ಭಾದ್ರಪದ ಶುಕ್ಲದ ತದಿಗೆಯಂದು…


Team Udayavani, Aug 28, 2019, 5:00 AM IST

u-14

ಭಾದ್ರಪದ ಮಾಸದಲ್ಲಿ ಭೂಮಿಗೆ ವಿಶೇಷ ಕಳೆ ಬಂದಿರುತ್ತದೆ. ಆಗ ತಾನೇ ಶ್ರಾವಣದ ಕಡೆಯ ಬಿಕ್ಕಳಿಕೆ ಮುಗಿದು, ಅಳಿದುಳಿದ ಹನಿ ನೆಲ ಸೋಕುತ್ತಿರುತ್ತದೆ. ವಾತಾವರಣದ ಆಹ್ಲಾದಕ್ಕೆ ಹಬ್ಬದ ಸಂಭ್ರಮವೂ ಸೇರಿ, ಮನೆ-ಮನಗಳು ಮತ್ತಷ್ಟು ಕಳೆಗಟ್ಟುತ್ತವೆ. ನಿತ್ಯದ ಎಲ್ಲ ಜಂಜಾಟಗಳ ನಡುವೆಯೂ ಜನ, ಗೌರಿ-ಗಣೇಶನನ್ನು ಸ್ವಾಗತಿಸಲು ಸಜ್ಜಾಗುತ್ತಾರೆ. ಅರಿಶಿನದ ಗೌರಿಯನ್ನು ಪೂಜಿಸುವವರು ಕೆಲವರಾದರೆ, ಹಸಿಮಣ್ಣಿನ ಮೂರ್ತಿಯನ್ನು ಪೂಜಿಸುವ ಪದ್ಧತಿ ಕೆಲವರದು. ಪೂಜೆಯ ನಂತರ ಬಾಗಿನ ಕೊಡುವುದು ಹಿಂದಿನಿಂದ ಬಂದ ಸಂಪ್ರದಾಯ. ಜೋಡಿ ಮೊರದಲ್ಲಿ ಆಹಾರ ಪದಾರ್ಥಗಳ ಜೊತೆಗೆ ಮಂಗಳ ದ್ರವ್ಯಗಳನ್ನಿಟ್ಟು ಅರ್ಪಿಸುತ್ತಾರೆ. ಗೌರಿಯನ್ನು ಮನೆ ಮಗಳೆಂದು ಭಾವಿಸಿ, ಪ್ರತಿ ವರ್ಷವೂ ಆಕೆಯನ್ನು ತವರಿಗೆ ಆಹ್ವಾನಿಸಿ ಉಡಿ ತುಂಬುವುದು ಈ ಹಬ್ಬದ ವಿಶೇಷ.

ಆಪ್ತವೆನಿಸಲು ಹಲವು ಕಾರಣ
ಎರಡು ಸಂದರ್ಭಗಳಲ್ಲಿ ಗೌರಿಯನ್ನು ಪ್ರಮುಖವಾಗಿ ಪೂಜಿಸಲಾಗುತ್ತದೆ. ಶ್ರಾವಣದ ಮಂಗಳಗೌರಿ ವ್ರತ ಹಾಗೂ ಭಾದ್ರಪದದ ಸ್ವರ್ಣಗೌರಿವ್ರತ. ಹುಟ್ಟಿದ ಮನೆ ಹಾಗೂ ಕೊಟ್ಟ ಮನೆಗಳ ಭಾವನಾತ್ಮಕ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವುದು ಈ ಹಬ್ಬ.

ಸಾಂಪ್ರದಾಯಿಕ ನೆಲೆಗಟ್ಟಿನಲ್ಲಿಯೇ ಗೌರಿ ಹಬ್ಬವನ್ನು ಆಚರಿಸಿದರೂ, ಈಗ ಹಬ್ಬಕ್ಕೂ ಆಧುನಿಕತೆಯ ಸ್ವರೂಪ ಬಂದಿರುವುದು ಕಾಲಮಹಿಮೆ.

ಜನಪದದ ದೃಷ್ಟಿಯಲ್ಲಿ, ಗೌರಿ-ಗಣೇಶನ ಜೊತೆಗೆ ಶಿವನೂ ಭೂಲೋಕಕ್ಕೆ ಬರುತ್ತಾನೆ. ವರ್ಷಕೊಮ್ಮೆ ಮಾವನ ಮನೆಗೆ ಬರುವ ಅಳಿಯನಿಗೆ, ಮಗಳು ಮೊಮ್ಮಗನಿಗೆ ನೀಡುವ ಪ್ರೀತಿ ಆದರವನ್ನೇ ನೀಡಿ ಸತ್ಕರಿಸುತ್ತಾರೆ.

ಬೇರೆಲ್ಲಾ ಹಬ್ಬಗಳಿಗಿಂತ ಗೌರಿ ಹಬ್ಬ ಆಪ್ತವೆನಿಸುವುದು ಹಲವು ಕಾರಣಗಳಿಗಾಗಿ. ಇದು ದೇವತಾರಾಧನೆಯ ಹಬ್ಬವಾದರೂ, ಇದರ ಮೂಲತಣ್ತೀ ಸಾಂಸ್ಕೃತಿಕ ಹಿನ್ನೆಲೆಯಿಂದ ಕೂಡಿದೆ. ನಮ್ಮೆಲ್ಲರಂತೆ ಸಂಸಾರದ ಒಳ-ಹೊರಗೆ ಗಂಡ ಮಕ್ಕಳೊಡನಾಡುವ ಪಾರ್ವತಿಯ ಹಬ್ಬ ಇದು. ಪರ್ವತರಾಜನ ಮಗಳಾದರೂ ತಾನು ಇಷ್ಟಪಟ್ಟ ಬೂದಿ ಬಡುಕ ಬೋಲಾ ಶಂಕರನನ್ನೇ ಮದುವೆಯಾಗುತ್ತಾಳೆ. ದಾಕ್ಷಾಯಣಿಯಾಗಿ, ತಂದೆ ದಕ್ಷ ಪ್ರಜಾಪತಿಯಿಂದ ಗಂಡನಿಗೆ ಆದ ಅಪಮಾನವನ್ನು ಸಹಿಸಲಾಗದೇ ಚಿತೆಗೆ ಹಾರುವ ಈಕೆ ಪುನರ್ಜನ್ಮದಲ್ಲಿ ಪಾರ್ವತಿಯಾಗುತ್ತಾಳೆ.

