ಉತ್ತರ ಕರ್ನಾಟಕದಲ್ಲಿ ಉತ್ತಮ,ಕರಾವಳಿಯಲ್ಲಿ ಕಡಿಮೆ ಮಳೆ
Team Udayavani, Jul 10, 2017, 3:00 AM IST
ಬೆಂಗಳೂರು: ರಾಜ್ಯದ ಉತ್ತರ ಒಳನಾಡಿನಲ್ಲಿ ಭಾನುವಾರ ಉತ್ತಮ ಮಳೆಯಾಗಿದ್ದು, ಇನ್ನೂ ಎರಡು-ಮೂರು ದಿನಗಳು ಈ ಭಾಗದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.ಕರಾವಳಿ ಭಾಗದಲ್ಲಿ ಮಳೆಯ ಪ್ರಮಾಣ ತಗ್ಗಿದ್ದು ಸಾಧಾರಣ ಮಳೆ ಬೀಳತೊಡಗಿದೆ.
ರಾಯಚೂರು, ಕಲಬುರಗಿ, ಬಾಗಲಕೋಟೆ, ವಿಜಯಪುರ, ಕೊಪ್ಪಳದಲ್ಲಿ ಮಳೆ ಅಬ್ಬರಿಸಿದೆ. ಉತ್ತರದ ಇತರ ಜಿಲ್ಲೆಗಳಲ್ಲಿ ಸಾಧಾರಣೆ ಮಳೆಯಾಗಿದೆ. ಕರಾವಳಿಯಲ್ಲಿ ಕೂಡ ಮಳೆ ಮುಂದುವರಿದಿದ್ದು, ಗರಿಷ್ಠ 30 ಮಿ.ಮೀ. ಮಳೆಯಾಗಿದೆ. ಸಂಜೆವರೆಗೂ ಬಾಗಲಕೋಟೆಯಲ್ಲಿ ಅತ್ಯಧಿಕ 65.5 ಮಿ.ಮೀ. ಮಳೆ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್ಎನ್ಡಿಎಂಸಿ) ತಿಳಿಸಿದೆ.
ದಕ್ಷಿಣ ಒಳನಾಡಿನಲ್ಲಿ ಮಳೆ ಕಡಿಮೆಯಾಗಿದ್ದರಿಂದ ಜಲಾಶಯಗಳ ಒಳಹರಿವು ತಗ್ಗಿದೆ. ಪ್ರಮುಖ ಜಲಾಶಯಗಳಾದ ಲಿಂಗನಮಕ್ಕಿ, ಸೂಪಾ, ಕೆಆರ್ಎಸ್, ಕಬಿನಿ, ಭದ್ರಾದಲ್ಲಿ ಒಳಹರಿವು ಕನಿಷ್ಠ 7ರಿಂದ ಗರಿಷ್ಠ 19 ಸಾವಿರ ಕ್ಯುಸೆಕ್ ಇದೆ. ಕಳೆದ ವಾರ 45ರಿಂದ 50 ಸಾವಿರ ಕ್ಯುಸೆಕ್ ಒಳಹರಿವು ಇತ್ತು.
ಎಲ್ಲೆಲ್ಲಿ ಎಷ್ಟು ಮಳೆ?
ಬಾಗಲಕೋಟೆ 65.5, ರಾಯಚೂರು 51, ಕೊಪ್ಪಳ 47.2, ವಿಜಯಪುರ 27, ಕಲಬುರಗಿ 45.5, ಬೆಳಗಾವಿ 27.5, ಗದಗ 14, ಧಾರವಾಡ 17, ಹಾವೇರಿ 6.5, ತುಮಕೂರು 20.3, ಉಡುಪಿ 29.7, ಉತ್ತರ ಕನ್ನಡ 29.5, ಚಿಕ್ಕಮಗಳೂರು 46.5, ಶಿವಮೊಗ್ಗ 8.5, ಹಾಸನ 12.5, ಮೈಸೂರು 6.5 ಮಿ.ಮೀ. ಮಳೆಯಾಗಿದೆ ಎಂದು ಕೆಎಸ್ಎನ್ಡಿಎಂಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಪೊಲೀಸ್ ಕಸ್ಟಡಿಯಲ್ಲಿದ್ದ ಅರೋಪಿ ಸಾವು: ಭಾರೀ ಹಿಂಸಾಚಾರ
Heavy rain ಮುಂದುವರಿದ ಮಳೆಯಬ್ಬರ: ಸಿಡಿಲಿಗೆ ಒಂದು ಬಲಿ
Prajwal Revanna ವಿರುದ್ಧ ಕ್ರಮಕ್ಕೆ ಜೋಷಿ ಒತ್ತಾಯಿಸಿದ್ದರಾ?: ಪ್ರಿಯಾಂಕ್ ಖರ್ಗೆ
PSI Exam ರಾಜ್ಯದ 402 ಪಿಎಸ್ಐ ಹುದ್ದೆಗಳಿಗೆ ನೇಮಕಾತಿ: ಸೆಪ್ಟಂಬರ್ನಲ್ಲಿ ಪರೀಕ್ಷೆ
Prajwal Revanna Case ವೀಡಿಯೋ ಹಂಚಿದವರು ಜಾಮೀನಿಗಾಗಿ ಹೈಕೋರ್ಟ್ಗೆ