ದೇವರೇ, ಪ್ರೀತಿನ ಗೆಲ್ಲಿಸು


Team Udayavani, Jun 12, 2018, 6:00 AM IST

x-10.jpg

ಅವತ್ತು ಸೋಮವಾರ. ಎದ್ದಿದ್ದು ಸ್ವಲ್ಪ ಲೇಟು. ಆದರೂ ರೆಡಿ ಆಗಿದ್ದು ಮಾತ್ರ ಎಂದಿಗಿಂತಲೂ ಬೇಗ. ಅದೇಕೋ ಗೊತ್ತಿಲ್ಲ, ಯಾವತ್ತೂ ದೇವಸ್ಥಾನಕ್ಕೆ ಹೋಗದ ನಾನು, ಅವತ್ತು ಲೇಟಾಗಿ ಎದ್ದರೂ ಲೇಟೆಸ್ಟ್‌ ಆಗಿ ದೇವಸ್ಥಾನಕ್ಕೆ ಹೋಗಿ ಗಂಟೆ ಬಾರಿಸಿ ಧ್ಯಾನಕ್ಕೆ ಕುಳಿತಿದ್ದೆ.  ಋಷಿಮುನಿಯ  ತಪಸ್ಸನ್ನು ಅಪ್ಸರೆಯರು ಭಂಗ ಮಾಡಿದ ಹಾಗೆ, ನನ್ನ ಧ್ಯಾನಕ್ಕೆ ಝಲ್‌ ಝಲ್‌ ಅನ್ನುವ ಗೆಜ್ಜೆಯ ನಾದ ಭಂಗ ಮಾಡಿಬಿಟ್ಟಿತು. ಆ ಗೆಜ್ಜೆಯ ನಾದಕ್ಕೆ, ಅರೆಕ್ಷಣದ ಮಟ್ಟಿಗೆ ನನ್ನ ಹೃದಯದ ಬಡಿತವೇ ನಿಂತುಹೋದಂತೆ ಭಾಸವಾಯಿತು.  ಝಲ್‌ ಝಲ್‌ ನಾದ ನಿಧಾನಕ್ಕೆ ಹತ್ತಿರವಾಗುತ್ತಿದ್ದಂತೆ, ನಿಂತು ಹೋದಂತಿದ್ದ ಎದೆಯ ಬಡಿತ ಇದ್ದಕ್ಕಿದ್ದಂತೆ ಜೋರಾಯಿತು. ಹಾಗೇ ಮೆಲ್ಲಗೆ ಕಣ್‌ ತೆರೆದು ನೋಡಿದರೆ, ದುಂಡನೆಯ ಮುಖದ, ಮುತ್ತಿನ ಮೂಗುತಿಯ, ನೆಲಕ್ಕೆ ತಾಗುವಷ್ಟು ಉದ್ದನೆಯ ಜಡೆ ಹಾಕಿಕೊಂಡ, ಹಣೆಗೆ ಕುಂಕುಮ ಇಟ್ಟಿದ್ದ, ಅಪ್ಸರೆಯಷ್ಟೇ ಲಕ್ಷಣವಾಗಿದ್ದ ಚೆಲುವೆ! 

