ಎಲ್ಲರೂ ಅನಿಲ್‌ ಕುಂಬ್ಳೆ ಆಗೋಕಾಗಲ್ಲ…


Team Udayavani, May 26, 2020, 4:36 AM IST

sant tank

ಸಂತೋಷದ ಮೂಲ ಇರುವುದು ಎಲ್ಲಿ ಗೊತ್ತಾ? ಕೃತಜ್ಞತೆಯಲ್ಲಿ. ಬೇರೆಯವರಿಗೆ ಕಷ್ಟದಲ್ಲಿ ಸಹಾಯ ಮಾಡುವುದು, ನಮಗೆ ಸಹಾಯ ಮಾಡಿದವರಿಗೆ ಕೃತಜ್ಞತೆ ಸಲ್ಲಿಸುವುದು ಇದೆಯಲ್ಲ; ಅದು ನಮ್ಮ ಸಂತೋಷವನ್ನು ಹೆಚ್ಚಿಸುತ್ತಾ  ಹೋಗುತ್ತದೆ. ಸುಖದ ಇನ್ನೊಂದು ಮೂಲ ಅಂದರೆ, ಚಾಪೆ ಎಷ್ಟಿರುತ್ತದೆಯೋ ಅಷ್ಟು ಮಾತ್ರ ಕಾಲು ಚಾಚುವುದು. ನಿಮ್ಮ ಆಸೆಯ ಕಾಲಿಗೆ ತಕ್ಕಷ್ಟು ಚಾಪೆ ಹುಡುಕದೇ ಇರುವುದು. ಅಂದರೆ, ದೇವರು ಇಷ್ಟನ್ನಾದರೂ ಕೊಟ್ಟಿದ್ದಾನಲ್ಲ  ಅಂತ ತೃಪ್ತಿ ಪಡುವುದು. ಬೇರೆಯವರನ್ನು ನೋಡಿ ಕರುಬದೇ ಇರುವುದು.

ಬೇಕಿದ್ದರೆ ಗಮನಿಸಿ ನೋಡಿ: ಸದಾ ಕೊರಗುವ ಮನಃಸ್ಥಿಯಲ್ಲಿರುವವರು ಸುಖವಾಗಿರೋಲ್ಲ. ಯಾವ ಮಟ್ಟಿಗೆ ಅಂದರೆ, ನಿದ್ದೆ ಮಾತ್ರೆ ಕೊಟ್ಟರೂ ಅವರ ಕಣ್ಣಿಗೆ  ನಿದ್ದೆ ಹತ್ತೂಲ್ಲ. ಕಾರಣ, ಅವನಿಗೆ ಲಕ್ಷ ರುಪಾಯಿ ಸಂಬಳದ ಕೆಲಸ ಸಿಕು¤, ನನಗೇಕೆ ಇಲ್ಲ? ನಾನೇನು ತಪ್ಪು ಮಾಡಿದ್ದೀನಿ ಅಂತ, ಇನ್ನೊಬ್ಬರೊಂದಿಗೆ ತಮ್ಮನ್ನುಹೋಲಿಕೆ ಮಾಡಿಕೊಳ್ಳುತ್ತಾ ಹೋಗುತ್ತಾರೆ. ಅಷ್ಟೇ ಅಲ್ಲ; ಈ  ಜನ, ಸಮಾಜ ನನಗೆ ಅನ್ಯಾಯ ಮಾಡಿಬಿಟ್ಟಿತು ಎಂಬ ನೆಗೆಟಿವ್‌ ಯೋಚನೆಯನ್ನು ಮನಸ್ಸಿಗೆ ತಂದುಕೊಳ್ಳುತ್ತಾರೆ.

ಆನಂತರದಲ್ಲಿ ಚಿಂತೆ ಹೆಚ್ಚುತ್ತಲೇ ಹೋಗುತ್ತದೆ. ಚಿಂತೆಯ ಸಂತೆಯೊಳಗೆ, ಸಂತೋಷ ಕಾಣೆಯಾಗುತ್ತದೆ. ಇದರಿಂದ  ಮುಕ್ತಿ ಪಡೆಯಬೇಕು ಅಂದರೆ, ಇನ್ನೊಬ್ಬರೊಂದಿಗೆ ಹೋಲಿಕೆ ಮಾಡಿಕೊಳ್ಳದೇ ಬದುಕಲು ಕಲಿಯಬೇಕು. ಬೇರೆಯವರು ಎತ್ತರಕ್ಕೆ  ಳೆದಿದ್ದಾರೆ ಅಂದಾಗ, ಅದಕ್ಕೆ ಸಂತೋಷಪಡಿ. ಅವರು ಆ ಸ್ಥಾನ ತಲುಪಲು ಎಷ್ಟು ಕಷ್ಟಪಟ್ಟರು  ಎಂಬುದನ್ನು ಗಮನಿಸಿ.

