ಬಾಳು ಬೆಳಗಿದ ಬಾಳೆ ; ನಿರುದ್ಯೋಗಿಯ ಕೈ ಹಿಡಿದ ಭೂಮಿ ತಾಯಿ


Team Udayavani, Mar 2, 2020, 4:00 AM IST

banana-plant-min

ಡಿಗ್ರಿ, ಡಬಲ್‌ ಡಿಗ್ರಿ ಪಡೆದ ಯುವಕರು ಬೆಂಗಳೂರಿನಂಥ ಮಹಾನಗರಗಳಿಗೆ ಉದ್ಯೋಗ ಅರಸಿ ಹೋಗುತ್ತಾರೆ. ಇಲ್ಲೊಬ್ಬ ಎಂ.ಎಸ್‌.ಡಬ್ಲ್ಯೂ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದ ಯುವಕ ರೈತನಾಗಿ ಸ್ವಂತ ದುಡಿಮೆಯಿಂದ ಬದುಕು ಸಾಗಿಸುತ್ತಿದ್ದಾರೆ.

ಕೊಪ್ಪಳ ಜಿಲ್ಲೆಯ ಮೆಳ್ಳಿಕೇರಿ ಗ್ರಾಮದ ಹನಮೇಶ ಮ್ಯಾಗಳಮನಿ ಎನ್ನುವವರು ಡಬಲ್‌ ಡಿಗ್ರಿ ಪಡೆದ ನಂತರ ಉದ್ಯೋಗ ಅರಸಿ ನಗರಗಳಿಗೆ ತೆರಳಿದ್ದರು. ಕೆಲಸ ಸಿಗದೇ ಹೋದಾಗ, ತಾವೇ “ಪುನರ್ಜನ್ಮ’ ಎಂಬ ವಾರಪತ್ರಿಕೆಯನ್ನು ಆರಂಭಿಸಿ, ಪತ್ರಕರ್ತರಾಗಿ, ಸಾಮಾಜಿಕ ಕಾರ್ಯಕರ್ತರಾಗಿ, ಹೋರಾಟಗಾರರಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅದರಿಂದ ಜೀವನ ಸಾಗುತ್ತಿಲ್ಲ ಎಂದರಿವಾದಾಗ ಅದಕ್ಕೂ ಗುಡ್‌ ಬೈ ಹೇಳಿದರು. ಮುಂದೆ ಜೀವನಕ್ಕೆ ದಾರಿ ಮಾಡಿಕೊಳ್ಳಲು ಕೃಷಿಯತ್ತ ಹೆಜ್ಜೆಯಿಟ್ಟರು. ತಮ್ಮ 2 ಎಕರೆ ಜಮೀನಿನಲ್ಲಿ 2,000 ಇಸ್ರೇಲ್‌ ಮಾದರಿಯ ವಿಲಿಯಮ್ಸ… ತಳಿಯ ಬಾಳೆ ಸಸಿಗಳನ್ನು 6×6 ಅಡಿಗೊಂದರಂತೆ ನೆಟ್ಟರು. ಪರಿಶ್ರಮ, ನಂಬಿಕೆ ಇವೆರಡನ್ನೂ ಭೂಮಿತಾಯಿ ಹುಸಿ ಮಾಡಲಿಲ್ಲ. 36 ಟನ್‌ ಬಾಳೆ ಇಳುವರಿ ಬಂದಿದ್ದು, ಅವುಗಳ ಮಾರಾಟದಿಂದ 5.50 ಲಕ್ಷ ರೂಪಾಯಿ ಲಾಭ ಸಿಕ್ಕಿದೆ. ಔದ್ಯೋಗಿಕ ಜೀವನ ಒಲಿಯದೇ ಹೋದರೂ ಕೃಷಿಯನ್ನು ನಂಬಿ ಅದಕ್ಕೂ ಮಿಗಿಲಾದ ಸಾಧನೆ, ಸಂಪಾದನೆ ಮಾಡಬಹುದು ಎಂದು ಹನಮೇಶ್‌ ತೋರಿಸಿಕೊಟ್ಟಿದ್ದಾರೆ.

