ಕಂಬಳದಲ್ಲಿ “ಚೆನ್ನ’ನ ಓಟಕ್ಕೆ ಯಾರೂ ಸಾಟಿಯಿಲ್ಲ


Team Udayavani, Feb 1, 2020, 7:34 AM IST

Chinna

ಪಡುಬಿದ್ರಿ: ನಿರಂತರ 5 ವರ್ಷಗಳಲ್ಲಿ ಸರಣಿ ಶ್ರೇಷ್ಠ ಗೌರವ ಪಡೆದು, 13 ವರ್ಷಗಳಲ್ಲಿ 150ಕ್ಕೂ ಅಧಿಕ ಚಿನ್ನ ಗೆದ್ದ ಮಹತ್ತರ ಸಾಧನೆ ಮಾಡಿದ ಕೊಳಚೂರು ಕೊಂಡೆಟ್ಟು ಸುಕುಮಾರ ಶೆಟ್ರ ಅವರ ಕೋಣ “ಚೆನ್ನ’ ಕಂಬಳ ಕ್ಷೇತ್ರದ ಮಿಂಚಿನ ಓಟಗಾರ.

ಈಗ 19ರ ಹರೆಯವಾದರೂ ಓಟದಲ್ಲಿ ಮೀರಿಸುವ ಕೋಣ ಮತ್ತೂಂದಿಲ್ಲ. ಯಾವುದೇ ತರಬೇತಿಯಿಲ್ಲದೆ 4ರ ಹರೆಯದಲ್ಲೇ ಕಂಬಳಕ್ಕೆ ಇಳಿದಿದ್ದ ಚೆನ್ನ ಸೆಮಿಫೈನಲ್‌ಗೇರಿದ್ದ ಬಳಿಕ ಹಿಂದಿರುಗಿ ನೋಡಿದ್ದೇ ಇಲ್ಲ. 75 ಬಾರಿ ಬಿರುಸಿನ ಫೈನಲ್‌ ಸ್ಪರ್ಧೆಯಲ್ಲಿ ವೀಡಿಯೋ ತೀರ್ಪಿನಲ್ಲಿ ಗೆಲುವು ಸಾಧಿಸಿದ್ದಿದೆ. ತನ್ನೊಂದಿಗೆ ಜೊತೆಯಾದ ಯಾವುದೇ ಕೋಣಗಳಿದ್ದರೂ, ಗೆಲುವು ದಕ್ಕಿಸಿಕೊಂಡಿದೆ.

ನಾಲ್ವರು ಯಜಮಾನರು:
ಹಲವಾರು ಓಟಗಾರರು
ಬೆಳುವಾಯಿ ಪೈರಿನಿಂದ ಕಾಂತಾವರ ಗ್ರಾಮದ ಬೈದೊಟ್ಟು ಪ್ರಕಾಶ್‌ ಪೂಜಾರಿ ಮನೆಗೆ ಬಂದಿದ್ದ 2 ವರ್ಷದ ಚೆನ್ನ ಬಳಿಕ ಕಡಂದಲೆ ಕಾಳು ಪಾಣಾರ, ಬಾಕೂìರು ಶಾಂತಾರಾಮ ಶೆಟ್ಟಿ ಹಾಗೂ ಪ್ರಸ್ತುತ 13 ವರ್ಷಗಳಿಂದ ಕೊಳಚೂರು ಕೊಂಡೆಟ್ಟು ಸುಕುಮಾರ ಶೆಟ್ಟಿಯವರ ಬಳಿ ಇದೆ. 2004ರಿಂದ 2009 ರವರೆಗೆ ನೇಗಿಲು ಕಿರಿಯ, ಹಿರಿಯ ಹಾಗೂ ಹಗ್ಗ ಹಿರಿಯ ವಿಭಾಗಳಲ್ಲಿ ಚಿನ್ನದ ಬೇಟೆ ಮೂಲಕ ಸತತ 5 ವರ್ಷ ಸರಣಿ ಶ್ರೇಷ್ಠ ಗೌರವ ಪಡೆದಿದೆ. 2006 ನವೆಂಬರ್‌ನಿಂದ 2007 ಜನವರಿವರೆಗೆ 10 ಕಂಬಳ ಕೂಟಗಳಲ್ಲಿ 8 ಮೆಡಲ್‌ ಪಡೆದಿದೆ.

ನಕ್ರೆ ಜಯಕರ ಮಡಿವಾಳ, ಅಳದಂಗಡಿ ರವಿ ಕುಮಾರ್‌, ಮರೋಡಿ ಶ್ರೀಧರ್‌, ಮಾರ್ನಾಡ್‌ ರಾಜೇಶ್‌, ಹಕ್ಕೇರಿ ಸುರೇಶ್‌ ಶೆಟ್ಟಿ, ಅಳದಂಗಡಿ ಸತೀಶ್‌ ದೇವಾಡಿಗ, ಪಣಪೀಲು ಸಾಧು ಶೆಟ್ಟಿ ಸಹಿತ ದೀರ್ಘ‌ ಕಾಲ ಪಲಿಮಾರು ದೇವೇಂದ್ರ ಕೋಟ್ಯಾನ್‌ ಚೆನ್ನನಿರುವ ಜೋಡಿ ಕೋಣಗಳನ್ನು ಓಡಿಸಿ ಓಟದ ಚಾಕಚಕ್ಯತೆ ಪ್ರದರ್ಶಿಸಿದ್ದಾರೆ.