ಇಷ್ಟಾದ ಮೇಲೆ, ಇನ್ನೆಲ್ಲಿ ಧ್ಯಾನ ಮಾಡುವುದು? ಅವಳನ್ನೇ ಹಿಂಬಾಲಿಸಿ ಗುಡಿಯ ಸುತ್ತ ಮೂರು ರೌಂಡ್‌ ಹೊಡೆದಿದ್ದಾಯ್ತು. ಆದ್ರೆ, ಅವಳು  ಮಾತ್ರ ತಿರುಗಿ ಸಹ ನೋಡಲಿಲ್ಲ. ಅವತ್ತಿನಿಂದ ಪ್ರತಿ ಸೋಮವಾರ ತಪ್ಪದೇ ಗುಡಿಗೆ ಹೋಗಲು ಶುರು ಮಾಡಿದೆ. ಯಾಕೆ ಅಂದ್ರೆ, ಸೋಮವಾರಗಳಲ್ಲಿ ಮಾತ್ರ ಅವಳು ಅಲ್ಲಿಗೆ ಬರುತ್ತಿದ್ದಳು. ಅವಳ ಕಾಲ್ಗೆಜ್ಜೆಯ ನಾದಕ್ಕೆ ಎದೆಯ ಬಡಿತದ ತಾಳ ತಪ್ಪಿತ್ತು. ಅವಳ ಚೆಲುವಿಗೆ ಕಂಗಳು ಶರಣಾಗಿ ಹೋಗಿದ್ದವು. “ದೀನ ನಾ ಬಂದಿರುವೆ, ನಿನ್ನ ಹಿಂದೆ ನಡೆದಿರುವೆ’ ಎಂದು ಹಾಡಿಕೊಂಡು ಅವಳನ್ನು ಪೂರ್ತಿ ನಾಲ್ಕು ತಿಂಗಳು ಫಾಲೊ ಮಾಡಿದ್ದಾಯ್ತು. ಕಾಲ್ಗೆಜ್ಜೆಯ ನಿನಾದಕ್ಕೆ, ಕೈಬಳೆಯ ನಾದಕ್ಕೆ ಮನಸೋತಿದ್ದೂ ಆಯ್ತು. ಅವಳ ಗಮನ ಸೆಳೆಯಲು ಬಗೆಬಗೆಯ ಸರ್ಕಸ್‌ ಮಾಡಿದ್ದೂ ಆಯ್ತು. 

ಕೊನೆಗೂ ಒಂದು ದಿನ ತಿರುಗಿ ನೋಡಿ ಸ್ಟೈಲ್‌ ಕೊಟ್ಟೇ ಬಿಟ್ಟಳು  ಆ ಸುಂದರಿ. ಅಷ್ಟು ದಿನ ದೇವಸ್ಥಾನ ಸುತ್ತಿದ್ದು ಅವತ್ತಿಗೆ ಸಾರ್ಥಕ ಅಂತ ಅನ್ಸಿತ್ತು. ಅವತ್ತಿನಿಂದ ಇವತ್ತಿನವರೆಗೂ ದೇವಸ್ಥಾನಕ್ಕೆ ಹೋಗೋದನ್ನು ನಿಲ್ಲಿಸಿಲ್ಲ. ಹೋಗೋದು ದೇವರಿಗಾಗಿ ಅಲ್ಲ, ಅವಳ ಗೆಜ್ಜೆಯ ನಾದ ಕೇಳ್ಳೋಕೆ ಅಂತಾನೇ! ಆದ್ರೆ, ಇತ್ತೀಚೆಗೆ ಅಂದ್ರೆ, ಎರಡು ವಾರದಿಂದ ಈಚೆಗೆ ಅವಳ ಗೆಜ್ಜೆಯ ನಾದ  ಅಲ್ಲೆಲ್ಲೂ ಕೇಳುತ್ತಲೇ ಇಲ್ಲ. ನಾನ್‌ ಮಾತ್ರ ಗುಡಿ ಸುತ್ತೋದನ್ನು ಬಿಟ್ಟಿಲ್ಲ. ಭಕ್ತಿಗೆ ಮೆಚ್ಚಿ ದೇವರೇ ಒಲಿಯುವುದುಂಟಂತೆ, ಇನ್ನು ಆ ಗೆಜ್ಜೆಯ ಹುಡುಗಿಗೆ ನನ್ನ ಪ್ರೀತಿ ಕೇಳಿಸದೇ! ಅಂದು ಕೇಳಿದ ಆ ಝಲ್‌ ಝಲ್‌ ನಾದ, ಮತ್ತೆ ಕೇಳಿಸುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದೇನೆ. ಯಾವುದೇ ಗೆಜ್ಜೆ ಕಿಣಿ ಕಿಣಿ ಅಂದರೂ, ಹೃದಯದ ಢವ ಢವ ಹೆಚ್ಚುವುದು ಮಾತ್ರ ಸುಳ್ಳಲ್ಲ. 

ಭೀಮಾನಾಯ್ಕ ಎಸ್‌. ಶೀರಳ್ಳಿ 

ಟಾಪ್ ನ್ಯೂಸ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.