ಗತ ವೈಭವವನ್ನು ನೆನಪಿಸಿದ ಅರೆ ಶತಮಾನ ಹಿಂದಿನ ಕೋಟಿ ಚೆನ್ನಯ


Team Udayavani, Jul 26, 2019, 5:00 AM IST

m-10

ತುಳುನಾಡಿನ ಅವಳಿ ವೀರರಾದ ಕೋಟಿ ಚೆನ್ನಯರ ಕತೆಯನ್ನು ಆಧರಿಸಿ 1939ರಲ್ಲಿ ಪಂದುಬೆಟ್ಟು ವೆಂಕಟರಾಯರು ಮೊತ್ತ ಮೊದಲು ರಚಿಸಿದ ಪ್ರಸಂಗವೇ ಕೋಟಿ ಚೆನ್ನಯ.ದೇಯಿ ಹಾಗೂ ಕಾಂತಣ್ಣ ಬೈದರ ಮಕ್ಕಳಾದ ಕೋಟಿ ಚೆನ್ನಯರು ಪಡುಮಲೆ ಬೀಡಿನಲ್ಲಿ ಜನ್ಮ ತಳೆದು ತಂದೆ ತಾಯಿಯನ್ನು ಕಳೆದುಕೊಂಡು ಪೆರುಮಳ ಬಲ್ಲಾಳರ ಆಶ್ರಯದಲ್ಲಿ ಬೆಳೆದರು.ಆ ಕಾಲದ ಸಾಮಾಜಿಕ ವ್ಯವಸ್ಥೆಯಲ್ಲಿ ಅಸಮಾನತೆಯ ವಿರುದ್ಧ ಸಿಡಿದೆದ್ದು ಮಂತ್ರಿ ಮಲ್ಲಯ್ಯ ಬುದ್ಧಿವಂತನನ್ನು ವಧಿಸಿದ ಅಪರಾಧಕ್ಕೆ ಪೆರುಮಳ ಬಲ್ಲಾಳರಿಂದ ಮರಣ ದಂಡನೆಗೆ ಒಳಪಟ್ಟರೂ ತೀರ್ಪು ನ್ಯಾಯೋಚಿತವಾಗಿ ಒದಗಲಿಲ್ಲ ಎಂಬ ಕಾರಣ ಒಡ್ಡಿ ಪಡುಮಲೆಯನ್ನು ತೊರೆದು ಪಂಜದ ಬೀಡಲ್ಲಿದ್ದ ಅಕ್ಕ ಕಿನ್ನಿದಾರು ಹಾಗೂ ಭಾವ ಪಯ್ಯಬೈದ್ಯರನ್ನು ಆಸರೆಗಾಗಿ ಸೇರುತ್ತಾರೆ.

ಪಂಜದಲ್ಲಿ ಸ್ವಜಾತಿ ಬಾಂಧವನಾದ ಮಂತ್ರಿ ಚಂದುಗಿಡಿಯ ಮೋಸದ ಬಂಧನದಿಂದ ತಪ್ಪಿಸಿಕೊಂಡು ಎಣ್ಮೂರು ಬೀಡಲ್ಲಿ ಸುಭದ್ರ ನೆಲೆಯನ್ನು ಕಂಡುಕೊಳ್ಳುತ್ತಾರೆ.ಎಣ್ಮೂರು ಬೀಡಿನ ದೇವ ಬಲ್ಲಾಳರು ಕೋಟಿ ಚೆನ್ನಯರ ಆಗಮನದ ನಂತರ ಸುದೃಢ ಸೈನ್ಯ ಕಟ್ಟಿ ನೆಮ್ಮದಿಯಿಂದ ಇರುವ ಹೊತ್ತಲ್ಲಿ ಕೊಲೆ ಅಪರಾಧಿಗಳಾದ ಕೋಟಿ ಚೆನ್ನಯರಿಗೆ ಆಶ್ರಯ ಕೊಟ್ಟ ಆರೋಪ ಹೊರಿಸಿ ಪೆರುಮಳ ಬಲ್ಲಾಳರು ಪಂಜದ ಕೇಮರ ಬಲ್ಲಾಳರ ಜೊತೆಗೂಡಿ ಎಣ್ಮೂರು ಬೀಡಿನ ಮೇಲೆ ಯುದ್ಧ ಸಾರಿದರು.

