Gold Theft: ಚಿನ್ನಾಭರಣ ದೋಚಲು ದರೋಡೆ ಕಥೆ ಸೃಷ್ಟಿ!


Team Udayavani, Oct 12, 2023, 12:18 PM IST

tdy-10

ಬೆಂಗಳೂರು: ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚುವ ಉದ್ದೇಶದಿಂದ ನೆರೆ ರಾಜ್ಯಕ್ಕೆ ಡೆಲಿವರಿ ಮಾಡಲು ಮಾಲೀಕ ಕೊಟ್ಟ ಚಿನ್ನಾಭರಣವನ್ನು ಗನ್‌ ತೋರಿಸಿ ದುಷ್ಕರ್ಮಿಗಳು ದರೋಡೆ ಮಾಡಿದ್ದಾರೆ ಎಂದು ಸಿನಿಮಾ ಕಥೆ ಸೃಷ್ಟಿಸಿದ ಮಾರಾಟ ಪ್ರತಿನಿಧಿ ಹಾಗೂ ಆತನ ಸಹಚರ ಹಲಸೂರು ಗೇಟ್‌ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ರಾಜಸ್ಥಾನ ಮೂಲದ ಲಾಲ್‌ಸಿಂಗ್‌(23) ಮತ್ತು ಆತನ ಸಹಚರ ರಾಜ್‌ ಪಾಲ್‌(24) ಬಂಧಿತರು. ಆರೋಪಿಗಳಿಂದ 75 ಲಕ್ಷ ರೂ. ಮೌಲ್ಯದ 1 ಕೆ.ಜಿ. 262 ಗ್ರಾಂ ತೂಕದ ಚಿನ್ನಾಭರಣ ವಶಕ್ಕೆ ಪಡೆಯ ಲಾಗಿದೆ. ಅಭಿಷೇಕ್‌ ಮತ್ತು ಪ್ರಕಾಶ್‌ಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನಗರ್ತರಪೇಟೆ ಜ್ಯುವೆಲ್ಲರಿ ಅಂಗಡಿ ಮಾಲೀಕ ಅಭಿಷೇಕ್‌ ಜೈನ್‌ ಬಳಿ ಲಾಲ್‌ಸಿಂಗ್‌ ಮಾರಾಟ ಪ್ರತಿನಿಧಿಯಾಗಿದ್ದು, ಮಾಲಿಕರ ವಿಶ್ವಾಸ ಗಳಿಸಿದ್ದ. ಹೀಗಾಗಿ ಮಾಲಿಕ ಅಭಿಷೇಕ್‌ ಜೈನ್‌, ಆಂಧ್ರಪ್ರದೇಶದ ನೆಲ್ಲೂರಿನ ಮುಖೇಶ್‌ ಮತ್ತು ಶುಭಂ ಗೋಲ್ಡ್‌ ಜುವೆಲ್ಲರಿ ಅಂಗಡಿಗೆ ಡೆಲಿವರಿ ನೀಡುವಂತೆ ಲಾಲ್‌ಸಿಂಗ್‌ 1 ಕೆ.ಜಿ. 262 ಗ್ರಾಂ ಚಿನ್ನಾಭರಣ ಕೊಟ್ಟಿದ್ದ. ಆದರೆ, ಆರೋಪಿ ಮಾರ್ಗ ಮಧ್ಯೆಯೇ ಮಾಲಿಕನಿಗೆ ಫೋನ್‌ ಮಾಡಿ ಚಿನ್ನಾಭರಣ ದರೋಡೆ ಮಾಡಿದ್ದಾರೆ ಎಂದು ಸುಳ್ಳು ಹೇಳಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಗನ್‌ ತೋರಿಸಿ ದರೋಡೆ ಕಥೆ! ಚಿನ್ನಾಭರಣ ಸಮೇತ ನೆಲ್ಲೂರಿನ ಕಾಳಹಸ್ತಿಗೆ ಹೋದ ಲಾಲ್‌ ಸಿಂಗ್‌, ಅಲ್ಲಿಂದಲೇ ಮಾಲಿಕ ಅಭಿಷೇಖ್‌ ಜೈನ್‌ಗೆ ಕರೆ ಮಾಡಿ, ಯಾರೋ ದುಷ್ಕರ್ಮಿಗಳು ತನ್ನ ಹಣೆಗೆ ಗನ್‌ ಇಟ್ಟು, ಕೈಗಳಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಚಿನ್ನಾಭರಣದ ಬ್ಯಾಗ್‌ ಕಿತ್ತುಕೊಂಡು ಹೋಗಿದ್ದರು ಎಂದು ಹೇಳಿ, ಫೋನ್‌ ಸ್ವಿಚ್ಡ್ ಆಫ್ ಮಾಡಿದ್ದ. ಆ ನಂತರ ಅಭಿಷೇಕ್‌ ಜೈನ್‌ ನಿರಂತರವಾಗಿ ಕರೆ ಮಾಡಿದರೂ ಯಾವುದೇ ಪ್ರಯೋಜನವಾ ಗಿರಲಿಲ್ಲ. ಹೀಗಾಗಿ ಅನುಮಾನಗೊಂಡು ಖುದ್ದು ಕಾಳಹಸ್ತಿಗೆ ತೆರಳಿ, ಲಾಲ್‌ಸಿಂಗ್‌ನನ್ನು ಹುಡುಕಿ ಬೆಂಗಳೂರಿಗೆ ಕರೆತಂದು ಹಲಸೂರು ಗೇಟ್‌ ಠಾಣೆಗೆ ದೂರು ನೀಡಿದ್ದರು. ಹಲಸೂರು ಗೇಟ್‌ ಠಾಣೆ ಇನ್‌ಸ್ಪೆಕ್ಟರ್‌ ಹನುಮಂತ ಭಜಂತ್ರಿ ನೇತೃತ್ವದ ತಂಡ ಲಾಲ್‌ಸಿಂಗ್‌ನನ್ನು ವಿಚಾರಣೆ ನಡೆಸಿ ಬಂಧಿಸಿದೆ ಎಂದು ಪೊಲೀಸ್‌ ಆಯುಕ್ತರು ಹೇಳಿದರು. ‌

ಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್‌ ಆಯುಕ್ತ ಸತೀಶ್‌ ಕುಮಾರ್‌, ಕೇಂದ್ರ ವಿಭಾಗದ ಡಿಸಿಪಿ ಎಚ್‌.ಟಿ.. ಶೇಖರ್‌, ಹಲಸೂರು ಗೇಟ್‌ ಎಸಿಪಿ ಶಿವಾನಂದ ಚಲವಾದಿ ಇದ್ದರು.

ನಗರದಲ್ಲೇ ಬ್ಯಾಗ್‌ ಹಸ್ತಾಂತರ: ಮಾಲಿಕ ತನ್ನನ್ನೇ ಆಂಧ್ರಪ್ರದೇಶಕ್ಕೆ ಕಳುಹಿಸುತ್ತಾನೆ ಎಂಬುದು ಖಚಿತವಾಗುತ್ತಿದ್ದಂತೆ, ರಾಜ್‌ಪಾಲ್‌ ಹಾಗೂ ಇತರೆ ಆರೋಪಿಗಳನ್ನು ಬೆಂಗಳೂರಿಗೆ ಕರೆಯಿಸಿಕೊಂಡಿದ್ದಾನೆ. ಬಳಿಕ ಚಿನ್ನಾಭರಣ ತುಂಬಿದ್ದ ಬ್ಯಾಗ್‌ ಅನ್ನು ಬೆಂಗಳೂರಿನಲ್ಲೇ ಸಹಚರರಿಗೆ ಹಸ್ತಾಂತರಿಸಿ, ಅವರೊಂದಿಗೆ ತಾನೂ ರಾಜಸ್ಥಾನಕ್ಕೆ ಪರಾರಿಯಾಗಿದ್ದ. ಬಳಿಕ ನೆಲ್ಲೂರಿನ ಕಾಳಹಸ್ತಿಗೆ ಹೋಗಿ ಅಲ್ಲಿಂದ ಅಂಗಡಿ ಮಾಲಿಕನಿಗೆ ಕರೆ ಮಾಡಿ ದರೋಡೆ ಕಥೆ ಹೇಳಿದ್ದ. ಅಲ್ಲದೆ, ದರೋಡೆ ನಿಜವೆಂದು ನಂಬಿಸಲು ಬ್ಲೇಡ್‌ನಿಂದ ತನ್ನ ಎರಡು ಕೈಗಳನ್ನು ಕೊಯ್ದುಕೊಂಡಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.

 

