ಗತ ಪರಂಪರೆಗೆ ದೀವಿಗೆಯಾದ ದೊಂದಿ ಬೆಳಕಿನ ಆಟ


Team Udayavani, Jan 10, 2020, 6:59 PM IST

13

ಕಮಲಶಿಲೆ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆದ ಕಮಲಶಿಲೆ ಮೇಳದ ದೊಂದಿ ಬೆಳಕಿನ ಯಕ್ಷಗಾನ ಪ್ರದರ್ಶನ ಪ್ರೇಕ್ಷಕರನ್ನು ದಶಕಗಳಷ್ಟು ಹಿಂದಕ್ಕೊಯ್ಯಿತು. ಅಡಿಕೆ ಮರ, ಮಾವಿನ ಎಲೆ, ಹೂವುಗಳಿಂದ ಪ್ರಾಕೃತಿಕ ಸೊಬಗಿನಿಂದ ಸಿಂಗರಿಸಿದ ರಂಗಸ್ಥಳ, ಹಿಮ್ಮೇಳದವರಿಗೆ ಹೊಡಿಮಂಚ, ಎಲೆಕ್ಟ್ರಾನಿಕ್‌ ಶ್ರುತಿ ಬದಲಿಗೆ ಹಳೆ ಹಾರ್ಮೋನಿಯಂ ಪೆಟ್ಟಿಗೆ, ರಂಗಸ್ಥಳದ ಮೂರು ಕಡೆಗಳಲ್ಲಿ ಬಾಳೆ ದಿಂಡಿನ ಪಕಳೆಗಳನ್ನು (ಪಟ್ಟೆ )ಗಳ ಹೊರ ಹೊದಿಕೆ ಮಾಡಿ ಕಟ್ಟಿದ ಬಟ್ಟೆಯ ದೊಂದಿಗಳು, ಗ್ಯಾಸ್‌ಲೈಟ್‌ ವ್ಯವಸ್ಥೆ ಹೀಗೆ ಗತಕಾಲದ ಹಲವು ನೆನಪುಗಳನ್ನು ಸಾಧ್ಯವಾಗಿಸಿ ಕಲಾಸಕ್ತರ ಮನ ಗೆದ್ದರು.

ಕಮಲಶಿಲೆ ದಶಾವತಾರ ಮೇಳದ ಎ ತಂಡದ ಕಲಾವಿದರು, “ಕರ್ಣಾವಸಾನ’ ಆಖ್ಯಾನವನ್ನು ಅದ್ಭುತವಾಗಿ ನಿರೂಪಿಸಿ ಕಲಾರಸಿಕರ ಮನ ತಣಿಸಿದರು. ಪರಂಪರೆಯ ಯಕ್ಷಗಾನದಂತೆಯೇ ಪೂರ್ವರಂಗದ ಪ್ರದರ್ಶನದ ಭಾಗವಾಗಿ ಕೋಡಂಗಿ, ಬಾಲಗೋಪಾಲ, ಪೀಠಿಕೆ ಸ್ತ್ರೀ ವೇಷ, ತೆರೆಯ ಒಡ್ಡೋಲಗ ಹೀಗೆ ಕೆಲವೆಡೆ ಲುಪ್ತವಾದ ಎಲ್ಲಾ ಸ್ತರಗಳನ್ನು ಹಂತಹಂತವಾಗಿ ನಿರೂಪಿಸಿ ನಂತರ ಪ್ರಸಂಗದ ಆರಂಭವಾಯ್ತು.

