ನಿನ್ನ ಕಣ್ಣ ಬಣ್ಣ ಬಲ್ಲೆನಾ…


Team Udayavani, Sep 5, 2017, 10:01 AM IST

05-JOSH-3.jpg

ನೀನು ಅಲ್ಲಿ ಮತ್ಯಾರೋ ಆಗಿದ್ದೆ. ಆದರೆ, ನಾನು ನಾನಾಗಿಯೇ ಉಳಿದ ಕಾರಣಕ್ಕೆ ನೋವಿನ ಗಾಣಕ್ಕೆ ಸಿಕ್ಕಿ ನಲುಗುತ್ತಿದ್ದೆ. ಯಾವುದೇ ಸುಳಿವು ನೀಡದೆ ಛಕ್ಕನೆ ಬದಲಾಗಿಬಿಟ್ಟಿದ್ದೆಯಲ್ಲ? ಆಗ, ನಿನ್ನ ಕಣ್ಣ ಬಣ್ಣ ಬೇರೆಯೇ ಆಗಿತ್ತು…

ಅಪರಾತ್ರಿಯ ಉರಿ ಬಿಸಿಲೇ…
ಯಾವುದರಲ್ಲೂ ಮನಸು ನೆಲೆಗೊಳ್ಳುತ್ತಿಲ್ಲ. ಎಲ್ಲಿ ನೋಡಿದರೂ ನಿನ್ನ ನೆನಪುಗಳದೇ ಹಾವಳಿ. ಕಣ್ಮುಚ್ಚಿ ಕುಳಿತರೆ ಹಾಳಾದ ಹೃದಯದ ಉಮ್ಮಳಿಕೆ. ನಿನಗಾಗಿ ಅಂಗಳದಲ್ಲಿ ಬೆಳೆಸಿದ್ದ ಗುಲಾಬಿ ಗಿಡ, ಮುಳ್ಳುಗಳೇ ಕಾಣದಂತೆ ಮೈತುಂಬಾ ಹೂಗಳ ತುಂಬಿಕೊಂಡು ನಳನಳಿಸುತ್ತಿತ್ತು. ಆದರೆ, ಒಂದೂ ಹೂವು ನಿನ್ನ ಮುಡಿಗೇರಲೇ ಇಲ್ಲ. ಹೂವಿನ ಪಕಳೆಗಳು ಒಂದೊಂದಾಗಿ ಉದುರುತ್ತಾ ಹೋದವು, ನನ್ನದೇ ಕಣ್ಣ ಹನಿಗಳಂತೆ! ಈಗ  ಅಂಗಳದ ತುಂಬಾ ಹರಡಿಕೊಂಡು ಒಣಗುತ್ತಿರುವ ಗುಲಾಬಿ ಪಕಳೆಗಳು ನನ್ನ ಅಂತರಾಳದ ಚಿತ್ರದಂತೆ ಕಾಣುತ್ತದೆ. ನಿನ್ನ ಮುನಿಸು, ಸಿಟ್ಟು, ಸೆಡವುಗಳೆಲ್ಲ ಒಲವಿನ ಒಂದು ಭಾಗವಾಗಿಯೇ ಉಳಿದಿತ್ತು. ಆದರೆ, ಆ ಸಂಜೆ ಕಂಡೆನಲ್ಲಾಆ ಉದಾಸೀನ ಭಾವ? ಅದು ನನ್ನನ್ನು ನಡುಗಿಸಿಬಿಟ್ಟಿತು. ಅದು ಮೋಡಗಟ್ಟದೇ ಸುರಿದ ಅಸ್ವಾಭಾವಿಕ ಅಕಾರಣ ಮಳೆ.

ಹಣೆಯಲಿ ಬರೆಯದ ನಿನ್ನ ಹೆಸರ ಹೃದಯದಿ ನಾನೆ ಕೊರೆದಿರುವೆ! ನೀನು ಅಲ್ಲಿ ಮತ್ಯಾರೋ ಆಗಿದ್ದೆ. ಆದರೆ, ನಾನು ನಾನಾಗಿಯೇ ಉಳಿದ ಕಾರಣಕ್ಕೆ ನೋವಿನ ಗಾಣಕ್ಕೆ ಸಿಕ್ಕಿ ನಲುಗುತ್ತಿದ್ದೆ. ಯಾವುದೇ ಸುಳಿವು ನೀಡದೆ ಛಕ್ಕನೆ ಬದಲಾಗಿಬಿಟ್ಟಿದ್ದೆಯಲ್ಲ? ಆಗ, ನಿನ್ನ ಕಣ್ಣ ಬಣ್ಣ ಬೇರೆಯೇ
ಆಗಿತ್ತು. ಮಾತಿನಲ್ಲಿ ಸಂಬಂಧಕ್ಕೊಂದು ಮರಣ ಶಾಸನ ಬರೆಯುತ್ತಿರುವ ಶಾಯಿಯ ಮೊನೆಯಿತ್ತು. ತಿರುವೊಂದರಲ್ಲಿ ಧುತ್ತನೆ ಕೊನೆಗೊಂಡ ರಸ್ತೆಯಂತೆ, ಅನಿರೀಕ್ಷಿತ ಅಪಘಾತವೊಂದು ನನ್ನನ್ನು ಅಪ್ಪಳಿಸಿತ್ತು. ಹಿಡಿ ಘಳಿಗೆಯಲ್ಲಿ ವಿಷದ ಅತ್ತರಿನ ಘಮ ತುಂಬಿಕೊಂಡಿತ್ತು. ಬದುಕು ಸಂತಸದ ಕೊನೆಯ ಕ್ಷಣಕ್ಕೆ ಬಂದು ನಿಂತಿತ್ತು. ನನ್ನೊಳಗಿನ ಖಾಲಿತನಕ್ಕೆ ನೋವಿನ ಹನಿಗಳು ತೊಟ್ಟಿಕ್ಕತೊಡಗಿದವು. ನಾ ನಿಂತಲ್ಲೇ ನಿಂತಿದ್ದೆ. ನಿನ್ನೊಳಗೆ ಹೊಸ ಕನಸಿತ್ತು. ನಾನು ನಿನಗೆ ಪರಿಚಯವೇ ಇಲ್ಲವೇನೋ, ನಮ್ಮಿಬ್ಬರ ಮಧ್ಯೆ ಏನೂ ನಡೆದೇ ಇಲ್ಲವೇನೋ ಅನ್ನುವಷ್ಟು ಸಹಜವಾಗಿ ನನ್ನಿಂದ ದೂರದೂರಕ್ಕೆ ನಡೆದುಹೋದೆ. ಬಹುಶಃ ಮತ್ತೂಮ್ಮೆ ಮುಖಾಮುಖೀ ಆಗಲಾರೆವೇನೋ. ಇರಲಿ, ಹೊಸ ದಾರಿಯಲ್ಲಿ ಹುಷಾರಾಗಿ ಹೆಜ್ಜೆಯಿಡು. ನಿನ್ನ ಹಾದಿ ಚೆಂದವಿರಲಿ, ನೆನಪೆಂಬ ಇರುಳಲಿ, ನೋವೆಂಬ ಹಗಲಲ್ಲಿ ನಾನು ನಿತ್ಯ ಸುಖೀ.

ನಿನ್ನವ ನಲ್ಲ
ಜೀವ ಮುಳ್ಳೂರು

ಟಾಪ್ ನ್ಯೂಸ್

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.