ಹೆಜ್ಜೆ-ಗೆಜ್ಜೆಯ ರಜತ ನೂಪುರ ಭರತನಾಟ್ಯ


Team Udayavani, Jan 10, 2020, 6:35 PM IST

4

ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಹೆಜ್ಜೆ-ಗೆಜ್ಜೆ ನೃತ್ಯ ಸಂಸ್ಥೆ ಉಡುಪಿ ಮಣಿಪಾಲ ಇದರ ರಜತ ಮಹೋತ್ಸವದ ಸಮಾರೋಪ ಸಮಾರಂಭದ ಭಾಗ-3 ನೃತ್ಯಾಂಜಲಿ-35 ರಲ್ಲಿ ರಜತ ನೂಪುರ ಭರತನಾಟ್ಯ ಕಾರ್ಯಕ್ರಮ ರಾಜಾಂಗಣದಲ್ಲಿ ಉನ್ನತ ಹಿಮ್ಮೇಳದೊಂದಿಗೆ ಸಂಪನ್ನಗೊಂಡಿತು. ಕಾರ್ಯಕ್ರಮದ ಆದಿಯಲ್ಲಿ ಅಮೃತ ವರ್ಷಿಣಿ ರಾಗದಲ್ಲಿ ಪುಷ್ಪಾಂಜಲೀ ಗಣೇಶ ಶಿವ ಹಾಗೂ ಪಾರ್ವತಿಯನ್ನು ಕುರಿತಾದ ಶ್ಲೋಕಗಳು ಹಾಗೂ ಆನಂದಾಮೃತ ವರ್ಷಿಣಿ ಎಂಬ ಕೃತಿಯನ್ನು ಪ್ರದರ್ಶಿಸಲಾಯಿತು.

ಚುರುಕಾದ ನಡೆಗಳನ್ನು ಹೊಂದಿದ ಪುಷ್ಪಾಂಜಲಿಯ ಅನಂತರ ಪ್ರದರ್ಶಿಸಿದ ಕೃತಿಯಲ್ಲಿ ಶಿವನಿಗೆ ಓಂಕಾರವನ್ನು ಸುಬ್ರಹ್ಮಣ್ಯನು ಉಪದೇಶಿಸಿದ ಸನ್ನಿವೇಶವು ಚಿಕ್ಕದಾದ ಕಥಾ ಸಂಚಾರಿಯ ಮೂಲಕ ಹೊರಹೊಮ್ಮಿತು. ಸುಬ್ರಹ್ಮಣ್ಯ ಕೌತ್ವಂವನ್ನು ಗೌಳರಾಗದಲ್ಲಿ ಆದಿತಾಳದಲ್ಲಿ ಪ್ರದರ್ಶಿಸಿದರು. ಹೆಜ್ಜೆಗೆಜ್ಜೆಯ ಕಿರಿಯ ಕಲಾವಿದರಿಂದ ಶ್ಲೋಕಗಳನ್ನು ರಾಗಮಾಲಿಕೆಯಲ್ಲಿ ಮೋಹನರಾಗ ರೂಪಕ ತಾಳದ ವರವೀಣಾ ಎಂಬ ಲಕ್ಷ್ಮೀ ಗೀತೆ ಹಾಗೂ ಸಿಂಧೂ ಭçರವಿ ರಾಗದಲ್ಲಿ ನೋಡು ನೋಡು ಗೋಪಿ ನಿನ್ನ ಮಗನ ಲೂಟಿಯ ನರ್ತನಗಳು, ವಯೋಮಿತಿಗನುಸಾರವಾಗಿ ಸಂಯೋಜಿಸಿದುದರಿಂದ ಉತ್ತಮವಾಗಿ ಪ್ರದರ್ಶನಗೊಂಡವು. ಸಂಸ್ಥೆಯ ವಸಂತ ತಂಡದ ವಿದ್ಯಾರ್ಥಿನಿಯರು ಆನಂದ ಭೈರವಿಯ ಬೇಗ ಬಾರೋ ದೇವರ ನಾಮ ಸ್ಮತಿ ರಾಗದ ರೂಪಕ ತಾಳದ ಸರಸ್ವತಿ ನಮೋಸ್ತುತೇ ಕೃತಿ ಮತ್ತು ಪೂರ್ವಕಲ್ಯಾಣ ರಾಗದ ಹನುಮಂತ ದೇವ ನಮೋ ದೇವರ ನಾಮದಲ್ಲಿ ಹನುಮಂತನು ಸೀತೆಯನ್ನು ಕಂಡಿದ್ದು ಲಂಕಾದಹನ ಕಥಾ ಸನ್ನಿವೇಶಗಳನ್ನು ವಿದ್ಯಾರ್ಥಿನಿಯರು ಮನೋಜ್ಞವಾಗಿ ಅಭಿನಯಿಸಿದರು. ಸಂಸ್ಥೆಯ “ಸುಬ್ರಹ್ಮಣ್ಯ’ ತಂಡದವರಿಂದ ಕೇದಾರಗಾಳದ ನಟರಾಜ ನಾ ನಾಟ್ಯದ ಎಂಬ ಪದಜತಿಯನ್ನು ಪ್ರಸ್ತುತ ಪಡಿಸಿದರು. ಇದರಲ್ಲಿ “ಶಿವನ ನವರಸ’ವನ್ನು ಕಥಾ ಸನ್ನಿವೇಶಗಳ ಮೂಲಕ ಅಭಿನಯಿಸಿದರು. ಅಲ್ಲದೇ, ಇದರಲ್ಲಿ ಕ್ಲಿಷ್ಟಕರವಾದ ಜತಿಗಳು ಹಾಗೂ ನಾಟ್ಯ ಶಾಸ್ತ್ರದ ಚಾರಿಗಳಾದ ಡೋಲಪಾದ, ಭುಜಂಗ ತ್ರಾಸಿತ ಕರಣ, ಊರುಧೃತ, ಜನಿತ, ಮುಂತಾದವು ಇದ್ದವು. ಜನರಂಜಿನಿ ರಾಗದ ಪಾಹಿಮಾಂ ಶ್ರೀ ರಾಜರಾಜೇಶ್ವರಿ ಎಂಬ ಕೃತಿಯನ್ನೂ ಇದೇ ತಂಡದ ವಿದ್ಯಾರ್ಥಿನಿಯರು ಪ್ರದರ್ಶಿಸಿದರು.

