ ನೆನೆಸಿರಿ, ತದನಂತರ ಮಿಕ್ಸಿ ಜಾರಿಗೆ ನೆನೆಸಿಟ್ಟ ಅಕ್ಕಿ -ಬೇಳೆ ಹಾಗೂ ಅವಲಕ್ಕಿಯನ್ನು ಹಾಕಿ ನುಣ್ಣಗೆ ರುಬ್ಬಿರಿ. ದೋಸೆ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿರಬೇಕು.ರುಬ್ಬಿಟ್ಟ ಹಿಟ್ಟಿಗೆ ಉಪ್ಪನ್ನು ಹಾಕಿ ಸುಮಾರು 8 ರಿಂದ 10 ಗಂಟೆಗಳ ಕಾಲದವರೆಗೆ ಬಿಟ್ಟುಬಿಡಿ.
ಒಂದು ಬಾಣಲೆಗೆ ಎಣ್ಣೆ, ಸಣ್ಣಗೆ ಹಚ್ಚಿದ ಹಸಿಮೆಣಸು, ಕರಿಬೇವು ಹಾಗೂ ಈರುಳ್ಳಿಯನ್ನು ಹಾಕಿ ಸ್ವಲ್ಪ ಹೊತ್ತು ಹರಿಯಿರಿ. ತಣ್ಣಗೆ ಆದ ಮೇಲೆ ಕೊತ್ತಂಬರಿ ಸೊಪ್ಪು ಹಾಕಿ ರುಬ್ಬಿಟ್ಟ ಹಿಟ್ಟಿಗೆ ಹಾಕಿ ಕಲಸಿರಿ.

ಓಲೆಯ ಮೇಲೆ ಪಡ್ಡು ಹಂಚನ್ನು ಇಟ್ಟುಕೊಳ್ಳಿ. ಬಿಸಿಯಾದ ನಂತರ ಸ್ವಲ್ಪ ಎಣ್ಣೆ ಹಾಕಿ ಮಾಡಿಟ್ಟ ಹಿಟ್ಟನ್ನು ಎಲ್ಲಾ ರಂಧ್ರದೊಳಗೆ ಮೂಕ್ಕಾಲು ಭಾಗದಷ್ಟು ಹಾಕಿರಿ (ಯಾಕೆಂದರೆ ಅದು ಬೆಂದ ನಂತರ ಅವು ಅರಳುತ್ತದೆ) ಒಂದು ಬದಿ ಬೆಂದ ನಂತರ ಮತ್ತೂಂದು ಬದಿ ಮುಗುಚಿ ಬೇಯಿಸಿರಿ. ಬಿಸಿ-ಬಿಸಿಯಾದ ಮಸಾಲ ಪಡ್ಡು ರೆಡಿಯಾಗಿದೆ.

ಶೇಂಗಾ ಚಟ್ನಿ
ಬೇಕಾಗುವ ಸಾಮಗ್ರಿಗಳು
ಶೇಂಗಾ 1 ಕಪ್‌,ತೆಂಗಿನೆಣ್ಣೆ 1 ಚಮಚ, ಹಸಿಮೆಣಸು 5 ಬೆಳ್ಳುಳ್ಳಿ 4 ಎಸಳು, ಕರಿಬೇವು 1 ಗರಿ, ಕೊತ್ತಂಬರಿ ಸೊಪ್ಪು ಸ್ವಲ್ಪ, ಹುಣಸೇ ಹಣ್ಣು ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು.

ಒಗ್ಗರಣೆಗೆ:
ತೆಂಗಿನೆಣ್ಣೆ 1 ಚಮಚ, ಸಾಸಿವೆ 1 ಚಮಚ ,ಉದ್ದಿನ ಬೇಳೆ 1 ಚಮಚ, ಕರಿಬೇವು 1 ಗರಿ ಒಣಮೆಣಸು 2