ಪುರಾಣದ ಹಿನ್ನೆಲೆ
ಶುಂಭ ನಿಶುಂಭರೆಂಬ ರಾಕ್ಷಸರು, ದೇವತೆಗಳಿಗೆ ಹಾಗೂ ಲೋಕಕ್ಕೆ ಕಂಟಕಪ್ರಾಯರಾಗಿರುತ್ತಾರೆ. ಅವರ ಕಾಟದಿಂದ ಪಾರಾಗಲು ದೇವತೆಗಳೆಲ್ಲರೂ ಸೇರಿ, ದೇವಿಯನ್ನು ಸ್ತುತಿಸುತ್ತಾರೆ. ಆಗ, ಗಂಗಾ ಸ್ನಾನಕ್ಕಾಗಿ ಬಂದ ಪಾರ್ವತಿಯ ಶರೀರದಿಂದ ಅತ್ಯಂತ ರೂಪವತಿಯಾದ ಸ್ತ್ರೀ ಹೊರ ಬರುತ್ತಾಳೆ. ಅವಳು ಪಾರ್ವತಿಯ ಶರೀರಕೋಶದಿಂದ ಹೊರಬಂದವಳಾದ್ದರಿಂದ ಕೌಶಿಕಿ’ ಎಂದು ಕರೆಯಲಾಗುತ್ತದೆ. ಆಗ ಪಾರ್ವತಿಯ ದೇಹ ಕಪ್ಪಾಗಿ ಕಾಣುತ್ತದೆ. ಹಾಗಾಗಿ, ಈಶ್ವರನು ಪಾರ್ವತಿಯನ್ನು ‘ಕಾಳಿ’ (ಕಾಲಿ) ಎಂದು ಕರೆಯುತ್ತಾನೆ. ಮುಂದೆ, ಕಾಳಿಯು ತಪಸ್ಸು ಮಾಡಿ, ಗೌರವರ್ಣವನ್ನು ಪಡೆಯುತ್ತಾಳೆ. ಅವಳೇ ಗೌರಿ ಎಂದು ಮತ್ಸ್ಯಪುರಾಣ ಸಾರುತ್ತದೆ.

ಗೌರಿಯೆಂದ ಕೂಡಲೆ ನಮ್ಮ ಕಣ್ಮುಂದೆ ಬರುವುದು ಮುಗುಳ್ನಗೆಯ ಶಾಂತ ಸುಂದರ ಮುಖ. ಆಕೆ, ಸಮಯ ಬಂದಾಗ ತನ್ನನ್ನು ತಾನು ರಕ್ಷಿಸಿಕೊಳ್ಳಬಲ್ಲ ಚತುರೆ, ತೋಳ್ಬಲವುಳ್ಳ ಸಬಲೆ. ಹಾಗೆಂದೇ ಗೌರಿ ಕಾಳಿಯೂ ಆಗಿ ಅಭಿವ್ಯಕ್ತಗೊಂಡಿದ್ದಾಳೆ. ಇವಳು ಸೌಮ್ಯ ಭಾವದವಳೆಂದು ಕೆಣಕುವಂತಿಲ್ಲ. ಅಂತಃಸತ್ವವುಳ್ಳ ಹೆಣ್ಣುಗಳೂ ಹೀಗೆಯೇ. ಹೂವಿನಂತೆ ಮೃದುವಾಗಿದ್ದರೂ ಅಗತ್ಯ ಬಿದ್ದಾಗ ವಜ್ರದಂತೆ ಕಠೊರವಾಗುತ್ತಾರೆ. ದುಷ್ಟಶಕ್ತಿಗಳು ಇಂದಿಗೂ, ಎಂದೆಂದಿಗೂ ಜಾಗೃತವಾಗಿರುವುದರಿಂದ ಹೆಣ್ಣು ಮಕ್ಕಳು ಗೌರಿಯಂತೆ ಸಬಲರಾಗುವುದು ಅವಶ್ಯಕ. ಗೌರಿ ಸ್ವರೂಪದ ಸಂಕೇತ, ಗುಣಗಳನ್ನು ಅರ್ಥೈಸಿಕೊಂಡು ಆನುಸರಿಸಿದರೆ ಭಾದ್ರಪದ ತದಿಗೆಯ ಆಚರಣೆ ಸಾರ್ಥಕವಾಗುತ್ತದೆ.

– ಡಾ. ಗುರುರಾಜ ಪೋಶೆಟ್ಟಿಹಳ್ಳಿ

ಟಾಪ್ ನ್ಯೂಸ್

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ARMY (2)

ಕಾಶ್ಮೀರದ ಉಧಂಪುರದಲ್ಲಿ ಗ್ರಾಮ ರಕ್ಷಣ ಸಿಬಂದಿ ಹತ್ಯೆ

arrested

ಮಹಾದೇವ್‌ ಆ್ಯಪ್‌ ಕೇಸು: ನಟ ಸಾಹಿಲ್‌ ಖಾನ್‌ ಬಂಧನ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.