ಇಂದು ಚೆನ್ನಗೆ ಸಮ್ಮಾನ
2019ರ ಅಕ್ಟೋಬರ್‌ನಲ್ಲಿ ನಾರಾವಿ ಬೊಟ್ಟು ಜವನೆರ್‌, ಶ್ರೀ ಸೂರ್ಯ ಫ್ರೆಂಡ್ಸ್‌ ಸಂಘಟನೆ ಚಿನ್ನದ ವೀರ ಚೆನ್ನನನ್ನು ಸಮ್ಮಾನಿಸಿತ್ತು. ಫೆ.1 ರಂದು ಸಾಣೂರು ದೇಂದಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ಬೃಹತ್‌ ಗೋ ಸಮ್ಮೇಳನದಲ್ಲಿ ಚೆನ್ನನನ್ನು ಸಮ್ಮಾನಿಸುವ ಕಾರ್ಯಕ್ರಮವನ್ನು ಸಂಘಟಕರು ಇಟ್ಟುಕೊಂಡಿದ್ದಾರೆ.

ದೈಹಿಕ ಕ್ಷಮತೆ ಇರುವವರೆಗೆ ಓಟ
ಸುಮಾರು 150 ಚಿನ್ನದ ಪದಕ ಗಳಿಸುವ ಮೂಲಕ ಯಜಮಾನನಿಗೆ ನ್ಯಾಯ ಒದಗಿಸಿಕೊಟ್ಟಿರುವ ಚೆನ್ನ, ಕಂಬಳ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ಕ್ರೀಡಾರತ್ನ ಪುರಸ್ಕಾರ ಲಭಿಸಲು ಕಾರಣನಾಗಿದ್ದಾನೆ. ಅಡ್ವೆ ಕಂಬಳದಲ್ಲಿ ಹಗ್ಗ ಹಿರಿಯ ವಿಭಾಗದಲ್ಲಿ ಚೆನ್ನನ ಕೊನೆ ಓಟವಾಗಿತ್ತು. ದೈಹಿಕ ಕ್ಷಮತೆ ಇರುವವರೆಗೆ ನೇಗಿಲು ವಿಭಾಗದಲ್ಲಿ ಸ್ಪರ್ಧೆಗಿಳಿಯಲಿದ್ದಾನೆ ಎಂದು ಚೆನ್ನನ ಯಜಮಾನ ಕೊಳಚೂರು ಕೊಂಡೆಟ್ಟು ಸುಕುಮಾರ ಶೆಟ್ಟಿ ಹೇಳಿದ್ದಾರೆ.

ಅಪಾರ ಬುದ್ಧಿ
ಸಾಧು ಸ್ವಭಾವದ ಚೆನ್ನ ಕಂಬಳದ ದಿನ ಹಟ್ಟಿಯಿಂದ ಹೊರಬಂದಂತೆ ಮನೆ ತುಳಸೀ ಕಟ್ಟೆಗೆ ಪ್ರದಕ್ಷಿಣೆ ಬಂದು ತಾನು ಸಾಗುವ‌ ವಾಹನವನ್ನೇರಿ ಮಲಗಿಬಿಡುವ ಬುದ್ಧಿಮತ್ತೆಗೆ ಸಲಾಂ ಹೊಡೆಯಲೇ ಬೇಕು.

