ಗೋಲ್ಕೊಂಡಾ ಕೋಟೆಗೆ ಇವಾಂಕಾ ಟ್ರಂಪ್‌ ಭೇಟಿ


Team Udayavani, Nov 30, 2017, 7:05 AM IST

evanka.jpg

ಹೈದರಾಬಾದ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪುತ್ರಿ ಇವಾಂಕಾ ಟ್ರಂಪ್‌ ಭಾರತ ಭೇಟಿಯ ಎರಡನೇ ದಿನ ಜಾಗತಿಕ ಉದ್ಯಮಶೀಲತೆ ಶೃಂಗದಲ್ಲಿ ಭಾಗವಹಿಸಿದ ನಂತರ ಗೋಲ್ಕೊಂಡಾ ಕೋಟೆಗೆ ಭೇಟಿ ನೀಡಿದರು. ಆದರೆ ಭದ್ರತಾ ಕಾರಣಗಳಿಂದ ಚಾರ್‌ಮಿನಾರ್‌ ಮತ್ತು ಲಾಡ್‌ ಬಜಾರ್‌ ಭೇಟಿ ರದ್ದುಗೊಳಿಸಿದರು. ಸಮ್ಮೇಳನದಲ್ಲಿ ಭಾಗವಹಿಸಿದ ನಂತರ ಭೋಜನ ಸವಿದು ಮಧ್ಯಾಹ್ನ 3 ಗಂಟೆಗೆ ಗೋಲ್ಕೊಂಡಾ ಕೋಟೆಗೆ ಆಗಮಿಸಿದ ಇವಾಂಕಾ ಜತೆಗೆ, 17 ಬೆಂಗಾವಲು ಕಾರುಗಳಿದ್ದವು. ಸುಮಾರು 45 ನಿಮಿಷಗಳ ಕಾಲ ಇವಾಂಕಾ ಕೋಟೆ ವೀಕ್ಷಿಸಿದರು. ಈ ಭಾಗದಲ್ಲಿ ಬೆಳಗ್ಗಿನಿಂದಲೇ ಭದ್ರತೆ ಬಿಗಿಗೊಳಿಸಲಾಗಿತ್ತು. ಕೋಟೆಯ ಉದ್ಯಾನದಲ್ಲೇ ಇವಾಂಕಾ ಭೋಜನ ಕೂಟ ನಡೆಸುವ ಯೋಜನೆ ಇತ್ತಾ ದರೂ, ನಿಗದಿತ ಅವಧಿಗೂ ಮುನ್ನವೇ ತೆರಳ ಬೇಕಾಗಿದ್ದ ಕಾರಣ ರದ್ದುಗೊಳಿಸಲಾಯಿತು.

ಎರಡನೇ ದಿನವೂ ಉದ್ಯಮಶೀಲತೆ ಸಮ್ಮೇಳನದಲ್ಲಿ ಭಾಗವಹಿಸಿದ ಇವಾಂಕಾ, ಮಹಿಳಾ ಉದ್ಯಮಶೀಲತೆಯ ಮಹತ್ವದ ಬಗ್ಗೆ ಮಾತನಾಡಿದರು. ಮಹಿಳೆಯರ ಉದ್ಯಮಶೀಲತೆಗೆ ತಂತ್ರಜ್ಞಾನ ಅತ್ಯಂತ ಮಹತ್ವದ್ದಾಗಿದೆ. ತಂತ್ರಜ್ಞಾನವು ಹೊಸ ವಹಿವಾಟುಗಳನ್ನು ನಡೆಸಲು ಸಾಕಷ್ಟು ಅವ ಕಾಶಗಳನ್ನು ಒದಗಿಸಿದೆ ಎಂದು ಹೇಳಿದರು.
ತಂದೆಯ ಮೆಚ್ಚುಗೆ: ಸಮ್ಮೇಳನದಲ್ಲಿ ಭಾಗ ವಹಿಸಿ ಯಶಸ್ಸುಗೊಳಿಸಿದ್ದಕ್ಕೆ ಡೊನಾಲ್ಡ್‌ ಟ್ರಂಪ್‌ ಪುತ್ರಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿದ ಟ್ರಂಪ್‌ ಮಹಿಳಾ, ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುತ್ತಿರು ವುದು ಉತ್ತಮ ಪ್ರಯತ್ನ ಎಂದಿದ್ದಾರೆ.

ಚಂದ್ರಬಾಬು ನಾಯ್ಡು ಗೈರು: ಜಾಗತಿಕ ಉದ್ಯಮಶೀಲತೆ ಶೃಂಗವನ್ನು ಆರಂಭಿಸಿ ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಗೈರು ಇಡೀ ಸಮ್ಮೇಳನದಲ್ಲಿ ಎದ್ದು ಕಾಣುತ್ತಿತ್ತು. ಆಂಧ್ರ ಪ್ರದೇಶ ವಿಭಜನೆ ನಂತರ ಹೊಸ ರಾಜಧಾನಿ ಅಮರಾವತಿ ನಿರ್ಮಾಣದಲ್ಲಿ ತೊಡಗಿಸಿ ಕೊಂಡಿರುವ ನಾಯ್ಡುರನ್ನು ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್‌ ಆಹ್ವಾನಿಸಿದ್ದ ರಾದರೂ ಅವರು ಹಾಜರಾಗಿಲ್ಲ.

