ಆಟಗಾಯಿ- ಕಥಾ ಸಂಕಲನ ಬಿಡುಗಡೆ


Team Udayavani, Jun 6, 2022, 5:18 PM IST

ಆಟಗಾಯಿ- ಕಥಾ ಸಂಕಲನ ಬಿಡುಗಡೆ

ಮೈಸೂರು: ಸಾಹಿತ್ಯ ಕ್ಷೇತ್ರದಲ್ಲಿ ಸಾಹಿತ್ಯವನ್ನು ಮಾತ್ರ ಓದಿಕೊಂಡಿರುವವರು ಮಾತ್ರವಲ್ಲದೇ, ವೃತ್ತಿಪರರು, ಬೇರೆ ಕ್ಷೇತ್ರದವರೂ ಬರೆಯುತ್ತಿರುವುದರಿಂದ ಹೊಸ ಅನುಭವ, ದೃಷ್ಟಿಕೋನ ಬಂದಿದೆ ಎಂದು ಕಥೆಗಾರ ಕೇಶವ ಮಳಗಿ ತಿಳಿಸಿದರು.

ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಸಂಕಥನ ಪ್ರಕಾಶನ ಹೊರ ತಂದಿರುವ ಆನಂದ್‌ ಗೋಪಾಲ್‌ ಅವರ ಆಟಗಾಯಿ- ಕಥಾ ಸಂಕಲನವನ್ನು ಅವರು ಭಾನುವಾರ ಬಿಡುಗಡೆಗೊಳಿಸಿ ಮಾತನಾಡಿದರು. ಕಥೆಗಾರ ಆನಂದ್‌ ಗೋಪಾಲ್‌ ಅವರಲ್ಲಿ ಅಪಾರವಾದ ಕಥಾ ಸಾಮರ್ಥ್ಯವಿದ್ದು, ಗಟ್ಟಿ ಕಥೆಗಾರರಾಗಿದ್ದಾರೆ. ಕಥಾ ವಸ್ತುವಿನಲ್ಲಿ ವೈವಿಧ್ಯತೆ ಇದೆ. ಅವರಿಂದ ಮತ್ತಷ್ಟು ಗಟ್ಟಿಯಾದ ಕಥೆಗಳು ಬರಲಿ ಎಂದು ಶುಭ ಹಾರೈಸಿದ ಅವರು, ಕಥೆಗಾರರು ಜನಪ್ರಿಯ ಸಂಸ್ಕೃತಿ, ಸಿದ್ಧ ಮಾದರಿ ಕಥೆಗಳಿಗೆ ಜೋತು ಬೀಳಬಾರದು ಎಂದು ಕಿವಿಮಾತು ಹೇಳಿದರು.

ಪ್ರತಿ 50 ವರ್ಷಕ್ಕೊಮ್ಮೆ ಸಮಾಜವು ಯೌವ್ವನಕ್ಕೆ ಹೋಗುತ್ತದೆಂದು ಸಮಾಜಶಾಸ್ತ್ರಜ್ಞರು ಹೇಳಿದ್ದಾರೆ. ಹಾಗೆಯೇ, ಪ್ರತಿ 25 ವರ್ಷಕ್ಕೆ ಸಮಾಜವು ಸಮಗ್ರವಾಗಿ ಬದಲಾಗುತ್ತಿದೆ. ಈಗಿನ ಸಮಾಜವು ತರುಣರಿಗೆ ಸೇರಿದೆ. 70- 80ರ ದಶಕದ ಸಮಾಜಕ್ಕೂ 2000 ದಶಕದ ನಂತರ ಸಮಾಜಕ್ಕೂ ಸಾಮಥ್ಯ ಇದೆ ಎಂದರು. ಪ್ರಸ್ತುತ ತರುಣ, ತರುಣಿಯರಿಂದಲೇ ಹೊಸ ವಿಚಾರ, ಜಗಳ, ವಾಗ್ವಾದ ಆಗಬೇಕು. 70- 80ರ ದಶಕದಲ್ಲಿ ನಿರುದ್ಯೋಗ ಸಮಸ್ಯೆ ವಿಪರೀತ ಇತ್ತು. ಜೊತೆಗೆ ಜಾತೀಯತೆ, ಆರ್ಥಿಕ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳಿದ್ದವು. ಆದರೆ, ಈಗಿನ ಕಲಿಕೆ ವಿಧಾನ, ಜೀವನ ನೋಡುವ ವಿಧಾನವು ಬದಲಾಗಿದೆ. ಹಿಂದೆ ಸಿದ್ಧಾಂತದ ಭಾರವಿತ್ತು. ಈಗ ಸಾಮಾಜಿಕ ಜಾಲತಾಣಗಳಿಂದ ಅತಿರೇಕದ ಭಾರ ಇದೆ ಎಂದು ಅವರು ಹೇಳಿದರು.

