ರಂಜಿಸಿದ ಶನೀಶ್ವರ ಮಹಾತ್ಮೆ


Team Udayavani, Mar 1, 2019, 12:30 AM IST

v-7.jpg

ಗುರುಪುರ-ಕೈಕಂಬದಲ್ಲಿ ಇತ್ತೀಚೆಗೆ ಜರಗಿದ “ಯಕ್ಷತರಂಗಿಣಿ’ಯ ಯಕ್ಷ ಸಂಭ್ರಮದಂಗವಾಗಿ ಹನುಮಗಿರಿ ಮೇಳದವರು ಶನೀಶ್ವರ ಮಹಾತ್ಮೆ ಯಕ್ಷಗಾನ ಪ್ರದರ್ಶಿಸಿದರು. ವಿಷ್ಣುವಾಗಿ ಎಂ.ಕೆ.ರಮೇಶ್‌ ಆಚಾರ್ಯ ಮತ್ತು ಪರಮೇಶ್ವರನಾಗಿ ಪೆರ್ಲ ಜಗನ್ನಾಥ ಶೆಟ್ಟಿಯವರದ್ದು ಚಿಕ್ಕ ಪಾತ್ರವಾದರೂ ಚೊಕ್ಕದಾದ ನಿರ್ವಹಣೆ. ಪ್ರಜ್ವಲ್‌ ಕುಮಾರ್‌ ಬೃಹಸ್ಪತಿ ಋಷಿಯಾಗಿ ಮಾತಿನ ವೈಖರಿಯಿಂದ ಮೆಚ್ಚುಗೆಗೆ ಪಾತ್ರರಾದರು. ಶನೀಶ್ವರನಾಗಿ ಪೂರ್ವಾರ್ಧದಲ್ಲಿ ಸದಾಶಿವ ಶೆಟ್ಟಿಗಾರ ಹಾಗೂ ಉತ್ತರಾರ್ಧದಲ್ಲಿ ಶಿವರಾಮ್‌ ಜೋಗಿಯವರ ಗತ್ತು ಗಾಂಭೀರ್ಯದ ಪಾತ್ರ ನಿರ್ವಹಣೆ ಅಮೋಘವಾಗಿತ್ತು. ಜಗದಾಭಿರಾಮ (ಭೃಗುರಾಜ), ಸದಾಶಿವ ಕುಲಾಲ್‌ (ಸತ್ಯಶೇಖರ), ಅಕ್ಷಯ್‌ ಭಟ್‌(ಸತ್ಯವ್ರತ),ಬಂಟ್ವಾಳ ಜಯರಾಮ ಆಚಾರ್ಯ (ದೂತ ಹಾಗೂ ರೈತ) ಪಾತ್ರಕ್ಕೆ ನ್ಯಾಯ ಒದಗಿಸಿದರು. 

ಯಾವುದೇ ಗುಣದ ಪಾತ್ರಕ್ಕೂ ಜೀವ ತುಂಬಬಲ್ಲ ಪೆರ್ಮುದೆ ಜಯಪ್ರಕಾಶ್‌ ಶೆಟ್ಟಿಯವರು ವಿಕ್ರಮಾದಿತ್ಯನ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಅವರ ಅರ್ಥಗಾರಿಕೆ ಕೇಳಲು ಬಹಳ ಸೊಗಸು. ಅಪಾರ ಶಬ್ದ ಭಂಡಾರ ಹೊಂದಿರುವ ಸೀತಾರಾಮ್‌ ಕುಮಾರ್‌ ಮಂತ್ರವಾದಿ, ಕುದುರೆ ವ್ಯಾಪಾರಿ ಹಾಗೂ ನಂದಿ ಶೆಟ್ಟರಾಗಿ ನಗೆಗಡಲಲ್ಲಿ ತೇಲಿಸಿದರು. ದರೋಡೆಕೋರರ ಪೈಪೋಟಿಯ ದಿಗಿಣ ಮುದನೀಡಿತು. ನಂದಿ ಶೆಟ್ಟಿಯ ಮಗಳು ಅಲೋಳಿಕೆಯಾಗಿ ಸಂತೋಷ್‌ ಹಿಲಿಯಾಣ ಸೊಬಗಿನ ನಾಟ್ಯ ಹಾಗೂ ಮೋಹಕ ಮಾತುಗಳಿಂದ ಮನ ಸೆಳೆದರು. ಚಂದ್ರಸೇನ ಮಹಾರಾಜನಾಗಿ ಸುಬ್ರಾಯ ಹೊಳ್ಳ ಮತ್ತು ಮಗಳು ಪದ್ಮಾವತಿಯಾಗಿ ರಕ್ಷಿತ್‌ ಪಡ್ರೆ ತಮಗಿದ್ದ ಸೀಮಿತ ಅವಕಾಶದಲ್ಲೇ ಪ್ರತಿಭೆಯನ್ನು ಮೆರೆದರು. ಕೈಕಾಲು ಕಳೆದುಕೊಂಡು ವ್ಯಥೆಪಡುವ ವಿಕ್ರಮನ ಪಾತ್ರಕ್ಕೆ ಜಯಾನಂದ ಸಂಪಾಜೆ ಜೀವ ತುಂಬಿದರು.ಪದ್ಯಾಣ ಗಣಪತಿ ಭಟ್‌ ಮತ್ತು ರವಿಚಂದ್ರ ಕನ್ನಡಿಕಟ್ಟೆ ಅವರ ಸಂಪ್ರದಾಯಬದ್ಧವಾದ ಭಾಗವತಿಕೆ ಇಡೀ ಪ್ರಸಂಗದ ಹೆಗ್ಗುರುತಾಗಿತ್ತು. 

ನರಹರಿ ರಾವ್‌ ಕೈಕಂಬ 

ಟಾಪ್ ನ್ಯೂಸ್

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

Kerala ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

Kerala ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.