ಜ. 21: ಅಭಿನಂದನ ಕಾರ್ಯಕ್ರಮ: ಬಹುಮುಖ ಪ್ರತಿಭೆಯ ಗಣೇಶ್‌ ಕೊಲೆಕಾಡಿ


Team Udayavani, Jan 19, 2018, 3:09 PM IST

19-63.jpg

ಪ್ರಸಂಗಕರ್ತ,ನಾಟಕ ರಚನೆಕಾರ, ಪತ್ರಕರ್ತ, ಜಾನಪದ ಅಧ್ಯಯನಕಾರ, ಸಾಹಿತಿ, ತಾಳಮದ್ದಲೆ ಅರ್ಥಧಾರಿ, ಸಂಘಟಕ ಹೀಗೆ ಬಹುಮುಖೀ ವ್ಯಕ್ತಿತ್ವವನ್ನು ಹೊಂದಿರುವವರು ಗಣೇಶ ಕೊಲೆಕಾಡಿ.ಪ್ರಸಂಗಕರ್ತರಾಗಿ ಅವರು ಯಕ್ಷಗಾನ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದ್ದಾರೆ. ಅವರು ರಚಿಸಿದ ಯಕ್ಷಗಾನ ಕೃತಿಗಳಲ್ಲಿ ಕಾಣುವ ಸೊÌàಪಜ್ಞತೆಗೆ ಮೂಲಕಾರಣ ಅವರು ಕಲೆಯನ್ನು ಕಾಣುವ ಆರೋಗ್ಯಪೂರ್ಣ ನೋಟ ಮತ್ತು ಸ್ವತ್ಛ ಆಲೋಚನೆ. ಶಬರ ಕುಮಾರದಲ್ಲಿ ವಿಶಿಷ್ಟ ತಾಳ ವೈವಿಧ್ಯ ಮತ್ತು ಛಂದೋ ವೈವಿಧ್ಯಗಳನ್ನು ಕಾಣಬಹುದಾಗಿದೆ .ಯಕ್ಷಗಾನದಲ್ಲಿ ಬಳಸದೇ ಇದ್ದ ಸಪ್ತ ತಾಳಾಂತರ್ಗತವಾದ ತಾಳಗಳಾದತಿಶ್ರ ಮಠ್ಯತಾಳ (ತಿಲಘು ದ್ರುತ ತಿ.ಲಘು),ಖಂಡ ಝಂಪೆ ( ಖ. ಲಘು ಅನುದ್ರುತ ದ್ರುತ)ಸಂಕೀರ್ಣ ರೂಪಕ 

