Online ಮೂಲಕ ಬುಕ್ಕಿಂಗ್‌ ನೆಪದಲ್ಲಿ ಬ್ಯೂಟಿಪಾರ್ಲರ್‌ ಮಾಲಕಿಗೆ ವಂಚನೆ !


Team Udayavani, Nov 21, 2023, 9:21 PM IST

Online ಮೂಲಕ ಬುಕ್ಕಿಂಗ್‌ ನೆಪದಲ್ಲಿ ಬ್ಯೂಟಿಪಾರ್ಲರ್‌ ಮಾಲಕಿಗೆ ವಂಚನೆ !Online ಮೂಲಕ ಬುಕ್ಕಿಂಗ್‌ ನೆಪದಲ್ಲಿ ಬ್ಯೂಟಿಪಾರ್ಲರ್‌ ಮಾಲಕಿಗೆ ವಂಚನೆ !

ಪುತ್ತೂರು: ದೂರವಾಣಿ ಕರೆ ಮಾಡಿ “ಮದುಮಗಳ ಶೃಂಗಾರ’ಕ್ಕೆ ದಿನ ಗೊತ್ತುಪಡಿಸಿ ಮುಂಗಡ ಹಣ ಪಾವತಿಸುವ ನೆಪದಲ್ಲಿ ಬ್ಯೂಟಿಪಾರ್ಲರ್‌ ಮಾಲಕಿಯಿಂದ 9 ಸಾವಿರ ರೂ. ಪಡೆದ ಘಟನೆ ಸೋಮವಾರ ನಡೆದಿದೆ.

ಪುತ್ತೂರಿನ ಮಾಧವಿ ಮನೋಹರ್‌ ರೈ ವಂಚನೆಗೆ ಒಳಗಾದವರು. ತನಿಶಾ ಶರ್ಮ ಎಂಬ ಹೆಸರಿನಿಂದ ಕರೆ ಮಾಡಿದ ವ್ಯಕ್ತಿ ವಂಚಿಸಿದವರು. ವಂಚನೆಯ ಬಗ್ಗೆ ಸೈಬರ್‌ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾಟ್ಸ್‌ ಆ್ಯಪ್‌ನಲ್ಲಿ ಸಂದೇಶ ಬಂತು..!
“ಹಲೋ’ ಅನ್ನುವ ಸಂದೇಶದೊಂದಿಗೆ 919257384546 ಸಂಖ್ಯೆಯಿಂದ ಬ್ಯೂಟಿಪಾರ್ಲರ್‌ನ ಮಾಲಕಿಗೆ ವಾಟ್ಸ್‌ ಆ್ಯಪ್‌ ಸಂದೇಶ ಬಂದಿತ್ತು. ಡಿ.10ರಂದು ಮದುಮಗಳ ಶೃಂಗಾರ ಇದೆ. ಬೇರೆ ಬುಕ್ಕಿಂಗ್‌ ಇದೆಯಾ ಎಂದು ಪ್ರಶ್ನಿಸಿದ್ದಾರೆ. ಇಲ್ಲವೆಂದು ಮಾಧವಿ ಹೇಳಿದಾಗ ಹಾಗಾದರೆ ಬುಕ್ಕಿಂಗ್‌ ಮಾಡಿ ಎಂದು ಅತ್ತ ಕಡೆಯಿಂದ ಸಂದೇಶ ಬಂದಿದೆ. ಬುಕ್ಕಿಂಗ್‌ ಚಾರ್ಜ್‌ 1000 ರೂ. ಪಾವತಿಸುವಂತೆ ಮಾಲಕಿ ಸಂದೇಶ ಕಳುಹಿಸಿದ್ದಾರೆ.

9 ಸಾವಿರ ರೂ. ವಂಚನೆ
ಬುಕ್ಕಿಂಗ್‌ ಹಣ ಪಾವತಿಸಲು ಗೂಗುಲ್‌ ಪೇ ವಿವರ ಕೇಳಿದ ಕೆಲವೇ ನಿಮಿಷಗಳಲ್ಲಿ ಅಪರಿಚಿತ ನಂಬರ್‌ನಿಂದ ಮತ್ತೂಂದು ಸಂದೇಶ ಬಂದಿದೆ. ಗೂಗುಲ್‌ ಪೇ ಮೂಲಕ ಮಾಧವಿ ಅವರ ನಂಬರ್‌ಗೆ 10 ಸಾವಿರ ರೂ. ರವಾನೆ ಆಗಿರುವ ಸ್ಕ್ರೀನ್‌ ಪ್ರತಿ ಕಳುಹಿಸಿ, ಸಾವಿರದ ಬದಲು ತಪ್ಪಿ 10 ಸಾವಿರ ರೂ. ಕಳುಹಿಸಿದ್ದು ದಯವಿಟ್ಟು 9 ಸಾವಿರ ರೂ. ಮರಳಿಸುವಂತೆ ವಿನಂತಿಸಲಾಗಿತ್ತು. ಸ್ಕ್ರೀನ್‌ ಪ್ರತಿ ನೋಡಿ ನಂಬಿದ ಮಾಧವಿ ರೈ ಇದು ನಿಜವೆಂದು ನಂಬಿ ಕಳುಹಿಸುತ್ತೇನೆ ಎಂದಿದ್ದಾರೆ. ಆಗ ಅತ್ತ ಕಡೆಯಿಂದ ಸ್ಕ್ಯಾನರ್‌ ಕೋಡ್‌ ಕಳಿಸಿದ್ದು ಅದರ ಮೂಲಕ ಮಾಧವಿ ರೈ 9 ಸಾವಿರ ರೂ. ಕಳುಹಿಸಿದ್ದಾರೆ.

