ಕಾಫಿ ತೋಟದ ಮಣ್ಣು ಪರೀಕ್ಷೆಗೆ ಸಂಚಾರ ವಾಹನ

ಮಣ್ಣಿನ ಸಾರಕ್ಕನುಗುಣವಾಗಿ ಕಾಫಿ ಗಿಡಗಳಿಗೆ ರಸಗೊಬ್ಬರ ಹಾಕುವ ಸಲಹೆ ನೀಡುತ್ತಾ ಬಂದಿದೆ

Team Udayavani, Apr 14, 2022, 6:14 PM IST

ಕಾಫಿ ತೋಟದ ಮಣ್ಣು ಪರೀಕ್ಷೆಗೆ ಸಂಚಾರ ವಾಹನ

ಹಾಸನ: ಕಳೆದ ಒಂದು ದಶಕದಿಂದ ಕಾಫಿ ತೋಟಗಳ ಮಣ್ಣು ರಸಸಾರ ಪರೀಕ್ಷೆ ಮಾಡಿ, ಬೆಳೆಗಾರರಿಗೆ ನೆರವಾಗುತ್ತಿದ್ದ ಹಾಸನ ಜಿಲ್ಲಾ ಕಾಫಿ ಪ್ಲಾಂಟರ್ ಸಂಘವು ಇದೀಗ ಕಾಫಿ ತೋಟಗಳಿಗೇ ಹೋಗಿ ಮಣ್ಣಿನ ಮಾದರಿ ಸಂಗ್ರಹಿಸಿ, ಪರೀಕ್ಷೆಸುವ ಸಂಚಾರ ವಾಹದ ವ್ಯವಸ್ಥೆಯನ್ನೂ ಮಾಡಿದೆ.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಫಿ ಪ್ಲಾಂಟರ್ ಸಂಘದ ಅಧ್ಯಕ್ಷ ಕೆ.ಎನ್‌.ಸುಬ್ರಮಣ್ಯ ಮತ್ತು ಪದಾಧಿಕಾರಿಗಳು ಮಾತನಾಡಿ, ಸಣ್ಣ ಮತ್ತು ಅತಿ ಸಣ್ಣ ಬೆಳೆಗಾರರ ಹಿತರಕ್ಷಣೆ ಉದ್ದೇಶದಿಂದ 1977 ರಲ್ಲಿ ಅಸ್ತಿತ್ವಕ್ಕೆ ಬಂದ ಪ್ಲಾಂಟರ್ ಸಂಘವು 2009ರಲ್ಲಿ ಸಕಲೇಶಪುರದಲ್ಲಿ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿ, ಸಣ್ಣ ಕಾಫಿ ಬೆಳೆಗಾರರ ಕಾಫಿ ತೋಟಗಳ ಮಣ್ಣು ಪರೀಕ್ಷೆ ನಡೆಸಿ, ಮಣ್ಣಿನ ಸಾರಕ್ಕನುಗುಣವಾಗಿ ಕಾಫಿ ಗಿಡಗಳಿಗೆ ರಸಗೊಬ್ಬರ ಹಾಕುವ ಸಲಹೆ ನೀಡುತ್ತಾ ಬಂದಿದೆ.

