ಗೂಂಡಾಸ್ತ್ರ ಬಳಕೆಯಾಗುತ್ತಿಲ್ಲ


Team Udayavani, Nov 11, 2017, 11:17 AM IST

RAMREDDY.jpg

ಬೆಂಗಳೂರು: ರೌಡಿಗಳ ಹತೋಟಿಗೆ ಗೂಂಡಾ ಕಾಯ್ದೆಯನ್ನು ಸಮರ್ಪಕವಾಗಿ ಬಳಸುವಂತೆ ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಎಫ್ಕೆಸಿಸಿಐನಲ್ಲಿ ಶುಕ್ರವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು/

ನಮ್ಮಲ್ಲಿ ಗೂಂಡಾ ಕಾಯ್ದೆಯನ್ನು ಸರಿಯಾಗಿ ಉಪಯೋಗಿಸುತ್ತಿಲ್ಲ. ರೌಡಿಸಂ ಹತೋಟಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ನಿಮ್ಮ ಪೊಲೀಸ್‌ಠಾಣಾ ವ್ಯಾಪ್ತಿಯಲ್ಲಿ ರೌಡಿಗಳು ಇರಬೇಕು. ಇಲ್ಲವೇ ಪೊಲೀಸರಿರಬೇಕು. ಯಾರು ಇರಬೇಕು ಎಂಬುದನ್ನು ನೀವೇ ತೀರ್ಮಾನಿಸಿಕೊಳ್ಳಿ ಎಂದಿದ್ದೇನೆ.

ರೌಡಿಗಳು ಮನೆಯಲ್ಲಿರಬೇಕು ಅಥವಾ ರಾಜ್ಯ ಬಿಟ್ಟು ಹೋಗಬೇಕು. ಹೀಗೆ ಮಾಡಲು ಈಗಿರುವ ಅಧಿಕಾರ ಸಾಲದೇ ಎಂದು ಕೇಳಿದ್ದು, ಪದೇ ಪದೇ ಸಾರ್ವಜನಿಕರಿಗೆ ತೊಂದರೆ ಕೊಡುವವರಿಗೆ ಗೂಂಡಾ ಕಾಯ್ದೆಯಡಿ ಬಂಧಿಸುವಂತೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಬಾಲಕಿಯರು ಮತ್ತು ಮಹಿಳಾ ಶಾಲಾ- ಕಾಲೇಜುಗಳು ಸುತ್ತಮುತ್ತ ಪೊಲೀಸ್‌ ಬೀಟ್‌ಗೆ ವ್ಯವಸ್ಥೆ ಮಾಡಿದ್ದು, ಪೋಲಿ ಹುಡುಗರು ಚುಡಾಯಿಸುವಂತ ಘಟನೆಗಳಿಗೆ ಕಡಿವಾಣ ಹಾಕಲು ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ಮೀಟರ್‌ ಬಡ್ಡಿ, ಓಸಿ, ಗಾಂಜಾ ಮಾರಾಟ ಇಲ್ಲದಂತೆ ಮಾಡಬೇಕು.

ಹೊರ ದೇಶಗಳಿಂದ ಶಿಕ್ಷಣಕ್ಕಾಗಿ ಬಂದು ಪುಂಡಾಟಿಕೆ ಮಾಡುವವರ ವೀಸಾ ರದ್ದುಪಡಿಸಿ, ವಾಪಸ್‌ ಕಳುಹಿಸುವಂತೆ ಅಧಿಕಾರಿಗೆ ಸೂಚನೆ ನೀಡಲಾಗಿದೆ. ಪ್ರತಿ ಏರಿಯಾಗಳಲ್ಲೂ ಬೀಟ್‌ ಪೊಲೀಸರನ್ನು ನೇಮಕ ಮಾಡಿದ್ದು, ಸರಗಳ್ಳತನ, ಅತ್ಯಾಚಾರ, ಕಳ್ಳತನ ತಡೆಗೆ ಎಚ್ಚರ ವಹಿಸುವಂತೆ ಸೂಚಿಸಿದ್ದೇನೆ ಎಂದರು. 

