ಮಕ್ಕಳಾಟಿಕೆ


Team Udayavani, Jan 4, 2019, 12:30 AM IST

x-72.jpg

ಅಳುವ ಕಂದನ ಕೈಗೆ ಆಟಿಕೆ ಕೊಟ್ಟು ಸುಮ್ಮನಾಗಿಸುವ ಕಾಲ ಈಗಿಲ್ಲ. ಮಗು ಅತ್ತರೆ,  ಊಟ ಮಾಡದಿದ್ದರೆ, ಹಠ ಮಾಡುತ್ತಿದ್ದರೆ, ಮಲಗಲು ಕೇಳದಿದ್ದರೆ, ಎಲ್ಲದಕ್ಕೂ ಒಂದೇ ಪರಿಹಾರ. ಕೈಗೆ ಮೊಬೈಲ್‌ ಕೊಟ್ಟು , ಯಾವುದೋ ವಿಡಿಯೋ ಹಾಕಿ ಮಗುವನ್ನು ಸುಮ್ಮನಾಗಿಸುವುದು. ಹೀಗೆ ಅಮ್ಮನ ಪ್ರೋತ್ಸಾಹದಿಂದಲೇ ಮೊಬೈಲ್‌ ಸಾಂಗತ್ಯಕ್ಕೆ ಬೀಳುವ ಮಗುವಿಗೆ, ಮುಂದೆ ಬೇರೆಲ್ಲ ಆಟಿಕೆಗಳಿಗಿಂತ ಮೊಬೈಲೇ ಹೆಚ್ಚು ಆಕರ್ಷಕ ಎನಿಸುತ್ತದೆ. ಮುಂದೆ, ಬೇರೆಲ್ಲ ಆಟಿಕೆಗಳನ್ನು ಬದಿಗೊತ್ತಿ, ಮೊಬೈಲ್‌ ಗೀಳನ್ನು ಹತ್ತಿಸಿಕೊಳ್ಳುತ್ತದೆ ಮಗು. ಹೀಗಾಗಬಾರದು ಅಂತಾದರೆ, ಮಗುವಿಗೆ ಆಟಿಕೆಯೊಡನೆ ಸಮಯ ಕಳೆಯುವುದನ್ನು ಕಲಿಸಬೇಕು. ವಿಡಿಯೋ ಗೇಮ್‌ಗಳಿಂದ ಹೊರತಾದ ಪ್ರಪಂಚವನ್ನು ಮಕ್ಕಳ ಎದುರು ತೆರೆದಿಡಬೇಕು. ಯಾಕೆಂದರೆ, ಮಕ್ಕಳ ಭಾವನಾತ್ಮಕ, ದೈಹಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಆಟಿಕೆಗಳು ಸಹಕಾರಿ ಎನ್ನುತ್ತಾರೆ ತಜ್ಞರು. ಮಗುವಿಗೆ ಕೊಡಿಸುವ ಆಟಿಕೆಗಳು ಹೇಗಿರಬೇಕು ಎಂದರೆ…

.ಪುಟ್ಟ ಇಟ್ಟಿಗೆಗಳಂಥ (ಬಿಲ್ಡಿಂಗ್‌ ಬ್ಲಾಕ್ಸ್‌) ವಸ್ತುಗಳಿಂದ ಕಟ್ಟಡ ನಿರ್ಮಿಸುವ ಆಟ ಗೊತ್ತೇ ಇದೆ. ಈ ಆಟ, ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಸೃಜನಶೀಲತೆ, ಚುರುಕುತನ, ಗಣಿತದ ಸಾಮರ್ಥ್ಯವನ್ನು ಬೆಳೆಸುವ ಈ ಆಟಿಕೆಗಳನ್ನು ಮಕ್ಕಳಿಗೆ ಕೊಡಿಸಿ, ಆಟವಾಡುವುದನ್ನು ಪ್ರೋತ್ಸಾಹಿಸಿ.

.ಭಾಷಾ ಜ್ಞಾನವನ್ನು ಹೆಚ್ಚಿಸುವ, ಕಲಿಕೆಗೆ ಸಹಾಯವಾಗುವಂಥ ಆಟಿಕೆಗಳನ್ನು ಕೊಡಿಸಿ. ಅಕ್ಷರಗಳನ್ನು ಜೋಡಿಸಿ ಪದ ರಚಿಸುವುದು, ವಸ್ತುಗಳನ್ನು, ಬಣ್ಣಗಳನ್ನು ಗುರುತಿಸುವುದು ಮುಂತಾದವು.

