ಸ್ನೇಹದ ಕಡಲಲ್ಲಿ


Team Udayavani, Oct 5, 2018, 6:00 AM IST

s-9.jpg

ಅಂದು ರವಿವಾರ. ಕೋಚಿಂಗ್‌ ಮುಗಿಸಿ ಮನೆಗೆ ಬಂದವಳೇ ಕಿವಿಗಳಿಗೆ ಇಯರ್‌ಫೋನ್‌ ಅನ್ನು ಜೋತುಹಾಕಿ ಅಂಗಳದಲ್ಲಿ ಬಂದು ಕುಳಿತೆ. ಆ ಕ್ಷಣ ಕಿವಿಗೆ ಬಿದ್ದ ಹಾಡು “ರಕ್ತ ಸಂಬಂಧಗಳ ಮೀರಿದ ಬಂಧವಿದು’ - ಸ್ನೇಹದ ಅರ್ಥ ತಿಳಿಸುವ ಈ ಸುಮಧುರ ಹಾಡು ಮುಗಿಯುವಷ್ಟರಲ್ಲಿ ಕಣ್ಣಂಚಿನ ಹನಿ ಕೆನ್ನೆಗಳ ಮೇಲುರುಳಿ ನನ್ನ ಕೈಯಲ್ಲಿದ್ದ ಫೋಟೋ ಒಂದರ ಮೇಲೆ ಬಿತ್ತು. ಆ ಫೋಟೋದಲ್ಲಿದ್ದದ್ದು ನಾನು, ನನ್ನ ಸ್ನೇಹಿತೆ ಜೀವಿತಾ !

ನಾನು ಜೀವಿತಾಳನ್ನು ಭೇಟಿ ಮಾಡಿದ್ದು ಒಂದು ವರುಷದ ಹಿಂದೆ ಕಾಲೇಜಿನಲ್ಲಿ. ಅಲ್ಲಿಯವರೆಗೆ ನಾವು ಎಂದಿಗೂ ಒಬ್ಬರನ್ನೊಬ್ಬರು ಕಂಡವರೂ ಅಲ್ಲ. ಪ್ರಥಮ ಪಿಯುಸಿ ಪ್ರಾರಂಭವಾಗಿ ಒಂದೆರಡು ತಿಂಗಳ ನಂತರ ಬೆಸೆದ ಬಂಧ ಈ ಸ್ನೇಹ. ಮೊದಮೊದಲು ಹೆಚ್ಚು ಮಾತಿರಲಿಲ್ಲ. ಇಬ್ಬರಿಂದಲೂ ಯಥಾಚಾರ ವರ್ತನೆ, ಔಪಚಾರಿಕೆಯಷ್ಟೆ. ಅಚ್ಚರಿಯ ವಿಷಯವೆಂದರೆ, ಈ ಸ್ನೇಹ ಎಲ್ಲಿ, ಯಾವಾಗ, ಹೇಗೆ ಬೆಸೆಯಿತು ಎಂಬ ಸಣ್ಣ ಸುಳಿವು ಸಹ ನಮ್ಮಲ್ಲಿಲ್ಲ. ಆದರೂ ಒಬ್ಬರನ್ನೊಬ್ಬರು ಅರಿತು, ಬೆರೆತು ಎಂದೆಂದಿಗೂ ಒಂದಾಗಿರುವ ವಾಗ್ಧಾನ ನೀಡಿ, ಹೃದಯಕ್ಕೆ ಬೆಚ್ಚನೆಯ ಅನುಭವ ನೀಡಿದ ಗೆಳೆತನ ಅವಳದು.

