ಉಗುರಿನ ಮೇಲೆ ಚೆಲುವಿನ ಚಿತ್ತಾರ


Team Udayavani, Apr 1, 2020, 12:37 PM IST

ಉಗುರಿನ ಮೇಲೆ ಚೆಲುವಿನ ಚಿತ್ತಾರ

ಯಾವುದೇ ಸೃಜನಶೀಲ ಕಲೆ ಸಮಯವನ್ನು ಬೇಡುತ್ತದೆ. ಅಲಂಕಾರಕೂಡಾ ಅಂಥ ಒಂದು ಕಲೆಯೇ. ನೀಟಾಗಿ ಕಾಡಿಗೆ ತೀಡುವುದು, ಜಡೆ ಹೆಣೆಯುವುದು, ಉಗುರಿಗೆ ಬಣ್ಣ ಹಚ್ಚುವುದು ಅಲಂಕಾರದ ಮುಖ್ಯ ಭಾಗವೇ. ಅದರಲ್ಲೂ ಉಗುರಿಗೆ ಬಣ್ಣ ಹಚ್ಚುವುದು ನೈಲ್‌ ಆರ್ಟ್‌ ಎಂದೇ ಹೆಸರು ಪಡೆದಿದೆ. ಪುಟ್ಟ ಉಗುರಿನ ಮೇಲೆ ಅಂದ ಚಂದದ ಚಿತ್ತಾರ ಮೂಡಿಸುವುದನ್ನು ಕಲಿಯಲು ಇದೊಂದು ಒಳ್ಳೆಯ ಅವಕಾಶ…

ಕೋವಿಡ್ 19 ಹರಡುವ ಭೀತಿಯಿಂದ ಮನೆಯೊಳಗೆ ಬಂಧಿಯಾಗಿರುವವರು, ಹೇಗಪ್ಪಾ ಸಮಯ ಕಳೆಯುವುದು ಅಂತ ಗೊಣಗಬೇಕಿಲ್ಲ. ಸಿಕ್ಕ ಸಮಯದಸದುಪಯೋಗ ಪಡೆಯಿರಿ. ನೀವು ಅಲಂಕಾರ ಪ್ರಿಯರಾಗಿದ್ದರೆ, ನೈಲ್‌ ಆರ್ಟ್‌ ಅನ್ನು ಕಲಿಯಿರಿ. ಕೈ – ಕಾಲು ಬೆರಳುಗಳ ಉಗುರಿನ ಮೇಲೆ ಬಣ್ಣಗಳ ಚಿತ್ತಾರ ಮೂಡಿಸುತ್ತ, ಮನೆಯೊಳಗೇ ಇರಬೇಕಾದ ಬೇಸರವನ್ನು ಕಳೆಯಬಹುದು.

ಚಿತ್ತಾರದ ಚಮಕ್‌ :  ಉಗುರಿನ ಸುತ್ತಲೂ ಗೋಂದು ಅಥವಾ ಗಮ್‌ ಟೇಪ್‌ ಅಂಟಿಸಿ. ಒಂದು ಚಿಕ್ಕ ಪಾತ್ರೆಯಲ್ಲಿ ನೀರು ಹಾಕಿ, ಅದಕ್ಕೆ ಎರಡು ಬೇರೆ ಬೇರೆ ಬಣ್ಣದ ನೇಲ್‌ ಪಾಲಿಶ್‌ನ ಕೆಲವು ಹನಿಗಳನ್ನು ಬೆರೆಸಿ, ಕೈ ಬೆರಳನ್ನು ಮುಳುಗಿಸಿ ತೆಗೆಯಿರಿ. ಗೋಂದು ಅಥವಾ ಗಮ್‌ ಟೇಪ್‌ ತೆಗೆದಾಗ ಉಗುರಿನ ಮೇಲೆ ಸುಂದರವಾದ ಚಿತ್ತಾರ ಮೂಡಿರುತ್ತದೆ. ಒಂದು ಉಗುರಿನಂತೆ ಇನ್ನೊಂದು ಉಗುರಿನ ಚಿತ್ತಾರ ಇರುವುದಿಲ್ಲ. ಇದುವೇ ಈ ಕಲೆಯ ವೈಶಿಷ್ಟ್ಯ. ಎರಡು ಅಥವಾ ಹೆಚ್ಚಿನ ಬಣ್ಣಗಳನ್ನೂ ಬಳಸಬಹುದು. ಚಿತ್ರ ಬಿಡಿಸಲು ಬಾರದೆ ಇರುವವರೂ ಕಲಿಯಬಹುದಾದ ಕಲೆ ಇದು.

