ಮಕ್ಕಳೊಂದಿಗೆ ಮಕ್ಕಳಂತೆ ಆಡಿ…


Team Udayavani, Aug 3, 2018, 6:00 AM IST

s-5.jpg

ಗಂಡ ಇನ್ನೂ ಆಫೀಸಿನಿಂದ ಬಂದಿಲ್ಲ. ಸೋಫಾದ ಮೇಲೆ ಟಿವಿ ನೋಡುತ್ತಲೋ, ಮೊಬೈಲ್‌ನ ಸ್ಕ್ರೀನ್‌ ಅನ್ನು ಮೇಲಿಂದ ಕೆಳಕ್ಕೆ ಜಾರಿಸುತ್ತಲೋ ಕೂತಿರುತ್ತೀರಿ. ತಲೆಯೆಲ್ಲ ಆ ಡಿಜಿಟಲ್‌ ಪ್ರಪಂಚದೊಳಗೇ ಕಳೆದುಹೋಗಿದೆ. ಅಷ್ಟೊತ್ತಿಗೆ ಮಗಳು ಕರೀತಾಳೆ: “”ಅಮ್ಮಾ , ಬಾ ಚೆಸ್‌ ಆಡೋಣ”. ಆ ಪುಟಾಣಿ ಕರೆಯುವುದನ್ನು ನೋಡಿ, ನಿಮಗೆ ಥ್ರಿಲ್‌ ಅನ್ನಿಸುವುದೇ ಇಲ್ಲ. ಮಗಳು ಚದುರಂಗದಾಟ ಕಲಿತಿದ್ದೇ ಮೊನ್ನೆ ಮೊನ್ನೆ. ಕುದುರೆ ಯಾವುದು, ಆನೆ ಯಾವುದು, ಸೈನಿಕ ಯಾವುದೆನ್ನುವ ಅವಳ ಗೊಂದಲ ಬಗೆಹರಿದೇ ಇಲ್ಲ. ಆಟದುದ್ದಕ್ಕೂ ತಲೆ ತಿನ್ತಾಳೆ. ಹತ್ತಾರು ಕಾಯಿನ್‌ ದಾಟಿಸುವ ಹೊತ್ತಿಗೆ ಸೋಲುತ್ತಾಳೆ. ಆಟದಲ್ಲಿ ಒಂದು ಪೈಪೋಟಿ ಇರೋಲ್ಲ. ಮನರಂಜನೆ ದಕ್ಕುವುದೇ ಇಲ್ಲ. ಇವೆಲ್ಲವನ್ನೂ ಅಂದಾಜಿಸಿ ನೀವು ಹೇಳುತ್ತೀರಿ; “”ಇಲ್ಲಾ ಪುಟ್ಟಾ… ಇವತ್ತು ನನಗೆ ಯಾಕೋ ಮೂಡ್‌ ಇಲ್ಲ. ನೀನೇ ಏನಾದ್ರೂ  ಆಡು ಹೋಗು”. ಈ ಮಾತು ಕೇಳುತ್ತಿದ್ದಂತೆಯೇ ಪುಟಾಣಿ ಸಪ್ಪಗಾಗುತ್ತಾಳೆ.

