ಶೈಕ್ಷಣಿಕ ಚಟುವಟಿಕೆ ಗಟ್ಟಿಗೊಳಿಸಲು ಸಹಭಾಗಿತ್ವ ಮುಖ್ಯ


Team Udayavani, Jan 29, 2021, 6:15 AM IST

ಶೈಕ್ಷಣಿಕ ಚಟುವಟಿಕೆ ಗಟ್ಟಿಗೊಳಿಸಲು ಸಹಭಾಗಿತ್ವ ಮುಖ್ಯ

ಕೊರೊನಾ ತೀವ್ರತೆ ಇಳಿಮುಖವಾಗುತ್ತಿದ್ದಂತೆ ರಾಜ್ಯದಲ್ಲಿ ಶೈಕ್ಷಣಿಕ ಚಟುವಟಿಕೆಗಳು ಚುರುಕುಗೊಳ್ಳುತ್ತಿವೆ. ಈಗಾಗಲೇ ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳನ್ನು ಆರಂಭಿಸಿರುವ ರಾಜ್ಯ ಸರಕಾರ. ಫೆಬ್ರವರಿ 1ರಿಂದ 9 ಮತ್ತು 11ನೇ ತರಗತಿಗಳನ್ನು ಶುರುಮಾಡಲಿದೆ. ಅಲ್ಲದೆ 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ ಕಾರ್ಯಕ್ರಮ ಮುಂದುವರಿಯಲಿದೆ. ಉಳಿದ ತರಗತಿಗಳನ್ನು ಆರಂಭಿಸುವ ಅಥವಾ ಅವುಗಳಿಗೂ ವಿದ್ಯಾಗಮ ನಡೆಸುವ ಬಗ್ಗೆ ಶೀಘ್ರವೇ ಕೋವಿಡ್‌ ಸಲಹಾ ಸಮಿತಿಯ ಸಲಹೆಗಳನ್ನು ಸರಕಾರ ಪಡೆಯಲಿದೆ.

ಹಾಗೆಯೇ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯ ದಿನಾಂಕವೂ ನಿಗದಿ ಯಾಗಿದೆ. ರಾಜ್ಯ ಸರಕಾರ ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿ ಹಾಗೂ ಭವಿಷ್ಯ ವನ್ನು ಗಮನದಲ್ಲಿಟ್ಟುಕೊಂಡು ತರಗತಿ ಹಾಗೂ ವಿದ್ಯಾಗಮ ಕಾರ್ಯಕ್ರಮಗಳನ್ನು ಆರಂಭಿಸಿದೆ. ಅಷ್ಟು ಮಾತ್ರವಲ್ಲದೆ ಕೋವಿಡ್‌ ತಾಂತ್ರಿಕ ನಿರ್ವಹಣ ಸಮಿತಿಯ ಮಾರ್ಗದರ್ಶನದಂತೆ ನಿರ್ದಿಷ್ಟ ಕಾರ್ಯಚರಣ ವಿಧಾನ (ಎಸ್‌ಒಪಿ) ಕೂಡ ಪ್ರಕಟಿಸಿದೆ. ಒಟ್ಟಾರೆಯಾಗಿ ಅತ್ಯಂತ ಸುರಕ್ಷಿತ ವಲಯದಲ್ಲಿ ವಿದ್ಯಾರ್ಥಿಗಳ ಶಿಕ್ಷಣ ಮುಂದುವರಿ ಯುತ್ತಿದೆ. ಈಗ ಪಾಲಕ, ಪೋಷಕರ ಹಾಗೂ ಶಿಕ್ಷಕ ಮತ್ತು ಸಮುದಾ ಯದ ಜವಾಬ್ದಾರಿ ಹೆಚ್ಚಿದೆ. ನೇರ ತರಗತಿ, ಆಫ್ಲೈನ್‌ ಅಥವಾ ಆನ್‌ಲೈನ್‌ ತರಗತಿಗೆ ಅವಕಾಶವನ್ನು ಸರಕಾರ ಮಾಡಿಕೊಟ್ಟಿದೆ. ಕನಿಷ್ಠ ಹಾಜರಾತಿ ಮಿತಿಯ ವಿನಾಯಿತಿಯನ್ನೂ ನೀಡಿದೆ. ಇಲ್ಲಲ್ಲದರ ಸದುಪಯೋಗ ಮಕ್ಕಳ ಶಿಕ್ಷಣ, ಶೈಕ್ಷಣಿಕ ಬೆಳವಣಿಗೆಯಲ್ಲಿ ಕಾಣಬೇಕು.

