ಅಜ್ಜ ಹೇಳಿದ ಕತೆ: ಮಕ್ಕಳ ಸೃಜನಶೀಲತೆಯ ಅಭಿವ್ಯಕ್ತಿ


Team Udayavani, Apr 28, 2017, 3:45 AM IST

28-KALA-2.jpg

ವಿಟ್ಲದ ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್‌ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಪ್ರಿಲ್‌ 8ರಂದು ಸಮಸಾಂಪ್ರತಿ ವಿಟ್ಲ ಇದರ ವತಿಯಿಂದ ಜರಗಿದ “ಅಜ್ಜ ಹೇಳಿದ ಕತೆ’ ನಾಟಕ ಮಕ್ಕಳ ಸೃಜನಶೀಲತೆಯನ್ನು ಇನ್ನಿಲ್ಲದಂತೆ ಅಭಿವ್ಯಕ್ತಗೊಳಿಸಿ ಉತ್ತಮವಾಗಿ ಮೂಡಿ ಬಂದು ಗಮನ ಸೆಳೆಯಿತು.

ರಾಜ್ಯ ಮಟ್ಟದ ಐಟಿಐ ವಿದ್ಯಾರ್ಥಿಗಳ ಎನ್‌ಎಸ್‌ಎಸ್‌ ಶಿಬಿರ ಸಂದರ್ಭದಲ್ಲಿ,  “ಪಲಿಮಾರು ಜನಾರ್ದನ ಪೈ ನೆನಪಿನ ಬಯಲು ರಂಗಮಂಟಪ’ದಲ್ಲಿ ವಿಟ್ಲ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ನಾಟಕದ ಮೂಲಕ ವಿಟ್ಲದ ಜನತೆಯನ್ನು ಆಕರ್ಷಿಸಿದರು. ಮಕ್ಕಳಲ್ಲಿ ಏಕತೆಯ ಭಾವವನ್ನು ಪ್ರಚೋದಿಸಿ, ಸಾಮೂಹಿಕ ಕ್ರಿಯಾಶಕ್ತಿಯನ್ನು ಹುರಿದುಂಬಿಸಿ ಸೃಜನಶೀಲ ಕಲಾಭಿವ್ಯಕ್ತಿಯನ್ನು ಅನಾವರಣಗೊಳಿಸಲು ನೆರವಾದ ಒಂದು ಅಪೂರ್ವ ನಾಟಕ ಇದಾಗಿತ್ತು.

ಮಕ್ಕಳ ರಂಗಕರ್ಮಿಯಾಗಿ ಪ್ರಸಿದ್ಧರಾಗಿರುವ ವಿಟ್ಲದ “ಸಮಸಾಂಪ್ರತಿ’ಯ ಮೂರ್ತಿ ದೇರಾಜೆ ಮತ್ತು ಶಂಕರ್‌ಪ್ರಸಾದ್‌ ಕುಂಚಿನಡ್ಕ ಇವರು “ಅಜ್ಜ ಹೇಳಿದ ಕತೆ’ ನಾಟಕವನ್ನು ಉತ್ತಮ ಸಂಗೀತದೊಂದಿಗೆ ವಿನ್ಯಾಸಗೊಳಿಸಿದ್ದರು. 
ಸುಮಾರು 50 ಮಂದಿ ಮಕ್ಕಳಿಂದ ಪ್ರದರ್ಶಿಸಲ್ಪಟ್ಟ ಈ ನಾಟಕ ನೋಡುಗರ ಕಣ್ಮನ ಸೆಳೆಯಿತು. ಈ ಕಾರ್ಯಕ್ರಮದ ಉದ್ದಕ್ಕೂ ಅನೇಕ ಪುಟ್ಟ ಮಕ್ಕಳು ಪ್ರೇಕ್ಷಕರಾಗಿ ಒಂದಿಷ್ಟೂ ಸದ್ದು ಮಾಡದೇ ಆಸಕ್ತಿಯಿಂದ ಭಾಗವಹಿಸಿದ್ದೇ ಈ ನಾಟಕದ ಯಶಸ್ಸಿಗೆ ಸಾಕ್ಷಿ.

