Exam: ದ್ವಿತೀಯ ಪದವಿಪೂರ್ವಕ್ಕೆ ಮೂರು ಪರೀಕ್ಷೆ:ಪದವಿ ಕಲಿಕೆಗೆ ನೆರವಾಗಿ ಬ್ರಿಜ್‌ ಕೋರ್ಸ್‌


Team Udayavani, Oct 7, 2023, 12:55 AM IST

exam

ಮಂಗಳೂರು: ಪಿಯುಸಿಯಲ್ಲಿ ಮೂರು ವಾರ್ಷಿಕ ಪರೀಕ್ಷೆಗಳು ನಿಗದಿ ಯಾದ ಹಿನ್ನೆಲೆಯಲ್ಲಿ ಅದರ ಫಲಿತಾಂಶ ವಿಳಂಬವಾದರೆ ವಿದ್ಯಾರ್ಥಿಗಳ ಪದವಿ ಕಲಿಕೆಗೆ ತೊಡಕಾಗದಂತೆ ನೋಡಿ
ಕೊಳ್ಳಲು “ಬ್ರಿಜ್‌ ಕೋರ್ಸ್‌’ ಆರಂ ಭಿಸಲು ಚಿಂತನೆ ನಡೆಸಲಾಗಿದೆ.

ಪಿಯುಸಿಯ “ಪೂರಕ ಪರೀಕ್ಷೆ’ ಬದಲಿಗೆ ವಾರ್ಷಿಕ ಪರೀಕ್ಷೆ 1, 2 ಹಾಗೂ 3 ಎಂದು ಹೆಸರಿಸಿ ವಿದ್ಯಾರ್ಥಿಗಳಿಗೆ ಈ ಬಾರಿಯಿಂದ ಹೊಸ ಅವಕಾಶವನ್ನು ಸರಕಾರ ಕಲ್ಪಿಸಿದೆ. ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ ಪಿಯು ಮೊದಲ ಪರೀಕ್ಷೆ ಮಾ. 1ರಿಂದ 25, 2ನೇ ಪರೀಕ್ಷೆ ಮೇ 15ರಿಂದ ಜೂ. 5 ಹಾಗೂ ಮೂರನೇ ಪರೀಕ್ಷೆ ಜು. 12ರಿಂದ ಜು. 30ರ ವರೆಗೆ ನಡೆಯಲಿದೆ. ಈ ಪೈಕಿ 2 ಹಾಗೂ 3ನೇ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಫಲಿತಾಂಶ ಲಭ್ಯವಾಗುವಷ್ಟರಲ್ಲಿ ಹಲವು ಕಡೆ ಪದವಿ ತರಗತಿಗಳು ಆರಂಭವಾಗಿರುವ ಸಾಧ್ಯತೆ ಇದೆ. ಹೀಗಾಗಿ ಈ ಮಕ್ಕಳಿಗೆ ಪದವಿ ಮೊದಲ ಒಂದೆರಡು ತಿಂಗಳು ಕಲಿಕೆಗೆ ತೊಡಕಾಗಬಹುದು. ಹೀಗಾಗಿ “ಬ್ರಿಜ್‌ ಕೋರ್ಸ್‌’ ಮೂಲಕ ಪಠ್ಯ ಸರಿಹೊಂದಿಸಲು ಚಿಂತಿಸಲಾಗುತ್ತಿದೆ.

ಈ ವರ್ಷ ಪದವಿ ಆರಂಭ ತಡವಾಗಿತ್ತು. ಮಂಗಳೂರು ವಿ.ವಿ.ಯಲ್ಲಿ ಅ. 3ರ ವರೆಗೂ ಪದವಿ ಪ್ರವೇಶಕ್ಕೆ ಅವಕಾಶ ಇತ್ತು. ಒಂದು ವೇಳೆ ಪದವಿ ತರಗತಿ ಮೊದಲೇ ಆರಂಭವಾದರೆ ಮಕ್ಕಳಿಗೆ ಬ್ರಿಜ್‌ ಕೋರ್ಸ್‌ ಪರಿಕಲ್ಪನೆ ಜಾರಿ ಮಾಡಬೇಕಾಗುತ್ತದೆ ಎಂದು ಮಂಗಳೂರು ವಿ.ವಿ. ಕುಲಪತಿ (ಪ್ರಭಾರ) ಪ್ರೊ| ಜಯರಾಜ್‌ ಅಮೀನ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

