ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾದ, ಲಾಕ್‌ಡೌನ್‌ ನಾಲ್ಕನೇ ಚರಣ


Team Udayavani, May 29, 2020, 6:18 AM IST

ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾದ, ಲಾಕ್‌ಡೌನ್‌ ನಾಲ್ಕನೇ ಚರಣ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಲಾಕ್‌ಡೌನ್‌ ನಾಲ್ಕನೇ ಚರಣದ ಆರಂಭದಿಂದ ದೇಶಾದ್ಯಂತ ಸಂಚಾರ ಸೇರಿದಂತೆ ವಿವಿಧ ನಿರ್ಬಂಧಗಳು ಸಡಿಲಗೊಂಡಿವೆ.

ಅನ್ಯ ರಾಜ್ಯಗಳಿಗೆ ವಲಸೆ ಹೋದವರು ತಮ್ಮ ತವರು ರಾಜ್ಯಕ್ಕೆ ಬೃಹತ್‌ ಪ್ರಮಾಣದಲ್ಲಿ ಹಿಂದಿರುಗುತ್ತಿರುವುದರ ಜತೆಗೆ, ಕೋವಿಡ್ ಪ್ರಕರಣಗಳ ಸಂಖ್ಯೆಯೂ ಅಧಿಕವಾಗುತ್ತಿದೆ.

ಕರ್ನಾಟಕದಲ್ಲಿ ಪತ್ತೆಯಾದ ಹೊಸ ಸೋಂಕಿತರಲ್ಲಿ ಬಹುತೇಕರು ಮಹಾರಾಷ್ಟ್ರದಿಂದ ಹಿಂದಿರುಗಿದವರು.

ನಮ್ಮಲ್ಲೆಂದಷ್ಟೇ ಅಲ್ಲ, ಮೇ 17ರವರೆಗೂ ಕೋವಿಡ್‌-19 ಅನ್ನು ತಡೆಯಲು ಸಾಕಷ್ಟು ಯಶಸ್ವಿಯಾಗಿದ್ದ ಹಲವು ರಾಜ್ಯಗಳಲ್ಲಿ ಈಗ ರೋಗಿಗಳ ಸಂಖ್ಯೆ ಹಠಾತ್ತನೆ ಏರಿಕೆಯಾಗಿರುವುದಷ್ಟೇ ಅಲ್ಲದೇ, ಅಲ್ಲಿ ರೋಗ ದ್ವಿಗುಣಗೊಳ್ಳುವ ದರದಲ್ಲೂ ವೇಗ ಕಾಣಿಸಿಕೊಂಡಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಕೊರೊನಾ ಮಹಾನಗರಗಳನ್ನು ದಾಟಿ, ಗ್ರಾಮೀಣ ಪ್ರದೇಶಗಳಿಗೂ ಅಡಿ ಇಟ್ಟಿರುವುದು ನಿಜಕ್ಕೂ ಆತಂಕದ ವಿಚಾರ.

ನಾಲ್ಕು ರಾಜ್ಯಗಳ ಸ್ಥಿತಿ
ಮೇ 17ರಂದು ಭಾರತ ನಿಧಾನಕ್ಕೆ ನಿರ್ಬಂಧಗಳನ್ನು ಸಡಿಲಗೊಳಿಸುವ ವೇಳೆಯಲ್ಲಿ ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 90,927 ಇದ್ದರೆ, 2,872 ಮಂದಿ ಮೃತಪಟ್ಟಿದ್ದರು. ಇದಾದ ಹತ್ತು ದಿನಗಳ ನಂತರ, ಅಂದರೆ ಮೇ 27ಕ್ಕೆ ದೇಶದಲ್ಲಿ 1,51,767 ಪ್ರಕರಣಗಳು ಹಾಗೂ 4,337 ಸಾವುಗಳು ದಾಖಲಾಗಿವೆ.

ಅದರಲ್ಲೂ ಮೇ 18ರಿಂದ ಕೆಲವು ರಾಜ್ಯಗಳಲ್ಲಿ ಸೋಂಕು ಪ್ರಮಾಣವು ದ್ವಿಗುಣಗೊಳ್ಳುವ ದರವೂ ವೇಗ ಪಡೆದಿದ್ದು, ಅಸ್ಸಾಂ, ಉತ್ತರಾಖಂಡ, ಛತ್ತೀಸ್‌ಗಢ ಮತ್ತು ಹಿಮಾಚಲ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ ಬಹುಬೇಗನೇ ದ್ವಿಗುಣಗೊಳ್ಳುತ್ತಿದೆ.