ಈಗಾಗಲೇ ಪುಸ್ತಕರೂಪದಲ್ಲಿ ಪ್ರಕಟವಾಗಿ, ರಾಜ್ಯಾದ್ಯಂತ ಪ್ರಸಿದ್ಧವಾಗಿರುವ ಮೂರ್ತಿ ದೇರಾಜೆಯವರದೇ ಪ್ರಸಿದ್ಧ ನಾಟಕ “ಕಪ್ಪು ಕಾಗೆಯ ಹಾಡು’ ಇಲ್ಲಿ ರಂಗವೇರಿದ ಪರಿ ಬೇರೆ. ಪ್ರತೀ ಹುಣ್ಣಿಮೆಯಂದು ಬಂದು ಮಕ್ಕಳಿಗೆ ಕತೆ ಹೇಳುವ ಅಜ್ಜನ ಬಾಯಿಯಿಂದ ಕತೆಯಾಗಿ ಪ್ರಾರಂಭವಾಗಿ ಸುಂದರ ದೃಶ್ಯಕಾವ್ಯವಾಗಿ ಪ್ರಕಟವಾಗಿ, ಪ್ರೇಕ್ಷಕರ ಮನ ಸೂರೆಗೊಂಡಿತು. 

ಹಸಿದ ಹಕ್ಕಿಗಳು ಆಹಾರ ಸಿದ್ಧಪಡಿಸುವ ದೃಶ್ಯ, ಹಸಿದು ಬಂದ ಕಾಗೆಯನ್ನು ಬಣ್ಣದ ಹಕ್ಕಿಗಳು ಕಪ್ಪೆಂದು ಮೂದಲಿಸುವ ದೃಶ್ಯ ತೀರಾ ಸಹಜವಾಗಿ ಅಭಿವ್ಯಕ್ತಿಗೊಂಡಿತು. ತಿಂಡಿ ಕೇಳಿದ ಕಾಗೆಯನ್ನು ಸ್ನಾನ ಮಾಡಿ ಬಾರೆಂದು ಕಳುಹಿಸಿದಾಗ, ಕಾಗೆ ಅದಕ್ಕಾಗಿ ಪಟ್ಟ ಪಾಡು ಹಿರಿಯರ ಕಣ್ಣುಗಳನ್ನೂ ಒದ್ದೆಯಾಗಿಸಿದ್ದು ಸುಳ್ಳಲ್ಲ. ಮುಖ್ಯ ವೇದಿಕೆ ಬಣ್ಣ ಬಣ್ಣದ ಹಕ್ಕಿಗಳ ಸ್ವರ್ಗವಾಗಿ ಕಂಗೊಳಿಸಿದರೆ, ಬಾವಿ, ಗುಡ್ಡ, ಕಮ್ಮಾರನ ಕುಲುಮೆ, ಕುಂಬಾರನ ಮನೆ, ಬೆಳದಿಂಗಳಿನಲ್ಲಿ ಅಜ್ಜ ಕತೆ ಹೇಳುವ ಸ್ಥಳಗಳೆಲ್ಲ ಪ್ರತ್ಯಪ್ರತ್ಯೇಕ ವೇದಿಕೆಗಳಲ್ಲಿ ಸಂಯೋಜನೆಗೊಂಡು, ಬೆರಗನ್ನು ಹೆಚ್ಚಿಸಿತು. 