ಎಲ್ಲ ಕಾಫಿ ಬೆಳೆಗಾರರೂ ತಮ್ಮ ತೋಟಗಳ ಮಣ್ಣನ್ನು ತಂದು ಪರೀಕ್ಷೆ ಮಾಡಿಸುವುದು ಕಷ್ಟ ಸಾಧ್ಯವೆಂದು ಪರಿಗಣಿಸಿ, ಕಾಫಿ ಬೆಳೆ ಪ್ರದೇಶದ ಪ್ರತಿ ಹಳ್ಳಿಗೂ ಹೋಗಿ ಅಲ್ಲಿನ ಕಾಫಿ ಬೆಳೆಗಾರರ ಮಣ್ಣು ಮಾದರಿ ಸಂಗ್ರಹಿಸಿ, ಅದನ್ನು ಪರೀಕ್ಷಾ ಕೇಂದ್ರದಲ್ಲಿ ವೈಜ್ಞಾನಿಕವಾಗಿ ಪರೀಕ್ಷೆ ಗೊಳ ಪಡಿಸಿ, ಯಾವ ಬೆಳೆಗಾರರ ತೋಟಕ್ಕೆ ಯಾವ ರಸ ಗೊಬ್ಬರ ಹಾಕಿದರೆ ಉತ್ತಮ ಬೆಳೆ ಮತ್ತು ಇಳುವರಿ ಬರುತ್ತದೆ ಎಂಬುದರ ಮಾಹಿತಿಯನ್ನು ಮುಂದಿನ ಮೇ ತಿಂಗಳಿನಿಂದ ಮಣ್ಣು ಪರೀಕ್ಷಾ ಸಂಚಾರ ವಾಹನ ಸೇವೆ ಆರಂಭವಾಗಲಿದೆ ಎಂದರು.

ಕಡಿಮೆ ಶುಲ್ಕ ಪಡೆದು ಬೆಳೆಗಾರರಿಗೆ ನೆರವು:
ಮಣ್ಣು ಪರೀಕ್ಷಾ ಸಂಚಾರ ವಾಹನದ ಖರೀದಿಗೆ ಜಿಲ್ಲಾ ಕಾಫಿ ಪ್ಲಾಂಟರ್ ಸಂಘದ ನಿರ್ದೇಶಕ, ಜಿಪಂ ಮಾಜಿ ಸದಸ್ಯ ಇ.ಎಸ್‌.ಲಕ್ಷ್ಮಣ ಅವರು 7 ಲಕ್ಷ ರೂ. ಕೊಡುಗೆ ನೀಡಿದ್ದಾರೆ. ಇದುವರೆಗೆ 7ರಿಂದ 8 ಸಾವಿರ ಮಾದರಿಗಳನ್ನು ಪರೀಕ್ಷೆ ಮಾಡಲಾಗುತ್ತಿತ್ತು. ಈಗ ಸಂಚಾರ ವಾಹನ ಸೌಲಭ್ಯವಿರುವುದರಿಂದ 15 ಸಾವಿರ ಮಣ್ಣಿನ ಮಾದರಿಗಳನ್ನು ಪರೀಕ್ಷೆ ಗೊಳಪಡಿಸಿ ಕಾಫಿ ಬೆಳೆಗಾರರಿಗೆ ಸಲಹೆ ನೀಡಲು ಸಾಧ್ಯವಾಗುತ್ತದೆ. ಒಂದು ಮಾದರಿ ಪರೀಕ್ಷೆಗೆ 360 ರೂ. ಶುಲ್ಕ ಪಡೆಯಲಾಗುತ್ತಿದೆ. ಕಾಫಿ ಮಂಡಳಿ 500 ರೂ. ಶುಲ್ಕ ಪಡೆಯುತ್ತಿದೆ. ಪ್ಲಾಂಟರ್ ಸಂಘವು ಕಾಫಿ ಮಂಡಳಿ ಗಿಂತ ಕಡಿಮೆ ಶುಲ್ಕ ಪಡೆದು ಬೆಳೆಗಾರರಿಗೆ ನೆರವಾಗುತ್ತಿದೆ ಎಂದು ಹೇಳಿದರು.