ಟ್ರಂಪ್‌, ಟಿಲ್ಲರ್‌ಸನ್‌ ಶೀತಲ ಸಮರ
ವಿದೇಶಾಂಗ ಸಚಿವ ರೆಕ್ಸ್‌ ಟಿಲ್ಲರ್‌ಸನ್‌ ಹಾಗೂ ಟ್ರಂಪ್‌ ಮಧ್ಯೆ ನಡೆಯುತ್ತಿರುವ ತಿಕ್ಕಾಟ ಇದೀಗ ಇನ್ನೊಂದು ಹಂತ ತಲುಪಿದ್ದು, ಇವಾಂಕಾ ಜತೆಗೆ ವಿದೇಶಾಂಗ ಸಚಿವಾಲಯದ ಪ್ರಮುಖ ಅಧಿಕಾರಿಗಳು ಭೇಟಿ ನೀಡದೇ ಇರುವುದು ಅಮೆರಿಕದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಇದು ಇವಾಂಕಾ ಜತೆಗೆ ಭಾರತಕ್ಕೂ ಮಾಡಿದ ಅವಮಾನ ಎಂದು ಹೇಳಲಾಗುತ್ತಿದೆ. ಟ್ರಂಪ್‌ ನೀತಿಗಳು ಹಾಗೂ ನಿರ್ಧಾರಗಳನ್ನು ಮೊದಲಿನಿಂದಲೂ ವಿರೋಧಿಸುತ್ತಿರುವ ಟಿಲ್ಲರ್‌ಸನ್‌ ಉದ್ದೇಶಪೂರ್ವಕವಾಗಿ ಹಿರಿಯ ಅಧಿಕಾರಿಗಳಿಗೆ ಇವಾಂಕಾ ಜತೆ ತೆರಳದಂತೆ ನಿರ್ಬಂಧ ಹೇರಿದ್ದಾರೆ ಎನ್ನಲಾಗಿದೆ.

ಟಾಪ್ ನ್ಯೂಸ್

T20 World Cup: ಅಮೆರಿಕಕ್ಕೆ ಹೊರಟ ರೋಹಿತ್ ಬಳಗ; ವಿಮಾನ ತಪ್ಪಿಸಿಕೊಂಡ ಕೊಹ್ಲಿ, ಹಾರ್ದಿಕ್

T20 World Cup: ಅಮೆರಿಕಕ್ಕೆ ಹೊರಟ ರೋಹಿತ್ ಬಳಗ; ವಿಮಾನ ತಪ್ಪಿಸಿಕೊಂಡ ಕೊಹ್ಲಿ, ಹಾರ್ದಿಕ್

Shaheen Afridi rejected as vice-captain of Pakistan team; But PCB says otherwise

Pakistan ತಂಡದ ಉಪ ನಾಯಕತ್ವ ತಿರಸ್ಕರಿಸಿದ ಶಾಹೀನ್ ಅಫ್ರಿದಿ; ಆದರೆ ಪಿಸಿಬಿ ಹೇಳುವುದೇ ಬೇರೆ

Delhi ಮಕ್ಕಳ ಆಸ್ಪತ್ರೆಯಲ್ಲಿ ಅಗ್ನಿ ಅವಘಡ; ಆರು ಮಕ್ಕಳು ಸಾವು

Delhi ಮಕ್ಕಳ ಆಸ್ಪತ್ರೆಯಲ್ಲಿ ಅಗ್ನಿ ಅವಘಡ; ಆರು ಮಕ್ಕಳು ಸಾವು

Hassan; ಟ್ರಕ್ ಕಾರು ನಡುವೆ ಭೀಕರ ಅಪಘಾತ; ಸ್ಥಳದಲ್ಲೇ ಕೊನೆಯುಸಿರೆಳೆದ ಐವರು

Hassan; ಟ್ರಕ್ ಕಾರು ನಡುವೆ ಭೀಕರ ಅಪಘಾತ; ಸ್ಥಳದಲ್ಲೇ ಕೊನೆಯುಸಿರೆಳೆದ ಆರು ಜನರು

Udupi Gang war; Did the failure of the beat system lead to the incident?

Udupi Gang war; ಬೀಟ್‌ ವ್ಯವಸ್ಥೆ ಲೋಪವೇ ಘಟನೆಗೆ ಕಾರಣವಾಯಿತೇ?