ಯುದ್ಧದ ಕೊನೆಯಲ್ಲಿ ಪೆರುಮಳ ಬಲ್ಲಾಳರೇ ಹಿಂಬದಿಯಲ್ಲಿ ನಿಂತು ಪ್ರಯೋಗ ಮಾಡಿದ ಶರದಿಂದ ಘಾಸಿಗೊಂಡ ಕೋಟಿ ಅಸುನೀಗುವ ಮೊದಲು ಮೂರು ಬೀಡಿನ ಬಳ್ಳಾಲರಲ್ಲಿ ಒಮ್ಮತ ಮೂಡಿಸಿ ಸತ್ಯ ಧರ್ಮ ನ್ಯಾಯ ನೀತಿಯ ಆಡಳಿತವನ್ನು ನೀಡುವ ವಾಗ್ಧಾನ ಪಡೆದು ಉತ್ತಮ ಸಮಾಜ ಕಟ್ಟುವಲ್ಲಿ ಸುದೃಢ ಯುವಕರ ತಯಾರು ಮಾಡಲೋಸುಗ ತುಳುನಾಡಿನಾದ್ಯಂತ ಗರಡಿ ಸ್ಥಾಪಿಸುವ ವಾಗ್ಧಾನ ಪಡೆದು ಇಹಲೋಕ ತ್ಯಜಿಸುತ್ತಾನೆ.ತಮ್ಮನಾದ ಚೆನ್ನಯ್ಯನೂ ಅಣ್ಣನ ಹಾದಿ ಹಿಡಿಯಲು ಆತ್ಮಸಮರ್ಪಣೆ ಮಾಡಿಕೊಳ್ಳುತ್ತಾನೆ. ಈ ರೀತಿಯಲ್ಲಿ ಅಮರರಾಗಿ ತುಳುನಾಡಿನಾದ್ಯಂತ ಕಾರಣಿಕ ಪುರುಷರಾಗಿ ಗರಡಿಯಲ್ಲಿ ಸರ್ವಜನರಿಂದ ಪೂಜೆಗೊಳ್ಳುತ್ತಾರೆ. ಈ ಪ್ರಸಂಗ ಜು.20ರಂದು ಮಂಗಳೂರು ಪುರಭವನದಲ್ಲಿ ಯಕ್ಷಕಲಾ ಕಟೀಲು ಇದರ ಆಶ್ರಯದಲ್ಲಿ ಪ್ರದರ್ಶನಗೊಂಡು ಗತವೈಭವವನ್ನು ಮರು ನೆನಪಿಸಿತು.

ಪೆರುಮಳ ಬಲ್ಲಾಳನಾಗಿ ಪ್ರಥಮಾರ್ಧದಲ್ಲಿ ಬಾಯಾರು ರಘುನಾಥ ಶೆಟ್ಟಿಯವರು ಹಾಗೂ ದ್ವಿತೀಯಾರ್ಧದಲ್ಲಿ ಸುಣ್ಣಂಬಳ ವಿಶ್ವೇಶ್ವರ ಭಟ್ಟರ ನಿರ್ವಹಣೆ ಅಚ್ಚುಕಟ್ಟಾಗಿತ್ತು. ಯುವ ಹಾಸ್ಯಗಾರರಾದ ಪೂರ್ಣೇಶ್‌ ಆಚಾರ್ಯ ವನಪಾಲಕ, ಚಂದುಗಿಡಿ, ದೂತ ವೇಷಗಳಲ್ಲಿ ಉತ್ತಮವಾಗಿ ನಟಿಸಿದರು. ದೇಯಿ ಬೈದ್ಯೆತಿಯಾಗಿ ಅಕ್ಷಯ್‌ ಮಾರ್ನಾಡ್‌ರವರು ತಮ್ಮ ಗಂಭೀರ ಅಭಿನಯದಿಂದ ಕಳೆಗಟ್ಟಿಸಿದರು.

ಬೊಮ್ಮಯ,ರಾಮ ಜೋಯಿಸ, ನರ್ಸಯ್ಯ ಪಾತ್ರದಲ್ಲಿ ಮಿಜಾರು ತಿಮ್ಮಪ್ಪನವರು ಮಿಜಾರ್‌ ಅಣ್ಣಪ್ಪನವರನ್ನು ನೆನಪಿಸಿದರು. ಸಂಕೀರ್ಣ ಪಾತ್ರವಾದ ಮಲ್ಲಯ್ಯ ಬುದ್ಧಿವಂತನಾಗಿ ಕೊಳ್ತಿಗೆ ನಾರಾಯಣ ಗೌಡರು ತಮ್ಮ ಪೂರ್ವಾನುಭವದ ಅಭಿನಯದಿಂದ ರಂಜಿಸಿದ್ದು, ಬುದ್ಧಿವಂತನ ಹೆಂಡತಿಯಾಗಿ ಕಡಬ ಶ್ರೀನಿವಾಸ ರೈಯವರು ಅಷ್ಟೇ ಸಮರ್ಪಕವಾಗಿ ಸಾಥಿಯಾದರು.