ಕಾಫಿ ಉತ್ಪಾದನೆಯಲ್ಲಿ ವಿಶ್ವದಲ್ಲಿ 2ನೇ ಸ್ಥಾನ:
ದೇಶದಲ್ಲಿ ಈಗ 3 ಲಕ್ಷ ಟನ್‌ ಕಾಫಿ ಉತ್ಪಾದನೆಯಾಗಿ ವಿಶ್ವದಲ್ಲಿ 2ನೇ ಸ್ಥಾನದಲ್ಲಿದೆ. ಕಾಫಿ ರಪ್ತಿನಿಂದ ಸರ್ಕಾರಕ್ಕೆ ಈಗ 10 ಸಾವಿರ ಕೋಟಿ ರೂ. ಗೂ ಹೆಚ್ಚು ವಿದೇಶಿ ವಿನಿಮಯ ಸಿಗುತ್ತಿದೆ. ಮಣ್ಣು ಪರೀಕ್ಷೆ ಕೇಂದ್ರಗಳ ಹೆಚ್ಚಳ ಹಾಗೂ ವೈಜ್ಞಾನಿಕ ಸಂಶೋಧನೆಗಳಿಂದ ಕಾಫಿ ಉತ್ಪಾದನೆಯನ್ನು 5 ಲಕ್ಷ ಟನ್‌ ಹೆಚ್ಚಿಸಿ, ವಿಶ್ವದಲ್ಲಿ ಮೊದಲ ಸ್ಥಾನ ಪಡೆಯಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.ಜಿಲ್ಲಾ ಪ್ಲಾಂಟರ್ ಸಂಘದ ಪದಾಧಿಕಾರಿಗಳಾದ ಎಂ.ಬಿ.ರಾಜೀವ್‌, ಪರಮೇಶ್ವರ್‌, ಕೃಷ್ಣೇಗೌಡ, ಎಂ.ಎಚ್‌.ರಮೇಶ್‌, ಇ.ಎಸ್‌. ಲಕ್ಷ್ಮಣ್‌ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Kedarnath

Chardham; 15 ದಿನಗಳಲ್ಲಿ 52 ಯಾತ್ರಾರ್ಥಿಗಳ ಸಾವು

Heavy Rain ಕರಾವಳಿಯಲ್ಲಿ ಮುಂದುವರಿದ ಗಾಳಿ-ಮಳೆಯ ಅಬ್ಬರ

Heavy Rain ಕರಾವಳಿಯಲ್ಲಿ ಮುಂದುವರಿದ ಗಾಳಿ-ಮಳೆಯ ಅಬ್ಬರ

ಘಾಟಿ ಪ್ರದೇಶದಲ್ಲಿ ಮಂಜಿನ ವಾತಾವರಣ; ಹೆದ್ದಾರಿ ಇಲಾಖೆಯಿಂದ ಮಳೆಗಾಲ ಪೂರ್ವ ಕಾಮಗಾರಿ

ಘಾಟಿ ಪ್ರದೇಶದಲ್ಲಿ ಮಂಜಿನ ವಾತಾವರಣ; ಹೆದ್ದಾರಿ ಇಲಾಖೆಯಿಂದ ಮಳೆಗಾಲ ಪೂರ್ವ ಕಾಮಗಾರಿ

Udupi; ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ರಘುಪತಿ ಭಟ್‌

Udupi; ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ರಘುಪತಿ ಭಟ್‌

Uppinangady ಮಣ್ಣು ಹಾಕಿದ ರಸ್ತೆಯಲ್ಲಿ ಸಿಲುಕಿದ ಲಾರಿ

Uppinangady ಮಣ್ಣು ಹಾಕಿದ ರಸ್ತೆಯಲ್ಲಿ ಸಿಲುಕಿದ ಲಾರಿ

Sullia: ಡ್ಯಾಂ ನೀರು ಹೊರಕ್ಕೆ ನೀರು ಸಂಗ್ರಹದ ಪ್ರದೇಶದಲ್ಲಿ ಕುಸಿತ

Sullia: ಡ್ಯಾಂ ನೀರು ಹೊರಕ್ಕೆ ನೀರು ಸಂಗ್ರಹದ ಪ್ರದೇಶದಲ್ಲಿ ಕುಸಿತ

ಕಡಲಾಳದ ಬಳಕೆಯಾಗದ ಮೀನಿಗೆ ಮಾರುಕಟ್ಟೆ ಅಧಿಕ: ಡಾ| ಮೀನ ಕುಮಾರಿ

ಕಡಲಾಳದ ಬಳಕೆಯಾಗದ ಮೀನಿಗೆ ಮಾರುಕಟ್ಟೆ ಅಧಿಕ: ಡಾ| ಮೀನ ಕುಮಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Devaraje Gowda ನ್ಯಾಯಾಂಗ ಬಂಧನ ಜೂ.7ರವರೆಗೆ ವಿಸ್ತರಣೆ

