ಮಂಗಳೂರು: ಆಟೋ ಬೇಡಿಕೆ; ಮತ್ತೆ ಹೋರಾಟದ ಕೂಗು

ನಿರ್ಧಾರ ಕೈಗೊಂಡ ಆಟೋ ಚಾಲಕ-ಮಾಲಕರ ಸಂಘಟನೆಗಳು

Team Udayavani, Oct 13, 2022, 9:49 AM IST

4

ಮಹಾನಗರ: ಆಟೋ ರಿಕ್ಷಾ ಸಂಘಟನೆಗಳ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದ ಆಗ್ರಹ ಇದೀಗ ತೀವ್ರ ಸ್ವರೂಪ ಪಡೆಯುವ ಲಕ್ಷಣ ಕಾಣಿಸಿದ್ದು, ಹತ್ತು ದಿನಗಳಲ್ಲಿ ಈ ಕುರಿತು ಸೂಕ್ತ ತೀರ್ಮಾನ ತೆಗೆದುಕೊಳ್ಳದಿದ್ದಲ್ಲಿ, ಹೋರಾಟದ ಹಾದಿ ಹಿಡಿಯುವ ಕುರಿತು ಆಟೋ ಸಂಘಟನೆಗಳು ನಿರ್ಧರಿಸಿವೆ.

ಬ್ಯಾಟರಿ ಚಾಲಿತ ಆಟೋಗಳಿಗೂ ಪರ್ಮಿಟ್‌ ಕಡ್ಡಾಯ ಮಾಡಬೇಕು ಎನ್ನುವುದು ಸದ್ಯ ಆಟೋ ಸಂಘಟನೆಗಳ ಪ್ರಮುಖ ಬೇಡಿಕೆ. ಈ ಕುರಿತಂತೆ ಸರಕಾರಕ್ಕೆ ಮನವಿ ಮಾಡಲಾಗಿದ್ದು, ಬೇಡಿಕೆ ಈಡೇರಿಲ್ಲ. ಕೆಲವರು ಪರ್ಮಿಟ್‌ ಇರುವ ರಿಕ್ಷಾಗಳನ್ನು ಮಾರಾಟ ಮಾಡಿ ಬ್ಯಾಟರಿ ಚಾಲಿತ ವಾಹನಗಳನ್ನು ಖರೀದಿಸುತ್ತಿದ್ದಾರೆ. ಒಬ್ಬನೇ ಹಲವು ಇ-ಆಟೋಗಳನ್ನು ಖರೀದಿಸಿ ಬಾಡಿಗೆಗೆ ಕೊಟ್ಟಿರುವ ಉದಾಹರಣೆಗಳಿವೆ. ಇದರಿಂದ ಆಟೋಗಳ ಸಂಖ್ಯೆಯು ಏರಿಕೆಯಾಗಿವೆ. ಅಲ್ಲದೆ ಚಾಲಕರ ಬಾಡಿಗೆಗೂ ಹೊಡೆತಬಿದ್ದಿದೆ ಎನ್ನುವುದು ಸಂಘಟನೆಯ ಪ್ರಮುಖರ ಮಾತು.

ಆಟೋ ಸ್ಟ್ಯಾಂಡ್ ಹೆಚ್ಚಿಸಬೇಕು

2009-10ರಲ್ಲಿ ಸಂಚಾರಿ ಪೊಲೀಸ್‌ ಇಲಾಖೆ, ಕಂದಾಯ ಇಲಾಖೆ, ರಿಕ್ಷಾ ಸಂಘಟನೆಗಳು ಸೇರಿ ನಗರದ ಆಟೋ ಸ್ಟ್ಯಾಂಡ್ ಗಳ ಬಗ್ಗೆ ಸರ್ವೇ ಮಾಡಲಾಗಿತ್ತು. 540ರ ವರೆಗೆ ಪಾರ್ಕ್‌ ಗಳನ್ನು ನಿರ್ಮಿಸ ಬಹುದು ಎಂದು ಸರ್ವೇಯಲ್ಲಿ ತಿಳಿದು ಬಂದಿತ್ತು.

