ಬಾಳ ಸಂಜೆಯಲಿ ಸಿಹಿನೆನಪು ತುಂಬಿರಲಿ


Team Udayavani, Oct 16, 2019, 4:15 AM IST

u-6

ಸ್ವಾಮಿಯವರ ಪ್ರತಿದಿನದ ದಿನಚರಿಯು ಸಮರ್ಪಕವಾಗಿತ್ತು. ಮಕ್ಕಳಿಬ್ಬರೂ ಅಮೆರಿಕದಲ್ಲಿದ್ದು, ಆಗ್ಗಾಗ್ಗೆ ಬಂದು-ಹೋಗಿ ಮಾಡುತ್ತಾರೆ. ಇವರೂ ಅಮೆರಿಕಾಕ್ಕೆ ಹೋಗುತ್ತಿರುತ್ತಾರೆ. ಧರ್ಮಪತ್ನಿಯ ಬಗ್ಗೆ ವಿಚಾರಿಸಿದಾಗ ಮಾತ್ರ ಅವರ ಧ್ವನಿ ಕುಗ್ಗಿತು.

ಎಪ್ಪತ್ತು ವರ್ಷದ ಸ್ವಾಮಿ ಅವರು ನನ್ನ ಮುಂದೆ ಕುಳಿತಿದ್ದರು. ಕೀಲು ನೋವು, ತಲೆಸುತ್ತು, ಅಜೀರ್ಣ, ಬಾಯಿ ಒಣಗುವುದು, ಮೂಗು ಕಟ್ಟಿ ಉಸಿರಾಟದ ಸಮಸ್ಯೆ, ನಿದ್ರಾಹೀನತೆ… ಹೀಗೆ, ಅನೇಕ ಸಮಸ್ಯೆಗಳು ಅವರನ್ನು ಬಾಧಿಸುತ್ತಿದ್ದವು. ಎದೆ ನೋವು ಅವರನ್ನು ಆಸ್ಪತ್ರೆಗೆ ಕರೆತಂದಿತ್ತು. ಎದೆನೋವಿಗೆ, ಮಾನಸಿಕ ಒತ್ತಡವೇ ಕಾರಣ ಎಂಬ ಅಭಿಪ್ರಾಯದೊಡನೆ, ಹೃದ್ರೋಗ ತಜ್ಞರು ಸಮಾಲೋಚನೆಗಾಗಿ ಅವರನ್ನು ನನ್ನ ಬಳಿ ಕಳಿಸಿದ್ದರು.

ಸ್ವಾಮಿಯವರ ಪ್ರತಿದಿನದ ದಿನಚರಿಯು ಸಮರ್ಪಕವಾಗಿತ್ತು. ಮಕ್ಕಳಿಬ್ಬರೂ ಅಮೆರಿಕದಲ್ಲಿದ್ದು, ಆಗ್ಗಾಗ್ಗೆ ಬಂದು-ಹೋಗಿ ಮಾಡುತ್ತಾರೆ. ಇವರೂ ಅಮೆರಿಕಾಕ್ಕೆ ಹೋಗುತ್ತಿರುತ್ತಾರೆ. ಧರ್ಮಪತ್ನಿಯ ಬಗ್ಗೆ ವಿಚಾರಿಸಿದಾಗ ಮಾತ್ರ ಅವರ ಧ್ವನಿ ಕುಗ್ಗಿತು. ಮೂರು ವರ್ಷಗಳ ಹಿಂದೆ ನನ್ನನ್ನ ಒಂಟಿಯಾಗಿ ಬಿಟ್ಟು ಹೊರಟುಹೋದುÉ ಎಂದು ಹೇಳುವಾಗ ಕಣ್ಣಾಲಿಗಳು ತುಂಬಿದವು. ಅರವತ್ತೆರಡು ಸಾಯುವ ವಯಸ್ಸಲ್ಲ, ಆದರೆ, ದೈವೇಚ್ಚೆ ಎಂದರು. ಅವರಲ್ಲಿ ಶೂನ್ಯಭಾವ ಮನೆಮಾಡಿತು.

ಪತ್ನಿ ತೀರಿಕೊಂಡ ಸಮಯದಿಂದ ಅವರಿಗೆ ಒಂದಲ್ಲಾ ಒಂದು ಸಮಸ್ಯೆ ಬಾಧಿಸುತ್ತಿರುವುದು ಖಚಿತವಾಯಿತು. ಪತ್ನಿಯ ನೆನಪು ಸ್ವಾಮಿಯವರನ್ನು ಪ್ರತಿಕ್ಷಣವೂ ಪಾಪಪ್ರಜ್ಞೆಯಿಂದ ನರಳುವಂತೆ ಮಾಡಿತ್ತು. ಮೊನ್ನೆ ಲಾಕರ್‌ ತೆಗೆದಾಗ, ಪತ್ನಿ ಬದುಕಿ¨ªಾಗ ಇವರೇ ಕೊಟ್ಟಿದ್ದ ಹೊಚ್ಚ ಹೊಸ ನೋಟಿನ ಕಂತೆ ಸಿಕ್ಕಿತಂತೆ. ಆಪತ್ಕಾಲಕ್ಕೆ ಬೇಕಾಗಬಹುದೆಂದು ಪತ್ನಿ ಆ ಹಣವನ್ನು ಖರ್ಚು ಮಾಡಿರಲಿಲ್ಲ. ಅವಳು ದುಂದುವೆಚ್ಚ ಮಾಡುತ್ತಾಳೆ ಎಂದು ತಪ್ಪು ತಿಳಿದಿದ್ದೆನಲ್ಲಾ ಎಂದು ಬೇಸರವಾಗಿ, ಇವರಿಗೆ ಎದೆನೋವು ಬಂದಿದೆ.