ಮತ್ತೆ ಹಣಕ್ಕೆ ಬೇಡಿಕೆ
ಕೆಲವು ಹೊತ್ತಿನ ಬಳಿಕ ಮತ್ತೂಂದು ಸಂದೇಶ ಬಂದಿದ್ದು ತಪ್ಪಿ 18,500 ರೂ. ಹಣ ನಿಮ್ಮ ಖಾತೆಗೆ ಜಮೆ ಆಗಿದ್ದು ಮರಳಿ ನೀಡುವಂತೆ ತಿಳಿಸಲಾಗಿತ್ತು. ಇದರಿಂದ ಅನುಮಾನಗೊಂಡ ಮಾಧವಿ ರೈ ಅವರು ಖಾತೆ ಪರಿಶೀಲಿಸಿದಾಗ ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದಿದೆ.

ಟಾಪ್ ನ್ಯೂಸ್

Cyclone ಬಾಂಗ್ಲಾ ಕರಾವಳಿಗೆ ರೆಮಲ್‌; ಧಾರಾಕಾರ ಮಳೆ,ತಾಸಿಗೆ 130 ಕಿ.ಮೀ.ವೇಗದಲ್ಲಿ ಚಂಡಮಾರುತ

Cyclone ಬಾಂಗ್ಲಾ ಕರಾವಳಿಗೆ ರೆಮಲ್‌; ಧಾರಾಕಾರ ಮಳೆ,ತಾಸಿಗೆ 130 ಕಿ.ಮೀ.ವೇಗದಲ್ಲಿ ಚಂಡಮಾರುತ

ಕರಾವಳಿಯಲ್ಲಿ ಸಾಧಾರಣ ಮಳೆ; ಇಂದು “ಎಲ್ಲೋ ಅಲರ್ಟ್‌’ಕರಾವಳಿಯಲ್ಲಿ ಸಾಧಾರಣ ಮಳೆ; ಇಂದು “ಎಲ್ಲೋ ಅಲರ್ಟ್‌’

Rain ಕರಾವಳಿಯಲ್ಲಿ ಸಾಧಾರಣ ಮಳೆ; ಇಂದು “ಎಲ್ಲೋ ಅಲರ್ಟ್‌’