ಸಿಇಟಿ ಸೀಟು ತೊಡಕು!
ಡೀಮ್ಡ್ ವಿ.ವಿ.ಗಳು, ಸ್ವಾಯತ್ತ ಕಾಲೇಜುಗಳು ಪದವಿ ಅಥವಾ ಇತರ ಕೋರ್ಸ್‌ಗಳ ತರಗತಿಯನ್ನು ಪಿಯು ಮೊದಲ ಪರೀಕ್ಷೆ ಬಂದ ಕೂಡಲೇ ಅದರ ಆಧಾರದಲ್ಲಿ ಆರಂಭಿಸುತ್ತಾರೆ. ಹೀಗಾಗಿ ಬಳಿಕ ನಡೆಯುವ ಪರೀಕ್ಷೆಯ ಫಲಿತಾಂಶ ಬಂದ ಬಳಿಕ ವಿದ್ಯಾರ್ಥಿಗಳ ದಾಖಲಾತಿಗೆ ಅಂತಹ ಶಿಕ್ಷಣ ಸಂಸ್ಥೆಯಲ್ಲಿ ಸೀಟುಗಳ ಕೊರತೆ ಕಾಡಬಹುದು.
ಈ ಮಧ್ಯೆ ಪಿಯು ಮೂರು ಪರೀಕ್ಷೆ ಮುಗಿದ ಬಳಿಕವಷ್ಟೇ ಸಿಇಟಿ ಫಲಿತಾಂಶವೂ ಬರುತ್ತದೆ. ಇದರಿಂದ ಹಲವು ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಭವಿಷ್ಯಕ್ಕೂ ತೊಡಕಾಗುವ ಸಾಧ್ಯತೆ ಇದೆ.

3 ಮೌಲ್ಯಮಾಪನ-ಅಪಸ್ವರ!
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪಿಯು ಯಲ್ಲಿ ಮೂರು ಅಂತಿಮ ಪರೀಕ್ಷೆ ನಡೆಸುವ ಸರಕಾರದ ನಿರ್ಧಾರಕ್ಕೆ ಅಧ್ಯಾಪಕರಿಂದ ನಕಾರಾತ್ಮಕ ಪ್ರತಿಕ್ರಿಯೆಯೂ ಬಂದಿದೆ. ಈ ಹಿಂದೆ “ಪೂರಕ ಪರೀಕ್ಷೆ’ಗೆ ಮಕ್ಕಳ ಸಂಖ್ಯೆ ಕಡಿಮೆ ಇರುತ್ತಿತ್ತು; ಆದರೆ ಈ ಬಾರಿ ಮೂರು ಬಾರಿ ವಾರ್ಷಿಕ ಪರೀಕ್ಷೆಯೇ ನಡೆಯುವು ದರಿಂದ ವಿದ್ಯಾರ್ಥಿಗಳ ಹಾಜರಾತಿ 2 ಹಾಗೂ 3ನೇ ಪರೀಕ್ಷೆಯಲ್ಲಿಯೂ ಅಧಿಕ ಇರುವ ಸಾಧ್ಯತೆ ಇದೆ. ಮೂರು ಪರೀಕ್ಷೆ, ಮೌಲ್ಯ ಮಾಪನ ಇರುವುದರಿಂದ ಉಪನ್ಯಾಸಕ ರಿಗೆ ಒತ್ತಡ ಅಧಿಕವಾಗಲಿದೆ. ಜತೆಗೆ 2-3ನೇ ಮೌಲ್ಯಮಾಪನಕ್ಕೆ ಬೆಂಗಳೂರಿಗೆ ತೆರಳ ಬೇಕಾಗಿರುವುದು ಅಸಮಾಧಾನಕ್ಕೆ ಕಾರಣ.