ನಂಬರ್‌ ಪ್ಲೇಟ್‌ ಮೇಲೆ ವಾಹನದ ನೋಂದಣಿ ಸಂಖ್ಯೆ ಬಿಟ್ಟು ಬೇರೆ ಯಾವುದೇ ರೀತಿಯ ಬರಹಗಳನ್ನು ಬರೆದುಕೊಂಡಿದ್ದರೆ, ಅವುಗಳನ್ನು ಕಿತ್ತುಹಾಕಿ ಕೇಸು ಮಾಡಬೇಕು. ವೀಲಿಂಗ್‌, ಹೆಲ್ಮೆಟ್‌ ಧರಿಸದೇ ಬೈಕ್‌ ಚಾಲನೆ, ಮದ್ಯ ಸೇವಿಸಿ ವಾಹನ ಚಾಲನೆ ಸೇರಿದಂತೆ ಟ್ರಾಫಿಕ್‌ ನಿಯಮಗಳನ್ನು ಪಾಲನೆ ಮಾಡದವರ ವಿರುದ್ಧ ಕೇಸು ದಾಖಲಿಸಿ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ.

ಶೇ.40ರಷ್ಟು ರಸ್ತೆ ಅಪಘಾತಗಳು ವಾಹನ ಚಾಲನೆ ಮಾಡುವಾಗ ಮೊಬೈಲ್‌ ಬಳಸುವುದು  ಮತ್ತು ಸೀಟ್‌ಬೆಲ್ಟ್ ಧರಿಸದೇ ನಡೆಯುತ್ತಿದ್ದು, ಜನಸಾಮಾನ್ಯರೇ ಈ ಬಗ್ಗೆ ಜಾಗೃತಿ ವಹಿಸಬೇಕು ಎಂದು ಹೇಳಿದರು. 

ಸಿಸಿ ಕ್ಯಾಮೆರಾ ಅಳವಡಿಕೆ: ಬಿಬಿಎಂಪಿ ಮತ್ತು ಪೊಲೀಸ್‌ ಇಲಾಖೆ ಸಹಯೋಗದಲ್ಲಿ ತಲಾ 10 ಲಕ್ಷ ರೂ.ವೆಚ್ಚದಂತೆ ಎಷ್ಟು ಸಿಸಿ ಕ್ಯಾಮೆರಾ ಬರುತ್ತವೆಯೋ ಅಷ್ಟನ್ನು ಆಯಾ ವಾರ್ಡ್‌ಗಳಲ್ಲಿ ಅವಳಡಿಸಲು ಕ್ರಮಕೈಗೊಳ್ಳುವಂತೆ ಮೇಯರ್‌ ಸಂಪತ್‌ರಾಜ್‌ ಅವರಲ್ಲಿ ವಿನಂತಿಸಿದ್ದೇನೆ. ಎಲ್ಲಾ ವಾರ್ಡ್‌ಗಳ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವುದರಿಂದ ಅಪರಾಧ ಕೃತ್ಯಗಳ ತಡೆಗೆ ಅನುಕೂಲವಾಗಲಿದೆ. ಮುಂದಿನ ವಾರದಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು. 

ಸಿಡಿಪಿ ಬದಲಾಗಬೇಕು: ಯಾವುದೇ ಹೊಸ ಬಡಾವಣೆ ನಿರ್ಮಾಣವಾಗಬೇಕಾದರೂ, ಪಾರ್ಕ್‌, ಆಟದ ಮೈದಾನ ಇರುವಂತೆ ಪಾರ್ಕಿಂಗ್‌ ವ್ಯವಸ್ಥೆ ಇರುಬೇಕಾದ್ದು ಕಡ್ಡಾಯ. ಇಲ್ಲಿಯವರೆಗೂ ಅಂತಹ ವ್ಯವಸ್ಥೆಯನ್ನೇ ಮಾಡಿಲ್ಲ. ಇನ್ನು ಮುಂದಾದರೂ ಪಾರ್ಕಿಂಗ್‌ ವ್ಯವಸ್ಥೆ ಇರುವಂತೆ ಮಾಡಲು ಸಿಡಿಪಿ (ಸಿಟಿ ಡೆವಲಪ್‌ಮೆಂಟ್‌ ಪ್ಲಾನ್‌)ಬದಲಾಯಿಸಬೇಕಿದೆ ಎಂದರು. 