ಹಿರಿಯ ವಿದ್ಯಾರ್ಥಿನಿಯರು ಅಯ್ಯಪ್ಪ ಸ್ವಾಮಿ ಮೇಲೆ ರಚಿತವಾದ ವರ್ಣವನ್ನು ಪ್ರಸ್ತುತ ಪಡಿಸಿದರು. ವಿ| ದೀಕ್ಷಾ ರಾಮಕೃಷ್ಣರಿಂದ ಸಂಯೋಜಿತವಾದ ಈ ವರ್ಣಕ್ಕೆ, ಅವರೇ ನಟುವಾಂಗವನ್ನು ನಿರ್ವಹಿಸಿ, ಮೆಚ್ಚುಗೆಯನ್ನು ಪಡೆದುಕೊಂಡರು. ಇದರಲ್ಲಿ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಮಾಲೆಯನ್ನು ಧರಿಸುವುದು, ಅಯ್ಯಪ್ಪಸ್ವಾಮಿಯ ಜನನ, ಹರಿಹರ ಪುತ್ರನಾದ ಕಥಾ ಸನ್ನಿವೇಶ , ಮಲತಾಯಿಯು ತನ್ನ ಸ್ವಂತ ಮಗನಿಗೆ ರಾಜ್ಯವು ಸಿಗಬೇಕೆಂಬ ದುರುದ್ದೇಶದಿಂದ ತಮ್ಮ ನಾಟಕದ ಹೊಟ್ಟೆ ನೋವಿಗೆ ಹುಲಿ ಹಾಲು ಬೇಕೆಂದು ಅಯ್ಯಪ್ಪನನ್ನು ಕಾಡಿಗೆ ಕಳುಹಿಸಿದಾಗ, ಇಂದ್ರನು ಹೆಣ್ಣು ಹುಲಿಯಾಗಿ ಅಯ್ಯಪ್ಪನನ್ನು ಅನುಗ್ರಹಿಸುವುದು, ಹೀಗೆ ಅಯ್ಯಪ್ಪನ ಮಹಿಮೆಗಳನ್ನು ತಿಳಿಸುವ ಈ ವರ್ಣ ಸುಂದರವಾಗಿ ಪ್ರದರ್ಶಿಸಲ್ಪಟ್ಟಿತು. ವಿ|ದೀಕ್ಷಾ ರಾಮಕೃಷ್ಣರು ಸಂಯೋಜಿಸಿದ ರೂಪಕ ತಾಳ ಹಾಗೂ ಹಮೀರ್‌ ಕಲ್ಯಾಣಿ ರಾಗದ ತಿಲ್ಲಾನದಿಂದ ಮಂಗಳಂದಿಂದ ಕಾರ್ಯಕ್ರಮ ಕೊನೆಗೊಂಡಿತು.

ನಟುವಾಂಗಂನಲ್ಲಿ ವಿ| ಯಶಾ ರಾಮಕೃಷ್ಣ , ವಿ| ದೀಕ್ಷಾ ರಾಮಕೃಷ್ಣ , ಹಾಡುಗಾರಿಕೆಯಲ್ಲಿ ಸಹಕರಿಸಿದವರು ವಿ| ರಘುರಾಂ ಬೆಂಗಳೂರು, ವಿ| ವಿನೋದ್‌ ಶ್ಯಾಂ, ಬೆಂಗಳೂರು ಮೃದಂಗದಲ್ಲಿ, ಕೊಳಲಿನಲ್ಲಿ ನಿತೀಶ್‌ ಅಮ್ಮಣ್ಣಾಯ ಹಾಗೂ ಪಿಟೀಲಿನಲ್ಲಿ ಶರ್ಮಿಳಾ ಕೆ. ರಾವ್‌ ಸಹಕರಿಸಿದರು. 56 ಹೆಜ್ಜೆ ಗೆಜ್ಜೆ ನೃತ್ಯಾಂಗನೆಯರ “ರಜತ ನೂಪುರ’ವು ಒಂದು ಉತ್ತಮ ಮಟ್ಟದ ನೃತ್ಯ ಕಾರ್ಯಕ್ರಮವಾಗಿತ್ತು.

ವಾಣಿ ವೆಂಕಟೇಶ್‌

ಟಾಪ್ ನ್ಯೂಸ್

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.