SUNಕನ್ನಡ ಜಾನಪದ ಚಿತ್ರಕ್ಕೆ ಲಾ ಸಿನೆಫ್ ಗೌರವ

ಕನ್ನಡ ಜಾನಪದ ಚಿತ್ರಕ್ಕೆ ಲಾ ಸಿನೆಫ್ ಗೌರವ

Malpe ಪುನರುಜ್ಜೀವನಕ್ಕಾಗಿ ಕಾಯುತ್ತಿದೆ ತೊಟ್ಟಂ ಕುಮೆ ಕೆರೆ

Malpe ಪುನರುಜ್ಜೀವನಕ್ಕಾಗಿ ಕಾಯುತ್ತಿದೆ ತೊಟ್ಟಂ ಕುಮೆ ಕೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Delhi ಮಕ್ಕಳ ಆಸ್ಪತ್ರೆಯಲ್ಲಿ ಅಗ್ನಿ ಅವಘಡ; ಆರು ಮಕ್ಕಳು ಸಾವು

Delhi ಮಕ್ಕಳ ಆಸ್ಪತ್ರೆಯಲ್ಲಿ ಅಗ್ನಿ ಅವಘಡ; ಆರು ಮಕ್ಕಳು ಸಾವು

Highest Temperature; ರಾಜಸ್ಥಾನದ ಫ‌ಲೋಡಿಯಲ್ಲಿ 50 ಡಿಗ್ರಿಗೆ ಏರಿದ ತಾಪ!

Highest Temperature; ರಾಜಸ್ಥಾನದ ಫ‌ಲೋಡಿಯಲ್ಲಿ 50 ಡಿಗ್ರಿಗೆ ಏರಿದ ತಾಪ!

Election Commission; 5 ಹಂತದ ಚುನಾವಣೆ ಕ್ಷೇತ್ರವಾರು ಮತದಾನ ಮಾಹಿತಿ ಬಹಿರಂಗ

Election Commission; 5 ಹಂತದ ಚುನಾವಣೆ ಕ್ಷೇತ್ರವಾರು ಮತದಾನ ಮಾಹಿತಿ ಬಹಿರಂಗ

Madhya Pradesh ಧ್ವನಿ ಬದಲಿಸುವ ಆ್ಯಪ್‌ ಬಳಸಿ 7 ಮಂದಿ ಮೇಲೆ ಅತ್ಯಾಚಾರ

Madhya Pradesh ಧ್ವನಿ ಬದಲಿಸುವ ಆ್ಯಪ್‌ ಬಳಸಿ 7 ಮಂದಿ ಮೇಲೆ ಅತ್ಯಾಚಾರ

Mount ಎವರೆಸ್ಟ್‌ನಲ್ಲಿ ಈವರೆಗೆ 7 ಸಾವು

Mount ಎವರೆಸ್ಟ್‌ನಲ್ಲಿ ಈವರೆಗೆ 7 ಸಾವು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

T20 World Cup: ಅಮೆರಿಕಕ್ಕೆ ಹೊರಟ ರೋಹಿತ್ ಬಳಗ; ವಿಮಾನ ತಪ್ಪಿಸಿಕೊಂಡ ಕೊಹ್ಲಿ, ಹಾರ್ದಿಕ್

T20 World Cup: ಅಮೆರಿಕಕ್ಕೆ ಹೊರಟ ರೋಹಿತ್ ಬಳಗ; ವಿಮಾನ ತಪ್ಪಿಸಿಕೊಂಡ ಕೊಹ್ಲಿ, ಹಾರ್ದಿಕ್

Shaheen Afridi rejected as vice-captain of Pakistan team; But PCB says otherwise

Pakistan ತಂಡದ ಉಪ ನಾಯಕತ್ವ ತಿರಸ್ಕರಿಸಿದ ಶಾಹೀನ್ ಅಫ್ರಿದಿ; ಆದರೆ ಪಿಸಿಬಿ ಹೇಳುವುದೇ ಬೇರೆ

Delhi ಮಕ್ಕಳ ಆಸ್ಪತ್ರೆಯಲ್ಲಿ ಅಗ್ನಿ ಅವಘಡ; ಆರು ಮಕ್ಕಳು ಸಾವು

Delhi ಮಕ್ಕಳ ಆಸ್ಪತ್ರೆಯಲ್ಲಿ ಅಗ್ನಿ ಅವಘಡ; ಆರು ಮಕ್ಕಳು ಸಾವು

Hassan; ಟ್ರಕ್ ಕಾರು ನಡುವೆ ಭೀಕರ ಅಪಘಾತ; ಸ್ಥಳದಲ್ಲೇ ಕೊನೆಯುಸಿರೆಳೆದ ಐವರು

Hassan; ಟ್ರಕ್ ಕಾರು ನಡುವೆ ಭೀಕರ ಅಪಘಾತ; ಸ್ಥಳದಲ್ಲೇ ಕೊನೆಯುಸಿರೆಳೆದ ಆರು ಜನರು

Udupi Gang war; Did the failure of the beat system lead to the incident?

Udupi Gang war; ಬೀಟ್‌ ವ್ಯವಸ್ಥೆ ಲೋಪವೇ ಘಟನೆಗೆ ಕಾರಣವಾಯಿತೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.