ರಸ್ತೆಯಲ್ಲಿ ಹೊಂಡ; ಬಸ್‌ ವ್ಯವಸ್ಥೆಯೂ ಇಲ್ಲ


Team Udayavani, Oct 25, 2018, 10:58 AM IST

25-october-4.gif

ಅಜ್ಜಾವರ : ರಸ್ತೆ ಹೊಂಡ ಬಿದ್ದಿದೆ, ಬಸ್‌ ವ್ಯವಸ್ಥೆಯೂ ಇಲ್ಲ. ಹೀಗಾಗಿ, ಮೂಲ ಸೌಕರ್ಯಗಳಿಂದ ವಂಚಿತವಾಗಿರುವ ಅಜ್ಜಾವರ ಗ್ರಾಮದ ಮುಳ್ಯದ ನಿವಾಸಿಗಳು ಪರದಾಡುವಂತಾಗಿದೆ. ಈ ಭಾಗದಲ್ಲಿ ಅಂದಾಜು 250ರಿಂದ 300 ಮನೆಗಳಿವೆ. ಹೆಚ್ಚುಕಡಿಮೆ 2,000ದಷ್ಟು ಜನಸಂಖ್ಯೆ ಹೊಂದಿದೆ. ಹೀಗಿದ್ದರೂ ಈ ಭಾಗದಲ್ಲಿ ಸರಕಾರಿ ಬಸ್‌ ಓಡಾಡುವುದಿಲ್ಲ.

ಹೊಂಡ- ಗುಂಡಿಗಳ ರಸ್ತೆ
ಸುಮಾರು 5 ಕಿ.ಮೀ. ಉದ್ದವಿರುವ ಸುಳ್ಯ- ಮುಳ್ಯ ರಸ್ತೆ ನಿರ್ಮಾಣವಾಗಿ ಹತ್ತು ವರ್ಷಗಳಿಗೂ ಹೆಚ್ಚು ಕಾಲ ಸಂದಿದೆ. ಕಾಂತಮಂಗಲದಿಂದ ಮುಳ್ಯಕ್ಕೆ ಹೋಗುವ ರಸ್ತೆಗಳು ಸಂಪೂರ್ಣ ಶಿಥಿಲಗೊಂಡಿವೆ. ದಾರಿಯುದ್ದಕ್ಕೂ ದೊಡ್ಡ ಗುಂಡಿಗಳು ನಿರ್ಮಾಣವಾಗಿವೆ. ದುರಸ್ತಿ ಮಾಡದಿರುವುದೇ ರಸ್ತೆ ಇಷ್ಟು ಪ್ರಮಾಣದಲ್ಲಿ ಹಾಳಾಗಲು ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಗ್ರಾಮಸ್ಥರಿಂದ ರಸ್ತೆಗೆ ತೇಪೆ
ಮುಳ್ಯ ರಸ್ತೆ ತೀರ ಹದೆಗೆಟ್ಟಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ದುರಸ್ತಿಗೆ ಮುಂದಾಗಿಲ್ಲ. ಗ್ರಾಮಸ್ಥರೇ ಶ್ರಮದಾನದ ಮೂಲಕ ರಸ್ತೆ ದುರಸ್ತಿ ಮಾಡಿದ್ದಾರೆ. ರಸ್ತೆಯ ಹೊಂಡಗಳಿಗೆ ಕಾಂಕ್ರೀಟ್‌ ತೇಪೆ ಹಾಕಿದ್ದಾರೆ. ಕೆಲವು ಕಡೆ ಮಣ್ಣು ಹಾಕಿ ಮುಚ್ಚಿದ್ದಾರೆ. ಊರಿನವರೇ ಸಿಮೆಂಟ್‌ ಹಾಗೂ ಜಲ್ಲಿ ವೆಚ್ಚವನ್ನು ಭರಿಸಿದ್ದಾರೆ. ರಸ್ತೆಗಳು ಶಿಥಿಲಗೊಂಡು ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ದ್ವಿಚಕ್ರ ವಾಹನ ಹಾಗೂ ಆಟೋ ಸಂಚಾರಕ್ಕೆ ತೊಂದರೆ ಆಗುತ್ತಿದ್ದ ಕಾರಣ ಅನಿವಾರ್ಯವಾಗಿ ದುರಸ್ತಿ ಮಾಡಬೇಕಾಯಿತು ಎಂದು ಗ್ರಾಮಸ್ಥರು ಹೇಳಿದ್ದಾರೆ.