ಮೇ ಎರಡನೇ ವಾರದವರೆಗೂ ಈ ನಾಲ್ಕೂ ರಾಜ್ಯಗಳ ಅನೇಕ ಜಿಲ್ಲೆಗಳು ಹಸುರುಪಟ್ಟಿಯಲ್ಲಿದ್ದವು. ಮೇ 3ರ ವೇಳೆಗೆ ಅಸ್ಸಾಂನ 64 ಪ್ರತಿಶತ ಜಿಲ್ಲೆಗಳು, ಉತ್ತರಾಖಂಡದ 62 ಪ್ರತಿಶತ ಜಿಲ್ಲೆಗಳು, ಛತ್ತೀಸ್‌ಗಢದ 86 ಪ್ರತಿಶತ ಹಾಗೂ ಹಿಮಾಚಲ ಪ್ರದೇಶದ 58 ಪ್ರತಿಶತ ಜಿಲ್ಲೆಗಳು ಹಸುರುಪಟ್ಟಿಯಲ್ಲಿದ್ದವು. ಈಗ ಈ ರಾಜ್ಯಗಳ ಅನೇಕ ಜಿಲ್ಲೆಗಳಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ.

ಅಸ್ಸಾಂ
ಲಾಕ್‌ಡೌನ್‌ 4.0 ಅನಂತರದಿಂದ ಅಸ್ಸಾಂನಲ್ಲಿ ಪ್ರತಿ 3.45 ದಿನಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಮೇ 17ರಂದು ಅಸ್ಸಾಂನಲ್ಲಿ ಕೇವಲ 92 ಪ್ರಕರಣಗಳು ದಾಖಲಾಗಿದ್ದವು, ಮೇ 27ರ ವೇಳೆಗೆ ಆ ಪುಟ್ಟ ರಾಜ್ಯದಲ್ಲಿ 616 ಕೋವಿಡ್ ಪೀಡಿತರು ಪತ್ತೆಯಾದರು.

ಇದರಲ್ಲಿ 400 ಪ್ರಕರಣಗಳು ಕಳೆದ ಮೂರು ವಾರಗಳಲ್ಲಿ ರೈಲು, ರಸ್ತೆಯ ಮೂಲಕ ಹಿಂದಿರುಗಿದವರಲ್ಲಿ ಪತ್ತೆಯಾಗಿವೆ. ಮೇ 24ರ ವೇಳೆಗೆ ಆ ರಾಜ್ಯಕ್ಕೆ 60 ಸಾವಿರಕ್ಕೂ ಹೆಚ್ಚು ಜನರು ಹಿಂದಿರುಗಿದ್ದಾರೆ. ಸೋಮವಾರ ವಿಮಾನ ಸಂಚಾರವೂ ಆರಂಭವಾಗಿರುವುದರಿಂದ, ಅಸ್ಸಾಂ ಸರಕಾರಕ್ಕೆ ಹೊಸ ತಲೆನೋವು ಶುರುವಾಗಿದ್ದು, ವಿಮಾನದಿಂದ ಬಂದಿಳಿಯುವವರಿಗೆ ಅದು ಕ್ವಾರಂಟೈನ್‌ ಸೌಲಭ್ಯ ಕಲ್ಪಿಸಲಾರಂಭಿಸಿದೆ.

ಉತ್ತರಾಖಂಡ
ಉತ್ತರಾಖಂಡದಲ್ಲಿ ಕೋವಿಡ್ ಪ್ರಕರಣಗಳು 4.2 ದಿನಕ್ಕೆ ದ್ವಿಗುಣಗೊಳ್ಳುತ್ತಿವೆ. ಮೇ 17ರಂದು ಉತ್ತರಾಖಂಡದಲ್ಲಿ 88 ಪ್ರಕರಣಗಳು ದಾಖಲಾಗಿದ್ದವು. ಇದಾದ ಕೇವಲ ಹತ್ತೇ ದಿನದಲ್ಲಿ ಸೋಂಕಿತರ ಸಂಖ್ಯೆ 469ಕ್ಕೆ ಏರಿದೆ. ಅಸ್ಸಾಂನಂತೆಯೇ ಉತ್ತರಾಖಂಡದಲ್ಲೂ ಅನ್ಯ ರಾಜ್ಯಗಳಿಂದ, ಅದರಲ್ಲೂ ಮಹಾರಾಷ್ಟ್ರ ಹಾಗೂ ದಿಲ್ಲಿಯಿಂದ ಹಿಂದಿರುಗಿದವರಲ್ಲೇ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಇತ್ತೀಚೆಗೆ ಮಹಾರಾಷ್ಟ್ರದಿಂದ ನೈನಿತಾಲ್‌ಗೆ ಬಂದಿಳಿದ 59 ಜನರಲ್ಲಿ  32 ಸೋಂಕಿತರು ಪತ್ತೆಯಾಗಿದ್ದಾರೆ!

