ಸುನಾದದಲ್ಲಿ ಒಎಸ್‌ಟಿ ಗಾನವೈಭವ


Team Udayavani, Mar 17, 2017, 3:50 AM IST

17-KALA-3.jpg

ಸಹಸ್ರ ಜನರಲ್ಲಿ ಒಬ್ಬ ಕಲಾಕಾರನಾಗುತ್ತಾನೆ. ಸಹಸ್ರ ಕಲಾವಿದರಲ್ಲಿ ಒಬ್ಬ ಮೌಲ್ಯಪೂರ್ಣ ಕಲಾಕಾರನಾಗುತ್ತಾನೆ. ಇಂತಹ ಮೌಲ್ಯವಂತ ಕಲಾವಿದನ ಸೃಷ್ಟಿಯಲ್ಲಿ ಹಾಗೂ ಅವನ ಸಂಗೀತವನ್ನು ಬೆಳೆಸಿ ಪೋಷಿಸುವ ನಿಟ್ಟಿನಲ್ಲಿ ಸುನಾದ ಸಂಗೀತ ಕಲಾ ಶಾಲೆಯು ಅವಿರತ ಶ್ರಮಿಸುತ್ತಿದೆ. ಸುನಾದದ ಸಂಚಾಲಕರಾದ ವಿ| ಕಾಂಚನ ಎ. ಈಶ್ವರ ಭಟ್‌, ಬೆಳೆಯುತ್ತಿರುವ ಯುವ ಪ್ರತಿಭೆಗಳಿಗೆ ವೇದಿಕೆಯ ಅಗತ್ಯ ಮನಗಂಡು ತಮ್ಮ ನೇತೃತ್ವದಲ್ಲಿ ಅದನ್ನು ಸೃಷ್ಟಿಸಿದುದು ಇಂದು ಸುನಾದ ಸಂಗೀತೋತ್ಸವಕ್ಕೆ ಭದ್ರ ಬುನಾದಿಯಾಗಿದೆ. ಸುನಾದದ ಸುಳ್ಯ ಶಾಖೆಯ ಸಂಗೀತೋತ್ಸವವು ಈಚೆಗೆ ಸುಳ್ಯದ ಯುವಜನ ಸಂಯುಕ್ತ ಮಂಡಳಿಯ ವಠಾರದಲ್ಲಿ ನಡೆಯಿತು. 

ಆ ದಿನದ ಪ್ರಧಾನ ಕಛೇರಿಯನ್ನು ಅಂತಾರಾಷ್ಟ್ರೀಯ ಖ್ಯಾತಿಯ ಮೇರು ಕಲಾವಿದರಾದ ವಿ| ಒ. ಎಸ್‌. ತ್ಯಾಗರಾಜನ್‌ ನಡೆಸಿಕೊಟ್ಟರು. ವಯಲಿನ್‌ನಲ್ಲಿ ವಿ| ವಿಠಲ ರಾಮಮೂರ್ತಿ, ಮೃದಂಗದಲ್ಲಿ ವಿ| ಕಾಂಚನ ಎ. ಈಶ್ವರ ಭಟ್‌, ಘಟಂನಲ್ಲಿ ವಿ| ಶ್ರೀಶೈಲ ಬೆಂಗಳೂರು, ಮೋರ್ಸಿಂಗ್‌ನಲ್ಲಿ ವಿ| ಪಯ್ಯನ್ನೂರ್‌ ಗೋವಿಂದ ಪ್ರಸಾದ್‌ ಕೂಡಿದ್ದ ಘನ ಕಛೇರಿಯಾಗಿತ್ತು ಇದು.  

