ಮೆರುಗು ಹೆಚ್ಚಿಸುವ ಅಕ್ವೇರಿಯಂ ಕೊಳ್ಳುವ ಮುನ್ನ ಯೋಜನೆ ಇರಲಿ


Team Udayavani, Mar 7, 2020, 4:40 AM IST

ಮೆರುಗು ಹೆಚ್ಚಿಸುವ ಅಕ್ವೇರಿಯಂ ಕೊಳ್ಳುವ ಮುನ್ನ ಯೋಜನೆ ಇರಲಿ

ಮನೆಯಲ್ಲಿ ಅಕ್ವೇರಿಯಂ ಇದ್ದರೆ ಒಟ್ಟಾರೆ ಇಂಟೀರಿಯರ್‌ನ ಅಂದಕ್ಕೆ ಮತ್ತಷ್ಟು ಮೆರುಗು ಬರುತ್ತದೆ. ಅದರಲ್ಲೂ ಬೇರೆ ಬೇರೆ ಆಕಾರದ ಅಕ್ವೇರಿಯಂಗಳಂತೂ ನಿವಾಸದ ಅಲಂಕಾರಕ್ಕೆ ಇನ್ನಷ್ಟು ಅಂದ ನೀಡುತ್ತವೆ. ಇನ್ನೂ ಆರೋಗ್ಯದ ದೃಷ್ಟಿಯಿಂದಲೂ ಅಕ್ವೇರಿಯಂಗಳು ಉಪಯುಕ್ತವಾಗಿದ್ದು, ಒತ್ತಡ ನಿವಾರಣೆಯ ಕೆಲಸವನ್ನೂ ಮಾಡುವುದು ಮತ್ತೂಂದು ವಿಶೇಷ.

ಯೋಜನೆ ಅಗತ್ಯ
ಅಕ್ವೇರಿಯಂ ಖರೀದಿ ಮಾಡಿ ಮನೆಗೆ ತರುವ ಮುನ್ನವೇ ಸರಿಯಾದ ಯೋಜನೆ ಹಾಕಿಕೊಳ್ಳಬೇಕು. ಏಕೆಂದರೆ ಅದರ ಸ್ಥಳವನ್ನು ಆಗಾಗ ಬದಲಾಯಿಸಲು ಕಷ್ಟ. ಹೀಗಾಗಿ ಎಲ್ಲಿಡಬೇಕು, ವಾಸ್ತು ಪ್ರಕಾರ ಆ ಜಾಗ ಸರಿಯೇ, ಅಲ್ಲಿ ಪ್ಲಗ್‌ ವ್ಯವಸ್ಥೆ ಇದೆಯೇ ? ಮನೆಯ ಅಲಂಕಾರಕ್ಕೆ ಇದು ಪೂರಕವಾಗಿ ಹೊಂದಿಕೊಳ್ಳುವುದೇ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು.

ಯಾವ ಸ್ಥಳ ಸೂಕ್ತ
ಲೀವಿಂಗ್‌ ರೂಮ್‌ ಅಥವಾ ಡೈನಿಂಗ್‌ ಏರಿಯಾ ಮತ್ತು ಕಿಚನ್‌ ಮಧ್ಯೆ ರೂಮ್‌ ಡಿವೈಡರ್‌ ಇದ್ದರೆ ಅದರ ಭಾಗವಾಗಿ ಇಡಬಹುದು. ಇದರ ಜತೆಗೆ ನೀವು ಕೂರುವ ಸೋಫಾಕ್ಕೆ ಎದುರಾಗಿದ್ದರೆ ಮನೆಯ ಅಂದಕ್ಕೆ ಅನುಕೂಲವಾಗಿ ಕಾಣುತ್ತದೆ. ಇದರ ಹೊರತಾಗಿ ಟಿವಿ ಕ್ಯಾಬಿನೆಟ್‌ ಅಥವಾ ಬಾರ್‌ ಯೂನಿಟ್‌ನ ಭಾಗವಾಗಿಯೂ ಬಳಸಬಹುದು.

ಎಚ್ಚರಿಕೆ ಅಗತ್ಯ
ಸದಾ ಓಡಾಡುವ ಜಾಗದಲ್ಲಿ ಅಕ್ವೇರಿಯಂ ಇಡುವುದು ಸೂಕ್ತವಲ್ಲ. ಏಕೆಂದರೆ ಓಡಾಡಲು ಅಡೆತಡೆಯಾಗುವುದರ ಜತೆಗೆ ಏನಾದರೂ ತಾಗಿ ಅಕ್ವೇರಿಯಂ ಒಡೆಯುವ ಸಾಧ್ಯತೆಗಳನ್ನು ಕಡೆಗಣಿಸುವಂತಿಲ್ಲ. ಇನ್ನು ಕಿಟಕಿಗಳ ಮೂಲಕ ಸೂರ್ಯ ಬೆಳಕು ನೇರವಾಗಿ ತಾಗುವ ಜಾಗದಲ್ಲೂ ಅಕ್ವೇರಿಯಂ ಇಡಬಾರದು.