ಆ ದಾರಿ ಒಳ್ಳೆಯದು ಅನಿಸಿದರೆ, ಅದನ್ನು ಅನುಸರಿಸಿಯೇ ನೀವೂ ಹೆಜ್ಜೆಯಿಡಿ. ಅದು ಬಿಟ್ಟು ಕರುಬುವುದು ಸರಿಯಲ್ಲ. ಒಂದು ಸಲ ಕರುಬುವಿಕೆ ಶುರುವಾದರೆ, ಆನಂತರದಲ್ಲಿ ನಿಮ್ಮ ಯೋಚನೆಗಳೆಲ್ಲವೂ  ನೆಗೆಟೀವ್‌ ಆಗುತ್ತವೆ. ಅದೇ ಕಾರಣದಿಂದ ದೈಹಿಕ, ಮಾನಸಿಕ ಖನ್ನತೆ ಜೊತೆಯಾಗುತ್ತದೆ. ಒಂದು   ಸತ್ಯವನ್ನು ತಿಳಿಯಬೇಕು. ಈ ಜಗತ್ತಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಸ್ಪೇಸ್‌ ಇದೆ.

ಅದನ್ನು ಹೆಚ್ಚಿಗೆ, ಕಡಿಮೆ ಮಾಡಿಕೊಳ್ಳುವ  ಸಾಮರ್ಥ್ಯ, ನೈಪುಣ್ಯ ಎಲ್ಲವೂ ನಮ್ಮಕೈಯಲ್ಲೇ ಇರುವುದು. “ಲೋ, ಆ ಅನಿಲ್‌ ಕುಂಬ್ಳೆ 15 ಸಿ ಬಸ್‌ನಲ್ಲಿ ಓಡಾಡ್ತಾ ಇದ್ರು ಕಣೋ… ನಾನೇ ನೋಡಿದ್ದೀನಿ…’ ಅಂತ ಹೇಳ್ಳೋರು ಇದ್ದಾರೆ. ಸರಿ, ಅನಿಲ್‌ ಕುಂಬ್ಳೆ ಆಗ ಬಸ್‌ನಲ್ಲಿ ಓಡಾಡಿದರು ಅನ್ನುವುದು ಮುಖ್ಯ  ಅಲ್ಲ; ಬಸ್‌ನಲ್ಲಿ ಓಡಾಡುತ್ತಿದ್ದ ಒಬ್ಬ ಹುಡುಗ, ನಂತರ ಅಂತಾರಾಷ್ಟ್ರೀಯ ಮಟ್ಟದ ಆಟಗಾರನಾಗಿ ಬೆಳೆದನಲ್ಲ, ಅದಷ್ಟೇ ನಮಗೆ ಮುಖ್ಯವಾಗಬೇಕು.

ನೆನಪಿಡಿ: ಎಲ್ಲರೂ ಅನಿಲ್‌ ಕುಂಬ್ಳೆ ಆಗೋಕಾಗಲ್ಲ, ಹಾಗಂತ ಕರುಬುವ  ವಿಚಾರವಲ್ಲ ಇದು. ನೀವು ಕ್ರಿಕೆಟ್‌ನಲ್ಲಿ ಏನೂ ಮಾಡಲಾಗಲಿಲ್ಲ ಅಂತಾದರೆ ಬಿಡಿ, ನಿಮ್ಮದೇ ಒಂದು ಕ್ಷೇತ್ರ ಗುರುತಿಸಿಕೊಂಡು ಅಲ್ಲಿ   ನಾದರೂ ಸಾಧಿಸಬಹುದಲ್ಲ… ಗೊತ್ತಿರಲಿ, ಅನಿಲ್‌ ಕುಂಬ್ಳೆ ಮಾಡಿದ್ದು, ತೆಂಡೂಲ್ಕರ್‌  ಕಂಡುಕೊಂಡಿದ್ದು ಇದನ್ನೇ. ಅವರವರ ತಾಕತ್ತು, ಅಭಿರುಚಿ ಅರಿತು, ಬದುಕಿನ ದಾರಿಗಳನ್ನು ಹುಡುಕಿಕೊಂಡದ್ದು.

ಟಾಪ್ ನ್ಯೂಸ್

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

1-anna

BJP; ಅಸಮರ್ಥ ಅಣ್ಣಾಮಲೈ ರಾಜ್ಯ ಬಿಟ್ಟಿದ್ದು ಒಳ್ಳೆಯದಾಯಿತು: ಪ್ರಿಯಾಂಕ್‌ ಖರ್ಗೆ

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Ramalinga reddy 2

BJP ಒಂದಂಕಿಗೆ ಕುಸಿತ: ಸಚಿವ ರಾಮಲಿಂಗಾ ರೆಡ್ಡಿ ಭವಿಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

BJP Symbol

Madhya Pradesh: ಮತ್ತೊಬ್ಬ ಕಾಂಗ್ರೆಸ್‌ ಎಂಎಲ್‌ಎ ಬಿಜೆಪಿಗೆ

arrested

ನೂಪುರ್‌ ಶರ್ಮಾ, ಬಿಜೆಪಿ ಶಾಸಕನ ಹತ್ಯೆ ಸಂಚು: ಮೌಲ್ವಿ ಬಂಧನ

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.