![ಶಕ್ತಿ ಯೋಜನೆಯಿಂದ ಪ್ರವಾಸೋದ್ಯಮ ಚುರುಕು: ಸಚಿವ ಎಚ್.ಕೆ. ಪಾಟೀಲ್](https://www.udayavani.com/wp-content/uploads/2024/06/hk-1-415x271.jpg)
ಎಸ್ಬಿಐ ಅಧ್ಯಕ್ಷರಿಗೆ ವಿತ್ತ ಸಚಿವರ ತರಾಟೆ? ವೈರಲ್ ಆಗುತ್ತಿದೆ ಧ್ವನಿಮುದ್ರಣ
Team Udayavani, Mar 15, 2020, 9:06 PM IST
![ಎಸ್ಬಿಐ ಅಧ್ಯಕ್ಷರಿಗೆ ವಿತ್ತ ಸಚಿವರ ತರಾಟೆ?](https://www.udayavani.com/wp-content/uploads/2020/03/sbi-bank-620x422.jpg)
ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭಾರತೀಯ ಸ್ಟೇಟ್ ಬ್ಯಾಂಕ್ ಅಧ್ಯಕ್ಷ ರಜನೀಶ್ ಕುಮಾರ್ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿರುವ ಧ್ವನಿಮುದ್ರಣ ಈಗ ವೈರಲ್ ಆಗಿದೆ. ಫೆ.27ರಂದು ಗುವಾಹಟಿಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.
ಆರ್ಥಿಕ ಸೇವೆಗಳ ವಿಭಾಗ ಮತ್ತು ಅಸ್ಸಾಂ ರಾಜ್ಯ ಬ್ಯಾಂಕರ್ಗಳ ಒಕ್ಕೂಟ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಹಾ ತೋಟದಲ್ಲಿ ಕೆಲಸ ಮಾಡುವ ಕೂಲಿಯಾಳುಗಳ 2.5 ಲಕ್ಷ ಬ್ಯಾಂಕ್ ಖಾತೆ ನಿರುಪಯುಕ್ತವಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿ ವಿತ್ತ ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಸ್ಬಿಐ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂಬ ವರದಿಗಳಿವೆ.
ಅದರಲ್ಲಿ ಇರುವ ಧ್ವನಿಯ ಪ್ರಕಾರ ವಿತ್ತ ಸಚಿವರು ಎಸ್ಬಿಐ ಅನ್ನು “ಹೃದಯಹೀನ’, “ಅಸಮರ್ಥ’ ಎಂದು ಹೇಳಿರುವ ಅಂಶಗಳಿವೆ. “ನೀವು ಅತ್ಯಂತ ದೊಡ್ಡ ಬ್ಯಾಂಕ್ ಎಂದು ಹೇಳಿಕೊಳ್ಳಬೇಡಿ. ನಿಮ್ಮದು ಹೃದಯ ಹೀನ ಬ್ಯಾಂಕ್. ರಾಷ್ಟ್ರ ಮಟ್ಟದ ಬ್ಯಾಂಕರ್ಗಳು ಹೀಗೆ ವರ್ತಿಸುವಂತಿಲ್ಲ. ಇಂಥ ವಿಚಾರಗಳನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಹೇಳಿರುವ ಅಂಶಗಳಿವೆ.
ಈ ಹೇಳಿಕೆಯನ್ನು ಅಖೀಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ ಖಂಡಿಸಿದೆ. ಹಣಕಾಸು ಸಚಿವರ ವರ್ತನೆ ಖಂಡನಾರ್ಹ ಎಂದು ಹೇಳಿದೆ.
ಟಾಪ್ ನ್ಯೂಸ್
![ಶಕ್ತಿ ಯೋಜನೆಯಿಂದ ಪ್ರವಾಸೋದ್ಯಮ ಚುರುಕು: ಸಚಿವ ಎಚ್.ಕೆ. ಪಾಟೀಲ್](https://www.udayavani.com/wp-content/uploads/2024/06/hk-1-415x271.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.