ಪೇಜಾವರ ಶ್ರೀಗೆ ನಾಯಕತ್ವ ಕೊಡಿ
Team Udayavani, Jul 24, 2018, 11:14 AM IST
ಉಡುಪಿ: ಅಯೋಧ್ಯೆ- ಬಾಬ್ರಿ ಮಸೀದಿ, ರಾಮಜನ್ಮ ಭೂಮಿ ಕುರಿತ ತೀರ್ಪು ಸದ್ಯದಲ್ಲಿಯೇ ಬರಲಿರುವ ನೆಲೆಯಲ್ಲಿ ಉಭಯ ಸಮುದಾಯದವರನ್ನು ಸಮಭಾವದಿಂದ ಕಾಣುತ್ತಿರುವ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ಸಂತ ಮಹಾಸಭಾ, ಸಮನ್ವಯ ಸಮಿತಿಗಳ ನೇತೃತ್ವ ವಹಿಸಬೇಕು ಎಂದು ಶ್ರೀ ಪೇಜಾವರ ಸ್ವಾಮೀಜಿಗಳ ಮುಸ್ಲಿಂ ಅಭಿಮಾನಿಗಳ ಬಳಗದ ಅಧ್ಯಕ್ಷ ಅನ್ಸರ್ ಅಹಮ್ಮದ್ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಆಗ್ರಹಿಸಿದ್ದಾರೆ.
ಹಲವು ದಶಕಗಳಿಂದ ಉಭಯ ಸಮುದಾಯಗಳ ನಡುವೆ ಇರುವ ವಿವಾದ ಇತ್ಯರ್ಥಗೊಂಡಿಲ್ಲ. ಇದೀಗ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ಅಂತಿಮ ಹಂತ ತಲುಪಿದ್ದು, ಯಾವುದೇ ಸಂದರ್ಭದಲ್ಲಿ ತೀರ್ಪು ಹೊರಬೀಳುವ ಸಾಧ್ಯತೆಯಿದೆ ಎಂದರು.
ವಿವಾದಿತ ವಿಚಾರದಲ್ಲಿ ನಡೆದ ಹೋರಾಟದಲ್ಲಿ ಪೇಜಾವರ ಶ್ರೀಗಳು ಪ್ರಾರಂಭದಿಂದಲೂ ಮುಂಚೂಣಿಯಲ್ಲಿದ್ದವರು. ಅಲ್ಲದೆ ಸ್ಥಳೀಯ ಮಟ್ಟದಲ್ಲಿ ಅಯೋಧ್ಯೆಯ ವಿವಾದಿತ ಸಮಸ್ಯೆ ಬಗ್ಗೆ ಉಭಯ ಸಮುದಾಯದ ಮನವೊಲಿಸಿ ಸಾಮರಸ್ಯದ ಮೂಲಕ ಸಮಸ್ಯೆ ಬಗೆಹರಿಸಲು ಪ್ರಥಮ ಹೆಜ್ಜೆ ಇಟ್ಟಿದ್ದರು. ಸಂತ ಸಮ್ಮೇಳನ, ಇಫ್ತಾರ್ ಕೂಟಗಳಿಂದ ಪರಧರ್ಮ ಸಹಿಷ್ಣುತೆ ಹೊಂದಿರುವ ಶ್ರೀಗಳಿಗೆ ನಾಯಕತ್ವ ನೀಡಬೇಕೆಂದು ಅವರು ಆಗ್ರಹಿಸಿದರು.
ಬಳಗದ ಸದಸ್ಯರಾದ ಮಹಮ್ಮದ್ ಆರೀಫ್, ಕೋಯಾ ಅಲಿ ಅಹಮ್ಮದ್, ಎಂ.ಎಸ್. ಅಬ್ದುಲ್ ರೆಹಮಾನ್ ಪತ್ರಿಕಾಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shirva: ಸ್ನಾನಕ್ಕೆಂದು ಹೋದವನಿಗೆ ಸಿಡಿಲಾಘಾತ; ಕಾಲೇಜು ವಿದ್ಯಾರ್ಥಿ ಬಲಿ
Fraud: ವಾಟ್ಸಾಪ್ ಲಿಂಕ್ಗೆ ಕ್ಲಿಕ್; ಬ್ಯಾಕ್ ಖಾತೆಯಿಂದ 82,200 ರೂಪಾಯಿ ಮಾಯ
SMVITM; ಬೆಳೆ ರೋಗದ ವೆಬ್ ಅಪ್ಲಿಕೇಶನ್ ಅಭಿವೃದ್ಧಿ
Kutyaru Muldottu: ವರ್ಷಕ್ಕೊಮ್ಮೆ ತಂಪೆರೆಯುವ ನಾಗಬನದಲ್ಲಿ ವಾರ್ಷಿಕ ಪೂಜೆ
24 ಗಂಟೆಯೊಳಗೆ ರಘುಪತಿ ಭಟ್ ಕಣದಿಂದ ಹಿಂದೆ ಸರಿಯದಿದ್ದರೆ ಶಿಸ್ತು ಕ್ರಮ: ಸುನಿಲ್ ಕುಮಾರ್
MUST WATCH
ಹೊಸ ಸೇರ್ಪಡೆ
Mysore; ಲೋಕಸಭೆ ಮುಗಿದ ಕೂಡಲೇ ಜಿಪಂ, ತಾಪಂ, ಬಿಬಿಎಂಪಿ ಚುನಾವಣೆ: ಸಿದ್ದರಾಮಯ್ಯ
ಮೂರೂ ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ
Congress ಸದಸ್ಯತ್ವವೇ ಇಲ್ಲದಿದ್ದರೂ ಉಚ್ಛಾಟನೆ ಮಾಡಿದ್ದಾರೆ: ಲೋಕೇಶ್ ತಾಳಿಕಟ್ಟೆ
Form 17c: ಚುನಾವಣ ಆಯೋಗಕ್ಕೆ ನಿರ್ದೇಶನ ನೀಡಲು ಸುಪ್ರೀಂ ನಕಾರ, ಆದೇಶದಲ್ಲೇನಿದೆ?
Vijayanagara: ದಶಕಗಳ ಬಳಿಕ ಹುಲಿಕೆರೆ ಕೆರೆಗೆ ನೀರು… ಗ್ರಾಮಸ್ಥರಿಂದ ಗಂಗಾ ಪೂಜೆ