ದೊಂದಿ ಬೆಳಕಿನಲ್ಲಿ ರಂಗವನ್ನು ಆಸ್ವಾದಿಸುವುದು ನಿಜಕ್ಕೂ ರಮಣೀಯ. ಜತೆಗೆ ರಂಗಸ್ಥಳದ ಅಟ್ಟಣಿಗೆ ಇರದೆ ಬಯಲಿನಲ್ಲಿಯೇ ರಂಗಮಂಟಪ ನಿರ್ಮಾಣವಾದ ಕಾರಣ, ಕಲಾವಿದರ ಹೆಜ್ಜೆಯ ಸಪ್ಪಳದ ಧ್ವನಿ ಸಹಜವಾಗಿ ಹೆಜ್ಜೆಗೆಜ್ಜೆಯ ನಾದವಾಗಿ ಶ್ರವಣಸುಖ ನೀಡುತ್ತಿತ್ತು. ರಾತ್ರಿ ಇಡೀ ದೊಂದಿಗೆ ಎಳ್ಳೆಣ್ಣೆ ಸುರಿಯುತ್ತಾ, ಅದರ ಕರಿ ತೆಗೆಯುತ್ತಾ, ಸೀಮೆಣ್ಣೆಯನ್ನು ಹದವಾಗಿ ಸುರಿಯುತ್ತಾ ನಿರ್ವಹಣೆ ಮಾಡುವುದು ಒಂದು ಸವಾಲು. ರಂಗದಲ್ಲಿ ಕೇವಲ ದೊಂದಿ ಬೆಳಕಾದರೆ ಕಲಾವಿದರ ಮುಖ ಸರಿಯಾಗಿ ಕಾಣದು. ಆ ಕಾರಣಕ್ಕೆ ಗ್ಯಾಸ್‌ಲೈಟ್‌ನ ವ್ಯವಸ್ಥೆ. ಈ ಕಾಲದಲ್ಲಿ ಊರು ಕೇರಿಯಲ್ಲಿ ಕೆಲವರ ಮನೆಯಲ್ಲಷ್ಟೇ ಉಳಿಸಿಕೊಂಡ ಗ್ಯಾಸ್‌ಲೈಟ್‌ ಅರಸಿ ತಂದು, ಅದಕ್ಕೆ ಬೇಕಾದ ಮೆಂಟಲ್‌ಗ‌ಳನ್ನು ಮಾರುಕಟ್ಟೆಯಲ್ಲಿ ಹುಡುಕಿ ತಂದು ,ರಂಗದಲ್ಲಿ ಬೆಳಕಿನ ವ್ಯವಸ್ಥೆ ಮಾಡಿ, ಗಂಟೆ ಗಂಟೆಗೆ ಅವುಗಳಿಗೆ ಗ್ಯಾಸ್‌ ತುಂಬುವ ಕೆಲಸ ಮಾಡಿದರು. ಇವೆಲ್ಲಾ ಪ್ರೇಕ್ಷಕರಿಗೆ ,ಆ ಕಾಲದಲ್ಲಿ ಯಕ್ಷಗಾನ ಮಾಡಲು ಇದ್ದ ಸವಾಲುಗಳನ್ನು, ಸಮಸ್ಯೆಗಳನ್ನು ನೆನಪಿಸಿತು.ದೊಂದಿಯಾಟ ಚಳಿಯ ದಿನಗಳಲ್ಲಿ ಕಲಾವಿದರ ಚಳಿ ಓಡಿಸುವುದರ ಜೊತೆಗೆ ಪ್ರೇಕ್ಷಕರನ್ನು ಬೆಚ್ಚಗೆ ಇಡಲು ಅನುಕೂಲಕರವಾಗಿತ್ತು.

ಕರ್ಣನಾಗಿ ವಿಶ್ವನಾಥ ಹೆನ್ನಾಬೈಲು ಹಾಗೂ ಕುಂತಿಯಾಗಿ ಜಯರಾಮ ಕೊಠಾರಿ ಮಠದಮಕ್ಕಿ ಅದ್ಭುತವಾಗಿ ಅಭಿನಯಿಸಿದರು. ಕರ್ಣನ ತುಡಿತಗಳನ್ನು, ಭಾವನೆಗಳನ್ನು ಅಭಿನಯದಲ್ಲಿ ವ್ಯಕ್ತಪಡಿಸಿ ಅರ್ಥದಲ್ಲಿ ವಿವರಿಸಿ ಹೆಜ್ಜೆಯಲ್ಲಿ ಗೆಜ್ಜೆಯ ನಾದ ಮೂಡಿಸಿ ಚಾತುರ್ಯ ಪ್ರದರ್ಶಿಸಿ ಸರ್ವಾಂಗ ಸುಂದರ ಕಲೆಯನ್ನು ಸಾಕಾರಗೊಳಿಸಿದರು. ಅವಸಾನದ ಕರ್ಣನಾಗಿ ಭಾವಪೂರ್ಣವಾಗಿ ನಟಿಸಿದರು. ಕೌರವನಾಗಿ ತಾರೆಕೊಡ್ಲು ಉದಯ್‌ ಕುಮಾರ್‌, ಭೀಮನಾಗಿ ನಾಗರಾಜ ನಾಯ್ಕ, ಅದಿರಥನಾಗಿ ಕುಶ ಪೂಜಾರಿ ಅವರದ್ದು ಮೆಚ್ಚತಕ್ಕ ಅಭಿನಯವಾಗಿತ್ತು. ಹಿಮ್ಮೇಳ ಮುಮ್ಮೇಳದ ಸಾಂಗತ್ಯ ಒಟ್ಟು ಕಥಾಹಂದರವನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ಯಶಸ್ವಿಯಾಯಿತು. ಕಮಲಶಿಲೆಯ ದೊಂದಿ ಬೆಳಕಿನ ಪ್ರದರ್ಶನ ಇನ್ನಷ್ಟು ಕಾಲ ಜನರಿಗೆ ನೆನಪಿನಲ್ಲಿ ಉಳಿಯುಂತೆ ಮಾಡಿತು.

ಪೂರ್ಣಿಮಾ ಎನ್‌. ಭಟ್ಟ ಕಮಲಶಿಲೆ

ಟಾಪ್ ನ್ಯೂಸ್

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.