ಹೂಂ ಅಂತೀಯ, ಹುಂ ಅಂತೀಯ?


Team Udayavani, Feb 12, 2019, 12:30 AM IST

x-7.jpg

ಬೆಳಗ್ಗೆ 6 ಗಂಟೆಗೆ ಅಲರಾಂ ಕಿರೊ ಎಂದು ಬಡಿದುಕೊಳ್ಳುತ್ತಿದೆ. ಆದರೆ ಏಳುವುದಕ್ಕೆ ಮನಸ್ಸೇ ಇಲ್ಲ. ತುಂಬಾ ಚಳಿ. ಇನ್ನು ಸ್ವಲ್ಪ ಹೊತ್ತು ಹೀಗೇ ಮಲಗೋಣ ಎಂದು ಮುದುರಿಕೊಳ್ಳುವಷ್ಟರಲ್ಲಿ, ಆತ ಇಂದು ನನ್ನನ್ನು ಭೇಟಿಯಾಗಲು ಬರುತ್ತಿದ್ದಾನೆ ಎಂಬ ವಿಷಯ ನೆನಪಾಯ್ತು. ತಕ್ಷಣ ಅವಸರವಾಗಿ ಎದ್ದು, ಪಕ್ಕದಲ್ಲಿದ್ದ ಮೊಬೈಲ್‌ ಎತ್ತಿಕೊಂಡು ಅವನಿಗೆ ಕಾಲ್‌ ಮಾಡಿ, ಇಂದಿನ ಭೇಟಿಯ ಬಗ್ಗೆ ಖಾತ್ರಿಪಡಿಸಿಕೊಂಡೆ. ಯಾಕಂದ್ರೆ, ಆತನೂ ನಿದ್ದೆ ಪ್ರಿಯ. ನಾನು ಊಹಿಸಿದಂತೆ ಆತ ಇನ್ನೂ ಕನಸಿನ ಲೋಕದಲ್ಲಿ ತೇಲಾಡುತ್ತ ಇದ್ದ. “ಹೋಯ್‌…ಸೋಂಬೇರಿ ಇನ್ನೂ ಮಲಗಿದ್ದೀಯಾ?’ ಎಂಬ ನನ್ನ ಗದರು ಧ್ವನಿಗೆ ಬೆಚ್ಚಿ ಬಿದ್ದು, ” ಹೇಳು ಜಾನು’ ಎಂದ. “ಬೇಗ ಎದ್ದು ರೆಡಿಯಾಗಿ ಬಾ. ಬಸ್‌ಸ್ಟಾಂಡಿನಲ್ಲಿ ಕಾಯ್ತಾ ಇರ್ತೀನಿ’ ಎಂದು ಹೇಳಿ, ಅವನ ಗುಂಗಿನಲ್ಲಿಯೇ ಉಳಿದ ಕೆಲಸ ಮುಗಿಸಿದೆ. 

ಆ ದಿನ ಎಷ್ಟೇ ಶೃಂಗಾರ ಮಾಡಿಕೊಂಡರೂ ಮನಸ್ಸಿಗೆ ತೃಪ್ತಿ ಎನಿಸಲಿಲ್ಲ. ಕಡೆಗೊಮ್ಮೆ ತರಾತುರಿಯಲ್ಲಿ ರೆಡಿಯಾಗಿ “ಅಮ್ಮಾ..ಬರ್ತೀನಿ’ ಎಂದು ಮನೆಯಿಂದೀಚೆ ಹೆಜ್ಜೆ ಇಟ್ಟಾಕ್ಷಣ ಏನೋ ಒಂಥರ ಭಯ. ಯಾಕಂದ್ರೆ ಅದು ನಮ್ಮಿಬ್ಬರ ಮೊದಲ ಭೇಟಿ. ಒಂದೆಡೆ ಮೊದಲ ಭೇಟಿಯ ಖುಷಿ, ಇನ್ನೊಂದೆಡೆ ಅವನ ಜೊತೆ ಹೇಗೆ ಮಾತು ಪ್ರಾರಂಭಿಸೋದು, ನಾವಿಬ್ಬರೂ ಜೊತೆಯಲ್ಲಿರೋದನ್ನು ಯಾರಾದರೂ ನೋಡಿದ್ರೆ ಎಂಬಿತ್ಯಾದಿ ಆತಂಕಗಳು. ಈ ಗೊಂದಲದಲ್ಲೇ ಬಸ್‌ಸ್ಟಾಂಡಿಗೆ ಬಂದೆ. 