ಇದು ಅತ್ಯಂತ ವಿಶಿಷ್ಟವಾದ ಶೈಕ್ಷಣಿಕ ವರ್ಷ. ಶಾಲೆಗಳು ವಿಳಂಬ ವಾಗಿ ಆರಂಭವಾಗಿವೆೆ. ತಂತ್ರಜ್ಞಾನ ಬಳಕೆಯೂ ಹೆಚ್ಚಿದೆ ಮತ್ತು ವಾರ್ಷಿಕ ಪರೀಕ್ಷೆಗೆ ಕಾಲಮಿತಿಯೂ ಕಡಿಮೆಯಿದೆ. ಹೀಗಾಗಿ ಈವರೆಗೂ ಮಕ್ಕಳನ್ನೂ ಶಾಲೆಗೆ ದಾಖಲು ಮಾಡದ ಪಾಲಕ, ಪೋಷಕರು ಮೊದಲು ತಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸುವ ಬಗ್ಗೆ ಯೋಚಿಸಬೇಕಿದೆ. ನೇರ ತರಗತಿಗೆ ಕಳುಹಿಸುವ ಅಥವಾ ಆನ್‌ಲೈನ್‌ ಓದಿಸುವ ಆಯ್ಕೆ ಪೋಷಕರಿಗೇ ಬಿಟ್ಟಿರುವುದರಿಂದ ಮಕ್ಕಳ ಶೈಕ್ಷಣಿಕ ಭವಿಷ್ಯ ಯೋಚಿಸಿ ನಿರ್ಧರಿಸಿ ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಮಕ್ಕಳನ್ನು ಸಜ್ಜುಗೊಳಿಸಲು ಮನೆಯಲ್ಲೇ ಸಕಾ ರಾತ್ಮಕ ಭಾವನೆ ಬೆಳೆಸಬೇಕಾಗಿದೆ.
ಶಿಕ್ಷಕ, ಉಪನ್ಯಾಸಕರು ಇನ್ನು ವಿಶೇಷ ತರಗತಿ, ವಿಶಿಷ್ಟ ಬೋಧನಾ ವಿಧಾನದ ಮೂಲಕ ಮಕ್ಕಳನ್ನು ಪರೀಕ್ಷೆಗೆ ಸಜ್ಜಾಗಿಸಬೇಕು. ಸಮುದಾ ಯವೂ ಈ ಕಾರ್ಯಕ್ಕೆ ಸರಕಾರ ಮತ್ತು ಶಿಕ್ಷಣ ಇಲಾಖೆಯ ಜತೆಗೆ ಕೈಜೋಡಿಸಬೇಕು. ಶೈಕ್ಷಣಿಕ ವಿಚಾರವಾಗಿ ಶಿಕ್ಷಣ ಇಲಾಖೆ ಎಲ್ಲ ರೀತಿ ಯಲ್ಲೂ ಸನ್ನದ್ಧವಾಗಿದೆ. ಇಂದಿನ ಅಗತ್ಯಕ್ಕೆ ಅನುಗುಣವಾಗಿ ಭೌತಿಕ ಸೌಲಭ್ಯಗಳಾದ ಮಾಸ್ಕ್, ಸ್ಯಾನಿಟೈಸರ್‌, ಸ್ಕ್ರೀನಿಂಗ್‌ ಮೆಷಿನ್‌, ಕುಡಿಯಲು ಬಿಸಿನೀರಿನ ವ್ಯವಸ್ಥೆ ಹೀಗೆ ಶಾಲಾ ಮಕ್ಕಳ ಪರಿಸರ ಶುಚಿತ್ವ ಕಾಪಾಡುವ ಕಾರ್ಯ ಸ್ಥಳೀಯವಾಗಿ ಸಮುದಾಯದ ಪಾಲ್ಗೊಳ್ಳುವಿಕೆಯಿಂದ ನಡೆಯಬೇಕಿದೆ.