ತಯಾರಿಸುವ ವಿಧಾನ
ಒಂದು ಬಾಣಲೆಗೆ ಹಸಿ ಶೇಂಗಾವನ್ನು ಹಾಕಿ ಕೆಂಪಾಗುವ ತನಕ ಹುರಿದು ಒಂದು ಪಾತ್ರೆಗೆ ತೆಗೆದಿಟ್ಟುಕೊಳ್ಳಿ (ತಣ್ಣಗಾದಬಳಿಕ ಬೀಜದ ಸಿಪ್ಪೆಯನ್ನು ತೆಗೆದಿಡಿ). ಆ ಮೇಲೆ ಬಾಣಲೆಗೆ ಎಣ್ಣೆ ,ಹಸಿಮೆಣಸು, ಬೆಳ್ಳುಳ್ಳಿ , ಕರಿಬೇವು ಹಾಕಿ ಸ್ವಲ್ಪ ಹೊತ್ತು ಹುರಿಯಿರಿ ನಂತರ ಇದನ್ನು ಹುರಿದಿಟ್ಟ ಶೇಂಗಾ ಬೀಜ ಜೊತೆಗೆ ಮಿಕ್ಸಿ ಜಾರಿಗೆ ಹಾಕಿ ಉಪ್ಪುನ್ನು ಸೇರಿಸಿ ರುಬ್ಬಿರಿ. ನಂತರ ಮೇಲಿರುವ ಒಗ್ಗರಣೆ ಸಾಮಗ್ರಿಯನ್ನು ಹಾಕಿ ಒಗ್ಗರಣೆ ಹಾಕಿರಿ.

ಟಾಪ್ ನ್ಯೂಸ್

Head Coach; ಬಿಸಿಸಿಐ ಆಫರ್ ತಿರಸ್ಕರಿಸಿದ್ದೇನೆ ಎಂದ ಪಾಂಟಿಂಗ್; ತಿರುಗೇಟು ನೀಡಿದ ಜಯ್ ಶಾ

Head Coach; ಬಿಸಿಸಿಐ ಆಫರ್ ತಿರಸ್ಕರಿಸಿದ್ದೇನೆ ಎಂದ ಪಾಂಟಿಂಗ್; ತಿರುಗೇಟು ನೀಡಿದ ಜಯ್ ಶಾ

ಸಿದ್ದರಾಮಯ್ಯ

Mysore; ಲೋಕಸಭೆ ಮುಗಿದ ಕೂಡಲೇ ಜಿಪಂ, ತಾಪಂ, ಬಿಬಿಎಂಪಿ ಚುನಾವಣೆ: ಸಿದ್ದರಾಮಯ್ಯ

ಮೂರೂ ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ

ಮೂರೂ ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ

ಕಾಂಗ್ರೆಸ್ ಸದಸ್ಯತ್ವವೇ ಇಲ್ಲದಿದ್ದರೂ ಉಚ್ಛಾಟನೆ ಮಾಡಿದ್ದಾರೆ: ಲೋಕೇಶ್ ತಾಳಿಕಟ್ಟೆ

Congress ಸದಸ್ಯತ್ವವೇ ಇಲ್ಲದಿದ್ದರೂ ಉಚ್ಛಾಟನೆ ಮಾಡಿದ್ದಾರೆ: ಲೋಕೇಶ್ ತಾಳಿಕಟ್ಟೆ

Form 17c:  ಚುನಾವಣ ಆಯೋಗಕ್ಕೆ ನಿರ್ದೇಶನ ನೀಡಲು ಸುಪ್ರೀಂ ನಕಾರ, ಆದೇಶದಲ್ಲೇನಿದೆ?

Form 17c:  ಚುನಾವಣ ಆಯೋಗಕ್ಕೆ ನಿರ್ದೇಶನ ನೀಡಲು ಸುಪ್ರೀಂ ನಕಾರ, ಆದೇಶದಲ್ಲೇನಿದೆ?

Vijayanagara: ದಶಕಗಳ ನಂತರ ಹುಲಿಕೆರೆ ಕೆರೆಗೆ ನೀರು… ಗ್ರಾಮಸ್ಥರಿಂದ ಗಂಗಾ ಪೂಜೆ

Vijayanagara: ದಶಕಗಳ ಬಳಿಕ ಹುಲಿಕೆರೆ ಕೆರೆಗೆ ನೀರು… ಗ್ರಾಮಸ್ಥರಿಂದ ಗಂಗಾ ಪೂಜೆ

Cannes 2024: Mysore’s Chidananda S Naik won the best short film award

Cannes 2024: ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿ ಪಡೆದ ಮೈಸೂರಿನ ಚಿದಾನಂದ ಎಸ್ ನಾಯಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

STAR ಸಿನಿಮಾಗಳು ರಿಲೀಸ್‌ಗೆ ರೆಡಿ.. ದ್ವಿತೀಯಾರ್ಧದಲ್ಲಿ ಪುಟಿದೇಳುವುದೇ ಸ್ಯಾಂಡಲ್‌ ವುಡ್?