ಛತ್ತೀಸ್‌ಗಢ
ಪ್ರಕರಣಗಳು ದ್ವಿಗುಣಗೊಳ್ಳುವ ವೇಗದಲ್ಲಿ ಛತ್ತೀಸ್‌ಗಢವು ಮೂರನೇ ಸ್ಥಾನದಲ್ಲಿದ್ದು ಪ್ರತಿ 4.3 ದಿನಕ್ಕೆ ಅಲ್ಲಿ ಪ್ರಕರಣಗಳ ಸಂಖ್ಯೆ ದ್ವಿಗುಣಗೊಳ್ಳುತ್ತಿದ್ದು ಮೇ 17ಕ್ಕೆ 67ರಷ್ಟಿದ್ದ ಪ್ರಕರಣಗಳು ಮೇ 27ರ ವೇಳೆಗೆ 361ಕ್ಕೆ ಏರಿವೆ. ಬುಧವಾರ ಒಂದೇ ದಿನ, ಅತಿ ಹೆಚ್ಚು, ಅಂದರೆ 70 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇವರಲ್ಲಿ 58 ಜನ ಮಹಾರಾಷ್ಟ್ರದಿಂದ ಹಿಂದಿರುಗಿದವರೇ ಆಗಿದ್ದಾರೆ. ಛತ್ತೀಸ್‌ಗಢ ಮಹಾರಾಷ್ಟ್ರದೊಂದಿಗೆ ಗಡಿ ಹಂಚಿಕೊಂಡಿದ್ದು, ಅಪಾಯದ ತೂಗುಗತ್ತಿ ಆ ರಾಜ್ಯದ ಮೇಲೆ ನೇತಾಡುತ್ತಲೇ ಇದೆ.

ಹಿಮಾಚಲ ಪ್ರದೇಶ
ಮೇ 18ರಿಂದ ಹಿಮಾಚಲ ಪ್ರದೇಶದಲ್ಲಿ ಕೋವಿಡ್ ಪ್ರಕರಣಗಳು ಪ್ರತಿ 5.5 ದಿನಕ್ಕೆ ದ್ವಿಗುಣಗೊಳ್ಳುತ್ತಿವೆ. ಮೇ 17ರಂದು ಆ ರಾಜ್ಯದಲ್ಲಿ ಕೋವಿಡ್‌-19 ಪ್ರಕರಣಗಳ ಸಂಖ್ಯೆ 78 ಇತ್ತು. ಹತ್ತು ದಿನಗಳಲ್ಲಿ ಅದು 247ಕ್ಕೆ ಏರಿದೆ. ಈ ರಾಜ್ಯದಲ್ಲೂ  ಮುಂಬಯಿಯಿಂದ ಬಂದವರಲ್ಲೇ ಸೋಂಕಿತರು ಅಧಿಕವಿದ್ದಾರೆ.

ಪ್ರಕರಣಗಳ ದ್ವಿಗುಣ ದರ
ಸೋಂಕಿತರ ಸಂಖ್ಯೆಯು ರಾಷ್ಟ್ರೀಯ ಸ್ತರದಲ್ಲಿ ಸರಾಸರಿ 13.7 ದಿನಕ್ಕೆ ದ್ವಿಗುಣಗೊಳ್ಳುತ್ತಿದೆ. ಆದರೆ ದೇಶದ 12 ರಾಜ್ಯಗಳಲ್ಲಿ ಪ್ರಕರಣಗಳ ದ್ವಿಗುಣಗೊಳ್ಳುವ ದರ ರಾಷ್ಟ್ರೀಯ ಸರಾಸರಿಗಿಂತಲೂ ವೇಗವಾಗಿದ್ದು ಆತಂಕ ಸೃಷ್ಟಿಯಾಗಿದೆ.