ಟಾಪ್ ನ್ಯೂಸ್

Kedarnath

Chardham; 15 ದಿನಗಳಲ್ಲಿ 52 ಯಾತ್ರಾರ್ಥಿಗಳ ಸಾವು

Heavy Rain ಕರಾವಳಿಯಲ್ಲಿ ಮುಂದುವರಿದ ಗಾಳಿ-ಮಳೆಯ ಅಬ್ಬರ

Heavy Rain ಕರಾವಳಿಯಲ್ಲಿ ಮುಂದುವರಿದ ಗಾಳಿ-ಮಳೆಯ ಅಬ್ಬರ

ಘಾಟಿ ಪ್ರದೇಶದಲ್ಲಿ ಮಂಜಿನ ವಾತಾವರಣ; ಹೆದ್ದಾರಿ ಇಲಾಖೆಯಿಂದ ಮಳೆಗಾಲ ಪೂರ್ವ ಕಾಮಗಾರಿ

ಘಾಟಿ ಪ್ರದೇಶದಲ್ಲಿ ಮಂಜಿನ ವಾತಾವರಣ; ಹೆದ್ದಾರಿ ಇಲಾಖೆಯಿಂದ ಮಳೆಗಾಲ ಪೂರ್ವ ಕಾಮಗಾರಿ

Udupi; ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ರಘುಪತಿ ಭಟ್‌

Udupi; ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ರಘುಪತಿ ಭಟ್‌

Uppinangady ಮಣ್ಣು ಹಾಕಿದ ರಸ್ತೆಯಲ್ಲಿ ಸಿಲುಕಿದ ಲಾರಿ

Uppinangady ಮಣ್ಣು ಹಾಕಿದ ರಸ್ತೆಯಲ್ಲಿ ಸಿಲುಕಿದ ಲಾರಿ

Sullia: ಡ್ಯಾಂ ನೀರು ಹೊರಕ್ಕೆ ನೀರು ಸಂಗ್ರಹದ ಪ್ರದೇಶದಲ್ಲಿ ಕುಸಿತ

Sullia: ಡ್ಯಾಂ ನೀರು ಹೊರಕ್ಕೆ ನೀರು ಸಂಗ್ರಹದ ಪ್ರದೇಶದಲ್ಲಿ ಕುಸಿತ

ಕಡಲಾಳದ ಬಳಕೆಯಾಗದ ಮೀನಿಗೆ ಮಾರುಕಟ್ಟೆ ಅಧಿಕ: ಡಾ| ಮೀನ ಕುಮಾರಿ

ಕಡಲಾಳದ ಬಳಕೆಯಾಗದ ಮೀನಿಗೆ ಮಾರುಕಟ್ಟೆ ಅಧಿಕ: ಡಾ| ಮೀನ ಕುಮಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru Rave Party; 86 ಜನರು ಡ್ರಗ್ ಸೇವೆನೆ ಮಾಡಿರುವುದು ರಕ್ತ ಪರೀಕ್ಷಯಲ್ಲಿ ದೃಢ

Bengaluru Rave Party; 86 ಜನರು ಡ್ರಗ್ ಸೇವೆನೆ ಮಾಡಿರುವುದು ರಕ್ತ ಪರೀಕ್ಷಯಲ್ಲಿ ದೃಢ

ಕೈಗಾರಿಕೆಗೆಂದು ಅಭಿವೃದ್ಧಿಪಡಿಸಿದ ಜಾಗದಲ್ಲಿ ನೂರಾರು ದೊಡ್ಡ ಗಿಡ ನೆಟ್ಟ ಅನಾಮಿಕರು!

ಕೈಗಾರಿಕೆಗೆಂದು ಅಭಿವೃದ್ಧಿಪಡಿಸಿದ ಜಾಗದಲ್ಲಿ ನೂರಾರು ದೊಡ್ಡ ಗಿಡ ನೆಟ್ಟ ಅನಾಮಿಕರು!

8

Bengaluru Road: ಮಳೆ ನಿಂತ ನಂತರ ರಸ್ತೆ ಗುಂಡಿ ದುರಸ್ತಿ  ಶುರು 

7

ಹೊಯ್ಸಳ ಪೊಲೀಸರನ್ನು ಕಳ್ಳ ಕಳ್ಳ ಎಂದು ಬೆನ್ನಟ್ಟಿದ ಸಾರ್ವಜನಿಕರು!

6

Bengaluru: 13 ವರ್ಷದ ಅಪ್ರಾಪ್ತ ಸಹೋದರನಿಂದಲೇ 3 ತಿಂಗಳ ಗರ್ಭಿಣಿಯಾದ ತಂಗಿ!

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Kedarnath

Chardham; 15 ದಿನಗಳಲ್ಲಿ 52 ಯಾತ್ರಾರ್ಥಿಗಳ ಸಾವು

court

Equestrian: ಆಡಳಿತ ನಿರ್ವಹಣೆಗೆ ಸಮಿತಿ

pvs

Malaysia Master ಬ್ಯಾಡ್ಮಿಂಟನ್‌: ಸೆಮಿಫೈನಲ್‌ ಪ್ರವೇಶಿಸಿದ ಸಿಂಧು

Sunil Chhetri

FIFA ವಿಶ್ವಕಪ್‌ ಕ್ವಾಲಿಫೈಯರ್‌; ಭಾರತ ಫುಟ್‌ಬಾಲ್‌ ತಂಡ ಪ್ರಕಟ: ಛೇತ್ರಿಗೆ ವಿದಾಯ ಪಂದ್ಯ

Heavy Rain ಕರಾವಳಿಯಲ್ಲಿ ಮುಂದುವರಿದ ಗಾಳಿ-ಮಳೆಯ ಅಬ್ಬರ

Heavy Rain ಕರಾವಳಿಯಲ್ಲಿ ಮುಂದುವರಿದ ಗಾಳಿ-ಮಳೆಯ ಅಬ್ಬರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.