Devaraje Gowda ನ್ಯಾಯಾಂಗ ಬಂಧನ ಜೂ.7ರವರೆಗೆ ವಿಸ್ತರಣೆ

SIT: ಭವಾನಿ ರೇವಣ್ಣ ಕಾರು ಚಾಲಕನಿಗೆ ಎಸ್‌ಐಟಿ 2ನೇ ಬಾರಿ ನೋಟಿಸ್‌

SIT: ಭವಾನಿ ರೇವಣ್ಣ ಕಾರು ಚಾಲಕನಿಗೆ ಎಸ್‌ಐಟಿ 2ನೇ ಬಾರಿ ನೋಟಿಸ್‌

Prajwal ವಿದೇಶದಿಂದ ಬರುವ ವಿಚಾರ ನನಗೆ ಗೊತ್ತಿಲ್ಲ: ಎಚ್‌.ಡಿ. ರೇವಣ್ಣ

Prajwal ವಿದೇಶದಿಂದ ಬರುವ ವಿಚಾರ ನನಗೆ ಗೊತ್ತಿಲ್ಲ: ಎಚ್‌.ಡಿ. ರೇವಣ್ಣ

Hassan ಡಿವೈಎಸ್ಪಿ ಖಾತೆಗೇ ಕನ್ನ ; 16 ಲಕ್ಷ ರೂ. ದೋಚಿದ ಖದೀಮರು

Hassan ಡಿವೈಎಸ್ಪಿ ಖಾತೆಗೇ ಕನ್ನ ; 16 ಲಕ್ಷ ರೂ. ದೋಚಿದ ಖದೀಮರು

Hasan: ಲೈಂಗಿಕ ದೌರ್ಜನ್ಯ ಪ್ರಕರಣ; 20 ದಿನಗಳ ನಂತರ ತವರಿಗೆ ಆಗಮಿಸಿದ ಎಚ್.ಡಿ.ರೇವಣ್ಣ

Hasan: ಲೈಂಗಿಕ ದೌರ್ಜನ್ಯ ಪ್ರಕರಣ; 20 ದಿನಗಳ ನಂತರ ತವರಿಗೆ ಆಗಮಿಸಿದ ಎಚ್.ಡಿ.ರೇವಣ್ಣ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Kedarnath

Chardham; 15 ದಿನಗಳಲ್ಲಿ 52 ಯಾತ್ರಾರ್ಥಿಗಳ ಸಾವು

court

Equestrian: ಆಡಳಿತ ನಿರ್ವಹಣೆಗೆ ಸಮಿತಿ

pvs

Malaysia Master ಬ್ಯಾಡ್ಮಿಂಟನ್‌: ಸೆಮಿಫೈನಲ್‌ ಪ್ರವೇಶಿಸಿದ ಸಿಂಧು

Sunil Chhetri

FIFA ವಿಶ್ವಕಪ್‌ ಕ್ವಾಲಿಫೈಯರ್‌; ಭಾರತ ಫುಟ್‌ಬಾಲ್‌ ತಂಡ ಪ್ರಕಟ: ಛೇತ್ರಿಗೆ ವಿದಾಯ ಪಂದ್ಯ

Heavy Rain ಕರಾವಳಿಯಲ್ಲಿ ಮುಂದುವರಿದ ಗಾಳಿ-ಮಳೆಯ ಅಬ್ಬರ

Heavy Rain ಕರಾವಳಿಯಲ್ಲಿ ಮುಂದುವರಿದ ಗಾಳಿ-ಮಳೆಯ ಅಬ್ಬರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.