ದ್ವಿಮುಖ ಸಂಚಾರ ವ್ಯವಸ್ಥೆ ಕಲ್ಪಿಸಿ: ಟೌನ್‌ಹಾಲ್‌-ಮಿನರ್ವ ವೃತ್ತ, ಕೆ.ಆರ್‌.ವೃತ್ತದಿಂದ ಸಿಟಿ ಸಿವಿಲ್‌ ಕೋರ್ಟ್‌, ವಿಠuಲ ಮಲ್ಯ ರಸ್ತೆಯಿಂದ ಹಡ್ಸನ್‌ ವೃತ್ತ ಹಾಗೂ ರಿಚ್‌ಮಂಡ್‌ ವೃತ್ತದಿಂದ ಅಶೋಕ ನಗರ ವೃತ್ತದ ವರೆಗಿನ ರಸ್ತೆಗಳು ಏಕಮುಖ ಸಂಚಾರ ವ್ಯವಸ್ಥೆ ಇದೆ. ಅದನ್ನು ದ್ವಿಮುಖ ಸಂಚಾರಯಾಗಿ ಪರಿವರ್ತಿಸಲು ಕ್ರಮಕೈಗೊಂಡರೆ, ಟ್ರಾಫಿಕ್‌ ಸಮಸ್ಯೆ ಕಡಿಮೆಯಾಗಲಿದೆ.

ಕೆಲವು ಸಿಗ್ನಲ್‌ಗ‌ಳಲ್ಲಿ ಅಳವಡಿಸಲಾಗಿರುವ ಟೈಮರ್‌ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅದಕ್ಕಾಗಿ ಮುಖ್ಯವಾದ ಜಂಕ್ಷನ್‌ಗಳಲ್ಲಿ ಅತ್ಯಾಧುನಿಕ ಸೌರಶಕ್ತಿ ಸಿಗ್ನಲ್‌ ವ್ಯವಸ್ಥೆ ಮಾಡಬೇಕು ಎಂದು ಎಫ್ಕೆಸಿಸಿಐ ಪ್ರವಾಸೋದ್ಯಮ ಸಮಿತಿ ಅಧ್ಯಕ್ಷ ಪ್ರಕಾಶ್‌ ಮಂಡೋತ್‌ ಮನವಿ ಮಾಡಿದರು. 

ಸಿಸಿ ಕ್ಯಾಮೆರಾಗೆ ದೇಣಿಗೆ: ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕುವ ಜತೆಗೆ ಟ್ರಾಫಿಕ್‌ ಜಂಪ್‌ ಇತ್ಯಾದಿ ಸಮಸ್ಯೆಗಳ ನಿವಾರಣೆಗೆ ಪೊಲೀಸ್‌ ಇಲಾಖೆ ಸಹಕಾರದಲ್ಲಿ ಎಫ್ಕೆಸಿಸಿ ವತಿಯಿಂದ ಕೆ.ಜಿ.ರಸ್ತೆಯಲ್ಲಿ ಅಗತ್ಯ ಸಿಸಿ ಕ್ಯಾಮೆರಾ ಅಳವಡಿಸಲು ದೇಣಿಗೆ ನೀಡಲಾಗುವುದು ಎಂದು ಸಂಸ್ಥೆ ಅಧ್ಯಕ್ಷ ಕೆ.ರವಿ ತಿಳಿಸಿದರು.

ಟಾಪ್ ನ್ಯೂಸ್

Davanagere; ಕಾಂಗ್ರೆಸ್ ಆಡಳಿತದಲ್ಲಿ ಶಿಕ್ಷಣ ಕ್ಷೇತ್ರ ಕಲುಷಿತಗೊಂಡಿದೆ: ಬಿ.ವೈ. ವಿಜಯೇಂದ್ರ

Davanagere; ಕಾಂಗ್ರೆಸ್ ಆಡಳಿತದಲ್ಲಿ ಶಿಕ್ಷಣ ಕ್ಷೇತ್ರ ಕಲುಷಿತಗೊಂಡಿದೆ: ಬಿ.ವೈ. ವಿಜಯೇಂದ್ರ

hardik pandya and natasa stankovic getting divorced?

Divorced? ಮುರಿದು ಬಿತ್ತಾ ಹಾರ್ದಿಕ್- ನತಾಶಾ ಸಂಬಂಧ? 70% ಆಸ್ತಿ ಕಳೆದುಕೊಳ್ತಾರಾ ಪಾಂಡ್ಯ?