D.K; ಅಭಿಮಾನಿಗಳ ಎದೆಯಲ್ಲಿ ಭರವಸೆ ತುಂಬಿದ ದಿನೇಶ್ ಕಾರ್ತಿಕ್ ಎಂಬ ಅಪ್ಪಟ ಹೋರಾಟಗಾರ

D.K; ಅಭಿಮಾನಿಗಳ ಎದೆಯಲ್ಲಿ ಭರವಸೆ ತುಂಬಿದ ದಿನೇಶ್ ಕಾರ್ತಿಕ್ ಎಂಬ ಅಪ್ಪಟ ಹೋರಾಟಗಾರ

17

Mollywood: 5 ತಿಂಗಳಿನಲ್ಲಿ 1000 ಕೋಟಿಗೂ ಅಧಿಕ ಗಳಿಕೆ: ಈ 3 ಸಿನಿಮಾಗಳ ಕೊಡುಗೆಯೇ ಹೆಚ್ಚು

1-raisi

Iran ತೀವ್ರಗಾಮಿ ಅಧ್ಯಕ್ಷ ಕಟ್ಟರ್‌ ಸಂಪ್ರದಾಯವಾದಿ ರೈಸಿ ಸಾವಿನ ಸುತ್ತ ನಾನಾ ಕತೆ

Bengaluru ಎಷ್ಟೇ ಮಳೆ ಬಂದರೂ ಪಂದ್ಯ ನಡೆಸಬಹುದು; ಏನಿದು ಚಿನ್ನಸ್ವಾಮಿಯ ಸಬ್ ಏರ್ ಸಿಸ್ಟಂ?

Bengaluru ಎಷ್ಟೇ ಮಳೆ ಬಂದರೂ ಪಂದ್ಯ ನಡೆಸಬಹುದು; ಏನಿದು ಚಿನ್ನಸ್ವಾಮಿಯ ಸಬ್ ಏರ್ ಸಿಸ್ಟಂ?

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

10km ದೂರದಲ್ಲಿರುವ ಪ್ರವಾಸಿತಾಣಕ್ಕೆ ಕರೆದೊಯ್ಯಲಿಲ್ಲವೆಂದು ಆತ್ಮಹತ್ಯೆಗೆ ಶರಣಾದ ಬಾಲಕಿ

10km ದೂರದಲ್ಲಿರುವ ಪ್ರವಾಸಿತಾಣಕ್ಕೆ ಕರೆದೊಯ್ಯಲಿಲ್ಲವೆಂದು ನೇಣಿಗೆ ಶರಣಾದ 10 ವರ್ಷದ ಬಾಲಕಿ

ಪುತ್ತೂರು: 10 ಶಾಲೆಗಳಿಗೆ ಹೈ ಟೆನ್ಶ ನ್‌ ತಂತಿ ಟೆನ್ಶನ್‌| ಸ್ಥಳಾಂತರಕ್ಕೆ ಪೋಷಕರ ಆಗ್ರಹ

ಪುತ್ತೂರು: 10 ಶಾಲೆಗಳಿಗೆ ಹೈ ಟೆನ್ಶ ನ್‌ ತಂತಿ ಟೆನ್ಶನ್‌| ಸ್ಥಳಾಂತರಕ್ಕೆ ಪೋಷಕರ ಆಗ್ರಹ

Head Coach; ಬಿಸಿಸಿಐ ಆಫರ್ ತಿರಸ್ಕರಿಸಿದ್ದೇನೆ ಎಂದ ಪಾಂಟಿಂಗ್; ತಿರುಗೇಟು ನೀಡಿದ ಜಯ್ ಶಾ

Head Coach; ಬಿಸಿಸಿಐ ಆಫರ್ ತಿರಸ್ಕರಿಸಿದ್ದೇನೆ ಎಂದ ಪಾಂಟಿಂಗ್; ತಿರುಗೇಟು ನೀಡಿದ ಜಯ್ ಶಾ

ಸಿದ್ದರಾಮಯ್ಯ

Mysore; ಲೋಕಸಭೆ ಮುಗಿದ ಕೂಡಲೇ ಜಿಪಂ, ತಾಪಂ, ಬಿಬಿಎಂಪಿ ಚುನಾವಣೆ: ಸಿದ್ದರಾಮಯ್ಯ

ಮೂರೂ ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ

ಮೂರೂ ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.