ರಾಮಜನ್ಮಭೂಮಿಯಲ್ಲಿ ಹೊಸ ಸೌಲಭ್ಯ ಜಾರಿಗೆ ನಿರ್ಧಾರ : ಪೂಜೆ ವೀಕ್ಷಿಸಲು ಅವಕಾಶ
Team Udayavani, Mar 15, 2020, 7:00 AM IST
ಅಯೋಧ್ಯೆ: ಬರುವ ರಾಮ ನವಮಿ ದಿನದಂದು ಭಕ್ತರು ಅಯೋಧ್ಯೆಯ ರಾಮಜನ್ಮ ಭೂಮಿಗೆ ತೆರಳಿ ಶ್ರೀರಾಮ ಲಲ್ಲಾಗೆ ನಡೆಯುವ ಆರತಿಯನ್ನು ಮೊದಲ ಬಾರಿ ಕಣ್ತುಂಬಿಕೊಳ್ಳಬಹುದು.
ಭಕ್ತರಿಗೆ ಇಂಥ ಅವಕಾಶ ಕಲ್ಪಿಸಲು ಅಗತ್ಯವಿರುವ ಸಿದ್ಧತೆಗಳನ್ನು ಅಯೋಧ್ಯೆಯಲ್ಲಿ ಕೈಗೊಳ್ಳಲಾಗಿದೆ. ಇದಕ್ಕಾಗಿ ಹಾಲಿ ಮಂದಿರ ನಿರ್ಮಿಸುತ್ತಿರುವ ಸ್ಥಳದಿಂದ 200 ಮೀಟರ್ ದೂರದ ಸ್ಥಳಕ್ಕೆ ರಾಮ ಲಲ್ಲಾ ಮೂರ್ತಿಯನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗುತ್ತಿದೆ.
ಪ್ರತಿ ದಿನವೂ ಶ್ರೀರಾಮನಿಗೆ ಪೂಜೆ, ಆರತಿ ನೆರವೇರಿಸಲಾಗುತ್ತದೆ. ಆದರೆ, ದೇವಾಲಯದ ಮುಖ್ಯ ಅರ್ಚಕರು ಹಾಗೂ ಅವರ ಸಹಾಯಕರು ಮಾತ್ರ ಈ ಕೈಂಕರ್ಯಗಳನ್ನು ವೀಕ್ಷಿಸುತ್ತಾರೆ. ರಾಮ ನವಮಿಯನ್ನು ಶ್ರೀ ರಾಮನ ಜನ್ಮ ದಿನವೆಂದೇ ನಂಬಲಾಗಿದೆ. ಹೀಗಾಗಿ ಅಯೋಧ್ಯೆ ವಿವಾದ ಕುರಿತಂತೆ ಐತಿಹಾಸಿಕ ತೀರ್ಪು ಹೊರಬಂದ ಅನಂತರ ಬಂದಿರುವ ಮೊದಲ ರಾಮ ನವಮಿಯಂದು, ಪೂಜಾ ಕೈಂಕರ್ಯಗಳ ವೀಕ್ಷಣೆಗೆ ಭಕ್ತರಿಗೆ ಅವಕಾಶ ಕಲ್ಪಿಸಲು ದೇವಾಲಯ ಮಂಡಳಿ ತೀರ್ಮಾನಿಸಿದೆ.
ಕೊರೊನಾ ಭೀತಿ: ಈ ನಡುವೆ ದೇಶದಲ್ಲಿ ಕೊರೊನಾ ವೈರಸ್ ಆತಂಕ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಾಮ ಜನ್ಮಭೂಮಿಯಲ್ಲಿ ಎ. 2ರಂದು ಶ್ರೀರಾಮ ನವಮಿ ಆಚರಣೆಗೆ ಅವಕಾಶ ನೀಡಬಾರದು ಎಂಬ ಕೂಗು ಸಹ ಕೇಳಿಬರುತ್ತಿದೆ. ಪೂಜೆ ವೀಕ್ಷಣೆಗೆ ಮೊದಲ ಬಾರಿ ಅವಕಾಶ ನೀಡುತ್ತಿರುವ ಕಾರಣ ಲಕ್ಷಾಂತರ ಭಕ್ತರು ಸೇರುವ ಸಾಧ್ಯತೆಯಿದ್ದು, ವೈರಸ್ ಹರಡುವ ಸಾಧ್ಯತೆ ಇರುವುದರಿಂದ, ಆಚರಣೆಗೆ ಅವಕಾಶ ನೀಡಬಾರದು ಎಂದು ಒಂದು ಗುಂಪು ಆಗ್ರಹಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaamya; ನೇಪಾಳ ಭಾಗದಿಂದ ಮೌಂಟ್ ಎವರೆಸ್ಟ್ ಏರಿದ ಕಿರಿಯ ಭಾರತೀಯ ಎಂಬ ಸಾಧನೆ ಮಾಡಿ 16ರ ಬಾಲಕಿ
Dombivli: ಕೆಮಿಕಲ್ ಫ್ಯಾಕ್ಟರಿಯಲ್ಲಿ ಭೀಕರ ಸ್ಫೋಟ, ಭಾರೀ ಅಗ್ನಿ ಅವಘಡ
Warning!; ತಾಳ್ಮೆ ಪರೀಕ್ಷಿಸಬೇಡ..ಎಲ್ಲಿದ್ದರೂ ಬಾ: ಪ್ರಜ್ವಲ್ ಗೆ ದೇವೇಗೌಡರ ವಾರ್ನಿಂಗ್
Dudhsagar: ದೂದ್ ಸಾಗರ ಜಲಪಾತದಲ್ಲಿ ಮುಳುಗುತ್ತಿದ್ದ 3 ವರ್ಷದ ಬಾಲಕಿಯ ರಕ್ಷಣೆ
ವೈದ್ಯೆಗೆ ಲೈಂಗಿಕ ದೌರ್ಜನ್ಯ… ಆರೋಪಿಯನ್ನು ಬಂಧಿಸಲು ಆಸ್ಪತ್ರೆಯೊಳಗೆ ಬಂದ ಪೊಲೀಸ್ ಜೀಪ್
MUST WATCH
ಹೊಸ ಸೇರ್ಪಡೆ
‘ಅನರ್ಥ’ ನಂಬಿ ಬಂದ ಹೊಸಬರು; ಹಾಡು-ಟೀಸರ್ ರಿಲೀಸ್
ಮಜೀರ್ಪಳ್ಳ ನಿವಾಸಿ ನಿಗೂಢ ಸಾವು: ದಫನಗೈದ ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆ
Kyoto wale ಸೀಟ್ ಸೇರಿ ಯುಪಿಯ ಎಲ್ಲಾ ಕಡೆ ಬಿಜೆಪಿಗೆ ಸೋಲು: ಅಖಿಲೇಶ್
Kaamya; ನೇಪಾಳ ಭಾಗದಿಂದ ಮೌಂಟ್ ಎವರೆಸ್ಟ್ ಏರಿದ ಕಿರಿಯ ಭಾರತೀಯ ಎಂಬ ಸಾಧನೆ ಮಾಡಿ 16ರ ಬಾಲಕಿ
Kasaragod: ಹೊಸದುರ್ಗ; ಟ್ಯಾಂಕರ್ನಿಂದ ಅನಿಲ ಸೋರಿಕೆ