ಅಸ್ಸಾಂ, ಉತ್ತರಾಖಂಡ, ಛತ್ತೀಸ್‌ಗಢ, ಹಿಮಾಚಲ ಪ್ರದೇಶ ಸೇರಿದಂತೆ ಇತರ ರಾಜ್ಯಗಳಲ್ಲೂ ಕೋವಿಡ್ ಡಬಲಿಂಗ್‌ ರೇಟ್‌, ರಾಷ್ಟ್ರೀಯ ಸರಾಸರಿಗಿಂತಲೂ ವೇಗವಾಗಿದೆ.

ರಾಜ್ಯ    –    ರೋಗ ದ್ವಿಗುಣ ದರ

ಬಿಹಾರ                 7.25 ದಿನ

ಕರ್ನಾಟಕ            9.06 ದಿನ

ಝಾರ್ಖಂಡ್‌       9.63 ದಿನ

ಒಡಿಶಾ                  10.3 ದಿನ

ಮಹಾರಾಷ್ಟ್ರ       12.35 ದಿನ

ಕೇರಳ                    13.23 ದಿನ

ತಮಿಳುನಾಡು      13.64 ದಿನ

(ರಾಷ್ಟ್ರೀಯ ಸರಾಸರಿ 13.7)

ಟಾಪ್ ನ್ಯೂಸ್

T20 World Cup: ಅಮೆರಿಕಕ್ಕೆ ಹೊರಟ ರೋಹಿತ್ ಬಳಗ; ವಿಮಾನ ತಪ್ಪಿಸಿಕೊಂಡ ಕೊಹ್ಲಿ, ಹಾರ್ದಿಕ್

T20 World Cup: ಅಮೆರಿಕಕ್ಕೆ ಹೊರಟ ರೋಹಿತ್ ಬಳಗ; ವಿಮಾನ ತಪ್ಪಿಸಿಕೊಂಡ ಕೊಹ್ಲಿ, ಹಾರ್ದಿಕ್

Shaheen Afridi rejected as vice-captain of Pakistan team; But PCB says otherwise

Pakistan ತಂಡದ ಉಪ ನಾಯಕತ್ವ ತಿರಸ್ಕರಿಸಿದ ಶಾಹೀನ್ ಅಫ್ರಿದಿ; ಆದರೆ ಪಿಸಿಬಿ ಹೇಳುವುದೇ ಬೇರೆ

Delhi ಮಕ್ಕಳ ಆಸ್ಪತ್ರೆಯಲ್ಲಿ ಅಗ್ನಿ ಅವಘಡ; ಆರು ಮಕ್ಕಳು ಸಾವು

Delhi ಮಕ್ಕಳ ಆಸ್ಪತ್ರೆಯಲ್ಲಿ ಅಗ್ನಿ ಅವಘಡ; ಆರು ಮಕ್ಕಳು ಸಾವು

Hassan; ಟ್ರಕ್ ಕಾರು ನಡುವೆ ಭೀಕರ ಅಪಘಾತ; ಸ್ಥಳದಲ್ಲೇ ಕೊನೆಯುಸಿರೆಳೆದ ಐವರು

Hassan; ಟ್ರಕ್ ಕಾರು ನಡುವೆ ಭೀಕರ ಅಪಘಾತ; ಸ್ಥಳದಲ್ಲೇ ಕೊನೆಯುಸಿರೆಳೆದ ಆರು ಜನರು

Udupi Gang war; Did the failure of the beat system lead to the incident?

Udupi Gang war; ಬೀಟ್‌ ವ್ಯವಸ್ಥೆ ಲೋಪವೇ ಘಟನೆಗೆ ಕಾರಣವಾಯಿತೇ?

SUNಕನ್ನಡ ಜಾನಪದ ಚಿತ್ರಕ್ಕೆ ಲಾ ಸಿನೆಫ್ ಗೌರವ

ಕನ್ನಡ ಜಾನಪದ ಚಿತ್ರಕ್ಕೆ ಲಾ ಸಿನೆಫ್ ಗೌರವ

Malpe ಪುನರುಜ್ಜೀವನಕ್ಕಾಗಿ ಕಾಯುತ್ತಿದೆ ತೊಟ್ಟಂ ಕುಮೆ ಕೆರೆ

Malpe ಪುನರುಜ್ಜೀವನಕ್ಕಾಗಿ ಕಾಯುತ್ತಿದೆ ತೊಟ್ಟಂ ಕುಮೆ ಕೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Delhi ಮಕ್ಕಳ ಆಸ್ಪತ್ರೆಯಲ್ಲಿ ಅಗ್ನಿ ಅವಘಡ; ಆರು ಮಕ್ಕಳು ಸಾವು

Delhi ಮಕ್ಕಳ ಆಸ್ಪತ್ರೆಯಲ್ಲಿ ಅಗ್ನಿ ಅವಘಡ; ಆರು ಮಕ್ಕಳು ಸಾವು

Highest Temperature; ರಾಜಸ್ಥಾನದ ಫ‌ಲೋಡಿಯಲ್ಲಿ 50 ಡಿಗ್ರಿಗೆ ಏರಿದ ತಾಪ!