ಮಗಳು ಸೋಲುತ್ತಾಳೆ, ನಿಜ. ನಿರೀಕ್ಷಿತ ಪೈಪೋಟಿ ಅವಳಿಂದ ಅಸಾಧ್ಯ ಎನ್ನುವುದೂ ಸತ್ಯವೇ. ಹಾಗಂತ, ಮಗಳೊಂದಿಗೆ ನೀವು ಆಡದೇ ಸುಮ್ಮನಿದ್ದರೆ, ಮುಂದೊಂದು ದಿನ ಬದುಕಿನಲ್ಲಿ ಮಗಳೇ ಸೋತುಬಿಡುತ್ತಾಳೆ! ಈಗ ನಿಮ್ಮ ಮಗಳು ಆಡುವ ಆಟವನ್ನು ನೀವು  ಬಾಲ್ಯದಲ್ಲೇ ಆಡಿರುತ್ತೀರಿ. ಅದೇ ಆಟವನ್ನೇ ಪುಟಾಣಿಯೊಂದಿಗೆ ಆಡುವುದು ನಿಮಗೆ ಬೋರ್‌ ವಿಚಾರವೇ ಇದ್ದಿರಬಹುದು. ಆದರೆ, ಮಗಳ ಆಲೋಚನಾ ಶಕ್ತಿಯನ್ನು ವಿಸ್ತರಿಸಲು, ಒಳನೋಟಗಳನ್ನು ಬೆಳೆಸಲು ಆಕೆಯೊಂದಿಗೆ ನೀವು ಕೆಲ ಹೊತ್ತಾದರೂ ಕಳೆಯಲೇಬೇಕು. ಮಗಳಿಗೋಸ್ಕರ ಎಂಥ ಕೆಲಸವಿದ್ದರೂ ಸ್ವಲ್ಪ ಸಮಯವನ್ನು ಅವಳಿಗೆ ಮೀಸಲಿಡಬೇಕು. ಅರ್ಥಮಾಡಿಕೊಳ್ಳಿ. ಮಗಳೊಂದಿಗೆ ಮುಖಾಮುಖೀಯಾಗಿ ಇಂಥ ಆಟಗಳನ್ನು ಆಡುವುದರಿಂದ ಆಕೆಯ ಬೌದ್ಧಿಕ ಪ್ರಪಂಚ ವಿಕಾಸವಾಗುತ್ತೆ. ಜತೆಗೆ ನಿಮ್ಮ ಮನೆ-ಮನಸ್ಸು ಎರಡೂ  ಲವಲವಿಕೆಯಿಂದಿರುತ್ತದೆ.

ನೀವು ಸೋಲೊಪ್ಪಿಕೊಳ್ಳಿ…
ಮಕ್ಕಳ ಜತೆ ಆಟಕ್ಕೆ ಕುಳಿತಾಗ ನೀವೇ ಪಂಟರ್‌. ಮಕ್ಕಳೊಂದಿಗೆ ಮಕ್ಕಳಂತೆ ಆಡಿ. ನಿಮ್ಮನ್ನು ಮಣಿಸುವಷ್ಟು ಬೌದ್ಧಿಕವಾಗಿ ಅವರು ಸರಿಸಮಾನರಲ್ಲ. ಆದರೆ, ನೀವು ಗೆಲ್ಲುತ್ತಾ ಹೋದಂತೆ, ಅವುಗಳಿಗೆ ಆ ಆಟದ ಮೇಲೆ ಆಸಕ್ತಿ ಕಳೆದುಹೋಗುವ ಅಪಾಯವೂ ಇದ್ದೀತು. ಈ ಕಾರಣದಿಂದ, ನೀವು ಬೇಕು ಬೇಕಂತಲೇ ತಪ್ಪು ಮಾಡುತ್ತಾ, ಸೋಲುತ್ತಾ ಹೋಗಿ. ನಿಮ್ಮ ಮೇಲಿನ ಒಂದು ಪುಟ್ಟ ಗೆಲುವೂ ಅವುಗಳ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸುತ್ತದೆ. ನಡುವೆ ಒಂದೊಂದು ಸಲ ಸೋಲುವುದನ್ನೂ ಕಲಿಸಿ. ಆಗ ಅವರು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಗುಣ ಬೆಳೆಸಿಕೊಳ್ಳುತ್ತಾರೆ.

