ನಮ್ಮೊಳಗಿನ ಮನಃಸಾಕ್ಷಿಯ ವಿಳಾಸ

ಮಠದ ಬೆಳಕು

Team Udayavani, Sep 21, 2019, 5:00 AM IST

u-13

– ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು, ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನ, ಶಿರಸಿ

ಮನಸ್ಸಿನ ಅಂತಃಸಾಕ್ಷಿಗೆ ಅನುಸಾರವಾಗಿ ನಡೆಯುವವನು ಎಂದೂ ಪಾಪಿಯಾಗಲಾರ. ಮನಃಸಾಕ್ಷಿ ಎಂದೂ ತಪ್ಪು ಮಾರ್ಗದರ್ಶನ ಮಾಡುವುದಿಲ್ಲ. ಆದರೆ, ಮನಃಸಾಕ್ಷಿ ಎಂದರೇನು ಎಂಬುದನ್ನು ಸರಿಯಾಗಿ ಅರಿತುಕೊಳ್ಳುವುದು ಅಗತ್ಯ. ತನ್ನ ಮನಸ್ಸಿಗೆ ಬಂದ ಇಚ್ಛೆ- ದ್ವೇಷಗಳನ್ನು ಮನಃಸಾಕ್ಷಿಯೆಂದುಕೊಳ್ಳಬಾರದು. ಮನಸ್ಸಿಗಿಂತಲೂ ಮೇಲಿದೆ, ಮನಸ್ಸಿಗಿಂತ ಬೇರೆಯಾಗಿದೆ ಮನಃಸಾಕ್ಷಿ.

ಸಾಕ್ಷಿ ಎಂದರೇನು, ಎಂಬುದು ಎಲ್ಲರಿಗೂ ಗೊತ್ತು. ಯಾವನು ಜಗಳದಲ್ಲಿ ಭಾಗವಹಿಸದೇ ನೋಡುತ್ತಾನೋ ಅವನೇ ಸಾಕ್ಷಿ. ತಟಸ್ಥವಾಗಿದ್ದುಕೊಂಡು ನೋಡುವವ ಸಾಕ್ಷಿ. ತಪ್ಪು ಕೆಲಸಗಳಲ್ಲಿ ಭಾಗವಹಿಸದೇ ನೋಡುವವನು ಸಾಕ್ಷಿ.

ಮನಸ್ಸಿನಲ್ಲಿ ಇಂಥ ಜಗಳಗಳಿರುತ್ತವೆ. ತಪ್ಪು ಕೆಲಸಗಳೂ ಇರುತ್ತವೆ. ಇವುಗಳನ್ನು ತಟಸ್ಥವಾಗಿದ್ದುಕೊಂಡು ನೋಡುವವ ತಾನು ಮನಃಸಾಕ್ಷಿ. ರಾಗ - ದ್ವೇಷಾದಿ ದೋಷಗಳಿಂದ ಅಶುದ್ಧಗೊಂಡ ಮನಸ್ಸಿನಿಂದ ಬಹುಶಃ ಯಾವ ಪ್ರವೃತ್ತಿಯಲಿ, ಯಾವ ವಿಷಯವೂ ಪವಿತ್ರಗೊಳ್ಳಲು ಸಾಧ್ಯವಿಲ್ಲ. ಶುದ್ಧ ಮನಸ್ಸಿನ ವಿವೇಚನೆಯಿಂದ ಇದು ಸಾಧ್ಯವಿದೆ. ಮನಸ್ಸಿನ ತಪ್ಪು ಒಪ್ಪುಗಳನ್ನು ಒಪ್ಪಿಕೊಳ್ಳದೇ, ನಿರಾಕರಿಸದೇ, ತಟಸ್ಥವಾಗಿದ್ದುಕೊಂಡು ಮನಸ್ಸನ್ನೇ ನೋಡಿಬಿಟ್ಟರೆ, ಮನಸ್ಸಿನ ಪ್ರವೃತ್ತಿಗಳಿಗೆ ಯಾವ ಬೆಂಬಲವೂ ಸಿಗದಂತಾಗಿ ಅದು ಸುಮ್ಮನಾಗಿಬಿಡುತ್ತದೆ. ಮನಸ್ಸು ಯದ್ವಾತದ್ವಾ ಪ್ರವೃತ್ತಿಸಲು ನಮ್ಮ ಬೆಂಬಲವೂ ಕಾರಣ. ಆ ಬೆಂಬಲವನ್ನು ಕೊಡದೇ ಮನಸ್ಸನ್ನು ನೋಡುವುದೇ ಮನಃಸಾಕ್ಷಿ.