ಸಮಕಾಲೀನ ವಿಚಾರಗಳನ್ನು ಬರೆಯಬೇಕು: ಕೃತಿ ಕುರಿತು ಬರಹಗಾರ ಚ.ಹ.ರಘುನಾಥ ಮಾತನಾಡಿ, ಕಥೆಗಾರರು ಬರೆದ ಕಥೆಯನ್ನು ಮತ್ತೂಮ್ಮೆ ಓದದೇ, ಲೈಕ್‌, ಶೇರ್‌ಗಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡುವುದರಿಂದ ಆ ಕಥೆಗಳು ಕಳೆದು ಹೋಗುತ್ತವೆ. ಈಗಿನ ಓದುಗರು ಸಮಕಾಲೀನ ವಿಚಾರಗಳನ್ನು ಬರೆಯಬೇಕೆಂದು ಭಾವಿಸುತ್ತಾರೆ. ಬರಹಗಾರರು ವರ್ತಮಾನದ ಆಗುಹೋಗುಗಳಿಗೆ ತಕ್ಕಂತೆ ಬರೆಯುವ ಸೃಜನಶೀಲತೆ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಲೇಖಕಿ ಶೈಲಜಾ ನಾಗರಘಟ್ಟ, ಕೃತಿಯ ಕರ್ತೃ ಆನಂದ್‌ ಗೋಪಾಲ್‌ ಇದ್ದರು.

ಟಾಪ್ ನ್ಯೂಸ್

T20 World Cup: ಅಮೆರಿಕಕ್ಕೆ ಹೊರಟ ರೋಹಿತ್ ಬಳಗ; ವಿಮಾನ ತಪ್ಪಿಸಿಕೊಂಡ ಕೊಹ್ಲಿ, ಹಾರ್ದಿಕ್

T20 World Cup: ಅಮೆರಿಕಕ್ಕೆ ಹೊರಟ ರೋಹಿತ್ ಬಳಗ; ವಿಮಾನ ತಪ್ಪಿಸಿಕೊಂಡ ಕೊಹ್ಲಿ, ಹಾರ್ದಿಕ್

Shaheen Afridi rejected as vice-captain of Pakistan team; But PCB says otherwise

Pakistan ತಂಡದ ಉಪ ನಾಯಕತ್ವ ತಿರಸ್ಕರಿಸಿದ ಶಾಹೀನ್ ಅಫ್ರಿದಿ; ಆದರೆ ಪಿಸಿಬಿ ಹೇಳುವುದೇ ಬೇರೆ

Delhi ಮಕ್ಕಳ ಆಸ್ಪತ್ರೆಯಲ್ಲಿ ಅಗ್ನಿ ಅವಘಡ; ಆರು ಮಕ್ಕಳು ಸಾವು

Delhi ಮಕ್ಕಳ ಆಸ್ಪತ್ರೆಯಲ್ಲಿ ಅಗ್ನಿ ಅವಘಡ; ಆರು ಮಕ್ಕಳು ಸಾವು

Hassan; ಟ್ರಕ್ ಕಾರು ನಡುವೆ ಭೀಕರ ಅಪಘಾತ; ಸ್ಥಳದಲ್ಲೇ ಕೊನೆಯುಸಿರೆಳೆದ ಐವರು

Hassan; ಟ್ರಕ್ ಕಾರು ನಡುವೆ ಭೀಕರ ಅಪಘಾತ; ಸ್ಥಳದಲ್ಲೇ ಕೊನೆಯುಸಿರೆಳೆದ ಆರು ಜನರು

Udupi Gang war; Did the failure of the beat system lead to the incident?

Udupi Gang war; ಬೀಟ್‌ ವ್ಯವಸ್ಥೆ ಲೋಪವೇ ಘಟನೆಗೆ ಕಾರಣವಾಯಿತೇ?