Highest Temperature; ರಾಜಸ್ಥಾನದ ಫ‌ಲೋಡಿಯಲ್ಲಿ 50 ಡಿಗ್ರಿಗೆ ಏರಿದ ತಾಪ!

Election Commission; 5 ಹಂತದ ಚುನಾವಣೆ ಕ್ಷೇತ್ರವಾರು ಮತದಾನ ಮಾಹಿತಿ ಬಹಿರಂಗ

Election Commission; 5 ಹಂತದ ಚುನಾವಣೆ ಕ್ಷೇತ್ರವಾರು ಮತದಾನ ಮಾಹಿತಿ ಬಹಿರಂಗ

Madhya Pradesh ಧ್ವನಿ ಬದಲಿಸುವ ಆ್ಯಪ್‌ ಬಳಸಿ 7 ಮಂದಿ ಮೇಲೆ ಅತ್ಯಾಚಾರ

Madhya Pradesh ಧ್ವನಿ ಬದಲಿಸುವ ಆ್ಯಪ್‌ ಬಳಸಿ 7 ಮಂದಿ ಮೇಲೆ ಅತ್ಯಾಚಾರ

Mount ಎವರೆಸ್ಟ್‌ನಲ್ಲಿ ಈವರೆಗೆ 7 ಸಾವು

Mount ಎವರೆಸ್ಟ್‌ನಲ್ಲಿ ಈವರೆಗೆ 7 ಸಾವು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

T20 World Cup: ಅಮೆರಿಕಕ್ಕೆ ಹೊರಟ ರೋಹಿತ್ ಬಳಗ; ವಿಮಾನ ತಪ್ಪಿಸಿಕೊಂಡ ಕೊಹ್ಲಿ, ಹಾರ್ದಿಕ್

T20 World Cup: ಅಮೆರಿಕಕ್ಕೆ ಹೊರಟ ರೋಹಿತ್ ಬಳಗ; ವಿಮಾನ ತಪ್ಪಿಸಿಕೊಂಡ ಕೊಹ್ಲಿ, ಹಾರ್ದಿಕ್

Shaheen Afridi rejected as vice-captain of Pakistan team; But PCB says otherwise

Pakistan ತಂಡದ ಉಪ ನಾಯಕತ್ವ ತಿರಸ್ಕರಿಸಿದ ಶಾಹೀನ್ ಅಫ್ರಿದಿ; ಆದರೆ ಪಿಸಿಬಿ ಹೇಳುವುದೇ ಬೇರೆ

Delhi ಮಕ್ಕಳ ಆಸ್ಪತ್ರೆಯಲ್ಲಿ ಅಗ್ನಿ ಅವಘಡ; ಆರು ಮಕ್ಕಳು ಸಾವು

Delhi ಮಕ್ಕಳ ಆಸ್ಪತ್ರೆಯಲ್ಲಿ ಅಗ್ನಿ ಅವಘಡ; ಆರು ಮಕ್ಕಳು ಸಾವು

Hassan; ಟ್ರಕ್ ಕಾರು ನಡುವೆ ಭೀಕರ ಅಪಘಾತ; ಸ್ಥಳದಲ್ಲೇ ಕೊನೆಯುಸಿರೆಳೆದ ಐವರು

Hassan; ಟ್ರಕ್ ಕಾರು ನಡುವೆ ಭೀಕರ ಅಪಘಾತ; ಸ್ಥಳದಲ್ಲೇ ಕೊನೆಯುಸಿರೆಳೆದ ಆರು ಜನರು

Udupi Gang war; Did the failure of the beat system lead to the incident?

Udupi Gang war; ಬೀಟ್‌ ವ್ಯವಸ್ಥೆ ಲೋಪವೇ ಘಟನೆಗೆ ಕಾರಣವಾಯಿತೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.