ಮನಸ್ಸನ್ನು ನೇರವಾಗಿ ವಿರೋಧಿಸ ಹೊರಟರೆ, ಅದು ಮಕ್ಕಳಂತೆ ಹಠಕ್ಕೆ ಇಳಿಯಬಹುದು. ಮಕ್ಕಳು ಹುಡುಗಾಟ ಮಾಡುತ್ತಿ¨ªಾಗ, ಅದನ್ನು ಹಿರಿಯರು ನೋಡಿ ಸಂತೋಷ ಪಡುತ್ತಿದ್ದರೆ, ಆ ಹುಡುಗಾಟ ಜಾಸ್ತಿಯಾಗುತ್ತದೆ. ಶಾಸ್ತ್ರದಲ್ಲಿ ಮನಸ್ಸನ್ನು ಮಕ್ಕಳಿಗೆ ಹೋಲಿಸಿದ್ದಾರೆ.

ಅಂತೂ ಸಾಕ್ಷಿ ಭಾವದಿಂದ ಮನಸ್ಸನ್ನು ನೋಡಿದರೆ, ಅದರ ದುಷ್ಟ ಪ್ರವೃತ್ತಿಗಳು ಕಡಿಮೆ ಆಗುತ್ತವೆ. ಮನಸ್ಸು ಶುದ್ಧವಾಗುತ್ತದೆ. ಮನಸ್ಸನ್ನು ಸಾಕ್ಷೀಭಾವದಲ್ಲಿ ಇದ್ದು ನೋಡುವಾಗ, ನೋಡುತ್ತಿರುವ ತನಗೆ ರಾಗ- ದ್ವೇಷಗಳಿರಬಾರದು. ಆಗ್ರಹಗಳಿರಬಾರದು. ಮನಸ್ಸಿನಲ್ಲಿ ಗಡಿಬಿಡಿ ಇದ್ದರೆ, ಮನಃಸಾಕ್ಷಿ ತೋರಿಕೊಳ್ಳಬಾರದು. ಪ್ರತಿನಿತ್ಯ ಸ್ವಲ್ಪ ಹೊತ್ತು ದೇವರ ಧ್ಯಾನದಲ್ಲಿದ್ದವನು, ತನ್ನ ಉಸಿರಾಟವನ್ನೇ ಅದರಲ್ಲಿ ಯಾವುದೇ ಕೃತಕ ಬದಲಾವಣೆ ತರದೇ ನೋಡುವುದನ್ನು ಅಭ್ಯಾಸ ಮಾಡಿಕೊಂಡರೆ, ಸುಲಭದಲ್ಲಿ ಸಾಕ್ಷಿಭಾವ ಪಡೆಯಬಲ್ಲ.

“ಸಾಕ್ಷಿ’ ಎಂದರೆ ನಮ್ಮ ಆಲೋಚನೆ, ನಡೆ- ನುಡಿಗಳ ಬಗ್ಗೆ ಇರುವ ಎಚ್ಚರಿಕೆ. ಆ ಎಚ್ಚರಿಕೆಯಿಂದ ನಮ್ಮೆಲ್ಲ ಪ್ರವೃತ್ತಿಗಳೂ ಕೂಡಿದ್ದರೆ, ಅವು ಶುದ್ಧವಾಗಿರುತ್ತವೆ. ಪಶ್ಚಾತ್ತಾಪ ರಹಿತ ಸ್ವಸ್ಥ ಸುಖೀ ಜೀವನಕ್ಕೆ ನಾಂದಿಯಾಗುತ್ತದೆ.

ಟಾಪ್ ನ್ಯೂಸ್

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Kundapura; ಹಲ್ಲೆ , ಬೆದರಿಕೆ, ಚಿನ್ನದ ಸರ ಲೂಟಿ: ದೂರು

Kundapura; ಹಲ್ಲೆ,ಬೆದರಿಕೆ, ಚಿನ್ನದ ಸರ ಲೂಟಿ: ದೂರು

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.