ಖಾಸಗಿ ವಾಹನಗಳ ಬಳಕೆ
ಸುಳ್ಯ-ಮುಳ್ಯ ಭಾಗದಲ್ಲಿ ಬಸ್‌ ಓಡಾಟವಿಲ್ಲದೆ ಜನರು ಅನಿವಾರ್ಯವಾಗಿ ಆಟೋ ರಿಕ್ಷಾ, ಜೀಪುಗಳನ್ನು ಅವಲಂಬಿಸಿದ್ದಾರೆ. ಪ್ರತಿನಿತ್ಯ ಪ್ರಯಾಣಿಸಲು ದ್ವಿಚಕ್ರ ವಾಹನ, ಆಟೋ ರಿಕ್ಷಾಗಳನ್ನು ಬಳಸುವುದರಿಂದ ಸಂಚಾರ ವೆಚ್ಚ ದುಬಾರಿಯಾಗುತ್ತಿದೆ. ಆಟೋ ರಿಕ್ಷಾಗಳಿಗೆ ಸುಳ್ಯದ ಕಡೆಗೆ ತೆರಳಲು 75ರಿಂದ 80 ರೂ. ಕೊಡಬೇಕು. ರಾತ್ರಿಯಾದರೆ 120ರಿಂದ 150 ರೂ. ಬಾಡಿಗೆ ತೆರಬೇಕು. ಇದು ಸ್ಥಳೀಯರಿಗೆ ಹೊರೆಯಾಗುತ್ತಿದೆ. ಶಾಲೆ, ಕಾಲೇಜಿಗೆ ಹೋಗುವ ಮಕ್ಕಳ ಸ್ಥಿತಿಯೂ ಇದೇ ರೀತಿಯಿದೆ. ಮುಳ್ಯ ಪರಿಸರದಲ್ಲಿ ಯಾವುದೇ ಕಾಲೇಜು ಇಲ್ಲ. ಮಕ್ಕಳು ಸುಳ್ಯಕ್ಕೆ ಸಂಚರಿಸಬೇಕು. ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗುತ್ತಿಲ್ಲ. ಒಂದಾದರೂ ಬಸ್‌ ಓಡಾಡಿದರೆ ಒಳ್ಳೆಯದು ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ಬಸ್ಸುಗಳ ಓಡಾಟವಿಲ್ಲ 
ಮುಳ್ಯದಿಂದ ಸುಳ್ಯಕ್ಕೆ ಸಂಚರಿಸಲು ಯಾವುದೇ ಬಸ್ಸುಗಳಿಲ್ಲ. ಸುಮಾರು 5 ಕಿ.ಮೀ. ದೂರದ ಈ ರಸ್ತೆಯಲ್ಲಿ ಸರಿಯಾದ ವಾಹನಗಳ ಸೌಕರ್ಯವೂ ಇಲ್ಲ. ಒಂದು ವರ್ಷದ ಹಿಂದೆ ಸುಳ್ಯ – ಮುಳ್ಯ- ಅಟ್ಲೂರು ಮಾರ್ಗವಾಗಿ ಖಾಸಗಿ ಬಸ್ಸೊಂದು ಓಡಾಡಲು ಪ್ರಾರಂಭಿಸಿದ್ದರೂ ಒಂದೇ ತಿಂಗಳಲ್ಲಿ ಸ್ಥಗಿತಗೊಂಡಿತು. ಈ ಭಾಗದಲ್ಲಿ ಸರಕಾರಿ ಬಸ್ಸುಗಳ ಸಂಚಾರ ಆರಂಭವಾದರೆ ಅನುಕೂಲ ಎನ್ನುತ್ತಾರೆ ಸ್ಥಳೀಯರು.