ಆಗ ನಗರದಲ್ಲಿ 5,686 ಆಟೋಗಳು ಮಾತ್ರ ಇದ್ದ ಕಾರಣ, ಪ್ರಾಧಿಕಾರದಿಂದ 241 ಪಾರ್ಕ್‌ಗಳಿಗೆ ಅನುಮತಿ ಸಿಕ್ಕಿತ್ತು. ಸದ್ಯ 7 ಸಾವಿರಕ್ಕೂ ಅಧಿಕ ಆಟೋಗಳು ನಗರದಲ್ಲಿವೆ. 241 ಪಾರ್ಕ್‌ ಸಾಕಾಗುತ್ತಿಲ್ಲ. ಪಾಲಿಕೆಯಲ್ಲಿ 2 ತಿಂಗಳುಗ ಳ ಹಿಂದೆ ನಡೆದ ಸಭೆಯಲ್ಲಿ 500ರಷ್ಟು ಪಾರ್ಕ್‌ಗಳಿಗೆ ಬೇಡಿಕೆ ಇಡಲಾಗಿತ್ತು. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ ಮಂಗಳೂರು ನಗರ ಆಟೋ ರಿಕ್ಷಾ ಚಾಲಕ-ಮಾಲಕರ ಒಕ್ಕೂಟದ ಗೌರವ ಸಲಹೆಗಾರ ಅರುಣ್‌ ಕುಮಾರ್‌.

ಬೇನಾಮಿ ಆಟೋ ಸಂಚಾರ

ಬೇನಾಮಿ ಆಟೋಗಳು ಸಾಕಷ್ಟು ಸಂಖ್ಯೆಯಲ್ಲಿ ಸಂಚರಿಸುತ್ತಿವೆ. ಬೇರೆಯವರ, ಸ್ಟಾಪ್‌ಗೆ ಹೋದ ಆಟೋಗಳ ವಲಯ ಸಂಖ್ಯೆಗಳನ್ನು ಹಾಕಿ ಓಡಿಸಲಾಗುತ್ತಿದೆ. ಅವುಗಳನ್ನು ವಶಪಡಿಸಬೇಕು. ಆಟೋಗಳ ಎದುರು, ಹಿಂದೆ ರಿಫ್ಲೆಕ್ಟಿವ್‌ ಸ್ಟಿಕ್ಕರ್‌ ಅಳವಡಿಕೆ ಕುರಿತ ಕೇಂದ್ರ ಸಾರಿಗೆ ಇಲಾಖೆಯ ಸೂಚನೆಗೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಸುಪ್ರೀಂ ಕೋರ್ಟ್‌ ಸ್ಟಿಕ್ಕರ್‌ ಅಳವಡಿಸದಂತೆ ಸೂಚನೆ ನೀಡಿದ್ದರೆ, ಕೇಂದ್ರ ಸರಕಾರ ಸಾವಿರಾರು ರೂಪಾಯಿ ವೆಚ್ಚದ ಈ ಸ್ಟಿಕ್ಕರ್‌ಗಳನ್ನು ಅಳವಡಿಸಲು ಹೇಳುತ್ತಿದೆ. ಇದನ್ನು ವಿರೋಧಿಸುತ್ತೇವೆ ಎನ್ನುವುದು ಸಂಘದ ಪ್ರಮುಖ ವಿಷ್ಣುಮೂರ್ತಿಯವರ ಮಾತು.

ಪ್ರಯಾಣ ದರ ಪರಿಷ್ಕರಣೆ ?

ಜಿಲ್ಲೆಯಲ್ಲಿ ಸುಮಾರು ಒಂದೂವರೆ ವರ್ಷಗಳ ಬಳಿಕ ಆಟೋ ಪ್ರಯಾಣ ದರ ಪರಿಷ್ಕರಣೆಯಾಗುವ ಸಾಧ್ಯತೆಯಿದೆ. ಹಲವು ಸಮಯದಿಂದ ದರ ಪರಿಷ್ಕರಣೆಗೆ ಸಂಘಟನೆಗಳು ಸಾರಿಗೆ ಪ್ರಾಧಿಕಾರಕ್ಕೆ ಮನವಿ ಸಲ್ಲಿಸುತ್ತಿವೆ. ಕಳೆದ ತಿಂಗಳು ಉಡುಪಿಯಲ್ಲಿ ದರ ಪರಿಷ್ಕರಣೆಯಾಗಿದ್ದು, ಜಿಲ್ಲೆಯಲ್ಲೂ ದರ ಪರಿಷ್ಕರಿಸುವಂತೆ ಬೇಡಿಕೆ ಹೆಚ್ಚಾಗಿದೆ. ಸದ್ಯ 2020 ಎ. 1ರಂದು ಈ ದರ ಜಾರಿಗೆ ಬಂದಂತೆ ಆಟೋ ಮೀಟರ್‌ ಕನಿಷ್ಠ ದರ 1.5 ಕಿ.ಮೀ.ಗೆ 30 ರೂ.ಇದೆ. ಉಡುಪಿಯಲ್ಲಿ ಈ ದರವನ್ನು 40 ರೂ.ಗೆ ಏರಿಸಿದ್ದು, ಅನಂತರದ ಪ್ರತಿ ಕಿ.ಮೀ.ಗೆ 20 ರೂ. ದರ ನಿಗದಿ ಮಾಡಲಾಗಿದೆ. ಮಂಗಳೂರಿನಲ್ಲೂ ಇದೇ ಮಾದರಿಯಲ್ಲಿ ದರ ನಿಗದಿ ಮಾಡುವಂತೆ ಮನವಿ ಮಾಡುತ್ತಿದ್ದಾರೆ. ಆ ಮೂಲಕ ಸಾರ್ವಜನಿಕರಿಗೆ ಮತ್ತೂಂದು ದರ ಹೆಚ್ಚಳದ ಬರೆ ಬೀಳುವ ಸಾಧ್ಯತೆಯಿದೆ.