ತ್ಯಾಗರಾಜರ ಘನರಾಗ ಪಂಚರತ್ನ ಕೃತಿಗಳಲ್ಲಿ ಒಂದಾದ ಆರಭಿ ರಾಗದ ಸಾಧಿಂಚನೆ ಕೃತಿಯಿಂದ ಕಛೇರಿಯನ್ನು ಆರಂಭಿಸಿದ ಕಲಾವಿದರು, ಪಂತುವರಾಳಿ ರಾಗದ ಚುಟುಕಾದ ಆಲಾಪನೆಯೊಂದಿಗೆ ರೂಪಕ ತಾಳದ ನಿನ್ನೇ ನೆರನಮ್ಮಿ ನಾನು ರಾಮ ಎಂಬ ಕೃತಿಯನ್ನು ನೆರವಲ್‌ ಹಾಗೂ ಚುರುಕಾದ ಸ್ವರ ಪ್ರಸ್ತಾರದೊಂದಿಗೆ ಪ್ರಸ್ತುತಪಡಿಸಿದರು. ಅನಂತರ ಹಂಸನಾದದ ಪ್ರಸಿದ್ಧ ಕೃತಿ ಬಂಟುರೀತಿಯು ದ್ರುತ ಕಾಲ ಪ್ರಮಾಣದಲ್ಲಿ ನೆರವಲನ್ನೊಳಗೊಂಡು ಮನೋಜ್ಞವಾಗಿ ಮೂಡಿಬಂತು. ಕಲ್ಯಾಣಿಯ ಸುಂದರವಾದ ಆಲಾಪನೆಯೊಂದಿಗೆ ಭಕ್ತಿ ಪ್ರಧಾನವಾಗಿ ನಂಬಿ ಕೆಟ್ಟವರಿಲ್ಲವೋ ಕೃತಿಯನ್ನು ನಿರೂಪಿಸಿದ ಪರಿ ಘನತೆಯಿಂದ ಕೂಡಿತ್ತು. ತದನಂತರ ಸಾಲಗ ಭೈರವಿಯ ಪದವಿನೀ ಸದ್ಭಕ್ತಿ, ಬಿಲಹರಿ ರಾಗದ ಖಂಡಛಾಪುವಿನ ಪರಿದಾನ ಮಿಚ್ಚಿತೇ ಸುಂದರವಾದ ಸ್ವರ ಪ್ರಸ್ತಾರದ ಜೋಡಣೆಯಿಂದ ಕೇಳುಗರನ್ನೂ ಚುರುಕಾಗಿಸಿ ದವು. ಮೈಸೂರು ವಾಸುದೇವಾಚಾರ್ಯರ ಹಿಂದೋಳ ರಾಗದ ಪ್ರಸಿದ್ಧ ರಚನೆಯಾದ ಮಾಮವತು ಶ್ರೀ ಕೃತಿಯು ಸರ್ವಲಘು ಸ್ವರ ಪ್ರಸ್ತಾರದ ಪೋಷಣೆಯೊಂದಿಗೆ ಮನಸ್ಸಿಗೆ ಹಿತ ನೀಡಿತು. 

ಕಲಾವಿದರು ಕಛೇರಿಯ ಪ್ರಧಾನ ಕೃತಿಯಾಗಿ ಕಾಂಭೋಜಿಯ ವಿಳಂಬ ಕಾಲದ ಓ ರಂಗಶಾಯಿಯನ್ನು ವಿದ್ವತ್‌ಪೂರ್ಣವಾಗಿ ಪ್ರಸ್ತುತ ಪಡಿಸಿದರು. ರಾಗದ ಆಲಾಪನೆಯು ಬಹಳ ಗಾಂಭೀರ್ಯದಿಂದ ಕೂಡಿದ್ದು, ಕಾಂಭೋಜಿಯ ಒಳ-ಹೊರಹುಗಳನ್ನು ಸ್ಪಷ್ಟವಾಗಿ ಅಭಿವ್ಯಕ್ತಿಗೊಳಿಸಿದುದು ಕಲಾವಿದರ ಅನುಭವ ಹಾಗೂ ಕಲಾಪ್ರೌಢಿಮೆಗೆ ಹಿಡಿದ ಕೈಗನ್ನಡಿ. ಭೂಲೋಕ ವೈಕುಂಠ ಎಂಬಲ್ಲಿನ ನೆರವಲ್‌ ಹಾಗೂ ಸ್ವರಗಳು ಲೀಲಾಜಾಲವಾಗಿ ಹೊರಹೊಮ್ಮಿದವು. ವಯಲಿನ್‌ನಲ್ಲಿ ಅಷ್ಟೇ ಸಮರ್ಥವಾಗಿ ನಿರ್ವಹಿಸಿದ ವಿ| ವಿಠಲ ರಾಮಮೂರ್ತಿಯವರು ಬಹಳ ಉತ್ತಮವಾದ ಸಾಥಿಯಾಗಿ ಹೊರ ಹೊಮ್ಮಿದರು. 

ಸುಂದರವಾದ ಲಯ ವಿನ್ಯಾಸದೊಂದಿಗೆ ತಮ್ಮ ನಾದಮಯ ನುಡಿಸಾಣಿಕೆಯಿಂದ ಕಛೇರಿಯನ್ನು ಉತ್ಕೃಷ್ಟತೆಗೆ ಕೊಂಡೊಯ್ದ ಕೀರ್ತಿಯು ಮೂರೂ ಲಯ ಕಲಾವಿದರುಗಳಿಗೆ ಸಲ್ಲುತ್ತದೆ. ಕಛೇರಿಗೆ ಪೂರಕವಾಗಿ ಮೃದಂಗದಲ್ಲಿ ವಿ| ಕಾಂಚನ ಎ ಈಶ್ವರ ಭಟ್‌, ಘಟಂನಲ್ಲಿ ವಿ| ಶ್ರೀಶೈಲ ಹಾಗೂ ಮೋರ್ಸಿಂಗ್‌ನಲ್ಲಿ ವಿ| ಪಯ್ಯನ್ನೂರ್‌ ಗೋವಿಂದ ಪ್ರಸಾದ್‌ ಅವರ ತನಿ ಆವರ್ತನವು ಕೇಳುಗರ ಮನಸ್ಸಿನಲ್ಲಿ ಹೊಸ ಸಂಚಲನವನ್ನುಂಟುಮಾಡಿತು. ಅನಂತರ ಹಂಸಾನಂದಿಯ ತಿರುಪತಿ ವೆಂಕಟರಮಣ, ಎಂ. ಡಿ. ರಾಮನಾಥನ್‌ ರಚನೆ, ಭಾಗೇಶ್ರೀ ರಾಗದ ಸಾಗರ ಶಯನ ಭಾವಪೂರ್ಣವಾಗಿ ನಿರೂಪಿತವಾಯಿತು. ಸದಾ ಎನ್ನ ಹೃದಯದಲ್ಲಿ ದೇವರ ನಾಮವು ಕೇಳುಗರಲ್ಲಿ ಶರಣಾಗತ ಭಾವವನ್ನು ಮೂಡಿಸಿತು. 