ಟಾಪ್ ನ್ಯೂಸ್

1-wew-ewe

Rajkot ದುರಂತ; ಗುಜರಾತ್‌ ಸರಕಾರದ ಮೇಲೆ ಭರವಸೆಯಿಲ್ಲ: ಹೈಕೋರ್ಟ್‌ ತರಾಟೆ

1-cy

Cyclone Remal ಅಪಾರ ಹಾನಿ ; ಪ.ಬಂಗಾಲದಲ್ಲಿ 6, ಬಾಂಗ್ಲಾದಲ್ಲಿ 7 ಸಾವು

1-murali

ಕೇರಳದಲ್ಲೂ ದಿಲ್ಲಿ ಮಾದರಿ ಮದ್ಯ ಹಗರಣ: ಸಿಬಿಐ ತನಿಖೆಗೆ ಸಚಿವ ಮುರಳೀಧರನ್‌ ಆಗ್ರಹ

1-sm

Delhi; ಬಿಭವ್‌ ಬಿಡುಗಡೆಯಾದರೆ ಅಪಾಯ: ಸಂಸದೆ ಸ್ವಾತಿ ಮಲಿವಾಲ್‌

ಶಾಸಕರ ಮನೆಗೆ ಮೊದಲು ಮೂರೇ ಸಿಬಂದಿ ಕಳಿಸಿದ್ದೆವು: ಪೊಲೀಸ್‌ ಅಧೀಕ್ಷಕ ರಿಷ್ಯಂತ್‌

ಶಾಸಕರ ಮನೆಗೆ ಮೊದಲು ಮೂರೇ ಸಿಬಂದಿ ಕಳಿಸಿದ್ದೆವು: ಪೊಲೀಸ್‌ ಅಧೀಕ್ಷಕ ರಿಷ್ಯಂತ್‌

1-qeewqewqewe

Naxal ಬೆದರಿಕೆ; ಪದ್ಮಶ್ರೀ ವಾಪಸ್‌: ನಾಟಿ ವೈದ್ಯ ಹೇಳಿಕೆ

Sullia ಹಲಸಿನ ಹಣ್ಣು ಕೊಯ್ಯುವಾಗ ದಂಪತಿಗೆ ವಿದ್ಯುದಾಘಾತ

Sullia ಹಲಸಿನ ಹಣ್ಣು ಕೊಯ್ಯುವಾಗ ದಂಪತಿಗೆ ವಿದ್ಯುದಾಘಾತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಶಿಕ್ಷಕರ, ಪದವೀಧರರ ಸಮಸ್ಯೆಗಳಿಗೆ ಕಾಂಗ್ರೆಸ್‌ ಸ್ಪಂದನೆ’; ಸಲೀಂ ಅಹಮದ್‌

“ಶಿಕ್ಷಕರ, ಪದವೀಧರರ ಸಮಸ್ಯೆಗಳಿಗೆ ಕಾಂಗ್ರೆಸ್‌ ಸ್ಪಂದನೆ’; ಸಲೀಂ ಅಹಮದ್‌

BJP, ಎನ್‌ಡಿಎ ಗೆಲುವು ತಪ್ಪಿಸಲಾಗದು: ವಿಜಯೇಂದ್ರ

BJP, ಎನ್‌ಡಿಎ ಗೆಲುವು ತಪ್ಪಿಸಲಾಗದು: ವಿಜಯೇಂದ್ರ

Padubidri; ಕಾರು ಢಿಕ್ಕಿ: ಪಾದಚಾರಿ ಸಾವು

Padubidri; ಕಾರು ಢಿಕ್ಕಿ: ಪಾದಚಾರಿ ಸಾವು

Manipal ಆರೋಗ್ಯ, ಶಿಕ್ಷಣಕ್ಕೆ ಮಾಹೆ ಸದಾ ಬೆಂಬಲ; ಡಾ| ಎಚ್‌.ಎಸ್‌. ಬಲ್ಲಾಳ್‌

Manipal ಆರೋಗ್ಯ, ಶಿಕ್ಷಣಕ್ಕೆ ಮಾಹೆ ಸದಾ ಬೆಂಬಲ; ಡಾ| ಎಚ್‌.ಎಸ್‌. ಬಲ್ಲಾಳ್‌

Part-time ಉದ್ಯೋಗ ಆಮಿಷ: ಲಕ್ಷಾಂತರ ರೂ.ಕಳೆದುಕೊಂಡ ಯುವಕ

Part-time ಉದ್ಯೋಗ ಆಮಿಷ: ಲಕ್ಷಾಂತರ ರೂ.ಕಳೆದುಕೊಂಡ ಯುವಕ

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

1-wew-ewe

Rajkot ದುರಂತ; ಗುಜರಾತ್‌ ಸರಕಾರದ ಮೇಲೆ ಭರವಸೆಯಿಲ್ಲ: ಹೈಕೋರ್ಟ್‌ ತರಾಟೆ

1-cy

Cyclone Remal ಅಪಾರ ಹಾನಿ ; ಪ.ಬಂಗಾಲದಲ್ಲಿ 6, ಬಾಂಗ್ಲಾದಲ್ಲಿ 7 ಸಾವು

1-murali

ಕೇರಳದಲ್ಲೂ ದಿಲ್ಲಿ ಮಾದರಿ ಮದ್ಯ ಹಗರಣ: ಸಿಬಿಐ ತನಿಖೆಗೆ ಸಚಿವ ಮುರಳೀಧರನ್‌ ಆಗ್ರಹ

sensex

76,000 ಅಂಕ ತಲುಪಿದ್ದ ಬಿಎಸ್‌ಇ ಸೂಚ್ಯಂಕ: 23,000ಕ್ಕೇರಿ ಕುಸಿದ ನಿಫ್ಟಿ

arrested

Ranchi;ಮದ್ಯ ಕೊಡದ್ದಕ್ಕೆ ಗುಂಡಿಕ್ಕಿ ಡಿಜೆಯ ಹತ್ಯೆ: ಆರೋಪಿ ಪೊಲೀಸರ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.