ಅನೇಕ ಪುರುಷರಿಗೆ, ಸಂಸಾರದಲ್ಲಿ ಸಂಗಾತಿಯ ಮಹತ್ವ ಅರಿವಾಗುವುದು, ಪತ್ನಿ ತೀರಿಹೋದ ಮೇಲೆಯೇ. ಒಂದು ಮೊಳ ಹೂವು ಕೊಡಿಸಲು ಜಗಳವಾಡಿರುತ್ತಾರೆ. ಆಕೆ ದುಂಡು ಮಲ್ಲಿಗೆಯನ್ನು ಕೈಯಲ್ಲಿ ಹಿಡಿದು, ಇನ್ನೇನು ಮುಡಿಗೇರಿಸಿದೆ ಎನ್ನುವ ಸಂಭ್ರಮದಲ್ಲಿ¨ªಾಗ, “ದುಡ್ಡಿನ ಬೆಲೆ ಗೊತ್ತಿಲ್ಲವಾ?’ ಎಂದು ಸಿಡುಕಿರುತ್ತಾರೆ. ಕೈಗೆ ಬಂದ ಮಲ್ಲಿಗೆ ಮುಡಿಗೇರುವುದಿಲ್ಲ. ಅಂದು ಅವಳ ಕಣ್ಣಾಲಿಗಳು ತುಂಬಿರುತ್ತವೆ. ಇಂದು ಮಾರುಕಟ್ಟೆಗೆ ಹೋದಾಗ ಹಳೆಯ ನೆನಪುಗಳು ಇವರನ್ನು ಕಾಡಿ, ಹಿಂಸಿಸುತ್ತವೆ.

ಅಂದು ಸೀಗೆಪುಡಿಯ ಘಾಟು ಎಂದು ಜಗಳವಾದರೆ, ಇಂದು ಸ್ನಾನದ ಮನೆ ನಿರ್ಜೀವ. ಅಡುಗೆ ಮನೆಯಲ್ಲಿ ತೆಂಗಿನಕಾಯಿ ತುರಿಯುವ ಸದ್ದೇ ಇಲ್ಲ. ಅವಳ ಕೈ ರುಚಿ ಈಗೆಲ್ಲಿ? ಅಡುಗೆ ಕಟ್ಟೆಯನ್ನು ಸವರುತ್ತಾರೆ. ದೇವರ ಮನೆಗೆ ರಂಗೋಲಿ ಕಳೆಯೇ ಇಲ್ಲ.

ಇಂದು ಹೆಜ್ಜೆ ಹೆಜ್ಜೆಗೂ ಹೆಂಡತಿ ನೆನಪಾಗುತ್ತಾಳೆ. ಅಂದು, ಕಾಫಿ ಕೊಡಲು ತಡವಾದರೆ ಸಿಟ್ಟಿನಿಂದ ಕೂಗಾಡುತ್ತಿದ್ದರಂತೆ. ಈಗ ಕಾಫಿ ತಂದು ಕೊಡುವವರೇ ಇಲ್ಲ.

ವಯಸ್ಸಾದ ಮೇಲೆ ಒಂಟಿತನ, ಮಾನಸಿಕ ವ್ಯಥೆ ಒಂದೆಡೆಯಾದರೆ, ಶಾರೀರಕ ಸಮಸ್ಯೆಗಳು ಇನ್ನೊಂದೆಡೆ. ನಾನು ಅವಳನ್ನು ಇನ್ನೂ ಚೆನ್ನಾಗಿ ನೋಡಿಕೊಳ್ಳಬೇಕಿತ್ತು ಎನ್ನುವ ದುಃಖ, ಪಾಪಪ್ರಜ್ಞೆಯಿಂದ ಶರೀರ ಮತ್ತಷ್ಟು ಕುಸಿಯುತ್ತದೆ. ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫ‌ಲವಿಲ್ಲ ಎನ್ನುವಂತೆ, ಬದುಕಿದ್ದಾಗ ಹೆಂಡತಿಯನ್ನು ನೋಯಿಸಿ, ನಂತರ ಪಶ್ಚಾತ್ತಾಪಪಟ್ಟರೆ ಪ್ರಯೋಜನವಿಲ್ಲ. ಹಾಗಾಗಿ, ಗಂಡಸರೇ ನೆನಪಿಡಿ, ಮೃದು ಹೃದಯಿ ಮಡದಿಯನ್ನು ಪೌರುಷದಲ್ಲಿ ಜಗ್ಗಬೇಡಿ. ಆಕೆಯೊಡನೆ ಅಕ್ಕರೆಯಿಂದ ಮಾತನಾಡಿ. ಸಂಸಾರದ ನೊಗ ಹೊತ್ತವಳ ಬದುಕಿಗೆ ಸಂಭ್ರಮ ತುಂಬಿ. ಅವಳನ್ನು ಕಳೆದುಕೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ. ಮನಸಿನ ಮಂದಿರದಲ್ಲಿ ಮಧುರ ನೆನಪುಗಳೇ ತುಂಬಿಕೊಳ್ಳಲಿ.

ಡಾ. ಶುಭಾ ಮಧುಸೂದನ್‌
ಚಿಕಿತ್ಸಾ ಮನೋವಿಜ್ಞಾನಿ

ಟಾಪ್ ನ್ಯೂಸ್

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.