ನೆನಪಿನ ನೇಪಥ್ಯಕ್ಕೆ  ಸರಿದ ಸ್ತ್ರೀ ಪಾತ್ರಧಾರಿ


Team Udayavani, Dec 22, 2017, 2:08 PM IST

22-40.jpg

ಉದ್ಯಾವರ ಜಯಕುಮಾರ್‌ ಸ್ತ್ರೀ ಪಾತ್ರಧಾರಿಯಾಗಿ ಹೆಸರು ಮಾಡಿದವರು.ಧರ್ಮಸ್ಥಳ, ಸುರತ್ಕಲ್‌, ಕದ್ರಿ, ಸುಂಕದಕಟ್ಟೆ, ಎಡನೀರು, ಬಪ್ಪನಾಡು, ಸಾಲಿಗ್ರಾಮ, ಸೌಕೂರು, ಮಾರಣಕಟ್ಟೆ ಮೇಳಗಳಲ್ಲಿ ತಿರುಗಾಟ ಮಾಡಿದ ಇವರು ತೆಂಕು ಹಾಗೂ ಬಡಗುತಿಟ್ಟಿನ ಸಾಂಪ್ರದಾಯಿಕ ಸ್ತ್ರೀಪಾತ್ರಧಾರಿ. ಸುಮಾರು ನಲ್ವತ್ತು ವರುಷಗಳಿಗಿಂತಲೂ ಹೆಚ್ಚಿನ ಕಾಲ ಕಲಾ ಸೇವೆ ಮಾಡಿದ ಜಯಕುಮಾರ್‌ ಕಳೆದ ಕೆಲವು ವರುಷಗಳಿಂದ ಅನಾರೋಗ್ಯಪೀಡಿತರಾಗಿದ್ದರು. ಅವರ ತಂದೆ ಉದ್ಯಾವರ ಬಸವ ಗಾಣಿಗ, ತಾಯಿ ಲಕ್ಷ್ಮಿಯಮ್ಮ. ಜನಿಸಿದ್ದು ಹಾರಾಡಿಯಲ್ಲಿ ಮಾರ್ಚ್‌ 5, 1952ರಂದು. ಪ್ರಾಥಮಿಕ ಶಿಕ್ಷಣ ಪಡೆದು ಜಯಕುಮಾರ್‌ ಧರ್ಮಸ್ಥಳ ಯಕ್ಷಗಾನ ಕೇಂದ್ರ ಸೇರಿದರು. ಕುರಿಯ ವಿಠಲ ಶಾಸ್ತ್ರಿ ಹಾಗೂ ಪಡ್ರೆ ಚಂದು ಅವರ ಶಿಷ್ಯರಾಗಿ ಕಲೆ ಅಭ್ಯಾಸ ಮಾಡಿದ ಇವರಿಗೆ ಬಡಗಿನ ನಾಟ್ಯ ಕಲಿಸಿದವರು ಗುರು ವೀರಭದ್ರ ನಾಯಕರು. ಯಕ್ಷಗಾನ ಇವರಿಗೆ ಪೂರ್ವಿಕರ ಬಳುವಳಿ. ಅಜ್ಜ ಹಾರಾಡಿ ಕುಷ್ಟ ಗಾಣಿಗರು. ಆದುದರಿಂದ ಹಾರಾಡಿ ಶೈಲಿ ಇವರ ರಕ್ತದಲ್ಲೇ ಹರಿದು ಬಂತು. ಗುರು ವೀರಭದ್ರ ನಾಯಕರ ಶಿಷ್ಯನಾಗಿ ಮಟಪಾಡಿ ಶೈಲಿಯನ್ನೂ ಕಲಿಯುವಂತಾಯಿತು. ಇವರ ತಂದೆ ಉದ್ಯಾವರ ಬಸವ ಗಾಣಿಗರು ತೆಂಕುತಿಟ್ಟಿನ ಪ್ರಸಿದ್ಧ ವೇಷಧಾರಿ. ಸುರತ್ಕಲ್‌ ಮೇಳದಲ್ಲೂ ಹಿರಿಯ ದಿಗ್ಗಜರ ಒಡನಾಡಿಯಾಗಿ ಸುದೀರ್ಘ‌ ಕಾಲ ತಿರುಗಾಟ ಮಾಡಿದವರು. ಹೀಗಾಗಿ ತೆಂಕು ಮತ್ತು ಬಡಗಿನ ಆನುವಂಶಿಕ ಹಿನ್ನೆಲೆಯಿರುವ ಜಯಕುಮಾರ್‌ ಉಭಯ ತಿಟ್ಟುಗಳಲ್ಲೂ ಪ್ರತಿಭೆ ಮೆರೆದರು. 