ನೀವೇ ಅವರಿಗೆ ಪಾಠ!
ಮಕ್ಕಳು ಬಿಳಿ ಹಾಳೆ ಇದ್ದಂತೆ. ನೀವು ಚುಕ್ಕಿ ಇಟ್ಟ ಹಾಗೆ, ಅವರು ಚಿತ್ತಾರವಾಗುತ್ತಾರೆ. ಮಕ್ಕಳೊಂದಿಗೆ ನೀವು ಕಳೆದಷ್ಟು ಹೊತ್ತು, ಅವು ಚುರುಕಾಗುತ್ತವೆ ಎನ್ನುವುದು ಎಲ್ಲ ಮನಃಶಾಸ್ತ್ರಜ್ಞರು ಹೇಳುವಂಥ ಮಾತು. ನಿಮ್ಮ ಪ್ರತಿ ಹೆಜ್ಜೆ , ನಡತೆಗಳನ್ನೂ ಮಕ್ಕಳು ಸೂಕ್ಷ್ಮವಾಗಿ ಗಮನಿಸುತ್ತವೆ. ಅವರ ಪಾಲಿಗೆ ನೀವೇ ದೊಡ್ಡ ಸಿಲೆಬಸ್‌. ಹಾಗಿದ್ದೂ , ನೀವು ಸುಮ್ಮನೆ ಕುಳಿತರೆ, ಅವುಗಳ ಕಲಿಕೆಯೇ ನಿಂತುಹೋಗುತ್ತದೆ. ಅವುಗಳೊಂದಿಗೆ ಆಡುವಾಗ, ಪುಟ್ಟ ಪುಟ್ಟ ಸಂಗತಿಗಳ ಬಗ್ಗೆ ವಿಚಾರಗಳನ್ನು ಹೇಳುತ್ತಾ ಇರಿ. ಮಕ್ಕಳು ಅದನ್ನು ಶಾಶ್ವತವಾಗಿ ನೆನಪಿಟ್ಟುಕೊಳ್ಳುತ್ತವೆ. 

ಮಕ್ಕಳೊಂದಿಗೆ ನೀವೇಕೆ ಆಡಬೇಕು?
.ಮಕ್ಕಳೊಂದಿಗೆ ನೀವು ಕಳೆದಷ್ಟು ಹೊತ್ತು, ಅವು ನಿಮ್ಮಿಂದ ಹೊಸ ವಿಚಾರಗಳನ್ನು ಕಲಿಯುತ್ತವೆ.

.ಆಟದಲ್ಲಿ ಮಕ್ಕಳೆದುರು ಸೋಲೊಪ್ಪಿಕೊಳ್ಳಿ. ಆ ಒಂದೇ ಒಂದು ಗೆಲುವಿನಿಂದ ಅವುಗಳ ಕಲಿಯುವ ಉತ್ಸಾಹ ಇಮ್ಮಡಿಗೊಳ್ಳುತ್ತದೆ.

.ಮಕ್ಕಳು ಬಿಳಿ ಹಾಳೆ ಇದ್ದ ಹಾಗೆ. ನೀವು ಚುಕ್ಕಿ ಇಟ್ಟಂತೆ, ಅವರು ಚೆಂದದ ಚಿತ್ತಾರವಾಗುತ್ತಾರೆ ಎಂಬುದು ತಿಳಿದಿರಲಿ.

.ಹೊಸ ಪದ, ಹೊಸ ವಿಚಾರ, ವಿಭಿನ್ನ ಒಳನೋಟಗಳನ್ನು ಮಕ್ಕಳು ಕಲಿಯುತ್ತವೆ.

.ದೊಡ್ಡವರನ್ನು ಹೇಗಾದರೂ ಮಣಿಸಬೇಕೆಂಬ ಅವುಗಳ ಛಲವೇ, ಬದುಕಿನ ಹೋರಾಟವನ್ನು ಕಲಿಸುತ್ತದೆ.

.ಮಕ್ಕಳೊಂದಿಗೆ ನೀವು ಕಳೆದುಹೋದಷ್ಟು , ನಿಮ್ಮ ಒತ್ತಡವೂ ಕರಗಿಹೋಗುತ್ತದೆ.

ಸ್ಮಿತಾ

ಟಾಪ್ ನ್ಯೂಸ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.