ಬುದ್ಧಿವಂತನ ಮಕ್ಕಳಾಗಿ ಮಿಜಾರು ತಿಮ್ಮಪ್ಪ, ಪೂರ್ಣೇಶ್‌ ಆಚಾರ್ಯ ಜೊತೆಗೆ ತುಳು ನಾಟಕ ಹಾಗೂ ಸಿನೆಮಾರಂಗದ ಬಹು ಬೇಡಿಕೆಯ ನಟರಾದ ಅರವಿಂದ ಬೋಳಾರ್‌ರವರು ನಟಿಸಿದ್ದು, ನಗೆಗಡಲಲ್ಲಿ ತೇಲಿಸಿ ಯಕ್ಷಗಾನ ರಂಗಕ್ಕೂ ಸೈ ಅನಿಸಿಕೊಂಡರು.ಸಂಜಯ್‌ ಕುಮಾರ್‌ ಶೆಟ್ಟಿ ಗೋಣಿಬೀಡು ಇವರ ಕಿನ್ನಿದಾರು ಪಾತ್ರಾಭಿನಯ ಅನುಪಮವಾಗಿತ್ತು.

ಪ್ರಸಂಗದ ಬಹುರಂಜಿತ ಹಾಸ್ಯ ಭೂಮಿಕೆ ಗಳಾದ ಸಾಯನ,ಪಯ್ಯಬೈದ್ಯ ಪಾತ್ರವನ್ನು ಬಂಟ್ವಾಳ ಜಯರಾಮ ಆಚಾರ್ಯರು ಸೊಗಸಾಗಿಸಿದರು. ಕೋಟಿ ಚೆನ್ನಯ ಪಾತ್ರಗಳು ನಾಲ್ಕು ಸೆಟ್‌ಗಳಲ್ಲಿದ್ದು, ಆರಂಭದಲ್ಲಿ ಸಣ್ಣ ಮಕ್ಕಳು ಕೋಟಿ ಚೆನ್ನಯರಾಗಿ ಯುಕ್ತಿ ಕೋಟ್ಯಾನ್‌- ಚಿರಾಗ್‌ರವರು ರಂಗದ ಅಳುಕಿಲ್ಲದೆ ಅಭಿನಯಿಸಿದರು. ಎರಡನೇ ಸೆಟ್‌ನಲ್ಲಿ ಬಾಲ ಕೋಟಿ ಚೆನ್ನಯರಾಗಿ ರವಿ ಮುಂಡಾಜೆ ಹಾಗೂ ಗಿರಿಕಿ ವೀರರೆನಿಸಿದ ಲೋಕೇಶ್‌ ಮುಚ್ಚಾರು ಇವರ ಪ್ರವೇಶದಿಂದ ರಂಗದಲ್ಲಿ ಸಂಚಲನ ಮೂಡಿತು. ಮೂರನೇ ಸೆಟ್‌ನಲ್ಲಿ ಯುವಕ ಕೋಟಿ ಚೆನ್ನಯರಾಗಿ ಲಕ್ಷ್ಮಣ ಮರಕಡ-ಸದಾಶಿವ ಕುಲಾಲ್‌ ರವರು ರಂಜಿಸಿದ್ದು, ಸದಾಶಿವ ಕುಲಾಲರಿಗೆ ಈ ವೇಷವನ್ನು ಹಿಂದೆ ನಿರ್ವಹಿಸಿದ ಸಾಕಷ್ಟು ಅನುಭವವಿದ್ದು, ಈರ್ವರೂ ವಾಚಿಕದಲ್ಲಿ ಅನುಭವದ ನಡೆಯಿಂದ ಗಮನ ಸೆಳೆದದ್ದು ವಿಶೇಷ. ನಾಲ್ಕನೇ ಸೆಟ್‌ನಲ್ಲಿ ಪ್ರಾಯ ಪ್ರಬುದ್ಧರಾದ ಕೋಟಿ ಚೆನ್ನಯರಾಗಿ ಅರುವ ಕೊರಗಪ್ಪ ಶೆಟ್ಟಿ -ಪೆರ್ಲ ಜಗನ್ನಾಥ ಶೆಟ್ಟಿಯವರ ವೇಷಗಳು ಅತ್ಯುತ್ತಮ ಜೋಡಿಯಾಗಿ ಮೂಡಿಬಂತು.ಅರುವದವರು 75ರ ಹರೆಯದಲ್ಲೂ ಕೊನೆಯ ಕೋಟಿಯಾಗಿ ಮಿಂಚಿ ತನ್ನ ಅನುಭವನ್ನು ಸಾಬೀತುಪಡಿಸಿದರು. ಪೆರ್ಲದವರ ಠೇಂಕಾರದ ಚೆನ್ನಯನ ಪಾತ್ರ ನಿರ್ವಹಣೆ ಅನನ್ಯವಾಗಿತ್ತು.