ಆತ ಇನ್ನೂ ಬಂದಿರಲಿಲ್ಲ. ಕಾಲ್‌ ಮಾಡಿದೆ, “ಹತ್ತು ನಿಮಿಷದಲ್ಲಿ ಬರ್ತೀನಿ’ ಎಂದ. ನಿಮಿಷಗಳು ಸರಿಯುತ್ತಾ ಹೋದವು. ಸುಡುಬಿಸಿಲಿನಲ್ಲೂ ಚಳಿಯ ಅನುಭವ. ಇದ್ದಕ್ಕಿದ್ದಂತೆ ಮನಸ್ಸಲ್ಲೇನೋ ಸಂತೋಷ. ಯಾರೋ ನನ್ನನ್ನು ಸೆಳೆಯುತ್ತಿರುವಂಥ ಭಾವ, ಆ ಸೆಳೆತ ಸಮೀಪಿಸುತ್ತಿದ್ದಂತೆ ಎದೆ ಬಡಿತ ಹೆಚ್ಚುತ್ತಾ ಹೋಯಿತು. ತಲೆ ಎತ್ತಿ ನೋಡಿದಾಗ ಕಣ್ಣು ತುಂಬಿ ಬಂತು. ಇಷ್ಟು ದಿನ ದೂರದಿಂದಲೇ ಕಾಡಿದವನು, ಕಾಯಿಸಿದವನು ಎದುರಿಗೆ ಬಂದು ನಿಂತಿದ್ದ!  “ಹಲೋ… ಏನಾಯ್ತು? ಯಾಕ್‌ ಹೀಗೆ ಸುಮ್ಮನೆ ಮುಖ ನೋಡ್ತಿದ್ದೀಯಾ?’ ಅಂತ ಭುಜ ಹಿಡಿದು ಅಲುಗಾಡಿಸಿದಾಗ ನಾಚಿ ನೀರಾದೆ. 

“ಹೀಗೇ ಯೋಚನೆ ಮಾಡ್ತಾ ಕುಳಿತಿರುತ್ತೀಯಾ? ನನ್ನ ಜೊತೆ ಮಾತಾಡ್ತೀಯಾ?’ ಎಂದಾಗ ಗಂಟೆಗಟ್ಟಲೆ ಮೊಬೈಲ್‌ನಲ್ಲಿ ಅವನೊಂದಿಗೆ ಮಾತಾಡುತ್ತಿದ್ದವಳು ನಾನೇನಾ ಅನ್ನಿಸಿತು. ಕಡೆಗೆ ಅವನೇ ಮಾತು ಆರಂಭಿಸಿದ. ಅಲ್ಲಿಂದ ಪ್ರಾರಂಭವಾದ ನಮ್ಮಿಬ್ಬರ ಹರಟೆ, ಕಾಫಿಡೇಗೆ ಹೋಗಿ ಕಾಫಿ ಕುಡಿದು, ಪಾರ್ಕ್‌ನಲ್ಲೆಲ್ಲಾ ಸುತ್ತಾಡಿದರೂ ಮುಗಿಯಲಿಲ್ಲ. ಸಮಯ ಕಳೆದದ್ದೇ ತಿಳಿಯಲಿಲ್ಲ.

ಅವನ ಧ್ಯಾನದಲ್ಲಿ ಮನೆಗೆ ಹೋಗುವುದನ್ನೇ ಮರೆತು ನಿಂತುಬಿಟ್ಟಿದ್ದೆ. ಹೀಗಿದ್ದಾಗಲೇ- “ಎಷ್ಟೊತ್ತು ಮಲಗಿರಿ¤àಯ? ಕ್ಲಾಸ್‌ಗೆ ಟೈಮ್‌ ಆಯ್ತು, ಎದ್ದೇಳು’ ಎಂದು ಬೈಯುತ್ತಿರುವ ಅಮ್ಮನ ಧ್ವನಿ ಕೇಳಿಸಿತು. ತಟ್ಟನೆ ಕಣ್ಣು ಬಿಟ್ಟು ಸುತ್ತ ಮುತ್ತ ನೋಡಿದೆ! ಅಯ್ಯೋ, ಇಷ್ಟೊತ್ತು ನಾ ನೋಡಿದ್ದು ಕನಸಾ ಎಂದು ಬೇಸರವಾಯ್ತು… 

 ಷಾಹಿನಾ ಎ., ತುಮಕೂರು

ಟಾಪ್ ನ್ಯೂಸ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.