ಇದಕ್ಕೆ ಮುನ್ನ ವಿ| ಕಾಂಚನ ಎ. ಈಶ್ವರ ಭಟ್‌ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಗುರು ವಂದನೆಯ ಬಳಿಕ ಸುನಾದದ ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ನಡೆಯಿತು. ಶಂಕರನಾರಾಯಣ ದೇವ ಕಾರ್ಯಕ್ರಮ ನಿರೂಪಿಸಿದರು. 

ಕರ್ನಾಟಕ ಶಾಸ್ತ್ರೀಯ ಸಂಗೀತದ ಕಂಪನ್ನು ಇಂತಹ ಕಾರ್ಯಕ್ರಮಗಳ ಮೂಲಕ ಸುತ್ತಮುತ್ತಲಿನ ಊರುಗಳಿಗೆ ಪಸರಿಸುವುದರ ಜತೆಗೆ ಉತ್ತಮ ಕೇಳುಗರನ್ನು ಒಗ್ಗೂಡಿಸಿ, ಹಲವಾರು ವರ್ಷಗಳಿಂದ ಕಲಾಸೇವೆಯನ್ನು  ನಿರಂತರವಾಗಿ ಮಾಡುತ್ತಾ ಬರುತ್ತಿರುವ ಸುನಾದ ಮತ್ತು ಅದರ ರೂವಾರಿ ವಿ| ಕಾಂಚನ ಎ ಈಶ್ವರ ಭಟ್‌ ಅವರು ಅಭಿನಂದನಾರ್ಹರು.

ಶಿಲ್ಪಾ ಸಿ. ಎಚ್‌.

ಟಾಪ್ ನ್ಯೂಸ್

yogi-2

Congress ಪಕ್ಷದಲ್ಲಿ ಔರಂಗಜೇಬನ ಆತ್ಮ ಸೇರಿಕೊಂಡಿದೆ: ಸಿಎಂ ಯೋಗಿ ವಾಗ್ದಾಳಿ

1-qewwqeqqw

RSS ಕೂಡ ನಕಲಿ ಎಂದು ನಾಳೆ ಮೋದಿ ಹೇಳಬಹುದು : ಉದ್ಧವ್ ಠಾಕ್ರೆ ಕಿಡಿ

Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

drowned

Vedganga ನದಿಯಲ್ಲಿ ಮುಳುಗಿ ನಾಲ್ವರು ಮೃತ್ಯು:ಇಬ್ಬರು ಬೆಳಗಾವಿಯವರು

Priyanka Gandhi

Election; ಪ್ರಧಾನಿ ಮೋದಿ ಯಾಕೆ ಮಂಗಳಸೂತ್ರ,ಧರ್ಮದ ಮೇಲೆ ಮತ ಕೇಳುತ್ತಾರೆ: ಪ್ರಿಯಾಂಕಾ ಗಾಂಧಿ

raghu bhat

Congress ಗಾಡ್ ಫಾದರ್ ಸಂಸ್ಕೃತಿ ಬಿಜೆಪಿಗೆ ಬಂದಿದೆ: ರಘುಪತಿ ಭಟ್

1-asasa

Cat ರಕ್ಷಣೆಗೆ ಭಾರೀ ಕಾರ್ಯಾಚರಣೆ ; ಕೊನೆಗೆ ಆಗಿದ್ದೆ ಬೇರೆ!: ವೈರಲ್ ವಿಡಿಯೋ ನೋಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

yogi-2

Congress ಪಕ್ಷದಲ್ಲಿ ಔರಂಗಜೇಬನ ಆತ್ಮ ಸೇರಿಕೊಂಡಿದೆ: ಸಿಎಂ ಯೋಗಿ ವಾಗ್ದಾಳಿ

1-qewwqeqqw

RSS ಕೂಡ ನಕಲಿ ಎಂದು ನಾಳೆ ಮೋದಿ ಹೇಳಬಹುದು : ಉದ್ಧವ್ ಠಾಕ್ರೆ ಕಿಡಿ

Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

1-wqewqewe

Ramanagara; ಅಪ್ರಾಪ್ತ ಮಕ್ಕಳ ಮೈಯನ್ನು ಕಾದ ಕಬ್ಬಿಣದಿಂದ ಸುಟ್ಟ ಮದ್ಯವ್ಯಸನಿ ತಂದೆ

drowned

Vedganga ನದಿಯಲ್ಲಿ ಮುಳುಗಿ ನಾಲ್ವರು ಮೃತ್ಯು:ಇಬ್ಬರು ಬೆಳಗಾವಿಯವರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.