ಬ್ರಿಜ್‌ ಕೋರ್ಸ್‌ ನೀಡುವಂತೆ ಉನ್ನತ ಶಿಕ್ಷಣ ಸಚಿವರಲ್ಲಿ ಕೋರ ಲಾಗಿದೆ. ಪಿಯುಸಿಯಲ್ಲಿ
3 ಪರೀಕ್ಷೆ ಬರೆದು ಪದವಿ ಕಾಲೇಜು ಸೇರುವವರಿಗೆ ಇದರಿಂದ ಸಹಾಯವಾಗಲಿದೆ.
-ಮಧು ಬಂಗಾರಪ್ಪ, ಸಚಿವರು, ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ

ಟಾಪ್ ನ್ಯೂಸ್

ನನ್ನ ಮಗ ಸತ್ತು ಹೋಗಿ 8 ವರ್ಷ ಆಗಿದೆ…; ಕುಮಾರಸ್ವಾಮಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ

ನನ್ನ ಮಗ ಸತ್ತು ಹೋಗಿ 8 ವರ್ಷ ಆಗಿದೆ…; ಕುಮಾರಸ್ವಾಮಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ

Google Map Follow ಮಾಡಿ ಹಳ್ಳಕ್ಕೆ ದುಮುಕಿದ ಕಾರು… ಅದೃಷ್ಟವಶಾತ್ ಪ್ರವಾಸಿಗರು ಪಾರು

Google Map Follow ಮಾಡಿ ಹೊಳೆಗೆ ಧುಮುಕಿದ ಕಾರು… ಅದೃಷ್ಟವಶಾತ್ ಪ್ರವಾಸಿಗರು ಪಾರು

Channagiri; ಕಸ್ಟಡಿಯಲ್ಲಿದ್ದ ಆರೋಪಿ ಸಾವು ಪ್ರಕರಣ; ಚನ್ನಗಿರಿಯಲ್ಲಿ ಬಿಗಿ ಬಂದೋಬಸ್ತ್

Channagiri; ಕಸ್ಟಡಿಯಲ್ಲಿದ್ದ ಆರೋಪಿ ಸಾವು ಪ್ರಕರಣ; ಚನ್ನಗಿರಿಯಲ್ಲಿ ಬಿಗಿ ಬಂದೋಬಸ್ತ್

hubli

Hubli:ಬಸ್‌ ಸೋರದಿದ್ದರೂ ಕೊಡೆ ಹಿಡಿದು ಚಾಲನೆ; ಮೋಜಿಗಾಗಿ ಮಾಡಿದ ತಪ್ಪಿಗೆ ಅಮಾನತು ಶಿಕ್ಷೆ

Falls: ಕಾಫಿನಾಡಿನಲ್ಲಿ ಧಾರಾಕಾರ ಮಳೆ… ಮೈದುಂಬಿ ಹರಿಯುತ್ತಿರೋ ಕಲ್ಲತ್ತಿಗರಿ ಜಲಪಾತ

Falls: ಕಾಫಿನಾಡಿನಲ್ಲಿ ಧಾರಾಕಾರ ಮಳೆ… ಮೈದುಂಬಿ ಹರಿಯುತ್ತಿರೋ ಕಲ್ಲತ್ತಿಗಿರಿ ಜಲಪಾತ

moorane krishnappa review

Moorane Krishnappa Review; ಕಾಮಿಡಿ ಡೋಸ್‌ನಲ್ಲಿ ಕೃಷ್ಣಪ್ಪ ಕಮಾಲ್‌!