ಒಟ್ಟಾರೆಯಾಗಿ ರಾಜ್ಯ ಸರಕಾರ ಕೊರೊನಾ ಬಿಕ್ಕಟ್ಟಿನ ನಡುವೆ ಶೈಕ್ಷಣಿಕ ಚಟುವಟಿಕೆ ಚುರುಕುಗೊಳಿಸುವ ಎಲ್ಲ ಕಾರ್ಯ ಸಮರ್ಪಕವಾಗಿ ಮಾಡುತ್ತಿದೆ. ಇದನ್ನು ಇನ್ನಷ್ಟು ಗಟ್ಟಿಗೊಳಿಸಿ, ಮಕ್ಕಳ ಶೈಕ್ಷಣಿಕ ಭವಿಷ್ಯ ಉಜ್ವಲಗೊಳಿಸುವ ಮಹತ್ತರ ಜವಾಬ್ದಾರಿ ಶಿಕ್ಷಣ ಇಲಾಖೆ, ಶಿಕ್ಷಕರು, ಪಾಲಕ, ಪೋಷಕರು ಹಾಗೂ ಸಮುದಾಯದ ಮೇಲಿದೆ.

ಟಾಪ್ ನ್ಯೂಸ್

ಬಸ್ಸಿನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ… ಬಸ್ ಸಿಬಂದಿ, ವೈದ್ಯರ ಸ್ಪಂದನೆಗೆ ಮೆಚ್ಚುಗೆ

ಬಸ್ಸಿನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ… ಬಸ್ ಸಿಬಂದಿ, ವೈದ್ಯರ ಕಾರ್ಯಕ್ಕೆ ಮೆಚ್ಚುಗೆ

Jagannath Festival: ಪುರಿಯ ಜಗನ್ನಾಥ ಉತ್ಸವದ ವೇಳೆ ಪಟಾಕಿ ಸ್ಫೋಟಗೊಂಡು 15 ಮಂದಿಗೆ ಗಾಯ

Jagannath Festival: ಪುರಿಯ ಜಗನ್ನಾಥ ಉತ್ಸವದ ವೇಳೆ ಪಟಾಕಿ ಸ್ಫೋಟಗೊಂಡು 15 ಮಂದಿಗೆ ಗಾಯ

Code of Conduct: ಮೋದಿ ಧ್ಯಾನ ನೀತಿ ಸಂಹಿತೆ ಉಲ್ಲಂಘನೆ: ಆಯೋಗಕ್ಕೆ ದೂರು ನೀಡಿದ ಕಾಂಗ್ರೆಸ್

Code of Conduct: ಮೋದಿ ಧ್ಯಾನ ನೀತಿ ಸಂಹಿತೆ ಉಲ್ಲಂಘನೆ: ಆಯೋಗಕ್ಕೆ ದೂರು ನೀಡಿದ ಕಾಂಗ್ರೆಸ್

Lok Sabha Election: ಜೂನ್‌ 1ಕ್ಕೆ ಕೊನೆಯ ಹಂತ: ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ ತೆರೆ

Lok Sabha Election: ಜೂನ್‌ 1ಕ್ಕೆ ಕೊನೆಯ ಹಂತ: ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ ತೆರೆ

8ರಿಂದ 10ನೇ ತರಗತಿಗೆ ತೆರೆದ ಪುಸ್ತಕ ಪರೀಕ್ಷೆ! ರಾಜ್ಯ ಸರಕಾರದಿಂದ ವಿನೂತನ ಪ್ರಯೋಗ  

8ರಿಂದ 10ನೇ ತರಗತಿಗೆ ತೆರೆದ ಪುಸ್ತಕ ಪರೀಕ್ಷೆ! ರಾಜ್ಯ ಸರಕಾರದಿಂದ ವಿನೂತನ ಪ್ರಯೋಗ  

ದಕ್ಷಿಣ ಕೊರಿಯ ಮೇಲೆ ಗಲೀಜು ತುಂಬಿದ ಬಲೂನ್‌ ಹಾರಿಸಿದ ಉ.ಕೊರಿಯ

ದಕ್ಷಿಣ ಕೊರಿಯ ಮೇಲೆ ಗಲೀಜು ತುಂಬಿದ ಬಲೂನ್‌ ಹಾರಿಸಿದ ಉ.ಕೊರಿಯ

Arvind Kejriwal ಕಾಂಗ್ರೆಸ್‌ ಜತೆಗಿನ ಮೈತ್ರಿ ತಾತ್ಕಾಲಿಕ: ಕೇಜ್ರಿವಾಲ್‌

Arvind Kejriwal ಕಾಂಗ್ರೆಸ್‌ ಜತೆಗಿನ ಮೈತ್ರಿ ತಾತ್ಕಾಲಿಕ: ಕೇಜ್ರಿವಾಲ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Exam 2