“ಶುದ್ಧ ಹಾಲಿನಲ್ಲಿ ನೊರೆ ಜಾಸ್ತಿ. ಶುದ್ಧ ಹೃದಯದಲ್ಲಿ ಪ್ರೀತಿ ಜಾಸ್ತಿ. ಶುದ್ಧ ಸ್ನೇಹದಲ್ಲಿ ಜಗಳ ಜಾಸ್ತಿ’ ಎಂಬ ಮಾತಿನಂತೆ ಬಹುಶಃ ನಾವು ಜಗಳವಾಡದೇ ಇರುವ ದಿನವೇ ಇಲ್ಲ. ಪ್ರತಿ ಬಾರಿ ಕಿತ್ತಾಡಿಕೊಂಡಾಗಲೂ ಸಹ “ನಂಗೊತ್ತು, ನಿನಗೆ ನಾನಂದ್ರೆ ಇಷ್ಟ ಇಲ್ಲ!’ ಎಂದು ಮುಗ್ಧ ಮಕ್ಕಳಂತೆ ಉದ್ಗರಿಸಿ, ಬೆನ್ನಿಗೆ ಎರಡು ಗುದ್ದನ್ನೂ ಹಾಕುತ್ತಾಳೆ. ನಮ್ಮ ಈ ಅವಸ್ಥೆ ಕಂಡು, ನಮ್ಮ ಸಹಪಾಠಿಗಳು “ಟಾಮ್‌ ಆ್ಯಂಡ್‌ ಜೆರಿ’ ಎಂದು ನಾಮಕರಣವನ್ನೂ ಮಾಡಿದ್ದಾರೆ. ಅವಳೆಷ್ಟು ಕೀಟಲೆಗಳನ್ನು ಮಾಡಿದರೂ ಸಹ, ಅವಳಿಲ್ಲದೇ ಒಂದು ದಿನವನ್ನೂ ಕಳೆಯುವುದು ಕಠಿಣ. ಶತ್ರುವಿನ ಮಾತಿಗಿಂತ ಮಿತ್ರನ ಮೌನ ಮನಸ್ಸಿಗೆ ಅಪಾರ ನೋವು ನೀಡುತ್ತದೆ. ನನ್ನ ಗೆಳತಿ ಮೌನಿಯಾದಾಗ ಇಡೀ ಜಗತ್ತೇ ಹಸಿರು ನಿಶಾನೆ ಕಳೆದುಕೊಂಡ ಬರಡು ಭೂಮಿಯಂತೆ ತೋರುತ್ತದೆ. ಆಕೆಗೂ ನಾನು ಬೇರೆಯವರೊಂದಿಗೆ ಹೆಚ್ಚು ಸಮಯ ಕಳೆದರೆ, ಬರುವ ಸಿಟ್ಟಿಗೆ ಪಾರವೇ ಇಲ್ಲ. ಹುಬ್ಬುಗಳನ್ನೇರಿಸಿ ಕೆಂಗಣ್ಣಿನಿಂದ ದಿಟ್ಟಿಸಿ ನೋಡಿದಾಕ್ಷಣ, ಏನೂ ಅರಿಯದವಳಂತೆ ನಾನು ಅವಳ ಸನಿಹ ಹೋಗಬೇಕಾದುದು ಅನಿವಾರ್ಯ!

ನಾನು ಜೀವಿತಾಳೊಂದಿಗೆ ಕಳೆದ ಸಮಯ ಒಂದೇ ವರುಷವಾದರೂ ಸಹ, ಒಡಹುಟ್ಟಿದವರಂತೆ ಪ್ರೀತಿಯನ್ನು ಧಾರೆಯೆರೆವ ಸಂಗಾತಿಯವಳು. ಒಂದೇ ತಾಯಿಯ ಮಕ್ಕಳಂತೆ, ಜೀವನದ ಪ್ರತಿ ಹೆಜ್ಜೆಯಲ್ಲೂ ಆಕೆಯೊಂದಿಗೆ ಇರಬೇಕೆಂಬ ದೃಢ ಹಂಬಲ. ಅವಳಿಲ್ಲದೇ ತರಗತಿಯಲ್ಲಿ ಕೂರುವ ಬಗ್ಗೆ ಯೋಚಿಸಲೂ ನನ್ನಿಂದಾಗದು. ಅವಳೊಂದಿಗಿನ ನನ್ನ ಸ್ನೇಹ ಸಂಬಂಧ ಎಷ್ಟು ಗಾಢವಾಗಿತ್ತು ಎಂದರೆ, ಬರೀ ಒಂದೇ ವರುಷದಲ್ಲಿ ನಾವು ಒಬ್ಬರನ್ನೊಬ್ಬರ ಮೊದಲ ಆದ್ಯತೆಗಳಾಗಿದ್ದೆವು. ನನ್ನಲ್ಲಿ  ಅವಳಿಗೆ ಅರಮನೆ ಕಟ್ಟಿಸುವಂತಹ ಸಿರಿತನವಿಲ್ಲ. ಆದರೆ, ಕಣ್ಣೀರು ಒರೆಸುವಂತಹ ಗೆಳತನವಿದೆ ಎಂಬುವುದರ ಬಗ್ಗೆ ಬಹಳ ಹೆಮ್ಮೆಯಿದೆ.

ಶಿವರಂಜನಿ
ದ್ವಿತೀಯ ಪಿಯುಸಿ, ಗೋವಿಂದದಾಸ ಪ.ಪೂ. ಕಾಲೇಜು, ಸುರತ್ಕಲ್‌

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.