ಜೇಷ್ಠ ಮಾಸದ ಗಾನ ಸಿಂಚನ
Team Udayavani, Jul 20, 2018, 6:00 AM IST
ರಾಗಧನ ಸಂಗೀತ ಸಂಸ್ಥೆಯ ವಾರ್ಷಿಕ ಮಹಾಸಭೆಯ ಸಂದರ್ಭದಲ್ಲಿ ಹೈದರಾಬಾದ್ನ ರಂಜನಿ ಶಿವಕುಮಾರ್ ಅವರು ಸಂಗೀತ ಕಛೇರಿ ನೀಡಿದರು. ರಂಜನಿ ಶಿವಕುಮಾರ್ ನಗುಮುಖದ ಗಾಯಕಿ. ಮಂದ್ರದಲ್ಲಿ ಆಪ್ತವೆನಿಸುವ ತುಸುವೇ ಗಡಸಾದ ಶಾರೀರ. ಹೊಸ ವಿನ್ಯಾಸಗಳಿಗೆ ಮತ್ತು ಶೈಲಿಗೆ ಆದ್ಯತೆ ನೀಡುವ ಹುಮ್ಮಸ್ಸು. ಮೊದಲಿಗೆ ಎರಡು ಕಾಲಗಳಲ್ಲಿ ಹಾಡಲಾದ ಭೈರವಿಯ ಆಟತಾಳದ ವರ್ಣದ ಅತಿ ವಿಳಂಗ ಗತಿ ಗಾಯಕಿಯ ಲಯದ ಸ್ಥಿರತೆಗೆ ಎರವಾಯಿತು. ಮುಂದೆ ಸುಧಾರಿಸಿಕೊಂಡ ಕಲಾವಿದೆ ಚುಟುಕಾದ ಸ್ವರವಿನಿಕೆಗಳೊಂದಿಗೆ ಗೌಳ (ಶ್ರೀ ಮಹಾಗಣಪತಿ), ಕಮಾಚ್ (ಸೀತಾಪತೇ) ಅಂತೆಯೇ ರುದ್ರಪ್ರಿಯ (ಲಂಬ ವರದೇವತೆ) ಕೃತಿಗಳನ್ನು ನಿರೂಪಿಸಿದರು.
ಪ್ರಧಾನ ರಾಗ ತೋಡಿ (ಎಂದುಕು ದಯರಾಮ). ಒಳ್ಳೆಯ ರಾಗಾಲಾಪನೆ. ನೆರವಲ್ ಮತ್ತು ಸ್ವರ ಕಲ್ಪನೆಗಳ ಪ್ರೌಢಿಮೆಯಿಂದ ಈ ಪ್ರಸ್ತುತಿ ರಸಿಕರ ಮೆಚ್ಚುಗೆ ಪಡೆಯಿತು. ವಯಲಿನ್ ಸಹವಾದಕ ಅರುಣಾಚಲ ಕಾರ್ತಿಕ್ ಚುರುಕಾದ ಬೆರಳುಗಾರಿಕೆಯಿಂದ ಶ್ರೋತೃಗಳನ್ನು ಗೆದ್ದುಕೊಂಡರು.
ಮುಂದೆ ಸರಸ್ವತಿ ರಾಗ ವಿಸ್ತಾರ ತಾನಂ. ನಂತರ ಚತುರಸ್ತ ತ್ರಿಪುಟ ತಾಳದಲ್ಲಿ ಇಂಪಾದ ಸುನಾದದಿ ನಿನ್ನನು ಪಾಡುವೆ ಸರಸ್ವತಿ ತಾಯೇ… ಎಂಬ ಪಲ್ಲವಿಯನ್ನು ವಿದ್ವತೂ³ರ್ಣವಾಗಿ ಹಾಡಿದ ಕಲಾವಿದೆ, ಈ ಸ್ವರಚಿತ ಪಲ್ಲವಿಯನ್ನು ಮೂರು ಭಾಷೆಗಳಲ್ಲಿ ಪ್ರಸ್ತುತಪಡಿಸಿದರು.
ಕಲ್ಯಾಣಿಯ ಗೃಹಭೇದ ತಿಲ್ಲಾನವನ್ನು ನಿಪುಣತೆಯಿಂದ ಹಾಡಿ ಅನಂತರ ರಾಜಸ್ಥಾನದ ಜಾನಪದ ಖವ್ವಾಲಿಯನ್ನು (ದಮಾನಂ…) ಹಾಡಿ ಇಲ್ಲಿಯ ಸಂಪ್ರದಾಯಸ್ಥ ರಸಿಕರ ಹುಬ್ಬೇರುವಂತೆ ಮಾಡಿದರು. ಮಂಗಳದೊಂದಿಗೆ ಕಛೇರಿ ಮುಕ್ತಾಯವಾಯಿತು. ಉತ್ತಮ ಮೃದಂಗ ವಾದನದಿಂದ ಸುನಾದಕೃಷ್ಣ ಅಮೈ ಕಛೇರಿಯ ಯಶಸ್ಸಿನಲ್ಲಿ ಸಹಭಾಗಿಯಾದರು.
ಸರೋಜಾ ಆರ್. ಆಚಾರ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