10-gundlupete

Gundlupete: ಕಲ್ಲುಕಟ್ಟೆ ಜಲಾಶಯಕ್ಕೆ ಹಾರಿ ಯುವಕ ಆತ್ಮಹತ್ಯೆ

8-dharmasthala

CM Siddaramaiah: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ

IPL 2024; Who can get Orange Cap- Purple Cap? Here is the list

IPL 2024; ಯಾರಿಗೆ ಸಿಗಬಹುದು ಆರೆಂಜ್ ಕ್ಯಾಪ್- ಪರ್ಪಲ್ ಕ್ಯಾಪ್? ಇಲ್ಲಿದೆ ಪಟ್ಟಿ

7-gundlupete

Gundlupete: ಕಲುಷಿತ ನೀರು ಸೇವಿಸಿ ಮೂರು ಹಸುಗಳ ಸಾವು

thief

ಸಿನಿಮಾ ಶೈಲಿಯಲ್ಲಿ ಚಲಿಸುತ್ತಿದ್ದ ಟ್ರಕ್‌ನಿಂದ ಕಳ್ಳತನ… ವಿಡಿಯೋ ನೋಡಿ ಬೆಚ್ಚಿಬಿದ್ದ ಜನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru Rave Party; 86 ಜನರು ಡ್ರಗ್ ಸೇವೆನೆ ಮಾಡಿರುವುದು ರಕ್ತ ಪರೀಕ್ಷಯಲ್ಲಿ ದೃಢ

Bengaluru Rave Party; 86 ಜನರು ಡ್ರಗ್ ಸೇವೆನೆ ಮಾಡಿರುವುದು ರಕ್ತ ಪರೀಕ್ಷಯಲ್ಲಿ ದೃಢ

ಕೈಗಾರಿಕೆಗೆಂದು ಅಭಿವೃದ್ಧಿಪಡಿಸಿದ ಜಾಗದಲ್ಲಿ ನೂರಾರು ದೊಡ್ಡ ಗಿಡ ನೆಟ್ಟ ಅನಾಮಿಕರು!

ಕೈಗಾರಿಕೆಗೆಂದು ಅಭಿವೃದ್ಧಿಪಡಿಸಿದ ಜಾಗದಲ್ಲಿ ನೂರಾರು ದೊಡ್ಡ ಗಿಡ ನೆಟ್ಟ ಅನಾಮಿಕರು!

8

Bengaluru Road: ಮಳೆ ನಿಂತ ನಂತರ ರಸ್ತೆ ಗುಂಡಿ ದುರಸ್ತಿ  ಶುರು 

7

ಹೊಯ್ಸಳ ಪೊಲೀಸರನ್ನು ಕಳ್ಳ ಕಳ್ಳ ಎಂದು ಬೆನ್ನಟ್ಟಿದ ಸಾರ್ವಜನಿಕರು!

6

Bengaluru: 13 ವರ್ಷದ ಅಪ್ರಾಪ್ತ ಸಹೋದರನಿಂದಲೇ 3 ತಿಂಗಳ ಗರ್ಭಿಣಿಯಾದ ತಂಗಿ!

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Davanagere; ಕಾಂಗ್ರೆಸ್ ಆಡಳಿತದಲ್ಲಿ ಶಿಕ್ಷಣ ಕ್ಷೇತ್ರ ಕಲುಷಿತಗೊಂಡಿದೆ: ಬಿ.ವೈ. ವಿಜಯೇಂದ್ರ

Davanagere; ಕಾಂಗ್ರೆಸ್ ಆಡಳಿತದಲ್ಲಿ ಶಿಕ್ಷಣ ಕ್ಷೇತ್ರ ಕಲುಷಿತಗೊಂಡಿದೆ: ಬಿ.ವೈ. ವಿಜಯೇಂದ್ರ

11-mammootty

Mammootty: ಎರಡು ವಿಭಿನ್ನ ಕಾಲಘಟ್ಟದ ಸಿನೆಮಾದಲ್ಲಿ ನಟ ಮಮ್ಮೂಟಿ

hardik pandya and natasa stankovic getting divorced?

Divorced? ಮುರಿದು ಬಿತ್ತಾ ಹಾರ್ದಿಕ್- ನತಾಶಾ ಸಂಬಂಧ? 70% ಆಸ್ತಿ ಕಳೆದುಕೊಳ್ತಾರಾ ಪಾಂಡ್ಯ?

10-gundlupete

Gundlupete: ಕಲ್ಲುಕಟ್ಟೆ ಜಲಾಶಯಕ್ಕೆ ಹಾರಿ ಯುವಕ ಆತ್ಮಹತ್ಯೆ

9-uv-fusion

Traffic Signal: ಬದುಕು ರೂಪಿಸಿದ ಟ್ರಾಫಿಕ್‌ ಸಿಗ್ನಲ್‌ಗ‌ಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.