ಇಂದು ಕುಂದು- ಕೊರತೆ ಸಭೆ

ಆಟೋ ರಿಕ್ಷಾ ಚಾಲಕ- ಮಾಲಕರ ಕುಂದುಕೊರತೆಯ ಬಗ್ಗೆ ಚರ್ಚಿಸಲು ವಿಶೇಷ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯನ್ನು ಅ. 13ರಂದು ಸಂಜೆ 4 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಾಧಿಕಾರದ ಅಧ್ಯಕ್ಷ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದೆ. -ರವಿಶಂಕರ್‌ ಪಿ., ಪ್ರಾದೇಶಿಕ ಸಾರಿಗೆ ಅಧಿಕಾರಿ

ಟಾಪ್ ನ್ಯೂಸ್

kರಾಷ್ಟ್ರಪತಿ ಆಳ್ವಿಕೆಗೆ ಅವಕಾಶ ಮಾಡಿಕೊಡಬೇಡಿ : ಮಾಜಿ ಡಿಸಿಎಂ ಈಶ್ವರಪ್ಪ

ರಾಷ್ಟ್ರಪತಿ ಆಳ್ವಿಕೆಗೆ ಅವಕಾಶ ಮಾಡಿಕೊಡಬೇಡಿ : ಮಾಜಿ ಡಿಸಿಎಂ ಈಶ್ವರಪ್ಪ

Rayanna Brigade ಪುನಾರಂಭಕ್ಕೆ ಚಿಂತನೆ; ಕೆ.ಎಸ್‌. ಈಶ್ವರಪ್ಪ

Rayanna Brigade ಪುನಾರಂಭಕ್ಕೆ ಚಿಂತನೆ; ಕೆ.ಎಸ್‌. ಈಶ್ವರಪ್ಪ

ಕರ್ನಾಟಕದಲ್ಲಿ ಬಿಹಾರದ ಪರಿಸ್ಥಿತಿ ನಿರ್ಮಾಣ: ವಿಜಯೇಂದ್ರ

ಕರ್ನಾಟಕದಲ್ಲಿ ಬಿಹಾರದ ಪರಿಸ್ಥಿತಿ ನಿರ್ಮಾಣ: ವಿಜಯೇಂದ್ರ

Patla Foundation ಉದಾತ್ತ ಗುಣ: ಒಡಿಯೂರು ಶ್ರೀ

Patla Foundation ಉದಾತ್ತ ಗುಣ: ಒಡಿಯೂರು ಶ್ರೀ

Udupi ಧರ್ಮ ಸಂರಕ್ಷಣೆಯಲ್ಲಿ ಪುರೋಹಿತರು, ವಿದ್ವಾಂಸರ ಪಾತ್ರ ಅಪಾರ: ಪುತ್ತಿಗೆ ಶ್ರೀ

Udupi ಧರ್ಮ ಸಂರಕ್ಷಣೆಯಲ್ಲಿ ಪುರೋಹಿತರು, ವಿದ್ವಾಂಸರ ಪಾತ್ರ ಅಪಾರ: ಪುತ್ತಿಗೆ ಶ್ರೀ

1-qqw-qwewqewqeqwe

IPL 2024; ಅಮೋಘ ಆಟವಾಡಿ ಮೂರನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡ ಕೆಕೆಆರ್