( ದ್ರುತ ಸಂಕೀರ್ಣ ಲಘು),ಖಂಡ ತ್ರಿಪುಟ ( ಖಂಡ ಲಘು ದ್ರುತ ದ್ರುತ ),ಅಲ್ಲದೇ ನವೀನ ಛಂದೋವೈವಿದ್ಯಗಳಾದ 
ಕಲ್ಯಾಣಿ ಸಂಕೀರ್ಣರೂಪಕತಾಳ,ತೋಡಿ ಖಂಡ ತ್ರಿಪುಟತಾಳ,ನೀಲಾಂಬರಿ ತಿಶ್ರ ತ್ರಿಪುಟತಾಳ, ಪೂರ್ವಿಕಲ್ಯಾಣಿ ಚತುರಶ್ರ ಮಠ್ಯತಾಳ, ಕೇದಾರಗೌಳ ತ್ರಿವುಡೆ, ಹಂಸಧ್ವನಿ ತ್ರಿವುಡೆ ಮತ್ತು,ಶುದ್ದಸಾವೇರಿ ಚೌ ತಾಳವನ್ನು ಕಾಣಬಹುದು. ಹೊಸ ತಾಳ ಬಂಧಗಳಿಗೆ ಮದ್ದಳೆಯ ತತ್ಕಾರ ಇಲ್ಲದಿರುವ ಕಾರಣ ಅವರೇ ಮದ್ದಳೆಯ ತತ್ಕಾರವನ್ನು , ಬಿಡಿತ ಮತ್ತು ಮುಕ್ತಾಯಗಳ ಸೊಲ್ಕಟ್ಟುಗಳನ್ನು ಯಕ್ಷಗಾನೀಯವಾಗಿ ರೂಪಿಸಿದ್ದಾರೆ. ಕುಂಜಾರುಗಿರಿ ಕ್ಷೇತ್ರ ಮಹಾತ್ಮೆ, ಕುಂಜಿರಾಯ ಮಹಾತ್ಮೆ, ಪುನರೂರು ಕ್ಷೇತ್ರ ಮಹಾತ್ಮೆ, ಶ್ರೀ ದೇವಿ ಬನಶಂಕರಿ ಮಹಾತ್ಮೆ, ಸಮರ ಸೌಗಂಧಿಕೆ, ಶಿವಭಕ್ತ ಪುರುಷಾಮೃಗ, ಮೈಥಿಲಿ ವಿಜಯ ,ಮಲೆತ ಮಾಣಿಕ ಸೇರಿ 34 ತುಳು ಮತ್ತು ಕನ್ನಡ ಪ್ರಸಂಗಗಳು, ಭಕ್ತ ಸಿರಿಯಾಳ, ಹುಚ್ಚ, ಪ್ರತಿಹತ, ಭಾಷೆದ ಫ‌ಲ, ಮಸಣದ ಮಲ್ಲಿಗೆ ಸೇರಿ ಆರು ತುಳು ಮತ್ತು ಕನ್ನಡ ನಾಟಕಗಳನ್ನು ರಚಿಸಿದ್ದಾರೆ. ಕಲಾಮಾತೆಗೆ ಸಲ್ಲಿಸಿದ ಸೇವೆಗಾಗಿ ಅವರಿಗೆ ಹಲವು ಪ್ರಶಸ್ತಿ, ಬಿರುದು ಮತ್ತು ಸಮ್ಮಾನಗಳು ಸಂದಿವೆ. ತಂದೆ ಕೃಷ್ಣಪ್ಪ ಹಾಗು ತಾಯಿ ಪದ್ಮಾವತಿಯವರಿಗೆ ಯಕ್ಷಗಾನದ ಹಿನ್ನೆಲೆಯಿಲ್ಲದಿದ್ದರೂ ಕೊಲೆಕಾಡಿ ಬೆಳೆದ ಪರಿಸರ ಮಾತ್ರ ಸಮೃದ್ದವಾಗಿ ಯಕ್ಷಗಾನದ ಗಂಧವನ್ನು ಧರಿಸಿತ್ತು. ಈ ಗಂಧವೇ ಅವರಲ್ಲಿ ಕಲೆಯ ಅಭಿರುಚಿಯನ್ನು ಬೆಳೆಸಿತು. 

ಜ. 21ರಂದು ಕುಂಜಾರಗಿರಿ ಶಾಸ್ತಾವು ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಮುಲ್ಕಿ ಇಲ್ಲಿ ಗಣೇಶ ಕೊಲೆಕಾಡಿಯವರ ಅಭಿಮಾನಿಗಳು ಮತ್ತು ಶಿಷ್ಯರು ಸೇರಿಕೊಂಡು ಅವರ ಕಲಾಸೇವೆ ಮತ್ತು ಸಾರಸ್ವತ ಸೇವೆ ಅನುಲಕ್ಷಿಸಿ ಅಭಿನಂದನಾ ಕಾರ್ಯಕ್ರಮವನ್ನು ನಡೆಸಲಿದ್ದಾರೆ. ಅಂದು ದಿನಪೂರ್ತಿ ಯಕ್ಷಗಾನದ ವಿವಿಧ ಮುಖಗಳ ಕಾರ್ಯಕ್ರಮವೂ ಇದೆ. 

ಕೃಷ್ಣಪ್ರಕಾಶ ಉಳಿತ್ತಾಯ

ಟಾಪ್ ನ್ಯೂಸ್

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

aravind

Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

4-

Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

3-kmc

Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ

ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

5

Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ

aravind

Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.