ಜೇಷ್ಠ ಮಾಸದ ಗಾನ ಸಿಂಚನ 


Team Udayavani, Jul 20, 2018, 6:00 AM IST

x-5.jpg

ರಾಗಧನ ಸಂಗೀತ ಸಂಸ್ಥೆಯ ವಾರ್ಷಿಕ ಮಹಾಸಭೆಯ ಸಂದರ್ಭದಲ್ಲಿ ಹೈದರಾಬಾದ್‌ನ ರಂಜನಿ ಶಿವಕುಮಾರ್‌ ಅವರು ಸಂಗೀತ ಕಛೇರಿ ನೀಡಿದರು. ರಂಜನಿ ಶಿವಕುಮಾರ್‌ ನಗುಮುಖದ ಗಾಯಕಿ. ಮಂದ್ರದಲ್ಲಿ ಆಪ್ತವೆನಿಸುವ ತುಸುವೇ ಗಡಸಾದ ಶಾರೀರ. ಹೊಸ ವಿನ್ಯಾಸಗಳಿಗೆ ಮತ್ತು ಶೈಲಿಗೆ ಆದ್ಯತೆ ನೀಡುವ ಹುಮ್ಮಸ್ಸು. ಮೊದಲಿಗೆ ಎರಡು ಕಾಲಗಳಲ್ಲಿ ಹಾಡಲಾದ ಭೈರವಿಯ ಆಟತಾಳದ ವರ್ಣದ ಅತಿ ವಿಳಂಗ ಗತಿ ಗಾಯಕಿಯ ಲಯದ ಸ್ಥಿರತೆಗೆ ಎರವಾಯಿತು. ಮುಂದೆ ಸುಧಾರಿಸಿಕೊಂಡ ಕಲಾವಿದೆ ಚುಟುಕಾದ ಸ್ವರವಿನಿಕೆಗಳೊಂದಿಗೆ ಗೌಳ (ಶ್ರೀ ಮಹಾಗಣಪತಿ), ಕಮಾಚ್‌ (ಸೀತಾಪತೇ) ಅಂತೆಯೇ ರುದ್ರಪ್ರಿಯ (ಲಂಬ ವರದೇವತೆ) ಕೃತಿಗಳನ್ನು ನಿರೂಪಿಸಿದರು. 

ಪ್ರಧಾನ ರಾಗ ತೋಡಿ (ಎಂದುಕು ದಯರಾಮ). ಒಳ್ಳೆಯ ರಾಗಾಲಾಪನೆ. ನೆರವಲ್‌ ಮತ್ತು ಸ್ವರ ಕಲ್ಪನೆಗಳ ಪ್ರೌಢಿಮೆಯಿಂದ ಈ ಪ್ರಸ್ತುತಿ ರಸಿಕರ ಮೆಚ್ಚುಗೆ ಪಡೆಯಿತು. ವಯಲಿನ್‌ ಸಹವಾದಕ ಅರುಣಾಚಲ ಕಾರ್ತಿಕ್‌ ಚುರುಕಾದ ಬೆರಳುಗಾರಿಕೆಯಿಂದ ಶ್ರೋತೃಗಳನ್ನು ಗೆದ್ದುಕೊಂಡರು. 
ಮುಂದೆ ಸರಸ್ವತಿ ರಾಗ ವಿಸ್ತಾರ ತಾನಂ. ನಂತರ ಚತುರಸ್ತ ತ್ರಿಪುಟ ತಾಳದಲ್ಲಿ ಇಂಪಾದ ಸುನಾದದಿ ನಿನ್ನನು ಪಾಡುವೆ ಸರಸ್ವತಿ ತಾಯೇ… ಎಂಬ ಪಲ್ಲವಿಯನ್ನು ವಿದ್ವತೂ³ರ್ಣವಾಗಿ ಹಾಡಿದ ಕಲಾವಿದೆ, ಈ ಸ್ವರಚಿತ ಪಲ್ಲವಿಯನ್ನು ಮೂರು ಭಾಷೆಗಳಲ್ಲಿ ಪ್ರಸ್ತುತಪಡಿಸಿದರು. 

ಕಲ್ಯಾಣಿಯ ಗೃಹಭೇದ ತಿಲ್ಲಾನವನ್ನು ನಿಪುಣತೆಯಿಂದ ಹಾಡಿ ಅನಂತರ ರಾಜಸ್ಥಾನದ ಜಾನಪದ ಖವ್ವಾಲಿಯನ್ನು (ದಮಾನಂ…) ಹಾಡಿ ಇಲ್ಲಿಯ ಸಂಪ್ರದಾಯಸ್ಥ ರಸಿಕರ ಹುಬ್ಬೇರುವಂತೆ ಮಾಡಿದರು. ಮಂಗಳದೊಂದಿಗೆ ಕಛೇರಿ ಮುಕ್ತಾಯವಾಯಿತು. ಉತ್ತಮ ಮೃದಂಗ ವಾದನದಿಂದ ಸುನಾದಕೃಷ್ಣ ಅಮೈ ಕಛೇರಿಯ ಯಶಸ್ಸಿನಲ್ಲಿ ಸಹಭಾಗಿಯಾದರು. 

ಸರೋಜಾ ಆರ್‌. ಆಚಾರ್ಯ 

ಟಾಪ್ ನ್ಯೂಸ್

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.