1-aaaa

Delhi ಹಸುಗೂಸುಗಳ ದುರಂತ: ಆಸ್ಪತ್ರೆಯ ಮಾಲಕ, ವೈದ್ಯ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Patla Foundation ಉದಾತ್ತ ಗುಣ: ಒಡಿಯೂರು ಶ್ರೀ

Patla Foundation ಉದಾತ್ತ ಗುಣ: ಒಡಿಯೂರು ಶ್ರೀ

ಎಲ್ಲ ಠಾಣೆಗಳಲ್ಲಿಯೂ ಸೈಬರ್‌ ಪ್ರಕರಣ ದಾಖಲು

ಎಲ್ಲ ಠಾಣೆಗಳಲ್ಲಿಯೂ ಸೈಬರ್‌ ಪ್ರಕರಣ ದಾಖಲು

beಬೀಚ್‌ಗಳಲ್ಲಿ ಪ್ರವಾಸಿಗರ ರಕ್ಷಣೆಗೆ 26 ಗೃಹರಕ್ಷಕ ಸಿಬಂದಿ

ಬೀಚ್‌ಗಳಲ್ಲಿ ಪ್ರವಾಸಿಗರ ರಕ್ಷಣೆಗೆ 26 ಗೃಹರಕ್ಷಕ ಸಿಬಂದಿ

Kateel ಮೇಳಗಳ ತಿರುಗಾಟ ಮುಕ್ತಾಯ; ದಿನಕ್ಕೆರಡರಂತೆ ಸೇವೆಯಾಟ ಬುಕ್ಕಿಂಗ್‌!

Kateel ಮೇಳಗಳ ತಿರುಗಾಟ ಮುಕ್ತಾಯ; ದಿನಕ್ಕೆರಡರಂತೆ ಸೇವೆಯಾಟ ಬುಕ್ಕಿಂಗ್‌!

ಕರಾವಳಿಯಲ್ಲಿ ಮೋಡದ ವಾತಾವರಣ, ಸಾಧಾರಣ ಮಳೆ; ಕೆಲವೆಡೆ ಹಾನಿ

ಕರಾವಳಿಯಲ್ಲಿ ಮೋಡದ ವಾತಾವರಣ, ಸಾಧಾರಣ ಮಳೆ; ಕೆಲವೆಡೆ ಹಾನಿ

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

kರಾಷ್ಟ್ರಪತಿ ಆಳ್ವಿಕೆಗೆ ಅವಕಾಶ ಮಾಡಿಕೊಡಬೇಡಿ : ಮಾಜಿ ಡಿಸಿಎಂ ಈಶ್ವರಪ್ಪ

ರಾಷ್ಟ್ರಪತಿ ಆಳ್ವಿಕೆಗೆ ಅವಕಾಶ ಮಾಡಿಕೊಡಬೇಡಿ : ಮಾಜಿ ಡಿಸಿಎಂ ಈಶ್ವರಪ್ಪ

Rayanna Brigade ಪುನಾರಂಭಕ್ಕೆ ಚಿಂತನೆ; ಕೆ.ಎಸ್‌. ಈಶ್ವರಪ್ಪ

Rayanna Brigade ಪುನಾರಂಭಕ್ಕೆ ಚಿಂತನೆ; ಕೆ.ಎಸ್‌. ಈಶ್ವರಪ್ಪ

ಕರ್ನಾಟಕದಲ್ಲಿ ಬಿಹಾರದ ಪರಿಸ್ಥಿತಿ ನಿರ್ಮಾಣ: ವಿಜಯೇಂದ್ರ

ಕರ್ನಾಟಕದಲ್ಲಿ ಬಿಹಾರದ ಪರಿಸ್ಥಿತಿ ನಿರ್ಮಾಣ: ವಿಜಯೇಂದ್ರ

Patla Foundation ಉದಾತ್ತ ಗುಣ: ಒಡಿಯೂರು ಶ್ರೀ

Patla Foundation ಉದಾತ್ತ ಗುಣ: ಒಡಿಯೂರು ಶ್ರೀ

Udupi ಧರ್ಮ ಸಂರಕ್ಷಣೆಯಲ್ಲಿ ಪುರೋಹಿತರು, ವಿದ್ವಾಂಸರ ಪಾತ್ರ ಅಪಾರ: ಪುತ್ತಿಗೆ ಶ್ರೀ

Udupi ಧರ್ಮ ಸಂರಕ್ಷಣೆಯಲ್ಲಿ ಪುರೋಹಿತರು, ವಿದ್ವಾಂಸರ ಪಾತ್ರ ಅಪಾರ: ಪುತ್ತಿಗೆ ಶ್ರೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.