ಉಗುರೇ ಕ್ಯಾನ್ವಾಸ್‌ :  ಚಿತ್ರ ಬಿಡಿಸುವ ಆಸಕ್ತಿ ಉಳ್ಳವರಿಗೆ, ಉಗುರೇ ಕ್ಯಾನ್ವಾಸ್‌. ಉಗುರಿನ ಮೇಲೆ ಚಿತ್ರ ಪ್ರಯೋಗ ಮಾಡುವವರಿಗಾಗಿ ಇಲ್ಲಿದೆ ಒಂದು ಸರಳ ಉಪಾಯ. ಉಗುರಿಗೆ ಮೊದಲು ಬಿಳಿ ಅಥವಾ ತಿಳಿ ಬಣ್ಣದ ನೇಲ್‌ ಪಾಲಿಶ್‌ ಹಚ್ಚಿ. ಅದು ಒಣಗಿದ ನಂತರ ಸ್ಟೆನ್ಸಿಲ್ , ಸ್ಟಿಕರ್‌ ಅಥವಾ ಅಚ್ಚು ಬಳಸಿ ಗಾಢವಾದ ನೇಲ್‌ ಪಾಲಿಶ್‌ ಹಚ್ಚಿ. ಅಂಟಿಸಿದ ಸ್ಟಿಕರ್‌/ ಬಳಸಿದ ಸ್ಟೆನ್ಸಿಲ್‌ ಅಥವಾ ಅಚ್ಚನ್ನು ತೆಗೆದಾಗ ಉಗುರಿನ ಮೇಲೆ ಅಂದದ ಚಿತ್ರ ಮೂಡುತ್ತದೆ. ಒಂದು ವೇಳೆ ಉಗುರಿನ ಮೇಲೆ ಮೊದಲಿಗೆ ಕಪ್ಪು ಅಥವಾ ಇತರ ಗಾಢವಾದ ಬಣ್ಣ ಹಚ್ಚುವುದಾದರೆ ಸ್ಟೆನ್ಸಿಲ್ , ಸ್ಟಿಕರ್‌ ಅಥವಾ ಅಚ್ಚು ಬಳಸಿದಾಗ ತಿಳಿ ಬಣ್ಣದ ನೇಲ್‌ ಪಾಲಿಶ್‌ ಬಳಸ ಬೇಕು. ಮೊದಲಿಗೆ ಹಚ್ಚಿದ ಬಣ್ಣ ಒಣಗಿದ ನಂತರವಷ್ಟೇ ಎರಡನೇ ಬಣ್ಣ ಹಚ್ಚಬೇಕು.

ಇಂಟರ್ನೆಟ್‌ ಗುರು! :  ಮನೆಯೊಳಗೇ ಇದ್ದರೇನು, ಇಂಟರ್ನೆಟ್‌ ಎಂಬ ಗುರು ಜೊತೆಗಿದ್ದಾನಲ್ಲ! ಹಲವು ರೀತಿಯಲ್ಲಿ ಉಗುರುಗಳ ಮೇಲೆ ಬಣ್ಣದ ಚಿತ್ತಾರ ಮೂಡಿಸಲು ಇಂಟರ್ನೆಟ್‌ನಲ್ಲಿ ಟ್ಯುಟೋರಿಯಲ್‌ ವಿಡಿಯೋಗಳಿವೆ. ಅವುಗಳನ್ನು ನೋಡಿ, ಬಣ್ಣ ಹಚ್ಚುವುದು ಹೇಗೆ, ಚಿತ್ರ ಬಿಡಿಸುವುದು ಹೇಗೆ, ಬಗೆ ಬಗೆಯ ಕಲೆ ಮೂಡಿಸುವುದು ಹೇಗೆ ಎಂದು ಕಲಿಯಬಹುದು. ಒಂದು ವೇಳೆ ಪ್ಲಾನ್‌ ವರ್ಕ್‌ ಔಟ್‌ ಆಗದಿದ್ದರೆ ನೇಲ್‌ ಪಾಲಿಶ್‌ ರಿಮೂವರ್‌ ಇದ್ದೇ ಇದೆಯಲ್ಲ! ­

 

-ಅದಿತಿಮಾನಸ ಟಿ.ಎಸ್‌.

ಟಾಪ್ ನ್ಯೂಸ್

hdk

Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್20

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ವಚನ ಬದುಕು ಚಂದಾಗಿಸುವ ಕಾಲಾತೀತ ದಿವ್ಯ ಸಂದೇಶ: ಶಿವಾಚಾರ್ಯರು

ವಚನ ಬದುಕು ಚಂದಾಗಿಸುವ ಕಾಲಾತೀತ ದಿವ್ಯ ಸಂದೇಶ: ಶಿವಾಚಾರ್ಯರು

hdk

Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ

Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್20

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.