ಬಣ್ಣದ ಬದುಕಿನಲ್ಲಿ ಹೊಸತನದ ಹುಡುಕಾಟ


Team Udayavani, Mar 14, 2019, 7:55 AM IST

15-march-12.jpg

ಕರಾವಳಿಯ ಪ್ರತಿಯೊಂದು ಮನೆಯಲ್ಲೂ ಯಕ್ಷಗಾನ ಕಲಾವಿದರು ಹಾಗೂ ಯಕ್ಷಗಾನ ಪ್ರೇಮಿಗಳು ಸಿಗುತ್ತಾರೆ. ಯಕ್ಷಗಾನ ಕಲಾವಿದನೊಬ್ಬನ ಜೀವನವನ್ನು ಆಧರಿಸಿ ರಚಿತವಾಗಿರುವ ಕಾದಂಬರಿ ‘ಬಯಲಾಟ’. ವೇಣುಗೋಪಾಲ ಕಾಸರಗೋಡು ಇದರ ಕರ್ತೃ ಯಕ್ಷಗಾನ ಕ್ಷೇತ್ರದಲ್ಲಿ ಬದಲಾವಣೆಗಳು ಯಾವ ರೀತಿ ಉಂಟಾಗುತ್ತವೆ, ಅದು ಕಲಾವಿದರನ್ನು ಹೇಗೆ ಬಾಧಿಸುತ್ತದೆ ಎಂಬಿತ್ಯಾದಿ ವಿಷಯಗಳ ಬಗ್ಗೆ ಕಾದಂಬರಿಯಲ್ಲಿ ಆಳವಾದ ಶೋಧನೆ ನಡೆದಿದೆ.

ಘಟನೆ 1
ಕಿಟ್ಟು ಮತ್ತು ಸೋಮನ ಜೀವನದ ಮೊದಲ ತಿರುವು ಅದು. ಚಿಕ್ಕಮ್ಮನನ್ನು ಮೊದಲ ಬಾರಿಗೆ ಎದುರು ಹಾಕಿಕೊಂಡು ಯಕ್ಷಗಾನ ನೋಡಲು ಹೊರಟ ಕಿಟ್ಟ ಮತ್ತು ಸೋಮನಿಗೆ ಅವರ ಜತೆಯೇ ಹೋಗುವ ಮನಸ್ಸಾಗುತ್ತದೆ. ಗೋಪಣ್ಣ ಭಟ್ಟರು ಮತ್ತು ಮೇಳದ ಯಜಮಾನರ ಮನವೊಲಿಸಿ ಟೆಂಟ್‌ ಗಾಡಿ ಹತ್ತಿಯೇ ಬಿಡುತ್ತಾರೆ. ಹಿರಿತನದ ದರ್ಪಕ್ಕೆ ಮೊದಲು ಸ್ವಲ್ಪ ಅಂಜಿದರೂ ಗೋಪಣ್ಣ ಭಟ್ಟರ ರಕ್ಷಣೆ ಇದ್ದುದರಿಂದ ಅಲ್ಲಿ ಜೀವನ ಸುಲಭವಾಗುತ್ತದೆ.

ಘಟನೆ 2
ಕಲೆ ಎಂಬುದು ನಿಂತ ನೀರಲ್ಲ. ಅದರ ಚಲನೆ ನಿರಂತರವಾಗಿರುತ್ತದೆ. ಇದನ್ನು ತಿಳಿದಿದ್ದ ಗೋಪಣ್ಣ ಭಟ್ಟರು ಕಿಟ್ಟುವಿಗೆ ಯಕ್ಷಗಾನದ ಕಲೆ ಒಬ್ಬರು ಮೇಳದಲ್ಲಿಲ್ಲ ಎಂಬ ಕಾರಣಕ್ಕೆ ಯಕ್ಷಗಾನ ನಿಂತುಹೋಗುವುದಿಲ್ಲ ಎಂದು ಹೇಳುತ್ತಾರೆ. ಯಾರಿಗೆ ಗೊತ್ತು ನಾಳೆ ನೀನು ಕೂಡ ವೇಷ ಹಾಕಿ ದೊಡ್ಡ ಕಲಾವಿದ ಆಗಬಹುದು. ಭವಿಷ್ಯವನ್ನು ಕಂಡೋರು ಯಾರು. ನಿನಗೆ ಕಲೆಯ ಮೇಲೆ ಅಷ್ಟು ಆಸಕ್ತಿ ಇದ್ದರೆ ನಮ್ಮ ಮನೆಗೆ ಬಾ ನೋಡುವ ಎಂದು ಹೇಳುತ್ತಾರೆ. ಕಿಟ್ಟುವಿಗೆ ಹಿಡಿಸಲಾರದಷ್ಟು ಆನಂದವಾಗುತ್ತದೆ. ಅವನ ಜೀವನದ ಎರಡನೇ ಅಧ್ಯಾಯ ಅಲ್ಲಿಂದ ಆರಂಭವಾಗುತ್ತದೆ.

ಘಟನೆ 3
ಮೊದಲ ಸಲ ಕಿಟ್ಟು ಅಭಿಮನ್ಯುವಿನ ವೇಷ ಹಾಕಿ ರಂಗದಲ್ಲಿ ಕುಣಿಯುತ್ತಾನೆ. ಆ ಕ್ಷಣ ಕಿಟ್ಟುವಿನ ಬಣ್ಣದ ಬದುಕಿಗೆ‌ ಮುನ್ನುಡಿಯಾಗುತ್ತದೆ. ಮಹತ್ವಾಕಾಂಕ್ಷೆಯ ಆರಂಭವಾಗ ತೊಡಗುತ್ತದೆ. ಮರೆಯಲ್ಲಿ ನಿಂತು ಕಿಟ್ಟುವಿನ ಅಭಿನಯ ನೋಡಿದ ಭಟ್ಟರು ಮೇಳದ ಯಜಮಾನರಲ್ಲಿ ಕಲೆ ಕಲಿಯೋದು ಬೇರೆ, ಒಲಿಯೋದು ಬೇರೆ, ಇವ ನನ್ನನ್ನು ಮೀರಿಸ್ತಾನೆ. ನೋಡ್ತಾ ಇರಿ ಎನ್ನುತ್ತಾರೆ.

ಸುಶ್ಮಿತಾ ಶೆಟ್ಟಿ

ಟಾಪ್ ನ್ಯೂಸ್

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.