ಕಾಂಕ್ರೀಟ್‌ ತೇಪೆ
ರಸ್ತೆ ದುರಸ್ತಿಗೆ ಅಧಿಕಾರಿಗಳು ಇನ್ನೂ ಕ್ರಮ ಕೈಗೊಂಡಿಲ್ಲ. ವಾಹನ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ. ಸದ್ಯಕ್ಕೆ ಊರಿನವರೆಲ್ಲ ಸೇರಿ ರಸ್ತೆಗೆ ಕಾಂಕ್ರೀಟ್‌ ತೇಪೆ ಹಾಕಿದ್ದೇವೆ.
ಸದಾನಂದ,
  ಆಟೋ ಚಾಲಕ

 ವೆಚ್ಚ ಭರಿಸುವುದೇ ಸಮಸ್ಯೆ
ಈ ಭಾಗದ ಜನರು ದಿನ ನಿತ್ಯದ ಕೆಲಸ ಕಾರ್ಯಗಳಿಗೆ ಸುಳ್ಯಕ್ಕೆ ಸಂಚರಿಸುವುದು ಅನಿವಾರ್ಯವಾಗಿದೆ. ಬಸ್ಸುಗಳ ಓಡಾಟವಿಲ್ಲದೆ ಆಟೋ ರಿಕ್ಷಾಗಳನ್ನು ಬಳಸಬೇಕು. ಸಂಚಾರ ವೆಚ್ಚವನ್ನು ಭರಿಸುವುದೇ ದೊಡ್ಡ ಸಮಸ್ಯೆ.
– ಕೃಷ್ಣ,
ಗ್ರಾಮಸ್ಥ

ಶಿವಪ್ರಸಾದ್‌ ಮಣಿಯೂರು

ಟಾಪ್ ನ್ಯೂಸ್

ಪರಿಷತ್‌ ಚುನಾವಣೆ: ಮೊದಲ ದಿನ ಸಲ್ಲಿಕೆಯಾಗದ ನಾಮಪತ್ರ

ಪರಿಷತ್‌ ಚುನಾವಣೆ: ಮೊದಲ ದಿನ ಸಲ್ಲಿಕೆಯಾಗದ ನಾಮಪತ್ರ

ಲೂಟಿ ಸರಕಾರ ಅಂದ್ರೆ ದಾಖಲೆ ಕೇಳುತ್ತಿದ್ದ ಸಿದ್ದು ಈಗ ಏನು ಮಾಡುತ್ತಾರೆ?: ಅಶೋಕ್‌

ಲೂಟಿ ಸರಕಾರ ಅಂದ್ರೆ ದಾಖಲೆ ಕೇಳುತ್ತಿದ್ದ ಸಿದ್ದು ಈಗ ಏನು ಮಾಡುತ್ತಾರೆ?: ಅಶೋಕ್‌

“ಡಿಕೆಶಿ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಸಮ್ಮತಿ ವಾಪಸ್‌: ಕಾನೂನು ಉಲ್ಲಂಘನೆಯಾಗಿಲ್ಲ’

“ಡಿಕೆಶಿ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಸಮ್ಮತಿ ವಾಪಸ್‌: ಕಾನೂನು ಉಲ್ಲಂಘನೆಯಾಗಿಲ್ಲ’

PM Modi ಮೈಸೂರು ಆತಿಥ್ಯದ ವೆಚ್ಚ ರಾಜ್ಯವೇ ಭರಿಸಲಿದೆ: ಈಶ್ವರ ಖಂಡ್ರೆ

Eshwara Khandre ಪ್ರಧಾನಿ ಮೈಸೂರು ಆತಿಥ್ಯದ ವೆಚ್ಚ ರಾಜ್ಯವೇ ಭರಿಸಲಿದೆ

Siddaramaiah ಪುತ್ರ ಸಾಧುಗಳ ಜತೆ ವಿದೇಶಕ್ಕೆ ಹೋಗಿದ್ದರಾ: ಕುಮಾರಸ್ವಾಮಿ ಪ್ರಶ್ನೆSiddaramaiah ಪುತ್ರ ಸಾಧುಗಳ ಜತೆ ವಿದೇಶಕ್ಕೆ ಹೋಗಿದ್ದರಾ: ಕುಮಾರಸ್ವಾಮಿ ಪ್ರಶ್ನೆ

