12 ಲಕ್ಷ ರೂ. ಇಲಿಗೆ ಬಲಿ : ATMನಲ್ಲಿ ನೋಟುಗಳ ಚಿಂದಿ ಮಾಡಿದ ಮೂಷಿಕ
Team Udayavani, Jun 20, 2018, 8:05 AM IST
ಹೊಸದಿಲ್ಲಿ: ಅಸ್ಸಾಂನ ಎಟಿಎಂವೊಂದರಲ್ಲಿ ಬರೋಬ್ಬರಿ 12 ಲಕ್ಷ ರೂ.ಗಳು ಇಲಿಗೆ ಆಹುತಿಯಾದ ಘಟನೆಯು ಟ್ವಿಟರ್, ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹಲವರು ನೋಟುಗಳಿಗೆ ಎಟಿಎಂನಲ್ಲಿ ಇಂಥ ಸ್ಥಿತಿ ಬಂದಿದ್ದು ನೋಡಿ ಆಘಾತ ವ್ಯಕ್ತಪಡಿಸಿದರೆ, ಇನ್ನು ಕೆಲವರು ಹಲವು ಮೀಮ್ ಗಳು, ಜೋಕ್ಗಳನ್ನು ಮಾಡಿ ನಗು ಉಕ್ಕಿಸಿದ್ದಾರೆ.
ಈ ವಿಲಕ್ಷಣ ಘಟನೆ ನಡೆದದ್ದು ಅಸ್ಸಾಂನ ತಿನ್ಸುಕಿಯ ಲೈಪುಲಿ ಪ್ರದೇಶದ ಎಸ್ಬಿಐ ಎಟಿಎಂನಲ್ಲಿ. ಈ ಎಟಿಎಂ ಮೇ 20ರಂದು ದುರಸ್ತಿಗೀಡಾಗಿತ್ತು. ಮರುದಿನವೇ ಖಾಸಗಿ ಭದ್ರತಾ ಸಂಸ್ಥೆ 500 ರೂ. ಮತ್ತು 2000 ರೂ. ನೋಟುಗಳ 29.48 ಲಕ್ಷ ರೂ.ಗಳನ್ನು ಎಟಿಎಂನಲ್ಲಿ ಜಮೆ ಮಾಡಿತ್ತು. ಜೂ.11ರಂದು ತಂತ್ರಜ್ಞರು ಎಟಿಎಂ ಸರಿಪಡಿಸಲು ಬಂದಾಗ ಅಚ್ಚರಿ ಕಾದಿತ್ತು. ಎಟಿಎಂ ಯಂತ್ರದೊಳಗೆ ನೋಟುಗಳು ಹರಿದು ಚಿಂದಿ ಚಿಂದಿಯಾಗಿದ್ದವು. ಸುಮಾರು 12.38 ಲಕ್ಷ ರೂ.ಗಳು ನಾಶವಾಗಿದ್ದರೆ, 17.10 ಲಕ್ಷ ರೂ.ಗಳು ಬಚಾವಾಗಿದ್ದವು. ಹರಿದ ನೋಟುಗಳ ರಾಶಿಯಲ್ಲಿ ಸತ್ತ ಇಲಿಯೂ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವಿಚಾರ ಸುದ್ದಿಯಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಜೋಕುಗಳ ಸುರಿಮಳೆಯಾಗಿದ್ದು, ‘ಎಟಿಎಂ ಯಂತ್ರದ ಮೇಲೆ ಇಲಿಯಿಂದ ಸರ್ಜಿಕಲ್ ದಾಳಿ’, ‘ಇಲಿ ಎಟಿಎಂಗೆ ಹೋದರೆ ಇದೇ ಆಗುವುದು’, ‘ನೋಟು ಅಪಮೌಲ್ಯ ಮಾಡಿದ ಇಲಿ’ ಎಂಬೆಲ್ಲ ಟ್ವೀಟ್ ಗಳು ಕಾಣಿಸಿಕೊಂಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿನಿಮಾ ಶೈಲಿಯಲ್ಲಿ ಚಲಿಸುತ್ತಿದ್ದ ಟ್ರಕ್ನಿಂದ ಕಳ್ಳತನ… ವಿಡಿಯೋ ನೋಡಿ ಬೆಚ್ಚಿಬಿದ್ದ ಜನ
Panaji: ಪತ್ನಿಯನ್ನು ಕೊಂದ ಪತಿ; ಬಂಧನ
Google Map Follow ಮಾಡಿ ಹೊಳೆಗೆ ಧುಮುಕಿದ ಕಾರು… ಅದೃಷ್ಟವಶಾತ್ ಪ್ರವಾಸಿಗರು ಪಾರು
Alert: ದೇವರನಾಡಿನಲ್ಲಿ ಮಳೆಯ ಅಬ್ಬರಕ್ಕೆ 11 ಮೃತ್ಯು , 7 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್
Cops Suspended: ಪೋರ್ಶೆ ಕಾರು ಅಪಘಾತ ಪ್ರಕರಣ: ಕರ್ತವ್ಯಲೋಪ ಎಸಗಿದ ಪೊಲೀಸರಿಬ್ಬರ ಅಮಾನತು
MUST WATCH
ಹೊಸ ಸೇರ್ಪಡೆ
Bollywood: ಮತ್ತೆ ನಿರ್ದೇಶನದತ್ತ ಕರಣ್ ಜೋಹರ್: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chitradurga; ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲ: ವಿಜಯೇಂದ್ರ
Kannada Cinema; ನೆರಳಿಲ್ಲದ ದಾರಿಯಲ್ಲಿ ‘ನಸಾಬ್’
ಕಾರ್ತಿ ಸಿನಿ ಕೆರಿಯರ್ನಲ್ಲೇ ಅತ್ಯಂತ ದುಬಾರಿ ಸಿನಿಮಾವಾಗಿರಲಿದೆ ʼಸರ್ದಾರ್ -2ʼ
Davanagere; ಕಾಂಗ್ರೆಸ್ ಆಡಳಿತದಲ್ಲಿ ಶಿಕ್ಷಣ ಕ್ಷೇತ್ರ ಕಲುಷಿತಗೊಂಡಿದೆ: ಬಿ.ವೈ. ವಿಜಯೇಂದ್ರ