ಕಲೆ ಅಳಿಸುವ ಕಲೆ


Team Udayavani, Feb 12, 2020, 4:31 AM IST

sds-8

ಹಾಲು ಒಡೆಯಲು ಒಂದು ಹನಿ ಹುಳಿ ಸಾಕು. ಹಾಗೆಯೇ, ಬಟ್ಟೆ ಹಾಳಾಗಲು ಒಂದು ಚಿಕ್ಕ ಕಲೆ ಸಾಕು. ಅದರಲ್ಲೂ ಹೊಸ ಬಟ್ಟೆ ಮೇಲೆ ಕಲೆ ಆಗಿಬಿಟ್ಟರಂತೂ, ಧರಿಸುವಂತಿಲ್ಲ, ಬಿಡುವಂತಿಲ್ಲ ಎಂದು ಪೇಚಾಡುವ ಪರಿಸ್ಥಿತಿ. ಕಠಿಣ ಕಲೆಯನ್ನು ಅಳಿಸುವುದು ಸವಾಲಿನ ಕೆಲಸವೇ. ಆ ಸವಾಲನ್ನು ಸ್ವಲ್ಪ ಸುಲಭ ಮಾಡುವಂಥ ಟಿಪ್ಸ್‌ಗಳು ಇಲ್ಲಿವೆ. ಯಾವ ಕಲೆಗೆ, ಯಾವುದು ರಾಮಬಾಣ ಅಂತ ನೋಡಿ…

-ಆಯಿಲ್‌ ಪೇಂಟ್‌, ಗ್ರೀಸ್‌
ಆಯಿಲ್‌ ಪೇಂಟ್‌ ಹತ್ತಿದ ಬಟ್ಟೆಯನ್ನು, ಸೀಮೆಎಣ್ಣೆಯಲ್ಲಿ ಒಂದು ಗಂಟೆ ನೆನೆಸಿಟ್ಟು, ಬಟ್ಟೆ ಸೋಪ್‌/ಪೌಡರ್‌ನಿಂದ ತೊಳೆದರೆ ಕಲೆ ಹೋಗುತ್ತದೆ.

-ಲಿಪ್‌ಸ್ಟಿಕ್‌
ಲಿಪ್‌ಸ್ಟಿಕ್‌ ಕಲೆಯ ಅಂಟಿರುವ ಜಾಗಕ್ಕೆ ಗ್ಲಿಸರಿನ್‌ ಹಚ್ಚಿ, ಕಲೆ ಸಂಪೂರ್ಣವಾಗಿ ಹೋಗುವವರೆಗೆ ಉಜ್ಜಿ, ನಂತರ ಸೋಪ್‌ ಹಾಕಿ ತೊಳೆಯಿರಿ.

-ರಕ್ತ
ಬಟ್ಟೆಯ ಮೇಲೆ ರಕ್ತ ಬಿದ್ದ ತಕ್ಷಣ, ಉಪ್ಪುನೀರಿನಿಂದ ತೊಳೆದರೆ ಕಲೆ ಉಳಿಯುವುದಿಲ್ಲ. ಇಲ್ಲದಿದ್ದರೆ, ಉಪ್ಪಿನ ನೀರಿನಲ್ಲಿ ಒಂದೆರಡು ಗಂಟೆ ನೆನೆಸಿಟ್ಟು, ನಂತರ ತೊಳೆದರೆ ಕಲೆ ಹೋಗುತ್ತದೆ.

-ಟೀ, ಕಾಫಿ
ಕಲೆ ಆಗಿರುವ ಜಾಗಕ್ಕೆ ಎತ್ತರದಿಂದ ಬಿಸಿ ನೀರನ್ನು ಚೆಲ್ಲಿ. ನಂತರ, ಬಿಸಿ ಸೋಪಿನ ನೀರಿನಲ್ಲಿ ತೊಳೆಯಬೇಕು.

-ಶಾಯಿಯ ಬಣ್ಣ
ಟೊಮೇಟೋ ತುಂಡಿನಿಂದ, ಕಲೆಯಿರುವ ಭಾಗವನ್ನು ಚೆನ್ನಾಗಿ ಉಜ್ಜಿ. ನಂತರ ಕಲೆಯ ಭಾಗಕ್ಕೆ ಉಪ್ಪು ಲೇಪಿಸಿ, ತಣ್ಣೀರಿನಲ್ಲಿ ತೊಳೆಯಿರಿ. ಕಲೆಯಿರುವ ಭಾಗವನ್ನು ಅರ್ಧ ಗಂಟೆ ಮೊಸರಿನಲ್ಲಿ ನೆನೆಸಿಟ್ಟು, ನಂತರ ತೊಳೆದರೂ ಸರಿಯೇ.

-ಎಲೆ ಅಡಿಕೆ ರಸ
ಬಟ್ಟೆಯ ಮೇಲೆ ಎಲೆ ಅಡಿಕೆ ರಸವೇನಾದರೂ ಬಿದ್ದಿದ್ದರೆ, ಆ ಜಾಗಕ್ಕೆ ಸೀಬೆಕಾಯಿ ರಸ ಹಚ್ಚಿ, ಚೆನ್ನಾಗಿ ಉಜ್ಜಿ ಆನಂತರ ತೊಳೆಯಬೇಕು.

-ಎಣ್ಣೆ
ಕಲೆಯಾಗಿರುವ ಭಾಗವನ್ನು ಹೀರಿಕೊಳ್ಳುವಂತೆ ಸೀಮೆ ಸುಣ್ಣ, ಫೇಸ್‌ ಪೌಡರ್‌, ಟಾಲ್ಕಮ್‌ ಪೌಡರ್‌ನಂಥ ವಸ್ತುಗಳಿಂದ ಪುಡಿಯನ್ನು ಹರಡಬೇಕು. ಕುದಿಯುವ ನೀರನ್ನು ಬಹಳ ಎತ್ತರದಿಂದ ಸುರಿದು ಸೋಪಿನಿಂದ ತೊಳೆಯಬೇಕು.

-ತುಕ್ಕು
ಲಿಂಬೆ ರಸ ಮತ್ತು ಉಪ್ಪನ್ನು ಬೆರೆಸಿದ ಮಿಶ್ರಣದಲ್ಲಿ ತುಕ್ಕಿನ ಕಲೆ ಇರುವ ಬಟ್ಟೆಯ ಭಾಗವನ್ನು ಸ್ವಲ್ಪ ಹೊತ್ತು ನೆನೆಸಿ, ನಂತರ ಬಟ್ಟೆಯನ್ನು ಬಿಸಿಲಿನಲ್ಲಿ ಒಣಗಿಸಿ. ಇದೇ ರೀತಿ 2-3 ಸಾರಿ ಮಾಡಿದರೆ ಕಲೆ ಹೋಗುತ್ತದೆ.

-ಬಾಲ್‌ ಪಾಯಿಂಟ್‌ ಪೆನ್‌
ಸ್ಪಿರಿಟ್‌ ಅನ್ನು ಲೇಪಿಸಿ ಸರಿಯಾಗಿ ಉಜ್ಜಿ, ಆಮೇಲೆ ಸೋಪಿನಿಂದ ತೊಳೆಯಬೇಕು.

-ಶಿವಲೀಲಾ ಸೊಪ್ಪಿಮಠ

ಟಾಪ್ ನ್ಯೂಸ್

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.