ಸಾಮಾನ್ಯವಾಗಿ ಬೌಲ್‌ ಅಕ್ವೇರಿಯಂ ಟೇಬಲ್‌ ಮೇಲೆ ಇಡಲು ಸೂಕ್ತವಾದುದು. ಇದರಲ್ಲಿ ಸಾಂಪ್ರದಾಯಿಕ ಗೋಲ್ಡ್ ಮತ್ತು ಬ್ಲ್ಯಾಕ್‌ ಫಿಶ್‌ ಹಾಕಬಹುದು. ಫಿಶ್‌ ಬೌಲ್‌ಗ‌ಳನ್ನು ಸೆಂಟರ್‌ ಟೇಬಲ್‌ ಅಥವಾ ಮಾಮೂಲಿ ಟೇಬಲ್, ಸೈಡ್‌ ಬೋರ್ಡ್‌ ಅಥವಾ ಗ್ಲಾಸ್‌ ಶೆಲ್‌ನಲ್ಲಿ ಇಡಬಹುದಾಗಿದೆ.

ಗಾತ್ರ ನಿರ್ಣಯ
ಎಷ್ಟು ಮೀನುಗಳನ್ನು ಹಾಕಬೇಕು ಎಂಬುದನ್ನು ಯೋಚಿಸಿ ಬಳಿಕ ಅಕ್ವೇರಿಯಂ ಗಾತ್ರವನ್ನು ನಿರ್ಣಯ ಮಾಡಬೇಕು. ಟ್ಯಾಂಕ್‌ ದೊಡ್ಡದಿದ್ದಷ್ಟೂ ಒಳಗಿರುವ ಮೀನುಗಳಿಗೆ ಓಡಾಡಲು ಅನುಕೂಲವಾದ ವಾತಾವರಣವನ್ನು ನಿರ್ಮಿಸುತ್ತದೆ. ಚಿಕ್ಕ ಗಾತ್ರದ ಅಕ್ವೇರಿಯಂ ಆದ್ರೆ, ಚಿಕ್ಕ ಮೀನುಗಳನ್ನು ಹಾಕಬೇಕು. ಗೋಲ್ಡ… ಫಿಶ್‌, ಏಂಜಲ್‌ ಫಿಶ್‌, ಡಿಸ್ಕಸ್‌ ಫಿಸ್‌ ಮತ್ತು ನೀಲಿ ಧಾರೆ ಉಳ್ಳ ನಿಯಾನ್‌ ಫಿಶ್‌ ನೋಡಲು ತುಂಬಾ ಆಕರ್ಷಕವಾಗಿರುತ್ತವೆ. ಟೈಗರ್‌ ಶಾರ್ಕ್‌, ಸಿಲ್ವರ್‌ ಶಾರ್ಕ್‌ಗಳನ್ನೂ ಬಿಡಬಹುದು.

ಎಲ್ಲೆಡೆಯೂ ಸಾಧ್ಯ
ಅಕ್ವೇರಿಯಂ ಅನ್ನು ಹೊರಗೆ ಮಾತ್ರವಲ್ಲ ಒಳಗಡೆಯೂ ಅಲಂಕರಿಸಬಹುದು. ಇದಕ್ಕಾಗಿ ಒಳಗಡೆ ಅಕ್ವೇರಿಯಂ ಪ್ಲಾಂಟ್‌, ಪೆಬೆಲ್, ಚಿಪ್ಪು ಮೊದಲಾದವನ್ನು ಇಡಬಹುದು. ಇದರ ಜತೆಗೆ ಆಟಿಕೆ ಆಮೆ, ಏಡಿಯನ್ನೂ ಇಡುತ್ತಾರೆ. ಇದರ ಮೇಲ್ಭಾಗದಲ್ಲಿ ಕನ್ನಡಿಯನ್ನು ಅಳವಡಿಸಿದರೆ ಅಕ್ವೇರಿಯಂ ಇನ್ನಷ್ಟು ದೊಡ್ಡದಿರುವಂತೆ ಕಾಣುತ್ತದೆ.

 ಸುಶ್ಮಿತಾ ಜೈನ್‌

ಟಾಪ್ ನ್ಯೂಸ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.