Public Examination: ವಿವೇಕಯುತ ನಡೆ ಇರಲಿ

Farmer

842 ರೈತರ ಆತ್ಮಹತ್ಯೆ; ಮನೋಸ್ಥೈರ್ಯ ತುಂಬುವ ಕಾರ್ಯವಾಗಲಿ

Polluted Water: ಕಲುಷಿತ ನೀರಿನ ಸಮಸ್ಯೆಗೆ ಸರಕಾರ ಅಂತ್ಯ ಹಾಡಲಿ

Polluted Water: ಕಲುಷಿತ ನೀರಿನ ಸಮಸ್ಯೆಗೆ ಸರಕಾರ ಅಂತ್ಯ ಹಾಡಲಿ

Editorial; ಶೈಕ್ಷಣಿಕ ಗೊಂದಲಗಳಿಗೆ ಬೇಕಿದೆ ತುರ್ತು ಪರಿಹಾರ

Editorial; ಶೈಕ್ಷಣಿಕ ಗೊಂದಲಗಳಿಗೆ ಬೇಕಿದೆ ತುರ್ತು ಪರಿಹಾರ

2

ಎಸ್‌ಎಸ್‌ಎಲ್‌ಸಿ ಗ್ರೇಸ್‌ ಮಾರ್ಕ್ಸ್ ರದ್ದು: ಪ್ರತಿಭಾವಂತರ ಶ್ರಮಕ್ಕೆ ಮನ್ನಣೆ 

MUST WATCH

udayavani youtube

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕನ ಆತ್ಮಹ*ತ್ಯೆ ಪ್ರಕರಣ,ಅಧಿಕಾರಿಗಳ ಭೇಟಿ

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

ಹೊಸ ಸೇರ್ಪಡೆ

ಬಸ್ಸಿನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ… ಬಸ್ ಸಿಬಂದಿ, ವೈದ್ಯರ ಸ್ಪಂದನೆಗೆ ಮೆಚ್ಚುಗೆ

ಬಸ್ಸಿನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ… ಬಸ್ ಸಿಬಂದಿ, ವೈದ್ಯರ ಕಾರ್ಯಕ್ಕೆ ಮೆಚ್ಚುಗೆ

Jagannath Festival: ಪುರಿಯ ಜಗನ್ನಾಥ ಉತ್ಸವದ ವೇಳೆ ಪಟಾಕಿ ಸ್ಫೋಟಗೊಂಡು 15 ಮಂದಿಗೆ ಗಾಯ

Jagannath Festival: ಪುರಿಯ ಜಗನ್ನಾಥ ಉತ್ಸವದ ವೇಳೆ ಪಟಾಕಿ ಸ್ಫೋಟಗೊಂಡು 15 ಮಂದಿಗೆ ಗಾಯ

Code of Conduct: ಮೋದಿ ಧ್ಯಾನ ನೀತಿ ಸಂಹಿತೆ ಉಲ್ಲಂಘನೆ: ಆಯೋಗಕ್ಕೆ ದೂರು ನೀಡಿದ ಕಾಂಗ್ರೆಸ್

Code of Conduct: ಮೋದಿ ಧ್ಯಾನ ನೀತಿ ಸಂಹಿತೆ ಉಲ್ಲಂಘನೆ: ಆಯೋಗಕ್ಕೆ ದೂರು ನೀಡಿದ ಕಾಂಗ್ರೆಸ್

Lok Sabha Election: ಜೂನ್‌ 1ಕ್ಕೆ ಕೊನೆಯ ಹಂತ: ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ ತೆರೆ

Lok Sabha Election: ಜೂನ್‌ 1ಕ್ಕೆ ಕೊನೆಯ ಹಂತ: ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ ತೆರೆ

8ರಿಂದ 10ನೇ ತರಗತಿಗೆ ತೆರೆದ ಪುಸ್ತಕ ಪರೀಕ್ಷೆ! ರಾಜ್ಯ ಸರಕಾರದಿಂದ ವಿನೂತನ ಪ್ರಯೋಗ  

8ರಿಂದ 10ನೇ ತರಗತಿಗೆ ತೆರೆದ ಪುಸ್ತಕ ಪರೀಕ್ಷೆ! ರಾಜ್ಯ ಸರಕಾರದಿಂದ ವಿನೂತನ ಪ್ರಯೋಗ  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.