ಮಕ್ಕಳ ಬಾಲ್ಯದಲ್ಲೇ ಚಿಗುರೊಡೆಯಬಹುದಾದ ಅಸಮಾನತೆಯ ಬೀಜವನ್ನು ಮೊಳಕೆಯೊಡೆಯದಂತೆ ಮಾಡಲು ಸಹಕಾರಿಯಾಗಬಹುದಾದ ಈ ಕಾಗೆಯ ಕತೆ ಅನೇಕ ಸಂಗತಿಗಳ ಒಂದು ರೂಪಕ. ಮಕ್ಕಳಲ್ಲಿ ಕುತೂಹಲ ಮತ್ತು ಬೆರಗನ್ನು ಮೂಡಿಸಿ, ಏಕಾಗ್ರತೆಯನ್ನು ಹೆಚ್ಚಿಸಿ, ಮಕ್ಕಳನ್ನು ತಾವೇ ಯೋಚಿಸುವಂತೆ ಮಾಡಿ, ಆಟದ ಮೂಲಕವೇ ನಾಟಕವನ್ನು ಕಟ್ಟುತ್ತಾ, ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕೆಲಸ ಮಾಡುತ್ತಿರುವ “ಸಮಸಾಂಪ್ರತಿ’  ರಂಗನಾಟಕ ಶಿಬಿರದ ಬಹಳ ಒಳ್ಳೆಯ ಫ‌ಲವೇ ಈ ಒಂದು ಅತ್ಯುತ್ತಮ ಪ್ರದರ್ಶನ. ಜಾದೂಗಾರ ಜೂನಿಯರ್‌ ಶಂಕರ್‌ ಅವರ ಬೆಳಕಿನ ವಿನ್ಯಾಸ, ಭಾರವಿ ದೇರಾಜೆ, ಪಾಣಿನಿ ದೇರಾಜೆ, ಯಶಸ್ವಿನಿ ದೇರಾಜೆ, ಮೈಥಿಲಿ ಜೂನಿಯರ್‌ ಶಂಕರ್‌ ಇವರ ಸಂಗೀತ ಸಾಂಗತ್ಯ ಇದಕ್ಕಿತ್ತು. 

ಸುಧೀರ್‌ ಬಾಳೆಪುಣಿ ಅವರ ಮುಖವಾಡ- ವೇಷಭೂಷಣ, ರಾಧಾಕೃಷ್ಣ ಮುಳಿಯ ಅವರ ರಂಗ ನಿರ್ಮಾಣ ಮರೆಯುವಂಥವಲ್ಲ. 
ವಿಟ್ಲದ “ಏರ್‌ ಸೌಂಡ್ಸ್‌’ನವರು ತಮ್ಮ ಸಂಸ್ಥೆಯ ಸುವರ್ಣ ವರ್ಧಂತಿಯ ಸಂದರ್ಭದಲ್ಲಿ ಯಾವುದೋ ಹಾಳುಮೂಳು ಕಾರ್ಯಕ್ರಮವನ್ನು ಸಂಯೋಜಿಸದೆ, ಇಂತಹ ಒಂದು ಅಪರೂಪದ ಕಾರ್ಯಕ್ರಮವನ್ನು ಯೋಜಿಸುವ ಮೂಲಕ ಎಲ್ಲರ ಅಭಿನಂದನೆಗೆ ಪಾತ್ರರಾದರು.  ಶಾಲೆಯ ಮುಖ್ಯೋಪಾಧ್ಯಾಯರಾದ ವಿಶ್ವನಾಥ ಮತ್ತು ಶಿಕ್ಷಕ ವೃಂದದ ಸಹಕಾರ ವಂದನೀಯ. ತೀರಾ ಸಹಜವಾಗಿ ಅಭಿನಯಿಸಿದ ಎಲ್ಲ ಮಕ್ಕಳು ನೆರೆದ ಪ್ರೇಕ್ಷಕರ ಕೊಂಡಾಟಕ್ಕೆ ಪಾತ್ರರಾದರು. 