ಸರಣಿ ರಜೆ ಶಾಲಾ ಮಕ್ಕಳ ಬೇಸಗೆ ರಜೆ ಮುಕ್ತಾಯ; ಕರಾವಳಿಯ ದೇವಸ್ಥಾನಗಳಲ್ಲಿ ಭಕ್ತಸ್ತೋಮ

ಸರಣಿ ರಜೆ ಶಾಲಾ ಮಕ್ಕಳ ಬೇಸಗೆ ರಜೆ ಮುಕ್ತಾಯ; ಕರಾವಳಿಯ ದೇವಸ್ಥಾನಗಳಲ್ಲಿ ಭಕ್ತಸ್ತೋಮ

ಚರಂಡಿಗೆ ಆಟೋ ಬಿದ್ದು ಚಾಲಕ ಸಾವು ಪ್ರಕರಣ; ತಾತ್ಕಾಲಿಕ ಮುಂಜಾಗ್ರತೆ ಕ್ರಮ

ಚರಂಡಿಗೆ ಆಟೋ ಬಿದ್ದು ಚಾಲಕ ಸಾವು ಪ್ರಕರಣ; ತಾತ್ಕಾಲಿಕ ಮುಂಜಾಗ್ರತೆ ಕ್ರಮ

rahul gandhi

Adani ಗಾಗಿ ಕೆಲಸ ಮಾಡುವಂತೆ ಮೋದಿಗೆ ಬಹುಶಃ ದೇವರು ಹೇಳಿರಬೇಕು: ರಾಹುಲ್‌

Manipal ಆರೋಗ್ಯ, ಶಿಕ್ಷಣಕ್ಕೆ ಮಾಹೆ ಸದಾ ಬೆಂಬಲ; ಡಾ| ಎಚ್‌.ಎಸ್‌. ಬಲ್ಲಾಳ್‌

Manipal ಆರೋಗ್ಯ, ಶಿಕ್ಷಣಕ್ಕೆ ಮಾಹೆ ಸದಾ ಬೆಂಬಲ; ಡಾ| ಎಚ್‌.ಎಸ್‌. ಬಲ್ಲಾಳ್‌

ನೈಋತ್ಯ ಶಿಕ್ಷಕರ, ಪದವೀಧರರ ಕ್ಷೇತ್ರ; ಕಾಂಗ್ರೆಸ್‌ ಗೆಲುವು ಖಚಿತ: ಸಲೀಂ

ನೈಋತ್ಯ ಶಿಕ್ಷಕರ, ಪದವೀಧರರ ಕ್ಷೇತ್ರ; ಕಾಂಗ್ರೆಸ್‌ ಗೆಲುವು ಖಚಿತ: ಸಲೀಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ujire: ವಿದ್ಯಾರ್ಥಿಯ ಖಾತೆಯಿಂದ 3.14 ಲಕ್ಷ ರೂ. ನಗದು ಅಪಹರಣ

Ujire: ವಿದ್ಯಾರ್ಥಿಯ ಖಾತೆಯಿಂದ 3.14 ಲಕ್ಷ ರೂ. ನಗದು ಅಪಹರಣ

6-vitla

Vitla: ಬೀಗ ಹಾಕಿದ್ದ ಮನೆಯಲ್ಲಿ ಕಳ್ಳರ ಕರಾಮತ್ತು; ಡಿ.ವಿ.ಆರ್ ಕೂಡಾ ಕದ್ದೊಯ್ದರು

Dharmasthala ಹತ್ತನಾವಧಿ ಉತ್ಸವ; ಯಕ್ಷಗಾನ ಮೇಳದ ವಾರ್ಷಿಕ ತಿರುಗಾಟಕ್ಕೆ ಮಂಗಳ

Dharmasthala ಹತ್ತನಾವಧಿ ಉತ್ಸವ; ಯಕ್ಷಗಾನ ಮೇಳದ ವಾರ್ಷಿಕ ತಿರುಗಾಟಕ್ಕೆ ಮಂಗಳ

Uppinangady: ಸಮುದಾಯ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯ

Uppinangady: ಸಮುದಾಯ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯ

Belthangady: ಬಂಗೇರ ಕುಟುಂಬಸ್ಥರಿಂದ ಸಿಎಂ, ಡಿಸಿಎಂ ಭೇಟಿ – ಕೃತಜ್ಞತೆ ಸಲ್ಲಿಕೆ  

Belthangady: ಬಂಗೇರ ಕುಟುಂಬಸ್ಥರಿಂದ ಸಿಎಂ, ಡಿಸಿಎಂ ಭೇಟಿ – ಕೃತಜ್ಞತೆ ಸಲ್ಲಿಕೆ  

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

Vimana 2

Bird hit; ಲೇಹ್‌ಗೆ ಹೊರಟಿದ್ದ ವಿಮಾನಕ್ಕೆ ಹಕ್ಕಿ ಢಿಕ್ಕಿ: ದಿಲ್ಲಿಗೆ ವಾಪಸ್‌

Cyclone ಬಾಂಗ್ಲಾ ಕರಾವಳಿಗೆ ರೆಮಲ್‌; ಧಾರಾಕಾರ ಮಳೆ,ತಾಸಿಗೆ 130 ಕಿ.ಮೀ.ವೇಗದಲ್ಲಿ ಚಂಡಮಾರುತ

Cyclone ಬಾಂಗ್ಲಾ ಕರಾವಳಿಗೆ ರೆಮಲ್‌; ಧಾರಾಕಾರ ಮಳೆ,ತಾಸಿಗೆ 130 ಕಿ.ಮೀ.ವೇಗದಲ್ಲಿ ಚಂಡಮಾರುತ

Donald-Trumph

US ಬೈಡೆನ್‌ ಕೆಟ್ಟ ಅಧ್ಯಕ್ಷ ಎಂದ ಟ್ರಂಪ್‌ಗೆ ಜನರಿಂದ ಛೀಮಾರಿ

supreem

NDA ಗೆದ್ದ ಬಳಿಕ ಕೊಲಿಜಿಯಂ ವ್ಯವಸ್ಥೆ ರದ್ದು: ಉಪೇಂದ್ರ ಕುಶ್ವಾಹ

ಕರಾವಳಿಯಲ್ಲಿ ಸಾಧಾರಣ ಮಳೆ; ಇಂದು “ಎಲ್ಲೋ ಅಲರ್ಟ್‌’ಕರಾವಳಿಯಲ್ಲಿ ಸಾಧಾರಣ ಮಳೆ; ಇಂದು “ಎಲ್ಲೋ ಅಲರ್ಟ್‌’

Rain ಕರಾವಳಿಯಲ್ಲಿ ಸಾಧಾರಣ ಮಳೆ; ಇಂದು “ಎಲ್ಲೋ ಅಲರ್ಟ್‌’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.