ವನಿತೆಯರ‌ ಮೇದಿನಿ ನಿರ್ಮಾಣ – ಮಹಿಷ ಮರ್ದಿನಿ


Team Udayavani, Jan 17, 2020, 1:16 AM IST

an-47

ಗಂಡು ಮಕ್ಕಳು ಮಾತ್ರವಲ್ಲ ಹೆಣ್ಣು ಮಕ್ಕಳೂ ಈಗ ಯಕ್ಷಗಾನ ಕಲೆಯಲ್ಲಿ ತೊಡಗಿಸಿಕೊಂಡು ಅದನ್ನು ಉನ್ನತ ಶಿಖರಕ್ಕೇರಿಸಿದ್ದಾರೆ ಎಂಬುದು ನಿಸ್ಸಂಶಯ. ಗೃಹಿ ಣಿ ಯರು ಮಾತ್ರವಲ್ಲದೆ ಔದ್ಯೋಗಿಕ ಜಂಜಾಟದ ಒತ್ತಡದಲ್ಲಿರುವ ಮಹಿಳೆಯರೂ ಒಂದಿನಿತು ಸಮಯವನ್ನು ಯಕ್ಷಗಾನಕ್ಕೆ ಮೀಸಲಿಟ್ಟು ಅದ್ಭುತವಾದ ಪ್ರದರ್ಶನದಿಂದ ಜನಮನಸೂರೆಗೊಂಡಿದ್ದಾರೆ ಎಂದರೆ ಕಲೆಯ ಅನನ್ಯತೆಗೆ ಸಾಟಿಯಿಲ್ಲ ಎಂಬುದು ಸಾಬೀತಾಗುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಕದ್ರಿ ರಾಜಾಂಗಣದಲ್ಲಿ ಪ್ರದರ್ಶನಗೊಂಡ ಮೇದಿನಿ ನಿರ್ಮಾಣ- ಮಹಿಷ ಮರ್ದಿನಿ ಯಕ್ಷಗಾನ.

ಆದಿಮಾಯೆಯಾಗಿ ಶಿಕ್ಷಕಿಯಾಗಿರುವ ಸುಚೇತ ಕದ್ರಿ ಕಾಣಿಸಿಕೊಂಡರೆ, ದೇವೇಂದ್ರನಾಗಿ ಎಲ್‌ಎಲ್‌ಬಿ ಪದವೀಧರೆ ಜಯಶ್ರೀ ಹೆಬ್ಟಾರ್‌ ರಂಗಪ್ರವೇಶಿಸಿದರು. ಬ್ರಹ್ಮನಾಗಿ ಪತ್ರಿಕಾ ಸುದ್ದಿ ಅನುವಾದಕಿಯಾಗಿರುವ ಇಂದಿರಾ ಎನ್‌. ಕೆ. ಕಾಣಿಸಿಕೊಂಡರೆ, ಈಶ್ವರನಾಗಿ ಮತ್ತು ಮಾಲಿನಿ ದೂತ ಪಾತ್ರದಲ್ಲಿ ಟೈಲರಿಂಗ್‌ ವೃತ್ತಿಯಲ್ಲಿರುವ ಸಂಧ್ಯಾ ಕುಂದೇಶ್ವರ ಕಾಣಿಸಿಕೊಂಡರು. ಮಾಲಿನಿಯಾಗಿ ಯಕ್ಷಗಾನ ತಾಳಮದ್ದಳೆ ಅರ್ಥಧಾರಿ ಶೈಲಜಾ ಶ್ರೀಕಾಂತ್‌ ರಾವ್‌ ಕಾಣಿಸಿಕೊಂಡರೆ, ಅದೇ ರೀತಿ ಮಹಿಷಾಸುರನಾಗಿ ತಾಳಮದ್ದಳೆ ಅರ್ಥಧಾರಿ ಪೂರ್ಣಿಮಾ ಪ್ರಶಾಂತ್‌ ರಾವ್‌ ಅದ್ಭುತ ಪ್ರದರ್ಶನ ನೀಡಿದರು. ಬಿಡಲಾಸುರ ಮತ್ತು ನಿಟಿಲಾಸುರನಾಗಿ ಗೃಹಿಣಿಯರಾದ ಸುನೀತ ಮತ್ತು ಮೀನ ಕದ್ರಿ ಕಾಣಿಸಿಕೊಂಡರು. ಅಷ್ಟಭುಜೆಯಾಗಿ ಗೃಹಿಣಿಯಾಗಿರುವ ವನಿತಾ ರಾಮಚಂದ್ರ ಎಲ್ಲೂರು ಉತ್ತಮ ಪ್ರದರ್ಶನ ನೀಡಿದರು. ಈ ಎಲ್ಲಾ ಮಹಿಳಾ ಮಣಿಗಳೊಂದಿಗೆ ಪುಟಾಣಿ ಕಲಾವಿದರೂ ಕಾಣಿಸಿಕೊಂಡಿದ್ದಾರೆ.