ಸರಪಾಡಿದ ಸರ್ಪ ಖ್ಯಾತಿಯ ಅಶೋಕ್‌ ಶೆಟ್ಟಿಯವರು, ಮತ್ಸರಿ ಕುಯುಕ್ತಿಯುಕ್ತ ಚಂದುಗಿಡಿಯ ಪಾತ್ರದಲ್ಲಿ ಮುಂಚಿನ ಠೀವಿ ತೋರಿಸಿದರು.ರಾಧಾಕೃಷ್ಣ ನಾವಡ ಕೇಮರ ಬಲ್ಲಾಳರಾಗಿ ಗತ್ತುಗಾರಿಕೆಯಲ್ಲಿ ರಂಜಿಸಿದರು. ದೇವಣ್ಣ ಬಲ್ಲಾಳ ಪಾತ್ರಾಭಿನಯದಲ್ಲಿ ವಾದಿರಾಜ ಕಲ್ಲೂರಾಯರು ಹೊಸ ಪ್ರಸಂಗಕ್ಕೂ ಸೈ ಎನಿಸಿಕೊಂಡರು.ದೀಪಕ್‌ ರಾವ್‌ ಪೇಜಾವರವರ ಮಂಜು ಪೆರ್ಗಡೆಯ ವೇಷಕ್ಕೆ ಅವಕಾಶ ಸಣ್ಣದಾದರೂ ಅಭಿನಯ ಹಿರಿದಾಗಿತ್ತು.

ಭಾಗವತರಾಗಿ ದಿನೇಶ್‌ ಅಮ್ಮಣ್ಣಾಯ, ರವಿಚಂದ್ರ ಕನ್ನಡಿಕಟ್ಟೆ, ಗಿರೀಶ್‌ ಕಕ್ಕೆಪದವು, ಸತೀಶ್‌ ಶೆಟ್ಟಿ ಬೋಂದೆಲ್‌, ಚೆಂಡೆ ಮದ್ದಳೆಯಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್‌,ದಯಾನಂದ ಶೆಟ್ಟಿಗಾರ ಮಿಜಾರು, ಕೃಷ್ಣಪ್ರಕಾಶ್‌ ಉಳಿತ್ತಾಯ, ಲೋಕೇಶ್‌ ಕಟೀಲು, ಚಕ್ರತಾಳದಲ್ಲಿ ಕಿರಣ್‌ ಆಚಾರ್ಯರು ಪ್ರಸಂಗ ಯಶಸ್ವಿಗೆ ಕಾರಣರಾದರು.

ತೆಂಕುತಿಟ್ಟಿನ ಪುಂಡು ವೇಷಗಳ ದಗಲೆಗಳಿಗೆ ನೆರಿಯಿಂದ ಕೂಡಿದ ಕೈ ಜೋಡಣೆಯು ವೇಷಗಳ ಮುಖವೇ ಕಾಣದಷ್ಟು ಅತಿಯಾಗಿದ್ದು ಈ ಬಗ್ಗೆ ವೇಷ ಭೂಷಣ ತಯಾರಕರು ಹಾಗೂ ಕಲಾವಿದರೂ ಗಮನಿಸಬೇಕಾದ ಅಗತ್ಯ ಇದೆ.

ಸುರೇಂದ್ರ ಪಣಿಯೂರು

ಟಾಪ್ ನ್ಯೂಸ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.