Siddaramaiah ಪುತ್ರ ಸಾಧುಗಳ ಜತೆ ವಿದೇಶಕ್ಕೆ ಹೋಗಿದ್ದರಾ: ಕುಮಾರಸ್ವಾಮಿ ಪ್ರಶ್ನೆ

D. K. Shivakuma ಜೂ.1ರಿಂದ ಕಾಂಗ್ರೆಸ್‌ ಕುಟುಂಬ ಸದಸ್ಯತ್ವ ಅಭಿಯಾನ

D. K. Shivakuma ಜೂ.1ರಿಂದ ಕಾಂಗ್ರೆಸ್‌ ಕುಟುಂಬ ಸದಸ್ಯತ್ವ ಅಭಿಯಾನ

Hunsur ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕುರುಳಿದ ಲಾರಿ; ತಪ್ಪಿದ ಭಾರೀ ಅನಾಹುತ

Hunsur ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕುರುಳಿದ ಲಾರಿ; ತಪ್ಪಿದ ಭಾರೀ ಅನಾಹುತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

ಪರಿಷತ್‌ ಚುನಾವಣೆ: ಮೊದಲ ದಿನ ಸಲ್ಲಿಕೆಯಾಗದ ನಾಮಪತ್ರ

ಪರಿಷತ್‌ ಚುನಾವಣೆ: ಮೊದಲ ದಿನ ಸಲ್ಲಿಕೆಯಾಗದ ನಾಮಪತ್ರ

ಲೂಟಿ ಸರಕಾರ ಅಂದ್ರೆ ದಾಖಲೆ ಕೇಳುತ್ತಿದ್ದ ಸಿದ್ದು ಈಗ ಏನು ಮಾಡುತ್ತಾರೆ?: ಅಶೋಕ್‌

ಲೂಟಿ ಸರಕಾರ ಅಂದ್ರೆ ದಾಖಲೆ ಕೇಳುತ್ತಿದ್ದ ಸಿದ್ದು ಈಗ ಏನು ಮಾಡುತ್ತಾರೆ?: ಅಶೋಕ್‌

“ಡಿಕೆಶಿ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಸಮ್ಮತಿ ವಾಪಸ್‌: ಕಾನೂನು ಉಲ್ಲಂಘನೆಯಾಗಿಲ್ಲ’

“ಡಿಕೆಶಿ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಸಮ್ಮತಿ ವಾಪಸ್‌: ಕಾನೂನು ಉಲ್ಲಂಘನೆಯಾಗಿಲ್ಲ’

PM Modi ಮೈಸೂರು ಆತಿಥ್ಯದ ವೆಚ್ಚ ರಾಜ್ಯವೇ ಭರಿಸಲಿದೆ: ಈಶ್ವರ ಖಂಡ್ರೆ

Eshwara Khandre ಪ್ರಧಾನಿ ಮೈಸೂರು ಆತಿಥ್ಯದ ವೆಚ್ಚ ರಾಜ್ಯವೇ ಭರಿಸಲಿದೆ

Siddaramaiah ಪುತ್ರ ಸಾಧುಗಳ ಜತೆ ವಿದೇಶಕ್ಕೆ ಹೋಗಿದ್ದರಾ: ಕುಮಾರಸ್ವಾಮಿ ಪ್ರಶ್ನೆSiddaramaiah ಪುತ್ರ ಸಾಧುಗಳ ಜತೆ ವಿದೇಶಕ್ಕೆ ಹೋಗಿದ್ದರಾ: ಕುಮಾರಸ್ವಾಮಿ ಪ್ರಶ್ನೆ

Siddaramaiah ಪುತ್ರ ಸಾಧುಗಳ ಜತೆ ವಿದೇಶಕ್ಕೆ ಹೋಗಿದ್ದರಾ: ಕುಮಾರಸ್ವಾಮಿ ಪ್ರಶ್ನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.