.ಶಾಲೆಗೆ ಹೋಗುವ ಮಕ್ಕಳಿಗೆ ಪದಬಂಧ, ಸುಡುಕೊ ಮುಂತಾದ ಜ್ಞಾನವರ್ಧಕ ಆಟಗಳನ್ನು ಆಡಿಸಬಹುದು. ಹೆತ್ತವರು ಜೊತೆಗಿದ್ದು, ಸಲಹೆ-ಸೂಚನೆಗಳನ್ನು ನೀಡುತ್ತಿದ್ದರೆ ಮಕ್ಕಳಲ್ಲೂ ಆಸಕ್ತಿ ಹೆಚ್ಚುತ್ತದೆ.

.ಕಲ್ಪನಾ ಶಕ್ತಿಯನ್ನು ಹೆಚ್ಚಿಸುವಂಥ ಆಟಿಕೆಗಳು ಮಕ್ಕಳ ಬೆಳವಣಿಗೆಗೆ ಸಹಕಾರಿ. ಚೌಕಾಕಾರದ ಖಾಲಿ ಪೆಟ್ಟಿಗೆಗಳು, ಅಡುಗೆ ಸೆಟ್‌, ಡಾಕ್ಟರ್‌ ಕಿಟ್‌… ಹೀಗೆ ಭವಿಷ್ಯದ ಕಲ್ಪನೆಗಳನ್ನು , ಕನಸುಗಳನ್ನು ಮೂಡಿಸುವ ಹಲವಾರು ಆಟಿಕೆಗಳಿವೆ.

.ನಾವೆಲ್ಲ ಸಣ್ಣವರಿದ್ದಾಗ ಆಡುತ್ತಿದ್ದ ಬುಗುರಿ, ಚನ್ನೆಮಣೆ, ಚದುರಂಗ, ಪಗಡೆ, ಹಾವು-ಏಣಿಯಂಥ ಆಟಗಳನ್ನು ಮಕ್ಕಳಿಗೆ ಕಲಿಸಬಹುದು. ಈ ಆಟಗಳು ಮೊಬೈಲ್‌ ಗೇಮ್‌ಗಳ ಸ್ವರೂಪ ಪಡೆದಿದ್ದರೂ, ಎಲ್ಲರೂ ಒಟ್ಟಾಗಿ ಕುಳಿತು ಆಡುವುದರಿಂದ ಮಕ್ಕಳ ಸಂವಹನ ಶಕ್ತಿ ಹೆಚ್ಚುತ್ತದೆ.

.ಜಿಗಿಯುವ ಗೊಂಬೆಗಳು, ಚೆಂಡು ಮುಂತಾದ ಆಟಿಕೆಗಳು ಮಕ್ಕಳನ್ನು ದೈಹಿಕವಾಗಿ ಫಿಟ್‌ ಆಗಿಸುತ್ತವೆ. ಮನೆಯ ಹೊರಗೆ, ಸಮವಯಸ್ಕರ ಜೊತೆ ಇಂಥ ಆಟಗಳನ್ನು ಆಡಿದಾಗ ಅವರಲ್ಲಿ ಕ್ರೀಡಾ ಮನೋಭಾವವೂ ಮೂಡುತ್ತದೆ.

.ಆ್ಯಕ್ಷನ್‌ ಗೇಮ್‌ಗಳು (ಸೈನಿಕರು, ಸಣ್ಣಪುಟ್ಟ ಆಯುಧಗಳ ಆಟಿಕೆ ಸೆಟ್‌ಗಳು) ಮಕ್ಕಳಲ್ಲಿ ಹಿಂಸಾತ್ಮಕ ಭಾವನೆ ಬೆಳೆಸುತ್ತವೆ ಎಂಬ ಆತಂಕ ಕೆಲವರದ್ದು. ಆದರೆ, ಅಂಥ ಆಟಿಕೆಗಳು ಕಲ್ಪನಾಶಕ್ತಿ ಮತ್ತು ಸಾಹಸ ಮನೋಭಾವವನ್ನು ಹೆಚ್ಚಿಸುತ್ತವೆ ಎಂಬುದೂ ಸುಳ್ಳಲ್ಲ.

ಪುಷ್ಪಲತಾ

ಟಾಪ್ ನ್ಯೂಸ್

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.