SUNಕನ್ನಡ ಜಾನಪದ ಚಿತ್ರಕ್ಕೆ ಲಾ ಸಿನೆಫ್ ಗೌರವ

ಕನ್ನಡ ಜಾನಪದ ಚಿತ್ರಕ್ಕೆ ಲಾ ಸಿನೆಫ್ ಗೌರವ

Malpe ಪುನರುಜ್ಜೀವನಕ್ಕಾಗಿ ಕಾಯುತ್ತಿದೆ ತೊಟ್ಟಂ ಕುಮೆ ಕೆರೆ

Malpe ಪುನರುಜ್ಜೀವನಕ್ಕಾಗಿ ಕಾಯುತ್ತಿದೆ ತೊಟ್ಟಂ ಕುಮೆ ಕೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Elephant Census ಬಂಡೀಪುರದಲ್ಲಿ ಆನೆ ಗಣತಿ ಸಂಪನ್ನ

Elephant Census ಬಂಡೀಪುರದಲ್ಲಿ ಆನೆ ಗಣತಿ ಸಂಪನ್ನ

27

H. Vishwanath: ವಿಧಾನಸೌಧವೂ ಮಾಲ್‌ ಆಗಿ ಪರಿವರ್ತನೆ

ಎಷ್ಟು ಜನರಿಗೆ ಎಂಎಲ್ಸಿ ಸ್ಥಾನ ಕೊಡುವುದು? ನಮ್ಮ ಕಷ್ಟ ನಿಮಗೆ ಅರ್ಥವಾಗಲ್ಲ: ಸಿಎಂ

ಎಷ್ಟು ಜನರಿಗೆ ಎಂಎಲ್ಸಿ ಸ್ಥಾನ ಕೊಡುವುದು? ನಮ್ಮ ಕಷ್ಟ ನಿಮಗೆ ಅರ್ಥವಾಗಲ್ಲ: ಸಿಎಂ

Mysore; ಒಂದು ವರ್ಷದಿಂದ ಕಟ್ಟಿಲ್ಲ ಮೋದಿ ವಾಸ್ತವ್ಯ ಹೂಡಿದ್ದ ಹೋಟೆಲ್ ಕೊಠಡಿ ಬಾಡಿಗೆ!

Mysore; ಒಂದು ವರ್ಷದಿಂದ ಪಾವತಿಸಿಲ್ಲ ಮೋದಿ ವಾಸ್ತವ್ಯ ಹೂಡಿದ್ದ ಹೋಟೆಲ್ ಕೊಠಡಿ ಬಾಡಿಗೆ!

ನನ್ನ ಮಗ ಸತ್ತು ಹೋಗಿ 8 ವರ್ಷ ಆಗಿದೆ…; ಕುಮಾರಸ್ವಾಮಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ

ನನ್ನ ಮಗ ಸತ್ತು ಹೋಗಿ 8 ವರ್ಷ ಆಗಿದೆ…; ಕುಮಾರಸ್ವಾಮಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

T20 World Cup: ಅಮೆರಿಕಕ್ಕೆ ಹೊರಟ ರೋಹಿತ್ ಬಳಗ; ವಿಮಾನ ತಪ್ಪಿಸಿಕೊಂಡ ಕೊಹ್ಲಿ, ಹಾರ್ದಿಕ್

T20 World Cup: ಅಮೆರಿಕಕ್ಕೆ ಹೊರಟ ರೋಹಿತ್ ಬಳಗ; ವಿಮಾನ ತಪ್ಪಿಸಿಕೊಂಡ ಕೊಹ್ಲಿ, ಹಾರ್ದಿಕ್

Shaheen Afridi rejected as vice-captain of Pakistan team; But PCB says otherwise

Pakistan ತಂಡದ ಉಪ ನಾಯಕತ್ವ ತಿರಸ್ಕರಿಸಿದ ಶಾಹೀನ್ ಅಫ್ರಿದಿ; ಆದರೆ ಪಿಸಿಬಿ ಹೇಳುವುದೇ ಬೇರೆ

Delhi ಮಕ್ಕಳ ಆಸ್ಪತ್ರೆಯಲ್ಲಿ ಅಗ್ನಿ ಅವಘಡ; ಆರು ಮಕ್ಕಳು ಸಾವು

Delhi ಮಕ್ಕಳ ಆಸ್ಪತ್ರೆಯಲ್ಲಿ ಅಗ್ನಿ ಅವಘಡ; ಆರು ಮಕ್ಕಳು ಸಾವು

Hassan; ಟ್ರಕ್ ಕಾರು ನಡುವೆ ಭೀಕರ ಅಪಘಾತ; ಸ್ಥಳದಲ್ಲೇ ಕೊನೆಯುಸಿರೆಳೆದ ಐವರು

Hassan; ಟ್ರಕ್ ಕಾರು ನಡುವೆ ಭೀಕರ ಅಪಘಾತ; ಸ್ಥಳದಲ್ಲೇ ಕೊನೆಯುಸಿರೆಳೆದ ಆರು ಜನರು

Udupi Gang war; Did the failure of the beat system lead to the incident?

Udupi Gang war; ಬೀಟ್‌ ವ್ಯವಸ್ಥೆ ಲೋಪವೇ ಘಟನೆಗೆ ಕಾರಣವಾಯಿತೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.