ಅಗ್ನಿ ಮತ್ತು ಸುಪಾರ್ಶ್ವಕನಾಗಿ ರಿಶಿಕಾ ಕುಂದೇಶ್ವರ ಅದ್ಭುತ ಪ್ರದರ್ಶನ ನೀಡಿದ್ದರೆ, ವಾಯು ಪಾತ್ರದಲ್ಲಿ ಹನ್ಸಿಕಾ ವೈ, ವರುಣ ಮತ್ತು ಕುಬೇರ ಪಾತ್ರದಲ್ಲಿ ಅಮೃತವರ್ಣ ಮತ್ತು ಅಮೃತವರ್ಷ ಉತ್ತಮವಾಗಿ ನಿರ್ವಹಿಸಿದರು. ಮಧು-ಕೈಟಭರು ಮತ್ತು ಶಂಖದುರ್ಗರಾಗಿ ರಂಜಿತಾ ಎಲ್ಲೂರು ಮತ್ತು ದುರ್ಗಾಶ್ರೀ ಅಬ್ಬರದ ಪ್ರದರ್ಶನ ನೀಡಿದರು. ವಿದ್ಯುನ್ಮಾಲಿ ಪಾತ್ರದಲ್ಲಿ ಪ್ರಕೃತಿ ಜೋಗಿ ಕಾಣಿಸಿಕೊಂಡರು. ಯಕ್ಷನಾಗಿ ರಕ್ಷಿತಾ ಎಲ್ಲೂರು ಅವರ ಪ್ರವೇಶ ಚೆನ್ನಾಗಿತ್ತು. ವಿಷ್ಣುವಿನ ಪಾತ್ರದಲ್ಲಿ ನಿಶಾ ದೇವಾಡಿಗ ಮಿಂಚಿದರು. ಈ ಪ್ರದರ್ಶನಕ್ಕೆ ಕದ್ರಿ ಬಾಲಯಕ್ಷಕೂಟದ ಸಂಸ್ಥಾಪಕರಾದ ರಾಮಚಂದ್ರ ಭಟ್‌ ಎಲ್ಲೂರು ಅವರ ದಕ್ಷ ನಿರ್ದೇಶನವಿತ್ತು.

ಹಿಮ್ಮೇಳದಲ್ಲಿ ವಾಸುದೇವ ಕಲ್ಲೂರಾಯ ಮತ್ತು ದಯಾನಂದ ಕೋಡಿಕಲ್‌ ಅವರ ಸುಮಧುರ ಕಂಠದ ಭಾಗವತಿಕೆಗೆ ಮದ್ದಳೆಯಲ್ಲಿ ಕೃಷ್ಣರಾಜ್‌ ಭಟ್‌ ನಂದಳಿಕೆ ಮತ್ತು ಅನಿರುದ್‌ª ಕದ್ರಿ, ಚೆಂಡೆಯಲ್ಲಿ ಸುಬ್ರಹ್ಮಣ್ಯ ಚಿತ್ರಾಪುರ, ಚಕ್ರತಾಳದಲ್ಲಿ ವಿಕ್ರಮ್‌ ಮಾಯಿರ್ಪಾಡಿ ಸಾಥ್‌ ನೀಡಿದ್ದರು. ಒಟ್ಟಿನಲ್ಲಿ ಮಹಿಳಾಮಣಿಗಳ ಒಂದು ಅದ್ಭುತ ಪ್ರದರ್ಶನಕ್ಕೆ ಕದ್ರಿಯ ರಾಜಾಂಗಣ ವೇದಿಕೆ ಸಾಕ್ಷಿಯಾಯಿತು.

ಇಂದಿರಾ ಎನ್‌. ಕೆ. ಕೂಳೂರು

ಟಾಪ್ ನ್ಯೂಸ್

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ

JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್‌ ಪಕ್ಷದಿಂದ ಪ್ರಜ್ವಲ್‌ ರೇವಣ್ಣ ಅಮಾನತು

JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್‌ ಪಕ್ಷದಿಂದ ಪ್ರಜ್ವಲ್‌ ರೇವಣ್ಣ ಅಮಾನತು

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ

Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೋಟಿಸ್

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ

JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್‌ ಪಕ್ಷದಿಂದ ಪ್ರಜ್ವಲ್‌ ರೇವಣ್ಣ ಅಮಾನತು

JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್‌ ಪಕ್ಷದಿಂದ ಪ್ರಜ್ವಲ್‌ ರೇವಣ್ಣ ಅಮಾನತು

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.