ಬಿಂದಿಗೆಗಳಲ್ಲಿ ನೀರು ಪೂರೈಕೆ
ತೋಟಗಾರಿಕಾ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಂತೆ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಹಾಗೂ ತೋಟಗಾರಿಕಾ ಇಲಾಖೆಯಿಂದ 1 ಲಕ್ಷ ರೂ. ಸಹಾಯಧನ ಪಡೆದರು. ಮೊದಲು ತಗ್ಗು ದಿಣ್ಣೆಯಂತಿದ್ದ ಹೊಲವನ್ನು ಸಮತಟ್ಟು ಮಾಡಿ, ಬಾಳೆ ಸಸಿಗಳನ್ನು ನಾಟಿ ಮಾಡಿದರು. ಬೇಸಗೆ ಸಮಯದಲ್ಲಿ ಹೊಲದಲ್ಲಿನ ಬೋರ್‌ವೆಲ್‌ನಲ್ಲಿ ನೀರು ಬತ್ತಿಹೋಗಿ ಸಮಸ್ಯೆಯಾಯಿತು. ಆಗ ಪಕ್ಕದ ಜಮೀನಿನ ರೈತರಿಂದ ನೀರಿನ ಸಹಾಯ ಪಡೆದಿದ್ದರು. ಬಿಂದಿಗೆಯಲ್ಲಿ ನೀರು ಹೊತ್ತು ತಂದು ಎರಡು ತಿಂಗಳುಗಳ ಕಾಲ ಸಸಿಗಳನ್ನು ಪೋಷಿಸಿದ್ದರು. ಬಿಸಿಲಿನ ಪ್ರಖರತೆಗೆ ಬಿಂದಿಗೆಯಿಂದ ಹಾಕುವ ನೀರು ಸಾಲದು ಎಂದರಿವಾದಾಗ ಮತ್ತೂಂದು ಬೋರ್‌ವೆಲ್‌ ಕೊರೆಸಿದರು. 500 ಅಡಿ ಆಳ ಕೊರೆದ ನಂತರ 2 ಇಂಚು ನೀರು ಸಿಕ್ಕಿತ್ತು. ಇದರಿಂದ ಖುಷಿಯಾದ ಹನಮೇಶ್‌, ಡ್ರಿಪ್‌ ನೀರಾವರಿ ವ್ಯವಸ್ಥೆ ಮಾಡಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಸಕಾಲಕ್ಕೆ ಮಾಡಬೇಕಾದ ಕೆಲಸಗಳನ್ನೆಲ್ಲ ಅಚ್ಚುಕಟ್ಟಾಗಿ ನಿರ್ವಹಿಸಿದರು. ಉತ್ತಮ ಇಳುವರಿ ಬಂದಿತು. ಬೆಂಗಳೂರು, ಕೊಪ್ಪಳ ಹಾಗೂ ಇತರೆಡೆಗಳ ವ್ಯಾಪಾರಸ್ಥರು ನೇರವಾಗಿ ಇವರ ತೋಟಕ್ಕೇ ಬಂದು ಬಾಳೆಗೊನೆಗಳನ್ನು ಖರೀದಿಸಿರುವುದರಿಂದ ಹನಮೇಶ್‌ ಅವರಿಗೆ ಮಾರುಕಟ್ಟೆ ಹಾಗೂ ಸಾಗಣೆಯ ಖರ್ಚು, ತಾಪತ್ರಯ ಎರಡೂ ಇಲ್ಲವಾಯಿತು.

ಗುಣಮಟ್ಟ ಕಾಯ್ದುಕೊಳ್ಳಬೇಕು
ಮೊದಲ ಪ್ರಯತ್ನದಲ್ಲೇ ಯಶಸ್ವಿಯಾದ ಗುಟ್ಟೇನು? ಎಂದು ಕೇಳಿದರೆ, “ಕಠಿಣ ಶ್ರಮ, ರೈತರು ಕಾಟಾಚಾರಕ್ಕೆ ಕೃಷಿ ಮಾಡದೇ ತಾವು ಬೆಳೆಯುವ ಬೆಳೆಯ ಕಾಲ ಕಾಲದ ಅಗತ್ಯಗಳನ್ನು ಅರಿತು ಸಕಾಲಕ್ಕೆ ಪೂರೈಸುವುದರಿಂದ ಖರ್ಚು ಕಡಿಮೆ ಮಾಡಬಹುದು ಹಾಗೂ ಗುಣಮಟ್ಟ ಸಹ ಕಾಯ್ದುಕೊಳ್ಳಬಹುದು’ ಎನ್ನುವುದು ಅವರ ಅನುಭವದ ಮಾತು.

ಹೆಚ್ಚಿನ ಮಾಹಿತಿಗೆ: 9480564244 (ಹನಮೇಶ್‌)

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.