ಯಾರಿಗೇ ಟಿಕೆಟ್ ನೀಡಿದರೂ ಗೆಲ್ಲಿಸುವುದು ಕರ್ತವ್ಯ: ನಳಿನ್
Team Udayavani, Mar 19, 2019, 1:00 AM IST
ಕಡಬ: ನಾನು ಪಕ್ಷದ ಶಿಸ್ತಿನ ಸೈನಿಕ. ಪಕ್ಷದ ಸಿದ್ಧಾಂತ ನಂಬಿ ಬಂದವ, ಅಧಿಕಾರ ನಂಬಿ ಬಂದವನಲ್ಲ. ಪಕ್ಷ ಯಾರಿಗೇ ಟಿಕೆಟ್ ನೀಡಿದರೂ ಆತ ಪಕ್ಷದ ಕಾರ್ಯ ಕರ್ತನಾಗಿದ್ದಲ್ಲಿ ರಾತ್ರಿ ಹಗಲು ಕೆಲಸ ಮಾಡಿ ಆತನನ್ನು ಗೆಲ್ಲಿಸುವುದು ನನ್ನ ಕರ್ತವ್ಯ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ಕುಮಾರ್ ಕಟೀಲು ಹೇಳಿದರು.
ಅವರು ಸೋಮವಾರ ಕಡಬ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಪಕ್ಷದ ಶಕ್ತಿ ಪ್ರದರ್ಶನ
ನಾನು ಯಾವತ್ತೂ ಅಧಿಕಾರದ ಹಿಂದೆ ಬಿದ್ದಿಲ್ಲ. ಪಕ್ಷ ನೀಡಿದ ಜವಾಬ್ದಾರಿಯನ್ನು ನಿಷ್ಠೆಯಿಂದ, ಸಮರ್ಥವಾಗಿ ನಿಭಾಯಿಸಿದ್ದೇನೆ. ಬಿಜೆಪಿ ಇಂದು ಅತ್ಯಂತ ಜನಪ್ರಿಯ ಪಕ್ಷವಾಗಿದೆ. ಪಕ್ಷ ಸಶಕ್ತವಾದಾಗ ಹತ್ತಾರು ಆಕಾಂಕ್ಷಿಗಳು ಹುಟ್ಟಿಕೊಳ್ಳುವುದು ಸಹಜ. ಪಕ್ಷದಿಂದ ಸ್ಪರ್ಧೆಗೆ ಎಷ್ಟು ಅಭ್ಯರ್ಥಿಗಳು ಮುಂದೆ ಬರುತ್ತಾರೆಯೋ ಪಕ್ಷ ಅಷ್ಟೇ ಭದ್ರವಾಗಿದೆ ಎಂಬ ನಂಬಿಕೆ ಇದೆ. ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳಿರುವುದು ಖುಷಿ ತಂದಿದೆ.
ಆ ಮೂಲಕ ಪಕ್ಷದ ಶಕ್ತಿ ಪ್ರದರ್ಶನವಾಗಿದೆ ಎಂದು ನಳಿನ್ ಹೇಳಿದರು.
ಅಧಿಕಾರಕ್ಕಾಗಿ ರಾಷ್ಟ್ರ ಮಟ್ಟದಲ್ಲಿ ರಚನೆಯಾಗಿರುವ ಮಹಾಘಟಬಂಧನ್ ಪೂರ್ಣವಾಗಿ ವಿಘಟನೆಯಾಗಿದೆ. ರಾಹುಲ್ ಗಾಂಧಿ ಈಗ ಒಬ್ಬಂಟಿ. ಕರ್ನಾಟಕದಲ್ಲಿ ಜನತಾದಳ ಹೇಗೆ ಹಲವು ಹೋಳುಗಳಾಗಿವೆಯೋ ಅದೇ ಸ್ಥಿತಿ ಮಹಾಘಟಬಂಧನ್ಗೂ ಬರಲಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮಾಡಿಕೊಂಡಿರುವ ಚುಣಾವಣಾ ಮೈತ್ರಿಯೂ ಅನೈತಿಕವಾಗಿದೆ. ಎರಡೂ ಪಕ್ಷಗಳ ವಿಚಾರ ಧಾರೆಗಳು ಬೇರೆ ಬೇರೆಯಾಗಿವೆ. ರಾಷ್ಟ್ರೀಯ ವಿಚಾರಧಾರೆ ಇಲ್ಲವೇ ಇಲ್ಲ. ಅಧಿಕಾರದ ಹಿಂದೆ ಹೋಗುವ ಮೈತ್ರಿ ಯಾವತ್ತೂ ಶಾಶ್ವತವಲ್ಲ, ಅದು ಬಿದ್ದು ಹೋಗಲಿದೆ ಎಂದು ನಳಿನ್ ತಿಳಿಸಿದರು.
ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ, ಶಾಸಕ ಸಂಜೀವ ಮಠಂದೂರು, ಮುಖಂಡರಾದ ಗೋಪಾಲಕೃಷ್ಣ ಹೇರಳೆ, ಆರ್.ಸಿ. ನಾರಾಯಣ ರೆಂಜ, ಕೃಷ್ಣ ಶೆಟ್ಟಿ ಕಡಬ, ಪುಲಸ್ತಾ ರೈ, ವಾಡ್ಯಪ್ಪ ಗೌಡ ಎರ್ಮಾಯಿಲ್, ಪ್ರಕಾಶ್ ಎನ್.ಕೆ., ಎ.ಬಿ. ಮನೋಹರ ರೈ, ಫಯಾಝ್ ಕೆನರಾ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lost Control: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಕಾರು
Pune Porsche Car Crash: ರಕ್ತದ ಮಾದರಿ ಬದಲಾಯಿಸಲು 3 ಲಕ್ಷ ರೂ. ಪಡೆದಿದ್ದ ವೈದ್ಯರು
Arrested: ಲಿವ್ ಇನ್ ಸಂಗಾತಿ ಆತ್ಮಹತ್ಯೆ; ಐಆರ್ಎಸ್ ಅಧಿಕಾರಿ ಬಂಧನ
ಕೌಟುಂಬಿಕ ಕಲಹ: ಪತ್ನಿಯನ್ನೇ ಹತ್ಯೆಗೈದು ದೇಹದ ಭಾಗಗಳನ್ನು ತುಂಡರಿಸಿ ವಿಕೃತಿ ಮೆರೆದ ಪತಿ
Threat: ವಿಮಾನಕ್ಕೆ ಬಾಂಬ್ ಬೆದರಿಕೆ… ಜೀವ ಭಯದಿಂದ ವಿಮಾನದ ಕಿಟಕಿಯಿಂದ ಹಾರಿದ ಪ್ರಯಾಣಿಕರು