 ಧರ್ಮಸ್ಥಳ ಮೇಳದಲ್ಲಿ ಕುಂಬ್ಳೆ ಸುಂದರ ರಾವ್‌ ಜತೆ ಇವರ ಜೋಡಿ ಪಾತ್ರಗಳನ್ನು ಕಲಾಭಿಮಾನಿಗಳು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಅಮ್ಮು ಬಲ್ಲಾಳ್ತಿ, ಶ್ರೀ ದೇವೀ ಮಹಾತ್ಮೆ ಪ್ರಸಂಗದ ಶ್ರೀ ದೇವಿ, ಅಂಬೆ, ದಾಕ್ಷಾಯಣಿ…ಹೀಗೆ ಪೌರಾಣಿಕ ಪ್ರಸಂಗಗಳ ಎಲ್ಲಾ ವಿಧದ ಸ್ತ್ರೀ ಪಾತ್ರಗಳನ್ನು ನಿರ್ವಹಿಸಿದರು. ಜೊತೆಗೆ ಸಾತ್ವಿಕ ಪುಂಡು ವೇಷಗಳನ್ನೂ ಮಾಡಿ ಸೈ ಎನಿಸಿಕೊಂಡರು.

 ಸ್ಪಷ್ಟ ಮಾತುಗಾರಿಕೆ, ಉತ್ತಮ ಸ್ವರ, ಲಾಲಿತ್ಯಪೂರ್ಣ ಕುಣಿತ, ಒಪ್ಪ ಓರಣವಾದ ಅಂಗ ಸೌಷ್ಟವ ಮುಂತಾದ ಉತ್ತಮ ಅಂಶಗಳಿಂದ ಯಕ್ಷಗಾನ ರಸಿಕರ ಮನಸೂರೆಗೊಂಡ ಜಯಕುಮಾರ್‌ ಚೌಕಿಯ ಒಳಗೂ ಕಲಾವಿದರ ಅಚ್ಚುಮೆಚ್ಚಿನ ಒಡನಾಡಿ. ಸುಸಂಸ್ಕೃತ, ಸುಭಗ, ಸ್ನೇಹಶೀಲ, ಪರೋಪಕಾರಿ, ವಿನಯಶಾಲಿ.

 ನಿಜಜೀವನದಲ್ಲಿ ಅವರು ತೀರಾ ಬಡವ. ಬದುಕಿನ ಎಲ್ಲಾ ಬವಣೆಗಳನ್ನು ಮರೆತು ರಂಗಸ್ಥಳದ ಪಾತ್ರಗಳಲ್ಲಿ ತನ್ಮಯರಾಗುತ್ತಿದ್ದ ಜಯಕುಮಾರ್‌ ಅನಿರೀಕ್ಷಿತವಾಗಿ ಅನಾರೋಗ್ಯ ಪೀಡಿತರಾಗಿ ಗೆಜ್ಜೆ ಕಟ್ಟಲಾರದೆ ಚಡಪಡಿಸುತ್ತಿದ್ದ ನತದೃಷ್ಟ. ಮನೆಯ ಎಲ್ಲಾ ಹೊಣೆಯನ್ನು ಹೊತ್ತು ತಂದೆ ತಾಯಿಗಳಿಗೆ ಆಧಾರವಾಗಿ ನಿಂತು, ಯೌವನದಿಂದ ಪುಟಿಯುತ್ತಿದ್ದ ಏಕೈಕ ಪುತ್ರನನ್ನು ಕಳೆದುಕೊಂಡ ದುರ್ದೈವಿ. 

ಕೆಲವು ವರುಷಗಳಿಂದ ಹೊಂಚುತ್ತಿದ್ದ ಯಮ ಕೊನೆಗೂ ಕರೆದೊಯ್ದ. ಇವರ ಪತ್ನಿ ವಾರಿಜ ಪಂಚಾಯತ್‌ ಸದಸ್ಯೆ. ಸಾಮಾಜಿಕ ಕಾರ್ಯಕರ್ತೆ. ಮಗಳೊಬ್ಬಳಿಗೆ ಮದುವೆಯಾಗಿದೆ. ಇನ್ನೋರ್ವ ಮಗಳು ಸ್ನಾತಕೋತ್ತರ ಪದವಿಯ ವಿದ್ಯಾರ್ಥಿನಿ. ಬಾಲ್ಯದಲ್ಲೇ ಬಣ್ಣದ ಮೋಹಕ್ಕೆ ಮರುಳಾಗಿ ಬದುಕಿಗೆ ಭದ್ರತೆಯಿಲ್ಲದೆ ಕಲಾ ಜೀವನವನ್ನು ಸ್ವೀಕರಿಸಿದ ಉದ್ಯಾವರ ಜಯಕುಮಾರ್‌ ದಡ ಸೇರುವ ಮುನ್ನವೇ ವಿಧಿಯ ಪ್ರಚಂಡ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ. ಆತನಿಗೆ ಕರುಣೆ ಇಲ್ಲವಲ್ಲಾ? ನಾವೆಲ್ಲರೂ ವಿಧಿಯ ಮುಂದೆ ಅಸಹಾಯಕರು. ಕಂಬನಿ ಮಿಡಿಯುವುದಷ್ಟೇ ನಮ್ಮಿಂದ ಸಾಧ್ಯ. ಕಲೆಗಾಗಿ ತಮ್ಮನ್ನು ಅರ್ಪಿಸಿಕೊಂಡು ಪ್ರಶಸ್ತಿ, ಸಮ್ಮಾನ ಪಡೆದು ಅಜರಾಮರರಾದರು ಜಯಕುಮಾರ್‌. ಆದರೆ ಸಂಸಾರದ ಗತಿ? 

ತಾರಾನಾಥ ವರ್ಕಾಡಿ 

ಟಾಪ್ ನ್ಯೂಸ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.