Alert: ದೇವರನಾಡಿನಲ್ಲಿ ಮಳೆಯ ಅಬ್ಬರಕ್ಕೆ 11 ಮೃತ್ಯು , 7 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

Alert: ದೇವರನಾಡಿನಲ್ಲಿ ಮಳೆಯ ಅಬ್ಬರಕ್ಕೆ 11 ಮೃತ್ಯು , 7 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Falls: ಕಾಫಿನಾಡಿನಲ್ಲಿ ಧಾರಾಕಾರ ಮಳೆ… ಮೈದುಂಬಿ ಹರಿಯುತ್ತಿರೋ ಕಲ್ಲತ್ತಿಗರಿ ಜಲಪಾತ

Falls: ಕಾಫಿನಾಡಿನಲ್ಲಿ ಧಾರಾಕಾರ ಮಳೆ… ಮೈದುಂಬಿ ಹರಿಯುತ್ತಿರೋ ಕಲ್ಲತ್ತಿಗಿರಿ ಜಲಪಾತ

sಬರದ ಬೆನ್ನಲ್ಲೇ ರೈತರಿಗೆ ಬಿತ್ತನೆ ಬೀಜ ದರ ಏರಿಕೆಯ ಆಘಾತ

ಬರದ ಬೆನ್ನಲ್ಲೇ ರೈತರಿಗೆ ಬಿತ್ತನೆ ಬೀಜ ದರ ಏರಿಕೆಯ ಆಘಾತ

ಈ ಬಾರಿಯೂ ಶಾಲಾ ಶಿಕ್ಷಣ ಇಲಾಖೆಗೆ ಅತಿಥಿ ಶಿಕ್ಷಕರೇ ಗತಿ!

ಈ ಬಾರಿಯೂ ಶಾಲಾ ಶಿಕ್ಷಣ ಇಲಾಖೆಗೆ ಅತಿಥಿ ಶಿಕ್ಷಕರೇ ಗತಿ!

ಪದವೀಧರ, ಶಿಕ್ಷಕರ ಕ್ಷೇತ್ರ ಚುನಾವಣೆ: ಇಂದಿನಿಂದ ವಿಜಯೇಂದ್ರ ರಾಜ್ಯ ಪ್ರವಾಸ

ಪದವೀಧರ, ಶಿಕ್ಷಕರ ಕ್ಷೇತ್ರ ಚುನಾವಣೆ: ಇಂದಿನಿಂದ ವಿಜಯೇಂದ್ರ ರಾಜ್ಯ ಪ್ರವಾಸ

HD Kumaraswamy ನಿಮ್ಮ ಪುತ್ರನನ್ನು ವಿದೇಶಕ್ಕೆ ಪಾರ್ಟಿಗೆ ಕಳುಹಿಸಿದ್ದ ನೀವೇನಾ?

HD Kumaraswamy ನಿಮ್ಮ ಪುತ್ರನನ್ನು ವಿದೇಶಕ್ಕೆ ಮೋಜು ಮಾಡಲು ಕಳುಹಿಸಿದ್ದು ನೀವೇನಾ?

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

ನನ್ನ ಮಗ ಸತ್ತು ಹೋಗಿ 8 ವರ್ಷ ಆಗಿದೆ…; ಕುಮಾರಸ್ವಾಮಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ

ನನ್ನ ಮಗ ಸತ್ತು ಹೋಗಿ 8 ವರ್ಷ ಆಗಿದೆ…; ಕುಮಾರಸ್ವಾಮಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ

Google Map Follow ಮಾಡಿ ಹಳ್ಳಕ್ಕೆ ದುಮುಕಿದ ಕಾರು… ಅದೃಷ್ಟವಶಾತ್ ಪ್ರವಾಸಿಗರು ಪಾರು

Google Map Follow ಮಾಡಿ ಹೊಳೆಗೆ ಧುಮುಕಿದ ಕಾರು… ಅದೃಷ್ಟವಶಾತ್ ಪ್ರವಾಸಿಗರು ಪಾರು

K Annamalai

K Annamalai; ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದ ಅಣ್ಣಾಮಲೈ

Koppala; ಇಂದಿನಿಂದ ಎರಡು ದಿನ ಮೇ ಸಾಹಿತ್ಯ ಮೇಳ

Koppala; ಇಂದಿನಿಂದ ಎರಡು ದಿನ ಮೇ ಸಾಹಿತ್ಯ ಮೇಳ

3-uv-fusion

UV Fusion: ಆಗುತ್ತಿದೆಯೇ ಭಾವನೆಗಳ ಯುಗಾಂತ್ಯ….?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.