ಎಲ್‌. ಎನ್‌. ಭಟ್‌ ಮಳಿ
ಫೋಟೋ: ಶ್ಯಾಮಪ್ರಸಾದ್‌ ಕುಂಚಿನಡ್ಕ

ಟಾಪ್ ನ್ಯೂಸ್

13

Poonam Pandey: ನನ್ನ ಬೆತ್ತಲೆ ವಿಡಿಯೋ ಲೀಕ್‌ ಮಾಡಿದ್ದೇ ನನ್ನ ಮಾಜಿ ಗೆಳೆಯ – ಪೂನಂ ಪಾಂಡೆ

12-hondisi-bareyiri

YouTube ನಲ್ಲಿ ಹೊಂದಿಸಿ ಬರೆಯಿರಿ; ಉಚಿತವಾಗಿ ನೋಡಿ, ಇಷ್ಟವಾದರೆ ಕಾಸು ಹಾಕಿ…

Politics: ರಾಜ್ಯ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲ; ವರ್ಷದ ಸಾಧನೆ ಶೂನ್ಯ; ಬೊಮ್ಮಾಯಿ ಟೀಕೆ

Politics: ರಾಜ್ಯ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲ; ವರ್ಷದ ಸಾಧನೆ ಶೂನ್ಯ; ಬೊಮ್ಮಾಯಿ ಟೀಕೆ

11

ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಸರ್ಕಾರದ ಪರ ಮೃದು ಧೋರಣೆ ಇಲ್ಲ: ಮೃತ್ಯುಂಜಯ ಸ್ವಾಮೀಜಿ

Hasan: ಲೈಂಗಿಕ ದೌರ್ಜನ್ಯ ಪ್ರಕರಣ; 20 ದಿನಗಳ ನಂತರ ತವರಿಗೆ ಆಗಮಿಸಿದ ಎಚ್.ಡಿ.ರೇವಣ್ಣ

Hasan: ಲೈಂಗಿಕ ದೌರ್ಜನ್ಯ ಪ್ರಕರಣ; 20 ದಿನಗಳ ನಂತರ ತವರಿಗೆ ಆಗಮಿಸಿದ ಎಚ್.ಡಿ.ರೇವಣ್ಣ

9

ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿದ್ದ ಪತ್ನಿ ಮೇಲೆ ಬ್ಲೇಡ್‌ನಿಂದ ಹಲ್ಲೆ ಮಾಡಿ ಪರಾರಿಯಾದ ಪತಿ

8

ಪತಿಯಿಂದಲೇ ಭೀಕರವಾಗಿ ಹತ್ಯೆಗೀಡಾದ ಸ್ಯಾಂಡಲ್‌ ವುಡ್‌ ನಟಿ, ಕಾಂಗ್ರೆಸ್‌ ಮುಖಂಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

14-thirthahalli

Thirthahalli: ಸಾಲ ಬಾಧೆಯಿಂದ ರೈತ ಆತ್ಮಹತ್ಯೆ

13

Poonam Pandey: ನನ್ನ ಬೆತ್ತಲೆ ವಿಡಿಯೋ ಲೀಕ್‌ ಮಾಡಿದ್ದೇ ನನ್ನ ಮಾಜಿ ಗೆಳೆಯ – ಪೂನಂ ಪಾಂಡೆ

13-ragini-dance

Ragini Dwivedi; ಸಂಜು ಜೊತೆ ರಾಗಿಣಿ ಡ್ಯಾನ್ಸ್‌ ; ಮಂಗ್ಲಿ ಹಾಡಿಗೆ ಭರ್ಜರಿ ಸ್ಟೆಪ್

12-hondisi-bareyiri

YouTube ನಲ್ಲಿ ಹೊಂದಿಸಿ ಬರೆಯಿರಿ; ಉಚಿತವಾಗಿ ನೋಡಿ, ಇಷ್ಟವಾದರೆ ಕಾಸು ಹಾಕಿ…

11-gadaga

ಕಾಂಗ್ರೆಸ್ ಸರ್ಕಾರ ಶಿಕ್ಷಣ ಕ್ಷೇತ್ರವನ್ನು ಹಾಳು ಮಾಡುತ್ತಿದೆ:ವಿ.ಪ. ಸದಸ್ಯ ಎಸ್.ವಿ. ಸಂಕನೂರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.